ಜ.9 ರಂದು ಪಂಜದಲ್ಲಿ ಬಿಜೆಪಿ ಪ್ರತಿಜ್ಞಾ ಸಮಾವೇಶ

ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಗೆಲುವು ಸಾಧಿಸಿದ ಜನಪ್ರತಿನಿಧಿಗಳು ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರ ಗೊಳಿಸಿಸುವ ಉದ್ದೇಶಕ್ಕಾಗಿ ಜ. 9 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ "ಪ್ರತಿಜ್ಞಾ ಸಮಾವೇಶ" ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಶಾಸಕ ಎಸ್.ಅಂಗಾರ ಹಾಗೂ ಜಿಲ್ಲಾ ಮತ್ತು...

ಸಂಪಾಜೆ : ಕಾಂಗ್ರೆಸ್ ವಿಜಯೋತ್ಸವ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ವಿಜಯೋತ್ಸವದ ಅಂಗವಾಗಿ ಮುಖ್ಯ ಪೇಟೆಯಲ್ಲಿ ಮೆರವಣಿಗೆ, ಸಿಂಗಾರಿ ಮೇಳದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ಮೆರವಣಿಗೆ ಮಾಜಿ ಕೆಪಿಸಿಸಿ ಸದಸ್ಯ, ಕೊಡಗು ಉಸ್ತುವಾರಿ ವೆಂಕಪ್ಪ ಗೌಡ ಚಾಲನೆ ನೀಡಿದರು. ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ್...
Ad Widget

ನಿವೃತ್ತ ಯೋಧ ಕಮಿಲ ವಿಶ್ವನಾಥ್ ರಿಗೆ ಊರವರ ಗೌರವಾರ್ಪಣೆ

ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಯೋಧರಾಗಿ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿ ನಿವೃತ್ತ ಕಮಿಲ ವಿಶ್ವನಾಥ್ ರಿಗೆ ಗ್ರಾಮ ಭಾರತ ತಂಡ ಹಾಗೂ ಊರವರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಡಿ.5 ರಂದು ಮೊಗ್ರ ಬಲ್ಲಾಳರ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾಕುಮಾರಿ, ಭರತ್...

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಜ. 4 ರಂದು ಮಡಿಕೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಫ್ಯಾನ್ಸಿ ಮೊಯ್ದೀನ್ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಆರ್ ಕೆ...

ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ರೋಚಕ ತಿರುವು

ಮತ್ತು ಬರುವ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು ಶಾಲಾ ಬಾಲಕಿ, ಇದೀಗ ಪೋಲೀಸರ ತನಿಖೆಯಿಂದ ಇದು ಕಟ್ಟು ಕಥೆ ಎಂದು ಬಯಲಾಗಿ ಪ್ರಕರಣಕ್ಕೆ ರೋಚಕ ತಿರುವು ಪಡೆದಿದೆ. ಘಟನೆ ವಿವರ :ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಹಾಸನಡ್ಕ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳು ಸ್ಮೃತಿ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಳು. ಆ ಬಾಲಕಿಯನ್ನು ಸ್ಥಳೀಯರು...

ಭೂಸೇನಾ ಯೋಧ ವಿಶ್ವನಾಥ ಕಮಿಲ ನಿವೃತ್ತಿ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಕಮಿಲ ಡಿ.31 ಭೂಸೇನೆಯಿಂದ ನಿವೃತ್ತಿಯಾದರು. ತನ್ನ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ ಕಮಿಲ ನಂತರ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಪ್ರೌಢಶಾಲೆ ಗುತ್ತಿಗಾರು ಮತ್ತು ಪಿಯುಸಿ ಯನ್ನು ಗುತ್ತಿಗಾರಿನಲ್ಲಿ ಮಾಡಿದ್ದಾರೆ. ಪಿ.ಯು.ಸಿ ಓದುತ್ತಿರುವಾಗಲೇ ಭಾರತೀಯ ಸೇನೆಯಯಲ್ಲಿರುವ ಹುದ್ದೆಗಳಿಗೆ ಪ್ರಯತ್ನಿಸುತ್ತಿದ್ದರು. ಅದೇ ರೀತಿ ೨೦೦೩ರಂದು ತನ್ನ ಕಠಿಣ ಪರಿಶ್ರಮದಿಂದ ಭಾರತೀಯ...

ಜ.8 ಕನಕಮಜಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಮತ್ತು ಗೌರವಾರ್ಪಣೆ

ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಯುವಕ ಮಂಡಲ ಕನಕಮಜಲು ಇವುಗಳ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗೌರವಾರ್ಪಣೆ ಜ.8 ರಂದು ಕನಕಮಜಲು ಮಾ.ಹಿ.ಪ್ರಾ.ಶಾಲೆಯ ರಂಗಚಾವಡಿಯಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಲಿದ್ದಾರೆ. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಲಕ್ಷ್ಮೀ ನಾರಾಯಣ ಕಜೆಗದ್ದೆ, ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ, ಜಾಲ್ಸೂರು...

ಸುಬ್ರಹ್ಮಣ್ಯ : ಜೇಸಿರತ್ನ ಪುರಸ್ಕಾರಕ್ಕೆ ಭಾಜನರಾದ ಜೇಸಿ ರವಿ ಕಕ್ಕೆಪದವು

ಆರ್ಯಭಟ ಪ್ರಶಸ್ತಿ ಪುರಸ್ಕೃತ ಜೇಸಿ ರವಿ ಕಕ್ಕೆಪದವುರವರಿಗೆ 2020 ರ ಸಾಲಿನ ಜೇಸಿರತ್ನ ಪುರಸ್ಕಾರ ಲಭಿಸಿದೆ. ಸುಬ್ರಹ್ಮಣ್ಯದಲ್ಲಿ ಉದ್ಯಮಿಯಾಗಿ ನೂರಾರು ಜನರಿಗೆ ಅನ್ನದಾತರಾಗಿರುವ ಇವರು ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡುವುದು ಕಲಿಕಾ ಸಾಮಾಗ್ರಿಗಳನ್ನು ನೀಡುವುದು, ಅಶಕ್ತರಿಗೆ ಆರ್ಥಿಕ ನೆರವು, ಆಹಾರ ಸಾಮಾಗ್ರಿ ನೀಡುವುದು, ಅನಾರೋಗ್ಯ ಪೀಡಿತರ ಆರೈಕೆ, ಸುಬ್ರಹ್ಮಣ್ಯ ಪರಿಸರದಲ್ಲಿ ಸ್ವಚ್ಚತಾ ಕಾರ್ಯ ಸೇರಿದಂತೆ ಹಲವು...

ಮರ್ಕಂಜ : ಮರವೇರಿ ಕುಳಿತ ಅಪರಿಚಿತ ವ್ಯಕ್ತಿ

ಮರ್ಕಂಜದ ದೊಡ್ಡಿಹಿತ್ಲು ಸಮೀಪ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಮರವೇರಿ ಕುಳಿತ ಘಟನೆ ಇಂದು ನಡೆದಿದೆ. ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ ಯಾರು, ಮರವೇರಲು ಕಾರಣವೇನು ಎಂದು ತಿಳಿದುಬಂದಿಲ್ಲ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ದಳವರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಧನ್ಯಶ್ರೀ – ಸನತ್ ಕುಮಾರ್ ಶುಭವಿವಾಹ

ಅಮರ ಮುಡ್ನೂರು ಗ್ರಾಮದ ಪೈಲಾರು ಪಡ್ಪುಮನೆ ಶ್ರೀಮತಿ ಕುಸುಮ ಮತ್ತು ದಿ.ಬಾಲಕೃಷ್ಣ ಗೌಡರ ಪುತ್ರಿ ಧನ್ಯಶ್ರೀ ಯ ವಿವಾಹವು ಪುತ್ತೂರು ತಾ. ಬಲ್ನಾಡು ಗ್ರಾಮದ ಕೋಡಿಯಡ್ಕ ಗಂಗಾಧರ ಗೌಡರ ಪುತ್ರ ಸನತ್ ಕುಮಾರ್ ರೊಂದಿಗೆ ಜ.3 ರಂದು ಕಂಜರ್ಪಣೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರ ಕಾರ್ಯಕ್ರಮ ವಧುವಿನ ಮನೆಯಲ್ಲಿ ನಡೆಯಿತು.
Loading posts...

All posts loaded

No more posts

error: Content is protected !!