Ad Widget

ಕಾಂಚೋಡು ಜಾತ್ರೋತ್ಸವ ಸಂಪನ್ನ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ. 11 ರಿಂದ ಫೆ. 14 ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಿತು. ಫೆ. 14 ರಂದು ಬೆಳಗ್ಗೆ ಬೆಳಗ್ಗಿನ ಪೂಜೆ, ಶ್ರೀ ದೇವಳದಲ್ಲಿ ರುದ್ರಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಬಳಿಕ ಕಲ್ಲೇರಿತ್ತಾಯ ದೈವದ ಭಂಡಾರ ತೆಗೆದು...

ಅರಂತೋಡು : ರಿಕ್ಷಾ ಚಾಲಕರ ವತಿಯಿಂದ ಸಚಿವ ಅಂಗಾರರಿಗೆ ಅಭಿನಂದನೆ

ಅರಂತೋಡು ರಿಕ್ಷಾ ಚಾಲಕ ಮಾಲಕರ ವತಿಯಿಂದ ನೂತನ ಸಚಿವ ಎಸ್ ‌ಅಂಗಾರರಿಗೆ ಹೂಮಾಲೆ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಹರೀಶ್ ಕಂಜಿಪಿಲಿ, ತಾ.ಪಂ‌.ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಹಾಗೂ ಗ್ರಾ.ಪಂ‌. ಸದಸ್ಯರು ಹಾಗೂ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
Ad Widget

ಸುಳ್ಯ : ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಸಭೆ – ಪುಲ್ವಾಮ ಹುತಾತ್ಮ ಸೈನಿಕರಿಗೆ ನುಡಿನಮನ

ಸುಳ್ಯ ಬಿಜೆಪಿ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸಭೆಯು ಸುಳ್ಯದ ಬಿಜೆಪಿ ಕಛೇರಿಯಲ್ಲಿ ಫೆ.14ರಂದು ನಡೆಯಿತು.ಫೆ.28ರಂದು ಮಂಗಳೂರಿನಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಜಿಲ್ಲಾ ಕಾರ್ಯಕಾರಿಣಿ ನಡೆಯಲಿದ್ದು, ಇದರ ಪೂರ್ವಭಾವಿ ಸಭೆಯು ನಡೆಯಿತು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಂಚಾಲಕ ಅಜಿತ್ ಉಳ್ಳಾಲ್, ಸಹ ಸಂಚಾಲಕ ದೀರಜ್ ಮಂಗಳೂರು, ಅಕ್ಷಯ್, ಸಾಮಾಜಿಕ ಜಾಲತಾಣ ಜಿಲ್ಲಾ...

ಗುರಿ

ಸಮಯವು ನಿಲ್ಲದು ಎಂದಿಗೂ ನಿನಗೆ…ಸಾಗುತಲಿರು ನೀ ಗುರಿಯೆಡೆಗೆಮನಸಲಿ ನೋವಿನ ಬದಲು ಛಲವನು ತುಂಬಿಸುನೀ ನಿನ್ ಎದೆಯೊಳಗೆ… ಕನಸಿನ ಗೋಪುರ ಕಟ್ಟುತ ಕೂರದಿರುನನಸಾಗಿಸುವ ಪ್ರಯತ್ನಪಡು…ಸ್ವಾರ್ಥರಹಿತ ಮನದಲಿ ಸಾಗು ನೀತಲುಪಿಯೆ ತಲುಪುವೆ ಗುರಿಯನ್ನು… ಯಾರಿಗೂ ಅಂಜದೆ, ಯಾರಿಗೂ ಅಳುಕದೆಸಾಗುತಲಿರು ನೀ ಗುರಿಯೆಡೆಗೆ…ಇಲ್ಲಿ ಯಾರಿಗೆ ಯಾರೂ ಆಗರುನೀನೇ ಎಲ್ಲವೂ ನಿನಗಿಲ್ಲಿ… ಸೋಲನು ಸೋಲಿಸಿ, ಗೆಲುವನು ಚುಂಬಿಸಿತಲುಪು ನೀ ನಿನ್ನ ಗುರಿಯನ್ನು…ಸಮಯವು...

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ – ದರ್ಶನ ಬಲಿ

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.13 ರಂದು ಬೆಳಿಗ್ಗೆ ಗಣಪತಿ ಹವನ, ಉಷಾಃಪೂಜೆ, ಶಿವೇಲಿ, ನವಕ ಕಲಶಾಭಿಷೇಕ ನಡೆದು, ಮಧ್ಯಾಹ್ನ 12.00 ಕ್ಕೆ ಮಹಾಪೂಜೆ, ಶಿವೇಲಿ, ಅನ್ನಪ್ರಸಾದ ವಿತರಣೆ ನಡೆಯಿತು. ರಾತ್ರಿ 7.30 ಕ್ಕೆ ಶಿವೇಲಿ, ದರ್ಶನ ಬಲಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಫೆ.14 ರಂದು ಬೆಳಿಗ್ಗೆ...

ಎಲಿಮಲೆ : 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ

ಕಳೆದ ವರ್ಷ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆದ ಸುಳ್ಯ ತಾಲೂಕು 24ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭ ಎಲಿಮಲೆಯಲ್ಲಿ ಫೆ.13 ರಂದು ನಡೆಯಿತು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಕೃ.ಷಾ. ಮರ್ಕಂಜ, ಪದಾಧಿಕಾರಿಗಳು, ಎ.ವಿ.ತೀರ್ಥರಾಮ, ವಿಷ್ಣು ಭಟ್ ಮೂಲೆತೋಟ, ಗೋಪಿನಾಥ್ ಮೆತ್ತಡ್ಕ, ಶ್ರೀಧರ ಕೆ., ಪ್ರಮೀಳಾ ಗೋಪಿನಾಥ್, ದಯಾನಂದ ಕೆ. ಮತ್ತಿತರರು...

ಎಲಿಮಲೆ : ಮುಖ್ಯ ಶಿಕ್ಷಕ ಗೋಪಿನಾಥ್ ಮೆತ್ತಡ್ಕರಿಗೆ ಅಭಿನಂದನೆ

ಸುಮಾರು 26 ವರುಷಗಳ ಕಾಲ ಸುದೀರ್ಘ ಕಾಲ ಸೇವೆ ಸಲ್ಲಿಸಿ ಪದೋನ್ನತಿಗೊಂಡು ಸರಕಾರಿ ಪ್ರೌಢಶಾಲೆ ಅಜ್ಜಾವರ ಇಲ್ಲಿಗೆ ಮುಖ್ಯ ಶಿಕ್ಷಕರಾಗಿ ತೆರಳಿರುವ ಗೋಪಿನಾಥ್.ಎಂ ಇವರಿಗೆ ಸರಕಾರಿ ಪ್ರೌಢಶಾಲೆ ಎಲಿಮಲೆ, ಶಾಲಾಭಿವೃದ್ಧಿ ಸಮಿತಿ ಮತ್ತು ಮೇಲುಸ್ತುವಾರಿ ಸಮಿತಿ ಇದರ ವತಿಯಿಂದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ನಡೆಯಿತು. ಎಲಿಮಲೆ ಜ್ಞಾನದೀಪ ವಿದ್ಯಾಸಂಸ್ಥೆಯ ಸಂಚಾಲಕ...

ಕೆ.ಪಿ.ಎಸ್. ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನೆ

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭವು ಫೆ. 13 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾದ ಶಾಂತರಾಮ ಕಣಿಲೆಗುಂಡಿ ವಹಿಸಿದ್ದರು. ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿಯವರು ಕಾರ್ಯಕ್ರಮದ ಉದ್ಘಾಟನೆಗೈದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜು ಪೆರುವಾಜೆ ಇಲ್ಲಿನ ಎನ್.ಎಸ್.ಎಸ್. ಕಾರ್ಯಕ್ರಮ...

ಕೊಲ್ಲಮೊಗ್ರ : ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಪೂರ್ವಭಾವಿ ಸಭೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಮ್ಮ ಊರು ನಮ್ಮ ಕೆರೆ ಪೂರ್ವಭಾವಿ ಸಭೆಯು ಫೆ.12 ರಂದು ಮಯೂರ ಕಲಾಮಂದಿರ ಕೊಲ್ಲಮೊಗ್ರ ಇಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ದೇಶ ಸಾರ್ವಜನಿಕ ಉಪಯೋಗಕ್ಕಾಗಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಮತ್ತು ಸುತ್ತ ಮರ-ಗಿಡಗಳನ್ನು ಬೆಳೆಸುವ ಮೂಲಕ ಕೆರೆಗಳನ್ನು ಉಳಿಸುವ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.ಇದೇ ಸಂದರ್ಭದಲ್ಲಿ ಕೆರೆ ರಚನೆ...

ಸುಳ್ಯ : ಭೂಮಿಕಾ ಎಂಟರ್ ಪ್ರೈಸಸ್ ಶುಭಾರಂಭ

ಸುಳ್ಯ ಜ್ಯೋತಿ ಸರ್ಕಲ್ ಸಮೀಪ ಇರುವ ಲಸ್ರಾದೋ ಕಾಂಪ್ಲೆಕ್ಸ್ ನಲ್ಲಿ ಬಾಲಕೃಷ್ಣ ಗೌಡ ನಡುಗಲ್ಲು ಮಾಲಕತ್ವದ *ಭೂಮಿಕಾ ಎಂಟರ್ ಪ್ರೈಸಸ್*  ಆಡಿಟರ್ ಅಂಡ್ ಟ್ಯಾಕ್ಸ್ ಕನ್ಸಲ್ಟೆಂಟ್ ಹಾಗೂ ನಾಗರಿಕ ಸೇವಾ ಕೇಂದ್ರ  ಫೆ. 15 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
Loading posts...

All posts loaded

No more posts

error: Content is protected !!