ಕಲ್ಲುಗುಂಡಿ : ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿ, ಕಲ್ಲುಗುಂಡಿ ಇದರ ಹೊಸವಷ೯ದ ಕ್ಯಾಲೆಂಡರ್ ಬಿಡುಗಡೆ ಕಛೇರಿ ಯಲ್ಲಿ ನಡೆಯಿತು.ಕಾಯ೯ಕ್ರಮದ ಮುಖ್ಯ ಅಥಿತಿಗಳಾಗಿ ಸುನಿಲ್ ಕುಮಾರ್, ಗಣೇಶ್, ಸುಳ್ಯ ಆಗಮಿಸಿದ್ದರು. ಸಂಘದ ವ್ಯವಸ್ದಾಪಕ ಶಿವಪೆರುಮಾಲ್ ನೂತನ ಕ್ಯಾಲೆಂಡರ್ ವಿತರಿಸಿ ಶುಭಾಶಯ ಹೇಳಿದರು. ಸಂಘದ ಸದಸ್ಯರಾಗದ ಅನಿಲ್ ಕುಮಾರ್, ಮಂಜು, ಗೀತ ನಿಡ್ಯಮಲೆ ಉಪಸ್ಥಿತರಿದ್ದರು.

ಜಾಲ್ಸೂರು : ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ರೋಟರಿ ಕ್ಲಬ್ ಸುಳ್ಯಇವರ ನೇತೃತ್ವದಲ್ಲಿ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರುಹಾಗೂ ಇನ್ನಿತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಡಿ.29ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿನಡೆಯಿತು. ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಸಹಕಾರಿ ರತ್ನ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಬಾಲ್ಯದಲ್ಲಿಯೇ ಕಣ್ಣಿನ ತಪಾಸಣೆ ಮಾಡುವುದರಿಂದ ಮುಂದಕ್ಕೆ ಬರುವ...
Ad Widget

ಚೆನ್ನಕೇಶವ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದಹಾಗೂ ಮನೆಯವರು ನೀಡುತ್ತಿರುವ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಿಗಳ ಮರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನೆರವೇರಿದ ಬಳಿಕ ಡಾ|ಕೆ.ವಿ.ಚಿದಾನಂದ, ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಡಾ.ಐಶ್ವರ್ಯ ಕೆ.ಸಿ., ಡಾ.ಗೌತಮ್ ಹಾಗೂ ಕುರುಂಜಿ ಮನೆಯವರಿದ್ದು ದೇವಸ್ಥಾನಕ್ಕೆ...

ಕುಕ್ಕೆ ಸುಬ್ರಹ್ಮಣ್ಯ : ಜ.02 ರಿಂದ 05 ರವರೆಗೆ ಕಿರುಷಷ್ಠಿ ಮಹೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2025ರ ಜ.02 ರಿಂದ 05 ರವರೆಗೆ ಕಿರುಷಷ್ಠಿ ಮಹೋತ್ಸವವು ನಡೆಯಲಿದ್ದು, ಜ.02 ಗುರುವಾರದಂದು ಸಂಜೆ 5:00 ರಿಂದ 6:30 ರವರೆಗೆ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ಧರ್ಮ ಸಮ್ಮೇಳನ ಹಾಗೂ ಸಭಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರ್ಕಾರದ ಆರೋಗ್ಯ...

ಚಿನ್ನಪ್ಪ ಗೌಡ ಹೆರ್ಕಜೆ ನಿಧನ

ದೇವಚಳ್ಳ ಗ್ರಾಮದ ಹೆರ್ಕಜೆ ಚಿನ್ನಪ್ಪ ಗೌಡ ಎಂಬುವವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಡಿ.30) ಬೆಳಗ್ಗಿನ ಜಾವ 3:30ರ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿದ್ದು, ಮೃತರು ಪತ್ನಿ, ಮಕ್ಕಳು, ಅಳಿಯಂದಿರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವು ಇಂದು ಮದ್ಯಾಹ್ನದ ನಂತರ ಮೃತರ ಸ್ವಗೃಹದಲ್ಲಿ ನೆರವೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ಗಿರಿಜಾಶಂಕರ ತುದಿಯಡ್ಕ ವಿಧಿವಶ.

ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರಾಗಿದ್ದ ದಿ. ತುದಿಯಡ್ಕ ವಿಷ್ಣಯ್ಯ ರವರ ಪುತ್ರ ಹಾಗೂ ಈಗಿನ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕರವರ ಸಹೋದರ ಗಿರಿಜಾಶಂಕರ ತುದಿಯಡ್ಕರವರು ನಿನ್ನೆ ಸಂಜೆ ತೀವ್ರ ಅಸೌಖ್ಯಕ್ಕೊಳಗಾಗಿ ಪ್ರಜ್ಞಾರಹಿತರಾಗಿದ್ದು ಅವರನ್ನು ಸುಳ್ಯದ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು.

ಗಾಂಧಿನಗರ ಕಾರ್ಯಕ್ಷೇತ್ರದ ಒಕ್ಕೂಟ ತ್ರೈಮಾಸಿಕ ಸಭೆ ಲಾಭಾಂಶ ವಿತರಣೆಯೊಂದಿಗೆ ನಡೆಯಿತು…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಳ್ಯ ತಾಲೂಕಿನ ಸುಳ್ಯವಲಯದ ಗಾಂಧಿನಗರ ಕಾರ್ಯಕ್ಷೇತ್ರದ ತ್ರೈಮಾಸಿಕ ಸಭೆಯಲ್ಲಿ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವೆಂಕಪ್ಪಗೌಡರವರು ಕಾನೂನಿನ ಬಗ್ಗೆ ಅರಿವು ಇರಲಿ ಎಂದು ತಿಳಿಸಿ, ವಾಹನ ಚಲಾವಣೆಯಲ್ಲಿ ಆಗುವ ಸಮಸ್ಯೆಗಳು, ನಮ್ಮಲ್ಲಿ ಬೇಕಾದ ದಾಖಲಾತಿಗಳು ಯಾವುದೆಲ್ಲ ಎಂಬುದನ್ನು ವಿವರವಾಗಿ ಮಾಹಿತಿ ನೀಡಿದರು, ದಾಖಲಾತಿಗಳು ನಮ್ಮಲ್ಲಿ ಇಲ್ಲದೆ ಇದ್ದ ಸಂದರ್ಭದಲ್ಲಿ...

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ.

ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆ ನಡೆಸಿದ ಸಿ ಎ ಪರೀಕ್ಷೆಯಲ್ಲಿ ಸುಳ್ಯ ನೆಹರು ಮೆಮೋರಿಯಲ್ ಪಿ ಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಭಿರಕ್ಷಾ ಕೃಷ್ಣವೇಣಿ ತೇರ್ಗಡೆ ಯಾಗಿದ್ದಾರೆ.ಪ್ರಾಥಮಿಕ ಶಿಕ್ಷಣವನ್ನು ವಿದ್ಯಾಭಾರತಿ ಶಾಲೆ ಅಡೂರು, ಪ್ರೌಢ ಶಿಕ್ಷಣವನ್ನು ಗಜಾನನ ಶಾಲೆ ಈಶ್ವರ ಮಂಗಲ, ಬಿ ಕಾಂ ನ್ನು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು, ಸಿ ಎ...

ವಸಂತ ರತ್ನ ವಿಶೇಷ ಮಕ್ಕಳ ಶಾಲೆ – ಹುಟ್ಟುಹಬ್ಬ ಆಚರಣೆ

ಸಂಸ್ಥೆಯ ಆಡಳಿತ ಮಂಡಳಿಯಾದ ವಿದ್ಯಾವಾರಿಧಿ ಚಾರೀಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ನ ಪದಾದೀಕಾರಿಯಾದ ಬಾಲಕೃಷ್ಣ ಗೌಡ ಮೂಲೆಮನೆಯವರ ಹುಟ್ಟು ಹಬ್ಬವನ್ನು ವಸಂತ ರತ್ನ ವಿಶೇಷ ಮಕ್ಕಳ ಶಾಲೆ ಕರಿಂಬಿಲ - ಎಡಮಂಗಲ ಇಲ್ಲೀ ವೀಶೇಷ ಮಕ್ಕಳ ಜೊತೆ ಡಿಸೆಂಬರ್ 26ರಂದು ಆಚರಿಸಲಾಯಿತು, ಮತ್ತು ಅನ್ನದಾನ ವ್ಯವಸ್ಥೆ ಮಾಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ...

ಜ.೩ ರಿಂದ ೫ ರ ತನಕ ಬೆಳ್ಳಾರೆ ಕೆಪಿಎಸ್ ನಲ್ಲಿವಸಂತ ಸಂಭ್ರಮ ,ವಿಧಾನ ಸಭಾಧ್ಯಕ್ಷರು ಸಹಿತ ಸಚಿವರು ಅಧಿಕಾರಿಗಳು ಸಹಿತ ಭಾಗೀ.‌

ಜ.03,4,5 : ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಸಂತ ಸಂಭ್ರಮ ಕಾರ್ಯಕ್ರಮವು ನಡೆಯಲಿದ್ದು ಅಲ್ಲದೇನವೀಕೃತ ಶಾಲಾ ಕ್ರೀಡಾಂಗಣ,ಶಾಲಾ ನೂತನ ಕೊಠಡಿಗಳ ಉದ್ಘಾಟನೆ , ಸಾಧಕರಿಗೆ ಸನ್ಮಾನದ ಕುರಿತಾಗಿ ಬೆಳ್ಳಾರೆ ಕೆಪಿಎಸ್ಸಿ ಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಧಾಧಿಕಾರಿಗಳು ತಿಳಿಸಿದರು. ಪತ್ರಿಕಾಗೋಷ್ಡಿಯಲ್ಲಿ ರಾಜೀವಿ ರೈ ಮತ್ತು ಎಸ್ ಎನ್ ಮನ್ಮಥರು ಮಾತನಾಡುತ್ತಾ ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ...
Loading posts...

All posts loaded

No more posts

error: Content is protected !!