ಸುಳ್ಯ ಪಿ.ಎಲ್.ಡಿ. ಬ್ಯಾಂಕ್ ಸಿಬ್ಬಂದಿ ಗಣೇಶ್ ಕೆ.ಎನ್. ನಿವೃತ್ತಿ

ಸುಳ್ಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ 43 ವರ್ಷಗಳಿಂದ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ ಗಣೇಶ್ ಕೆ.ಯನ್.ಯವರು ಸೆ. 30 ರಂದು ನಿವೃತ್ತಿ ಹೊಂದಿದ್ದು, ಅಂದು ಬ್ಯಾಂಕಿನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಬ್ಯಾಂಕಿನ ಸಭಾ ಭವನದಲ್ಲಿ ನಡೆಯಿತು. ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಬಿಳಿಮಲೆಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪ್ರಭಾಕರ ನಾಯಕ್, ಕೋಶಾಧಿಕಾರಿ...

ವಿಹಿಂಪ ಮುರೂರು ಸಾಕೇತ ಶಾಖೆ ಉದ್ಘಾಟನೆ – ಅಧ್ಯಕ್ಷರಾಗಿ ಕಮಲಾಕ್ಷ ವಾಗ್ಲೆ ಮುರೂರು

ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡ ಮುರೂರು ಸಾಕೇತ ಶಾಖೆಯ ಉದ್ಘಾಟನೆ ಅ.4 ರಂದು ಮುರೂರು ಭಜನಾ ಮಂದಿರದಲ್ಲಿ ನಡೆಯಿತು. ಸಾಕೇತ ಶಾಖೆಯ ಉದ್ಘಾಟನೆಯನ್ನು ಸುಳ್ಯ ತಾಲೂಕು ವಿಹಿಂಪ ಅಧ್ಯಕ್ಷ ಸೋಮಶೇಖರ್ ಪೈಕ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಹಿಂಪ ತಾಲೂಕು ಸಹ ಕಾರ್ಯದರ್ಶಿ ಭಾನುಪ್ರಕಾಶ್ ದೊಡ್ಡತೋಟ, ಧನುಷ್ ಉಪಸ್ಥಿತರಿದ್ದರು.ಮುರೂರು ಸಾಕೇತ ಶಾಖೆಯ ನೂತನ ಅಧ್ಯಕ್ಷರಾಗಿ ಕಮಲಾಕ್ಷ...
Ad Widget

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಶ್ರಮದಾನ

ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಶ್ರಮದಾನ ಒ.4 ರಂದು ನಡೆಯಿತು. ಯುವಕ ಮಂಡಲದ ಅಧ್ಯಕ್ಷ ಹರೀಶ್ ನೆಕ್ರಾಜೆ, ಗೌರವಾಧ್ಯಕ್ಷ ಸತೀಶ್ ಪಿಲಿಕಜೆ ಮಾಜಿ ಅಧ್ಯಕ್ಷರುಗಳಾದ ಶ್ರೀಧರ ಕರ್ಮಾಜೆ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಅನಿಲ್ ಪೂಜಾರಿಮನೆ, ನಿತೀನ್ ಪಡ್ಪು , ನಿರ್ದೇಶಕರುಗಳಾದ ದಿನೇಶ್ ಪಡ್ಪು, ಭವಾನಿ ಶಂಕರ ಕರ್ಮಾಜೆ, ಯಶವಂತ ಚೊಕ್ಕಾಡಿ,...

ಬಡತನದಲ್ಲಿರುವ ಮಹಿಳೆಯೊಬ್ಬರ ಆರೋಗ್ಯ ಸಮಸ್ಯೆಗೆ ತುರ್ತು ಚಿಕಿತ್ಸೆಗೆ ನೆರವಾಗುವಿರಾ

ಎಡಮಂಗಲದ ಲೆಕ್ಕಿಸಿರಿಮಜಲಿನ ದಾಮೋದರ ಗೌಡ ಎಂಬುವವರ ಧರ್ಮಪತ್ನಿ ಪೊನ್ನಕ್ಕ ಎಂಬುವವರ ಜೀವನದ ವ್ಯಥೆಯಿದು.ಹಲವು ವರ್ಷದಿಂದ ಇವರ ಅರ್ಧ ಜೀವನ ಆಸ್ಪತ್ರೆಗೆ ಅಲೆದಾಡುವುದರಲ್ಲೇ ಕಳೆದಿದೆ ಒಂದಲ್ಲದಿದ್ದರೆ ಇನ್ನೊಂದು ಕಾಯಿಲೆ ಎಂಬಂತೆ ಇಲಿಜ್ವರ, ಕಿಡ್ನಿ ಸಂಬಂಧಿ ಸಮಸ್ಯೆ, ಹೃದಯ ಸಂಬಂಧಿ ಸಮಸ್ಯೆ ಇದೀಗ ಟಿಬಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪತಿಯ ಜತೆ ಇವರು ಕೂಲಿ ಕೆಲಸ ಮಾಡಿಕೊಂಡು ಅತ್ಯಂತ ಬಡತನದಲ್ಲಿ...

ಅರಂತೋಡು ಬಡ ಕುಟುಂಬಕ್ಕೆ ಯುವ ಬ್ರಿಗೇಡ್ ವತಿಯಿಂದ ಬೆಳಕು ಕಾರ್ಯಕ್ರಮ

ಅರಂತೋಡು ಗ್ರಾಮದ ಗ್ರಾಮ ಬಡ ಕುಟುಂಬ ಕೋಡಂಕೇರಿ ಶಾಲಿನಿ - ಬಾಲಚಂದ್ರ ಪೂಜಾರಿ ಯವರ ಮನೆಗೆ ಯುವ ಬ್ರಿಗೇಡ್ ಸುಳ್ಯದ ವತಿಯಿಂದ ಬೆಳಕು ಕಾರ್ಯಕ್ರಮ ಅ.4 ರಂದು ನಡೆಯಿತು. ಅರಂತೋಡು ಮೆಸ್ಕಾಂ ಶಾಖಾ ಜೆ.ಇ. ಅಭಿಷೇಕ್ ಚಾಲನೆ ನೀಡಿದರು. ಇದರ ದಾನಿಗಳಾಗಿ ದೇವಿಪ್ರಸಾದ್ ಅರಂಬೂರು, ಕಿಶೋರ್ ಕೋಡಂಕೇರಿ, ಮಧುಕಿರಣ್ ಅನ್ನಪೂರ್ಣ ಇವರು ನೆರವು ನೀಡಿದ್ದಾರೆ. ವಿದ್ಯುತ್...

ಶೀಲಾವತಿ ಮರಿಕೇಯಿ ನಿಧನ

ಕೊಡಿಯಾಲ ಗ್ರಾಮದ ಮರಿಕೇಯಿ ಶೇಷಪ್ಪ ಗೌಡರ ಧರ್ಮಪತ್ನಿ ಶ್ರೀಮತಿ ಶೀಲಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಅ.2 ರಂದು ನಿಧನರಾದರು.ಅವರಿಗೆ 55 ವರ್ಷ ಪ್ರಾಯವಾಗಿತ್ತು.ಮೃತರು ಪತಿ, ಪುತ್ರ ಕವನ್ ಕುಮಾರ್, ಸೊಸೆ ಪ್ರಿಯಾ, ಅತ್ತೆ, ಮೈದುನ ಕೊರಗಪ್ಪ ಗೌಡ, ನಾದಿನಿ ಶ್ರೀಮತಿ ಹರಿಣಾಕ್ಷಿ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಸಂಪಾಜೆ ಎಸ್ ಡಿ ಪಿ ಐ ವಲಯ ಸಮಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ಹಾಗೂ ಗಿಡ ನೆಡುವ ಕಾರ್ಯಕ್ರಮ

ಎಸ್ ಡಿ ಪಿ ಐ ಸಂಪಾಜೆ ವಲಯ ಸಮಿತಿ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ಹಾಗೂ ಗಿಡ ನೆಡುವ ಕಾರ್ಯಕ್ರಮ ಅ.3 ರಂದು ಸಂಪಾಜೆ ಗ್ರಾಮದ 5 ನೇ ವಾರ್ಡ್ ನಲ್ಲಿ ನಡೆಯಿತು. ಸಂಪಾಜೆ ಮಸೀದಿ ಬಳಿಯಿಂದ ಸಂಪಾಜೆ ಹೈಸ್ಕೂಲ್ ಸಂಪರ್ಕಿಸುವ ರಸ್ತೆಯು ತುಂಬಾ ಹದಗೆಟ್ಟು ಸಂಚಾರಕ್ಕೆ ಬಹಳ ಪ್ರಯಾಸಪಡುತ್ತಿದ್ದು ಇದನ್ನು ಮನಗೊಂಡು ಎಸ್...

ಗಾಂಧಿನಗರ ಜುಮಾ ಮಸ್ಜಿದ್ ಅನುಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ

ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ತರ್ಬೀಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಗಾಂಧಿನಗರ ,ಅನ್ಸಾರುಲ್ ಮುಸ್ಲಿಮೀನ್ ಎಸೋಸಿಯೇಶನ್ ರಿ, ಅನ್ಸಾರಿಯ ಎಜುಕೇಷನ್ ಸೆಂಟರ್ ರಿ, ಸುಳ್ಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ತಾಜುಲ್ ಫುಖಹಾ ಬೇಕಲ ಉಸ್ತಾದ್ , ಗಾಂಧಿನಗರ ಜುಮಾ ಮಸ್ಜಿದ್ ಸಮಿತಿಯ ಅಧ್ಯಕ್ಷ ಹಾಜಿ ಎಸ್.ಅಬ್ದುಲ್ಲಾ ಮಲ್ನಾಡ್ ಪುತ್ತೂರು ತಾಲೂಕು ಸಂಯುಕ್ತ ಜಮಾಅತಿನ ಸ್ಥಾಪಕಾಧ್ಯಕ್ಷ ಹಾಜಿ...

ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಿಎಂ ಸ್ಪಂದನೆ : ವೈದ್ಯಕೀಯ, ಆರೋಗ್ಯ ಸಚಿವರಿಗೆ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಸೂಚನೆ

ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರು ಕಳೆದ 10 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಬೇಡಿಕೆ ಬಗ್ಗೆ ಗಮನವಹಿಸುವಂತೆ ಶಾಸಕ ಆಯನೂರು ಮಂಜುನಾಥ್ ಬರೆದ ಪತ್ರಕ್ಕೆ ಸಿಎಂ ಯಡಿಯೂರಪ್ಪ ಪ್ರತಿಸ್ಪಂದಿಸಿದ್ದಾರೆಂದು ತಿಳಿದುಬಂದಿದೆ ತಿಳಿದುಬಂದಿದೆ. ಕೂಡಲೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲುಗೆ ಈ ಬಗ್ಗೆ ಗಮನ ಹರಿಸಿ, ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದಾರೆ...

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರು ಸುಳ್ಯ ಸಂಘದ ಭೇಟಿ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸುಳ್ಯ ಶಾಖೆ ಗೆ ಇಂದು ಜಿಲ್ಲಾಧ್ಯಕ್ಷರು ಭೇಟಿ ನೀಡಿದರು. ಜಿಲ್ಲಾಧ್ಯಕ್ಷರಾದ ಕೃಷ್ಣ ಕೆ.ಪಿ., ಜಿಲ್ಲಾ ಕಾರ್ಯದರ್ಶಿ ನವೀನ್, ರಾಜ್ಯ ಪರಿಷತ್ ಸಂಘಟನಾ ಕಾಯದರ್ಶಿಯ ಶ್ರೀಮತಿ ಶರ್ಲಿ, ಉಪಸ್ಥಿತರಿದ್ದರು. ಸಂಘದ ಕಾರ್ಯ ಚಟುವಟಿಕೆಗಳ ಅವಲೋಕನ ನಡೆಸಿದ ಅವರು ಸುಳ್ಯ ಶಾಖೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯವರನ್ನು...
Loading posts...

All posts loaded

No more posts

error: Content is protected !!