ಮೊಗರ್ಪಣೆ ಹಿದಾಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ.ಜಿ.ಇಬ್ರಾಹಿಂ

ಸುಳ್ಯ ಮೊಗರ್ಪಣೆ ಹಿದಾಯ್ಯತುಲ್ ಇಸ್ಲಾಂ ಜಮಾಅತ್ ಕಮಿಟಿಯ ಅಧ್ಯಕ್ಷರಾಗಿ ಹಾಜಿ.ಜಿ.ಇಬ್ರಾಹಿಂ ಆಯ್ಕೆಗೊಂಡರು. ಇಂದು ಮೊಗರ್ಪ ಣೆ ಮದರಸಾ ಸಭಾಂಗಣದಲ್ಲಿ ನಡೆದ ಮಹಾಸಭೆಯ ಎರಡನೇ ಹಂತದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹಾಜಿ ಅಬ್ದುಲ್ ಸಮದ್, ಎಸ್.ಯು.ಇಬ್ರಾಹಿಂ, ಜಿ.ಎ. ಅಬ್ದುಲ್ ರಹಿಮಾನ್, ಹಾಜಿ ಮಹಮ್ಮದ್ ಆದರ್ಶ, ಶಾಫಿ, ಸಿ.ಎಂ.ಉಸ್ಮಾನ್, ಮುನೀರ್ ಕೆ.ಎಂ., ರಹೀಂ ರಿಲಾಯನ್ಸ್, ಬಶೀರ್ ಕುತ್ತಮೊಟ್ಟೆ, ಸಂಶುದ್ದೀನ್...

ಡಿ.12 (ನಾಳೆ) : ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆಯು ಡಿ. 12 ರ ಶನಿವಾರ (ನಾಳೆ) ಪೂ. 10.30ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಂಗಣದಲ್ಲಿ ಜರುಗಲಿದೆ. ಸಂಘದ ಎಲ್ಲಾ ಸದಸ್ಯರು ಸಭೆಗೆ ಸಕಾಲಕ್ಕೆ ಹಾಜರಾಗಿ ಸಭೆಯ ಕಾರ್ಯ ಕಲಾಪಗಳನ್ನು...
Ad Widget

ಸುಳ್ಯ ಗ್ರಾ.ಪಂ ಚುನಾವಣೆ – ನೋಡೆಲ್ ಅಧಿಕಾರಿಯಾಗಿ ದೇವರಾಜ್ ಮುತ್ಲಾಜೆ ನೇಮಕ

ಸುಳ್ಯ ಗ್ರಾ.ಪಂ ಚುನಾವಣೆಗೆ ಸಂಬಂಧಿಸಿ ಮತಪತ್ರ ಮುದ್ರಣ ಮಾಡಲು ಆಯಾ ತಾಲೂಕುಗಳಿಗೆ ನೋಡಲ್ ಆಧಿಕಾರಿಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಚುನಾವಣಾ ಆಯೋಗ ನೇಮಕ ಮಾಡಿದ್ದು ಸುಳ್ಯ ತಾಲೂಕಿಗೆ ಸುಳ್ಯದ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ದೇವರಾಜ್ ಮುತ್ಲಾಜೆ ಅವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ . ಮತಪತ್ರಗಳನ್ನು ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ತಯಾರಿಸುವುದು , ಮತಪತ್ರಗಳನ್ನು...

ಡಿ.16 – ಜ.14 : ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುಪೂಜೆ

ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16 ರಿಂದ ಜ.14 ರವರೆಗೆ ಧನುಪೂಜೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ 5.15 ಕ್ಕೆ ಸರಿಯಾಗಿ ಧನುಪೂಜೆ ನಡೆಯಲಿದ್ದು ಪೂಜೆ ಮಾಡಿಸುವ ಭಕ್ತಾದಿಗಳು ದೇವಾಲಯದ ಕಚೇರಿಯಿಂದ ರಶೀದಿ ಪಡೆದು ಸಹಕರಿಸುವಂತೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾರಾಟಕ್ಕಿದೆ : ಸುಳ್ಯ ಪೇಟೆಗೆ ಸಮೀಪದಲ್ಲಿ ಜಾಗ

ಸುಳ್ಯದಿಂದ 4 ಕಿ ಮೀ ದೂರದಲ್ಲಿ ನೀರಿನ ವ್ಯವಸ್ತೆ ಹೊಂದಿದ 10 ಸೆಂಟ್ಸ್ ಜಾಗ ಮಾರಾಟಕ್ಕಿದೆ.ಸಂಪರ್ಕಿಸಿ :990069695394493663397760699058

ಮಡಪ್ಪಾಡಿ : ಸರಕಾರಿ ಬಸ್ ಸೇವೆ ಪುನರಾರಂಭ

ಹಲವಾರು ವರ್ಷಗಳಿಂದ ಜನರ ಜೀವನಾಡಿಯಾಗಿದ್ದ ಸರಕಾರಿ ಬಸ್ ಮಡಪ್ಪಾಡಿಗೆ ಬಾರದೇ ಸಂಚಾರಕ್ಕೆ ತೊಂದರೆಯಾಗಿತ್ತು. ಖಾಸಗಿ ವಾಹನಗಳಲ್ಲಿ ನೇತಾಡುವ ಪರಿಸ್ಥಿತಿ ಬಂದಿತ್ತು. ಪ್ರತಿ ದಿನ ಸಂಜೆ 6.30 ಸುಳ್ಯದಿಂದ ಹೊರಟು ಉಬರಡ್ಕ ಮಾರ್ಗವಾಗಿ ಬಂದು ರಾತ್ರಿ ನಿಂತು ಬೆಳಿಗ್ಗೆ ಹೊರಡುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಕೊರೊನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಈ ಬಗ್ಗೆ ಎ.ಪಿ.ಯಂ.ಸಿ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು...

ಸತ್ಯ ದಪ್ಪೆ ಕಲ್ಲುರ್ಟಿ ಹೊಸ ತುಳು ಭಕ್ತಿಗೀತೆ ಬಿಡುಗಡೆ

ಪಂಚವರ್ಣ ಖ್ಯಾತಿ ಯ ರಕ್ಷಿತ್ ಮಂಚಿಕಟ್ಟೆರವರ ಸಾಹಿತ್ಯದಲ್ಲಿ , ಸಾದ್ವಿನಿ ಕೊಪ್ಪ ಗಾಯನದಲ್ಲಿ, ಮಿಥುನ್ ರಾಜ್ಅವರ ಸಂಗೀತದಲ್ಲಿ   ಶ್ರೀ ಕ್ಷೇತ್ರ ಪಣೋಲಿ ಬೈಲ್ ನಲ್ಲಿ ಡಿ.8 ರಂದು ಬಿಡುಗಡೆಗೊಂಡಿತು. ಭಕ್ತಿ ಗೀತೆ ಬಿಡುಗಡೆ ಯನ್ನು  ಕ್ಷೇತ್ರದ ಅರ್ಚಕರಾದ ವಾಸುದೇವ ಮೂಲ್ಯ, ತೊಂಡಚ್ಚನ ಇಂಡಸ್ಟ್ರೀಸ್  ಮಾಲೀಕರಾದ ಮನು. ಎಂ ಪಂಜ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ...

ಆಸಿಯ ಕಲೀಲ್ ಪ್ರಕರಣ : ಸಂಧಾನ ವಿಫಲ – ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಮತ್ತೆ ಧರಣಿ ಕುಳಿತ ಆಸಿಯ

ಸುಳ್ಯದಲ್ಲಿ ಕಳೆದ ಹಲವು ತಿಂಗಳುಗಳಿಂದ ಸಂಚಲನವನ್ನೇ ಮೂಡಿಸಿದ್ದ ಆಸಿಯ ಇಬ್ರಾಹಿಂ ಕಲೀಲ್ ಕಟ್ಟೆಕ್ಕಾರ್ ಪ್ರಕರಣವು ಇಂದು ನಡೆದ ಸಂಧಾನಕಾರರ ಸಭೆಯಲ್ಲಿ ಅಂತಿಮ ನಿರ್ಣಯ ಸಿಗದ ಕಾರಣ ಆಸಿಯ ಮತ್ತೊಮ್ಮೆ ಗಾಂಧಿನಗರ ಕಟ್ಟೆಕಾರ್ ಫೂಟ್ ವೇರ್ ಮಳಿಗೆಯಲ್ಲಿ ಮತ್ತೊಮ್ಮೆ ಧರಣಿ ಕುಳಿತ ಘಟನೆ ಇಂದು ನಡೆದಿದೆ. ಘಟನೆಯ ವಿವರ : ಈ ಪ್ರಕರಣವನ್ನು ಶಮನಗೊಳಿಸಲು ಮುಸ್ಲಿಂ ಸಂಘಟನೆಗಳು...

ಶುಭವಿವಾಹ : ಜಯಕರ – ಪ್ರಮೀಳಾ

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕಡಂಬುಕಾನ ದಿ. ಕೃಷ್ಣ ನಾಯ್ಕರ ದ್ವಿತೀಯ ಪುತ್ರ ಜಯಕರ ಆರ್.ಕೆ.ರವರ ವಿವಾಹವು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ನೆಲ್ಲಿತ್ತಡ್ಕ ದಿ. ಗಂಗಾಧರ ನಾಯ್ಕರ ಪುತ್ರಿ ಪ್ರಮೀಳಾರೊಂದಿಗೆ ಡಿ. 09 ರಂದು ಪೆರುವಾಜೆಯ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆಯಿತು. ಅತಿಥಿ ಸತ್ಕಾರ ಕಾರ್ಯಕ್ರಮವು ಕಲ್ಮಡ್ಕದ ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಸಭಾಭವನದಲ್ಲಿ...

ಶುಭವಿವಾಹ : ಯಶವಂತಿ – ಲವಿನ್ ಅಮೀನ್

ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜ ಶ್ರೀ ಆನಂದ ಪೂಜಾರಿಯವರ ಪುತ್ರಿ ಯಶವಂತಿಯವರ ವಿವಾಹವು ಸುಳ್ಯ ತಾಲೂಕು ಕೆರೆಮೂಲೆ ಮನೆ ದಿ. ಸುಂದರಿ ಸುಕುಮಾರವರ ಪುತ್ರ ಲವಿನ್ ಅಮೀನ್ ರೊಂದಿಗೆ ಡಿ. 09 ರಂದು ಪೆರುವಾಜೆಯ ಜೆ.ಡಿ. ಅಡಿಟೋರಿಯಂನಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!