ನಾರ್ಕೋಡು ಕೋಲ್ಚಾರು ಕನ್ನಡಿತೋಡು ರಸ್ತೆ ಕಾಮಗಾರಿ ಶೀಘ್ರ ಆರಂಭಿಸದಿದ್ದರೇ ಪ್ರತಿಭಟನೆಗೆ ನಿರ್ಧಾರ – ಧರ್ಮಪಾಲ ಕೊಯಿಂಗಾಜೆ

ನಾರ್ಕೋಡು ಕೋಲ್ಚಾರು ಕನ್ನಡಿತೋಡು ಪಿಡಬ್ಲ್ಯೂಡಿ ರಸ್ತೆ ಅಭಿವೃದ್ಧಿಗೆ ಮತ್ತು ಅಗಲೀಕರಣಕ್ಕೆ 2018 -19 ನೇ ಸಾಲಿನ ಪ್ಯಾಕೆಜ್ ನಂಬ್ರ 351 ರಂತೆ ಹತ್ತುವರೆ ಕೋಟಿ ಅನುದಾನ ಬಿಡುಗಡೆಗೊಂಡು ವರ್ಷವೇ ಕಳೆದರೂ ಇಲಾಖೆಯ ಅಧಿಕಾರಿಗಳ , ಗುತ್ತಿಗೆದಾರರ ಮಂದಗತಿಯ ಕೆಲಸದಿಂದಾಗಿ ಕಾಮಗಾರಿ ವಿಳಂಬಗೊಂಡು ಸಾರ್ವಜನಿಕರಿಗೆ , ವಾಹನ ಸವಾರರಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ತೀರ ಹದಗೆಟ್ಟಿರುವ ನಮ್ಮ ರಸ್ತೆಯ...

ಶುಭವಿವಾಹ : ಚಿದಾನಂದ – ಚೈತನ್ಯ

ಸುಳ್ಯ ತಾಲೂಕು ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀಮತಿ ಜಾನಕಿ ಪುಟ್ಟಣ್ಣ ಗೌಡರ ಪುತ್ರ ಚಿದಾನಂದರವರ ವಿವಾಹವು ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಶಿವಾಜಿನಗರ(ಕುತ್ತಿಮುಂಡ) ಶ್ರೀಮತಿ ಗಿರಿಜ ರುಕ್ಮಯ್ಯ ಗೌಡರ ಪುತ್ರಿ ಚೈತನ್ಯರೊಂದಿಗೆ ಜ.6 ರಂದು ತಂಟೆಪ್ಪಾಡಿ ವರನ ಮನೆಯಲ್ಲಿ ನಡೆಯಿತು.
Ad Widget

ಜ.8 : ನಿಂತಿಕಲ್ಲಿನಲ್ಲಿ ಹೋಟೆಲ್ ಮಹಾರಾಣಿ ಶುಭಾರಂಭ

ನಿಂತಿಕಲ್ಲು - ಬೆಳ್ಳಾರೆ ಮುಖ್ಯ ರಸ್ತೆಯ ಬಳಿ ಆನಂದ ಗೌಡ ಬೊಳ್ಳಾಜೆ ಮಾಲಕತ್ವದ ಹೋಟೆಲ್ ಮಹಾರಾಣಿ ಜ.8 ರ ಶುಕ್ರವಾರದಂದು ಶುಭಾರಂಭಗೊಳ್ಳಲಿದೆ.ಇಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯಗಳು ಲಭ್ಯವಿದ್ದು ಚಾ, ಕಾಫಿ, ತಿಂಡಿ ಹಾಗೂ ಊಟ ದೊರೆಯಲಿದೆ. ಅಲ್ಲದೇ ಸಭೆ, ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿದ್ದಾರೆ.

ಬಳ್ಪ : ಎಣ್ಣೆಮಜಲು ರಸ್ತೆ ದುರಸ್ತಿ

ಬಳ್ಪ ಗ್ರಾಮದ ಎಣ್ಣೆಮಜಲು ರಸ್ತೆಯನ್ನು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ವಿಜೇತರಾದ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರು ಸೇರಿ ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆಯವರ ನೇತೃತ್ವದಲ್ಲಿ ರಸ್ತೆಯನ್ನು ಶ್ರಮದಾನದ ಮೂಲಕ ತಾತ್ಕಾಲಿಕ ದುರಸ್ತಿ ಮಾಡಲಾಯಿತು.

ಜ.9 ರಂದು ಪಂಜದಲ್ಲಿ ಬಿಜೆಪಿ ಪ್ರತಿಜ್ಞಾ ಸಮಾವೇಶ

ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರಾಗಿ ಗೆಲುವು ಸಾಧಿಸಿದ ಜನಪ್ರತಿನಿಧಿಗಳು ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಸಾಕಾರ ಗೊಳಿಸಿಸುವ ಉದ್ದೇಶಕ್ಕಾಗಿ ಜ. 9 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ "ಪ್ರತಿಜ್ಞಾ ಸಮಾವೇಶ" ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದ್ರೆ, ಶಾಸಕ ಎಸ್.ಅಂಗಾರ ಹಾಗೂ ಜಿಲ್ಲಾ ಮತ್ತು...

ಸಂಪಾಜೆ : ಕಾಂಗ್ರೆಸ್ ವಿಜಯೋತ್ಸವ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ ಹಾಗೂ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು. ವಿಜಯೋತ್ಸವದ ಅಂಗವಾಗಿ ಮುಖ್ಯ ಪೇಟೆಯಲ್ಲಿ ಮೆರವಣಿಗೆ, ಸಿಂಗಾರಿ ಮೇಳದವರಿಂದ ಆಕರ್ಷಕ ಪ್ರದರ್ಶನ ನಡೆಯಿತು. ಮೆರವಣಿಗೆ ಮಾಜಿ ಕೆಪಿಸಿಸಿ ಸದಸ್ಯ, ಕೊಡಗು ಉಸ್ತುವಾರಿ ವೆಂಕಪ್ಪ ಗೌಡ ಚಾಲನೆ ನೀಡಿದರು. ಮೆರವಣಿಗೆ ನಂತರ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸೋಮಶೇಖರ್...

ನಿವೃತ್ತ ಯೋಧ ಕಮಿಲ ವಿಶ್ವನಾಥ್ ರಿಗೆ ಊರವರ ಗೌರವಾರ್ಪಣೆ

ಭಾರತೀಯ ಭೂ ಸೇನೆಯಲ್ಲಿ ಸುಮಾರು 17 ವರ್ಷಗಳ ಕಾಲ ಯೋಧರಾಗಿ ದೇಶದ ವಿವಿಧ ಕಡೆ ಸೇವೆ ಸಲ್ಲಿಸಿ ನಿವೃತ್ತ ಕಮಿಲ ವಿಶ್ವನಾಥ್ ರಿಗೆ ಗ್ರಾಮ ಭಾರತ ತಂಡ ಹಾಗೂ ಊರವರ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ ಡಿ.5 ರಂದು ಮೊಗ್ರ ಬಲ್ಲಾಳರ ರಾಜಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರುಗಳಾದ ಎಂ ಕೆ ಶಾರದಾ, ಲತಾಕುಮಾರಿ, ಭರತ್...

ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿದ ಅಲ್ಪಸಂಖ್ಯಾತರ ಸೊಸೈಟಿ ಅಧ್ಯಕ್ಷ ಇಕ್ಬಾಲ್ ಎಲಿಮಲೆ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಅಬ್ದುಲ್ ಅಜಿಮ್ ರವರು ಜ. 4 ರಂದು ಮಡಿಕೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದ್ದೋದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ಫ್ಯಾನ್ಸಿ ಮೊಯ್ದೀನ್ ಸಂಘದ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಆರ್ ಕೆ...

ಶಾಲಾ ಬಾಲಕಿಗೆ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ರೋಚಕ ತಿರುವು

ಮತ್ತು ಬರುವ ಸ್ಪ್ರೇ ಸಿಂಪಡಿಸಿ ಅಪಹರಣಕ್ಕೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು ಶಾಲಾ ಬಾಲಕಿ, ಇದೀಗ ಪೋಲೀಸರ ತನಿಖೆಯಿಂದ ಇದು ಕಟ್ಟು ಕಥೆ ಎಂದು ಬಯಲಾಗಿ ಪ್ರಕರಣಕ್ಕೆ ರೋಚಕ ತಿರುವು ಪಡೆದಿದೆ. ಘಟನೆ ವಿವರ :ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕದ ಹಾಸನಡ್ಕ ಆನೆಕಾರ್ ಎಂಬಲ್ಲಿ ಶಾಲಾ ಬಾಲಕಿಯೊಬ್ಬಳು ಸ್ಮೃತಿ ತಪ್ಪಿ ರಸ್ತೆಯಲ್ಲಿ ಬಿದ್ದಿದ್ದಳು. ಆ ಬಾಲಕಿಯನ್ನು ಸ್ಥಳೀಯರು...

ಭೂಸೇನಾ ಯೋಧ ವಿಶ್ವನಾಥ ಕಮಿಲ ನಿವೃತ್ತಿ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ವಿಶ್ವನಾಥ್ ಕಮಿಲ ಡಿ.31 ಭೂಸೇನೆಯಿಂದ ನಿವೃತ್ತಿಯಾದರು. ತನ್ನ ವಿದ್ಯಾಭ್ಯಾಸವನ್ನು ಕಿರಿಯ ಪ್ರಾಥಮಿಕ ಶಾಲೆ ಕಮಿಲ ನಂತರ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರು, ಪ್ರೌಢಶಾಲೆ ಗುತ್ತಿಗಾರು ಮತ್ತು ಪಿಯುಸಿ ಯನ್ನು ಗುತ್ತಿಗಾರಿನಲ್ಲಿ ಮಾಡಿದ್ದಾರೆ. ಪಿ.ಯು.ಸಿ ಓದುತ್ತಿರುವಾಗಲೇ ಭಾರತೀಯ ಸೇನೆಯಯಲ್ಲಿರುವ ಹುದ್ದೆಗಳಿಗೆ ಪ್ರಯತ್ನಿಸುತ್ತಿದ್ದರು. ಅದೇ ರೀತಿ ೨೦೦೩ರಂದು ತನ್ನ ಕಠಿಣ ಪರಿಶ್ರಮದಿಂದ ಭಾರತೀಯ...
Loading posts...

All posts loaded

No more posts

error: Content is protected !!