ಜ.8 ಕನಕಮಜಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಗೌರವಾರ್ಪಣೆ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಯುವಕ ಮಂಡಲ ಕನಕಮಜಲು ಇವುಗಳ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೌರವಾರ್ಪಣೆ ಜ.8 ರಂದು ಕನಕಮಜಲು ಮಾ.ಹಿ.ಪ್ರಾ.ಶಾಲೆಯ ರಂಗಚಾವಡಿಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಲಕ್ಷ್ಮೀ ನಾರಾಯಣ ಕಜೆಗದ್ದೆ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಜಾಲ್ಸೂರು...

ಸುಬ್ರಹ್ಮಣ್ಯ : ಜೇಸಿರತ್ನ ಪುರಸ್ಕಾರಕ್ಕೆ ಭಾಜನರಾದ ಜೇಸಿ ರವಿ ಕಕ್ಕೆಪದವು

ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020 ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿ ನೂರಾರು ಜನರಿಗೆ ಅನ್ನದಾತರಾಗಿರುವ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು ಕಲಿಕಾ ಸಾಮಾಗ್ರಿಗಳನ್ನು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿ ನೀಡುವುದು, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹಲವು...
Ad Widget

ಮರ್ಕಂಜ : ಮರವೇರಿ ಕುಳಿತ ಅಪರಿಚಿತ ವ್ಯಕ್ತಿ

ಮರ್ಕಂಜದ ದೊಡ್ಡಿಹಿತ್ಲು ಸಮೀಪ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮರವೇರಿ ಕುಳಿತ ಘಟನೆ ಇಂದು ನಡೆದಿದೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಯಾರು, ಮರವೇರಲು ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ದಳವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಧನ್ಯಶ್ರೀ – ಸನತ್ ಕುಮಾರ್ ಶುಭವಿವಾಹ

ಅಮರ ಮುಡ್ನೂರು ಗ್ರಾಮದ ಪೈಲಾರು ಪಡ್ಪುಮನೆ ಶ್ರೀಮತಿ ಕುಸುಮ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರಿ ಧನ್ಯಶ್ರೀ ಯ ವಿವಾಹವು ಪುತ್ತೂರು ತಾ. ಬಲ್ನಾಡು ಗ್ರಾಮದ ಕೋಡಿಯಡ್ಕ ಗಂಗಾಧರ ಗೌಡರ ಪುತ್ರ ಸನತ್ ಕುಮಾರ್ ರೊಂದಿಗೆ ಜ.3 ರಂದು ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರ ಕಾರ್ಯಕ್ರಮ ವಧುವಿನ ಮನೆಯಲ್ಲಿ ನಡೆಯಿತು.

ಕಾರ್ತಿಕ್ ದೇವ – ಕಾವ್ಯ ವಿವಾಹ ನಿಶ್ಚಿತಾರ್ಥ

ದೇವಚಳ್ಳ ಗ್ರಾಮದ ದೇವ ಆನಂದ ಬೆಳ್ಚಪ್ಪಾಡ ರವರ ಪುತ್ರ ಸಂಪಾಜೆ ವಲಯ ಅರಣ್ಯ ಇಲಾಖಾ ಸಿಬ್ಬಂದಿ ಕಾರ್ತಿಕ್ ರ ವಿವಾಹ ನಿಶ್ಚಿತಾರ್ಥವು ಎಣ್ಮೂರು ಗ್ರಾಮದ ನಿಂತಿಕಲ್ಲು ನಾರಾಯಣ ಬೆಳ್ಚಪ್ಪಾಡ ರವರ ಪುತ್ರಿ ಪುತ್ರಿ ಕಾವ್ಯರೊಂದಿಗೆ ಜ.3 ರಂದು ವಧುವಿನ ಮನೆಯಲ್ಲಿ ನಡೆಯಿತು.

ಕೆವಿಜಿ ಸುಳ್ಯ ಹಬ್ಬದ ಆಮಂತ್ರಣ ಬಿಡುಗಡೆ – ವಿದ್ಯಾರ್ಥಿಗಳ ಸ್ಪರ್ಧೆಗಳ ಉದ್ಘಾಟನೆ

ಸುಳ್ಯದ ಅಮರ ಶಿಲ್ಪಿ ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಸ್ಪರ್ಧೆಗಳ ಉದ್ಘಾಟನೆಯು ಜ 3 ರಂದು ಕೆವಿಜಿ ಕಾನೂನು ಕಾಲೇಜಿನಲ್ಲಿ ನಡೆಯಿತು.ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಜ.23 ರಂದು ನಡೆಯಲಿರುವ ಕೆ.ವಿ.ಜಿ.ಸುಳ್ಯ ಹಬ್ಬದ ಆಮಂತ್ರಣವನ್ನು ಸಮಿತಿಯ...

ಪಾಣತ್ತೂರು: ಖಾಸಗಿ ಬಸ್ ಪಲ್ಟಿ – ಮದುವೆಯ ಬೀಗರ ಊಟಕ್ಕೆ ತೆರಳುತ್ತಿದ್ದ ಏಳು ಮಂದಿ ದುರ್ಮರಣ – ಸುಳ್ಯದ ವ್ಯಕ್ತಿ ಮೃತ್ಯು

ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಏಳು ಜನರು ದುರ್ಮರಣಕ್ಕೀಡಾದ ಘಟನೆ ಇಂದು ನಡೆದಿದೆ. ಹಲವಾರು ಜನರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದುಬಂದಿದೆ.ಕೇರಳ ಕರ್ನಾಟಕ ಗಡಿಯ ಪಾಣತ್ತೂರು ಸಮೀಪದ ಗಡಿಗುಡ್ಡೆ ಎಂಬಲ್ಲಿ ನಡೆದಿದೆ. ಪುತ್ತೂರಿನ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈಶ್ವರಮಂಗಲದಿಂದ...

ಗುತ್ತಿಗಾರು : ಲಾಸ್ಯ ಕಲಾ ಶಾಲೆಯಲ್ಲಿ ನೃತ್ಯ ತರಬೇತಿ ಆರಂಭ

ಗುತ್ತಿಗಾರಿನ ಲಾಸ್ಯ ಕಲಾ ಶಾಲೆಯಲ್ಲಿ ಜ.3 ರಿಂದ ಪ್ರತಿ ಆದಿತ್ಯವಾರ ನೃತ್ಯ ತರಗತಿಗಳು ಆರಂಭವಾಗಲಿದೆ. ಆಸಕ್ತರು ದೂರವಾಣಿ ಮುಖಾಂತರ (ಮೊ: 94805 30310) ಸಂಪರ್ಕಿಸಬಹುದು ಎಂದು ಶಿಕ್ಷಕಿ ಶ್ರೀಮತಿ ರೇಶ್ಮಾ ಕಡ್ಯ ತಿಳಿಸಿದ್ದಾರೆ.

ನೆಲ್ಲೂರುಕೆಮ್ರಾಜೆ : ಮಂಟಮೆ ಶಿರಾಡಿ ದೇವಸ್ಥಾನದಲ್ಲಿ ಶ್ರಮದಾನ

ನೆಲ್ಲೂರುಕೆಮ್ರಾಜೆ ಗ್ರಾಮದ ಪಂಚಸ್ಥಾಪನೆಗೆ ಒಳಪಟ್ಟ ಮಂಟಮೆ ಶ್ರೀ ಶಿರಾಡಿ ದೇವಸ್ಥಾನ ಇದರ ಪ್ರತಿಷ್ಟ ಕಲಶೋತ್ಸವ ಕಾರ್ಯಕ್ರಮ ಅಂಗವಾಗಿ ನಾರ್ಣಕಜೆ,ದಾಸನಕಜೆ,ಸುಳ್ಳಿ ಭಾಗದ ಭಕ್ತಾಭಿಮಾನಿಗಳ ವತಿಯಿಂದ ಜ.3 ಶ್ರಮದಾನ ನಡೆಯಿತು.ಈ ಶ್ರಮದಾನದಲ್ಲಿ ಜಯಪ್ರಸಾದ್ ಸುಳ್ಳಿ, ಕೃಷ್ಣ ನಾರ್ಣಕಜೆ,ಬಾಬು ದಾಸನಕಜೆ , ಮಾಧವ ದಾಸನಕಜೆ, ಬಾಬು ನಾರ್ಣಕಜೆ, ಪ್ರಭಾಕರ ಸುಳ್ಳಿ, ಪ್ರಶಾಂತ ದಾಸನಕಜೆ, ಪುರುಷೋತ್ತಮ ನಾರ್ಣಕಜೆ, ಕುಶಾಲಪ್ಪ ದಾಸನಕಜೆ, ಶಿವ...

ಪೆರುವಾಜೆ : ಭಾವೈಕ್ಯ ಯುವಕ ಮಂಡಲದಿಂದ ಕ್ಯಾಪ್ಟನ್ ಸುದಾನಂದ್ ರವರಿಗೆ ಅಭಿನಂದನೆ

ಭಾವೈಕ್ಯ ಯುವಕ ಮಂಡಲ (ರಿ) ಪೆರುವಾಜೆ ಇದರ ವತಿಯಿಂದ ಭೂಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ಸುದಾನಂದ್ ಪೆರುವಾಜೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ವೆಂಕಟಕೃಷ್ಣ ರಾವ್, ಪೆರುವಾಜೆ ಬೂತಿನಿಂದ ಆಯ್ಕೆಯಾದ ಪದ್ಮನಾಭ ಶೆಟ್ಟಿ, ಮಾಧವ ಮುಂಡಾಜೆ ಹಾಗೂ ರೇವತಿ ಡಿ, ಯುವಕ ಮಂಡಲ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!