ಐವರ್ನಾಡು ಗ್ರಾ.ಪಂ ವತಿಯಿಂದ ಗಾಂಧಿಜಯಂತಿ ಆಚರಣೆ – ಬೃಹತ್ ಸ್ವಚ್ಛತಾ ಅಭಿಯಾನ

ಐವರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಗಾಂಧಿ ಜಯಂತಿ ಆಚರಣೆ ಮತ್ತು ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಅ.2 ರಂದು ನಡೆಯಿತು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ.ಶೇಖರ್ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಮನ್ಮಥ ಧ್ವಜಾರೋಹಣ ನೆರವೇರಿಸಿದರು.ನೂರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಿಜೆಪಿ ವತಿಯಿಂದ ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಗಾಂಧಿಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಮತ್ತು ಭಾರತೀಯ ಜನತಾ ಪಕ್ಷ ಸುಳ್ಯ ನಗರ ಶಕ್ತಿಕೇಂದ್ರದ ವತಿಯಿಂದ ಗಾಂಧಿ ಜಯಂತಿ ಯ ಅಂಗವಾಗಿ ಇಂದು ಸ್ವಚ್ಛ ಭಾರತ್ ಕಾರ್ಯಕ್ರಮವು ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ನೆರವೇರಿತು. ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿಯ ಪ್ರಮುಖರು, ಜನಪ್ರತಿನಿಧಿಗಳು ಮತ್ತು...
Ad Widget

ಕುಕ್ಕುಜಡ್ಕ ಶ್ರೀ ರಕ್ಷಾ ಪ್ರಗತಿಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್‌ ಬೆಳ್ಳಾರೆ ವಲಯದ ಆಶ್ರಯದಲ್ಲಿ ಕುಕ್ಕುಜಡ್ಕ ಒಕ್ಕೂಟದ ದೊಡ್ಡತೋಟ ಕಜೆಮೂಲೆ ಎಂಬಲ್ಲಿ ನೂತನವಾಗಿ ಶ್ರೀ ರಕ್ಷಾ ಪ್ರಗತಿ ಬಂಧು ಸಂಘವನ್ನು ಧನಂಜಯ ಕಜೆಮೂಲೆ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಕು.ಗಾಯತ್ರಿ ಮತ್ತು ಹರ್ಷಿತಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

￰ಧರ್ಮದಂ ರೈಡರ್ಸ್ ಕ್ಲಬ್ ಸುಳ್ಯ ವತಿಯಿಂದ ಇಂದು ಸುಳ್ಯ ಪೊಲೀಸ್ ಹಾಗು ಅಗ್ನಿಶಾಮಕ ಠಾಣೆಗೆ ಮಾಸ್ಕ್ ಹಾಗು ಸ್ಯಾನಿಟೈಜರ್ ಕೊಡುಗೆ

ಕರ್ನಾಟಕ ರಾಜ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ￰ಧರ್ಮದಂ ರೈಡರ್ಸ್ ಕ್ಲಬ್ (DMRC)ಸುಳ್ಯ ಕರ್ನಾಟಕ ಇವರ ವತಿಯಿಂದ ಇಂದು ಸುಳ್ಯ ಪೊಲೀಸ್ ಠಾಣೆ ಹಾಗು ಅಗ್ನಿಶಾಮಕ ಠಾಣೆ ಗೆ ಮಾಸ್ಕ್ ಹಾಗು ಸ್ಯಾನಿಟೈಜರ್ ವಿತರಿಸಿದರು. ಸುಳ್ಯ ಪೊಲೀಸ್ ಠಾಣೆ ಯಲ್ಲಿ ಎ.ಎಸ್.ಐ ರಘುರಾಮ್ ಹೆಗ್ಡೆ ಯವರ ಮುಖಾಂತರ ಮತ್ತು ಅಗ್ನಿಶಾಮಕ ಠಾಣಾಧಿಕಾರಿ ರಾಜಗೋಪಾಲ್ ರವರ ಮುಖಾಂತರ ಮಾಸ್ಕ್ ಹಾಗು...

ಮಡಪ್ಪಾಡಿ ಶಾಲೆಯಲ್ಲಿ ಗಾಂಧಿ ಜಯಂತಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯಲ್ಲಿ ಅ. 02 ರಂದು ಗಾಂಧಿ ಜಯಂತಿ ಹಾಗೂ ಸ್ವಚ್ಛತಾ ಕಾರ್ಯಕ್ರಮ ಆಚರಿಸಲಾಯಿತು. ಈ ದಿನದ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗೇಶ್ ಕುಚ್ಚಾಲ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶಕುಂತಲಾ ಕೇವಳ, ಸದಸ್ಯರಾದ ವಿನಯ ಕುಮಾರ್ ಮುಳುಗಾಡು, ಧರ್ಮಸ್ಥಳ ಒಕ್ಕೂಟದ ಅಧ್ಯಕ್ಷರಾದ ವಸಂತ ಕುಮಾರ್ ಬಳ್ಳಡ್ಕ, ಶ್ರೀಮತಿ ಪ್ರೇಮ...

ರೈತ ಹಾಗೂ ಕಾರ್ಮಿಕ ಮಸೂದೆ ತಿದ್ದುಪಡಿ ವಿರೋಧಿಸಿ ಕಾಂಗ್ರೆಸ್ ನಿಂದ ಸುಳ್ಯದಲ್ಲಿ ಕಿಸಾನ್ – ಮಜ್ದೂರ್ ಬಜಾವೋ ದಿವಸ್ ಆಚರಣೆ

ಕೇಂದ್ರ ಮತ್ತು ರಾಜ್ಯ ಸರಕಾರ ರೈತ ಹಾಗೂ ಕಾರ್ಮಿಕ ಮಸೂದೆಗಳ ತಿದ್ದುಪಡಿ ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಿಸಾನ್ – ಮಜ್ದೂರ್ ಬಚಾವೋ ದಿವಸ್ ಆಚರಣೆ ಪ್ರತಿಭಟನಾ ಕಾರ್ಯಕ್ರಮವಾಗಿ ಗಾಂಧಿ ಜಯಂತಿ ದಿನವಾದ ಅ.2 ರಂದು ಸುಳ್ಯದ ತಾಲೂಕು ಪಂಚಾಯತ್ ಎದುರು ನಡೆಸಿದರು. ತಾಲೂಕು ಪಂಚಾಯತ್ ಕಟ್ಟಡದ ಮುಖ್ಯ ದ್ವಾರದ ಬಳಿ ಕುಳಿತ ಕಾಂಗ್ರೆಸ್ ನಾಯಕರು...

ಗುತ್ತಿಗಾರು ಬಿಎಂಎಸ್ ಘಟಕ ವತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಮತ್ತು ಸ್ವಚ್ಚತಾ ಕಾರ್ಯಕ್ರಮ-

ಗುತ್ತಿಗಾರು ಬಿಎಂಎಸ್ ಘಟಕ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಹಾಗೂ ಸ್ವಚ್ಚತಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಪ್ರಾಕೃ.ಪ ಸ.ಸಂಘ ಅಧ್ಯಕ್ಷ ವೆಂಕಟ್ ದಂಬೆಕೋಡಿ ಉದ್ಘಾಟಿಸಿ ಶುಭಹಾರೈಸಿದರು. ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಶ್ಯಾಂ ಪ್ರಸಾದ್ ರವರು ಕೇಕ್ ಕತ್ತರಿಸುದರ ಮೂಲಕ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಆಚರಿಸಿದರು....

ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಗಾಂಧಿಜಯಂತಿ ಆಚರಣೆ – ಕ್ರಿಯಾಯೋಜನೆಗೆ ಚಾಲನೆ

ಬಾಳಿಲ ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ ಮತ್ತು ಮ.ಗಾ.ರಾ.ಗ್ರಾ.ಉ.ಖಾತರಿ ಯೋಜನೆಯ ಕ್ರಿಯಾಯೋಜನೆ ತಯಾರಿಗೆ ಚಾಲನೆ ಮತ್ತು ಸ್ವಚ್ಛತಾ ಶ್ರಮದಾನವು ಬಾಳಿಲ ಗ್ರಾಮ ಪಂಚಾಯತಿಯ ಮಿನಿ ಸಭಾಂಗಣದಲ್ಲಿ ಅ.2 ರಂದು ನಡೆಯಿತು.2021-22ನೇ ಸಾಲಿನ ಎಂ.ಜಿ.ಎನ್.ಆರ್.ಜಿ ಯೋಜನೆಯ ಕ್ರಿಯಾಯೋಜನೆ ತಯಾರಿಗೆ ಚಾಲನೆ ನೀಡಲಾಯಿತು. 'ಸ್ವಚ್ಛೋತ್ಸವ - ನಿತ್ಯೋತ್ಸವ' ಮಾಸಾಚರಣೆ ಅಂಗವಾಗಿ ಸ್ವಚ್ಛತಾ ಪ್ರತಿಜ್ಞೆ ಕೈಗೊಂಡು ಸ್ವಚ್ಛತಾ...

ಗುತ್ತಿಗಾರು ಸ್ವಚ್ಚೋತ್ಸವ-ನಿತ್ಯೋತ್ಸವ ಮಾಸಾಚರಣೆ

ಗುತ್ತಿಗಾರು ಗ್ರಾಮ ಪಂಚಾಯತ್ ವತಿಯಿಂದ ಸ್ವಚ್ಚೋತ್ಸವ-ನಿತ್ಯೋತ್ಸವ ಮಾಸಾಚರಣೆ ಕಾರ್ಯಕ್ರಮ ಇಂದು ನಡೆಯಿತು. ಈ ಪಿಡಿಒ ಶ್ಯಾಮ್ ಪ್ರಸಾದ್, ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗ್ರಾ.ಪಂ. ಮಾಜಿ ಸದಸ್ಯರು,ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು, ವರ್ತಕರು,ರಿಕ್ಷಾ ಚಾಲಕ ಮಾಲಕರು ಭಾಗವಹಿಸಿದ್ದರು.

ಯುವಜನ ಸಂಯುಕ್ತ ಮಂಡಳಿಯಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗ್ ರಿಗೆ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರಧಾನ

ಯುವಜನ ಸಂಯುಕ್ತ ಮಂಡಳಿ ಸುಳ್ಯ ಮತ್ತು ಯುವಜನ ಸೇವಾ ಸಂಸ್ಥೆ ಸುಳ್ಯ ಗಾಂಧಿ ಜಯಂತಿ ಆಚರಣೆ ಹಾಗೂ ಗಾಂಧಿ ಸ್ಮೃತಿ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ನಡೆಯಿತು. ಶಾಸಕ ಎಸ್. ಅಂಗಾರ ಕಾರ್ಯಕ್ರಮ ಉದ್ಘಾಟಿಸಿ, ಬೆಳ್ಳಾರೆಯ ಮಣಿಕ್ಕಾರ ಗೋಪಾಲಕೃಷ್ಣ ಶಾನುಭೋಗ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರೋ. ಸುಬ್ಬಪ್ಪ ಕೈಕಂಬ ಗಾಂಧೀಜಿಯವರ ಸ್ವರಾಜ್ಯ ಚಿಂತನೆ ಬಗ್ಗೆ...
Loading posts...

All posts loaded

No more posts

error: Content is protected !!