ಪೆರುವಾಜೆ : ಭಾವೈಕ್ಯ ಸಂಘಟನೆಯ ಪದಾಧಿಕಾರಿಗಳ ಆಯ್ಕೆ

ಭಾವೈಕ್ಯ ಯುವಕ ಮಂಡಲ ಪೆರುವಾಜೆ ಇದರ 2025 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಚಂದ್ರ ಪೆರುವಾಜೆ, ಕಾರ್ಯದರ್ಶಿಯಾಗಿ ರಕ್ಷಿತ್ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷರಾಗಿ ಅನುಸೂಯ ಬಿ ಎ, ಕಾರ್ಯದರ್ಶಿಯಾಗಿ ಸವಿತಾ ಬಿ.,ಭಾವೈಕ್ಯ ಚಿಗುರು ವೇದಿಕೆಯ ಅಧ್ಯಕ್ಷರಾಗಿ ಪೃಥ್ವಿನ್ ಪೆರುವಾಜೆ, ಕಾರ್ಯದರ್ಶಿಯಾಗಿ ಅನೀಶ್ ಕೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹಿರಿಯರಾದ ಜಯಪ್ರಕಾಶ್ ರೈ ರವರು ಮರು...

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ , ಧಾರ್ಮಿಕ ಹಾಗೂ ಸೌಹಾರ್ದ ಕಾರ್ಯಕ್ರಮ.

ಇತಿಹಾಸ ಪ್ರಸಿದ್ಧ ಅಜ್ಜಾವರ ಮೇನಾಲ ಮಖಾಂ ಉರೂಸ್ ಹಾಗೂ ಐದು ದಿನಗಳ ಧಾರ್ಮಿಕ ಪ್ರಭಾಷಣ ಜ 17 ರಿಂದ 21 ರ ತನಕ ನಡೆಯಲಿದೆ ಎಂದು ಅಜ್ಜಾವರ ಮಸೀದಿ ಖತೀಭರಾದ ಹಸೈನಾರ್ ಫೈಝಿ ಕೊಡಗು ತಿಳಿಸಿದರು. ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜಾತಿ ಮತ ಭೇದವಿಲ್ಲದೆ ಸರ್ವ ಧರ್ಮಿಯರು ಗೌರವಿಸಲ್ಪಡುವ ಹಲವಾರು...
Ad Widget

ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ.

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು. ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ...

ರಜತ ಸಂಭ್ರಮದಲ್ಲಿ ಸುಳ್ಯದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ: ಜ.16 ರಂದು ಕಾರ್ಯಕ್ರಮ

ಸುಳ್ಯ: ಸುಳ್ಯದ ಬೀರಮಂಗಲದ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯು ಬೆಳ್ಳಿ ಹಬ್ಬ ಸಂಭ್ರಮದಲ್ಲಿದೆ. ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ಜ.16ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ದಿನ ಪೂರ್ತಿ ಆಚರಿಸಲಾಗುವುದು ಎಂದು ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ಫಾ. ವಿಕ್ಟ‌ರ್ ಡಿಸೋಜ ತಿಳಿಸಿದ್ದಾರೆ. ಸುಳ್ಯ ಪ್ರೆಸ್‌ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಂತ ಜೋಸೆಫ್...

ಹನ್ನೆರಡು ವರ್ಷಗಳ ಬಳಿಕ ಕಲ್ಲುಗುಂಡಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಸಿದ್ಧತೆ – ಧರ್ಮೋತ್ಥಾನ ಪರಿಷತ್ ವತಿಯಿಂದ ಸಮಾಲೋಚನೆ ಸಭೆ

ಕಲ್ಲುಗುಂಡಿ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ಜ.09 ರಂದು ಕಲ್ಲುಗುಂಡಿ, ಚೆಂಬು, ಮತ್ತು ಕೊಡಗು ಸಂಪಾಜೆ ಗ್ರಾಮದ ಪ್ರಮುಖರು ಸೇರಿ ಬೃಹತ್ ಹಿಂದೂ ಸಮಾಜೋತ್ಸವದ ಕುರಿತು ಸಮಾಲೋಚನೆ ನಡೆಸಿದರು . ವಿಚಾರ ಮಂಡನೆ ಸೇರಿದಂತೆ , ಶ್ರೀಮತಿ ರಮಾದೇವಿ ಕಳಗಿ, ರಾಜ ಗೋಪಾಲ ಉಳುವಾರು , ಮಾಧವ ಪೇರಾಲು , ಶ್ರೀಧರ ದುಗ್ಗಳ ಮುಂತಾದವರು ಕಾರ್ಯ ಯೋಜನೆ...

ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸಂಕ್ರಾಂತಿ ಪ್ರಯುಕ್ತ ವಿಶೇಷ ಕೊಡುಗೆಗಳು

ಪ್ರತಿಷ್ಠಿತ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಗ್ರಾಹಕರಿಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಗಳನ್ನು ನೀಡಲಿದ್ದು, ಜ.11 ರಿಂದ 14 ರವರೆಗೆ ಚಿನ್ನಾಭರಣಗಳ ಪ್ರತೀ ಗ್ರಾಂ ಗಳ ಮೇಲೆ ರೂ.200 ರಂತೆ ಹಾಗೂ ಗ್ಲೋ ವಜ್ರಾಭರಣಗಳ ಮೇಲೆ ಪ್ರತೀ ಗ್ರಾಂ ಗೆ ರೂ.8,000 ದವರೆಗೆ ರಿಯಾಯಿತಿ ಪಡೆಯಬಹುದಾಗಿದೆ.ಗ್ರಾಹಕರು ಹಬ್ಬದ ಸಂದರ್ಭದಲ್ಲಿ ಈ ಕೊಡುಗೆಗಳನ್ನು ಪಡೆದುಕೊಂಡು ಸಂಭ್ರಮದಿಂದ...

ರಾಮಣ್ಣ ನಾಯ್ಕ್ ಕಡವೆಪಳ್ಳ(ಬಂಬುಳಿ) ನಿಧನ

ನಾಲ್ಕೂರು ಗ್ರಾಮದ ನಡುಗಲ್ಲು ಕಡವೆಪಳ್ಳ ರಾಮಣ್ಣ ನಾಯ್ಕ (76)ಅಲ್ಪ ಕಾಲದ ಅಸೌಖ್ಯದಿಂದ ಜ.09 ರಂದು ನಿಧನರಾದರು. ಮೃತರು ಪತ್ನಿ ಚಂದ್ರಾವತಿ, ಪುತ್ರಿ ಶ್ರೀಮತಿ ಸುಮತಿ, ಅಳಿಯ ರತ್ನಾಕರ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಹರಿಹರ ಪಳ್ಳತ್ತಡ್ಕ : ಹೋರಿ ದಾಳಿ ; ವ್ಯಕ್ತಿ ಗಂಭೀರ

ಇನ್ನು ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ ಸ್ಥಳೀಯರು ಹರಿಹರ ಪಳ್ಳತ್ತಡ್ಕ ಗ್ರಾಮದ ಪುಟ್ಟಣ್ಣ ಗೌಡ ಭೀಮಗುಳಿ ಎಂಬುವವರ ಮೇಲೆ ಬೀಡಾಡಿ ಹೋರಿಯೊಂದು ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಇಂದು(ಜ.09) ಸಂಜೆ ಹರಿಹರ ಪೇಟೆಯಲ್ಲಿ ನಡೆದಿದೆ.ಪುಟ್ಟಣ್ಣ ಗೌಡ ರವರು ಅವರ ಮನೆಯ ಸಮೀಪದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ...

ನಿಧನ : ಪರಮೇಶ್ವರಿ ದೊಡ್ಡಕಜೆ

ದೇವಚಳ್ಳ ಗ್ರಾಮದ ದೊಡ್ಡಕಜೆ ಪರಮೇಶ್ವರಿ ಎಂಬುವವರು ಇಂದು ಮದ್ಯಾಹ್ನ ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 88 ವರ್ಷ ವಯಸ್ಸಾಗಿತ್ತು.ಮೃತರು ಮಕ್ಕಳಾದ ಗಂಗಾಧರ, ಜತ್ತಪ್ಪ, ಮೋಹನ್, ಮೋಹನಾಂಗಿ, ಶುಭಲತಾ, ಭವಾನಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗಾಂಧಿನಗರ : ಇನ್ಸ್ ಪೈರ್ ಮೆನ್ಸ್ ವೇರ್ ಶುಭಾರಂಭ

ಸುಳ್ಯದ ಗಾಂಧಿನಗರದ ಜನತಾ ಸ್ಟೋರ್ ಮುಂಬಾಗದಲ್ಲಿ ಇನ್ಸ್ ಪೈರ್ ಮೆನ್ಸ್ ವೇರ್ ಡಿ.05 ರಂದು ಶುಭಾರಂಭಗೊಂಡಿತು. ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಎ. ನೀರಬೀದಿರೆ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವರ್ತಕರ ಸಂಘ ಸುಳ್ಯದ ಅಧ್ಯಕ್ಷರಾದ ಸುಧಾಕರ ರೈ ಪಿ. ಬಿ, ಗೌಡರ ಯುವ ಸೇವಾ ಸಂಘ ಸುಳ್ಯ ಇದರ ಅಧ್ಯಕ್ಷರಾದ...
Loading posts...

All posts loaded

No more posts

error: Content is protected !!