ಬಳ್ಪ : ರಸ್ತೆತಡೆ, ಗ್ರಾಮ ಪಂಚಾಯತ್ ಮುತ್ತಿಗೆ ಹೋರಾಟ ತಾತ್ಕಾಲಿಕ ಹಿಂಪಡೆತ

ಅಡ್ಡಬೈಲ್ - ಬೀದಿಗುಡ್ಡೆ - ಬೋಗಾಯನಕೆರೆ ರಿಂಗ್ ರೋಡ್ ಹೋರಾಟ ಸಮಿತಿ ವತಿಯಿಂದ ಮಾರ್ಚ್ 8 ರಂದು ನಡೆಯಬೇಕಿದ್ದ ರಸ್ತೆತಡೆ, ಬಳ್ಪ ಗ್ರಾಮ ಪಂಚಾಯತ್ ಮುತ್ತಿಗೆಯಂತಹ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಕಳೆದ ವಾರ ಸಚಿವರಾದ ಎಸ್. ಅಂಗಾರ, ಸಂಸದರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಬಳ್ಪ ಗ್ರಾಮಕ್ಕೆ ಭೇಟಿ ನೀಡಿ ಈ ರಸ್ತೆಯ ಅಭಿವೃದ್ಧಿಗೆ ಗುದ್ದಲಿ...

ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಶಿಕ್ಷಣ ಸಚಿವರಿಗೆ ಅಹವಾಲು ಸಲ್ಲಿಕೆ

ಕರ್ನಾಟಕ ಸರ್ಕಾರದ ಮಾನ್ಯ ಶಿಕ್ಷಣ ಸಚಿವರಾದ ಎಸ್. ಸುರೇಶ್ ಕುಮಾರ್ ರವರು ಮಾ.6ರಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುಳ್ಯ ತಾಲೂಕು ಖಾಸಗಿ ಶಿಕ್ಷಕರ ಬಳಗದ ಪದಾಧಿಕಾರಿಗಳು ಮಾನ್ಯ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಖಾಸಗಿ ಶಾಲಾ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ತೋಡಿಕೊಂಡರು. ಇದೇ ವೇಳೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ...
Ad Widget

ಎಣ್ಣೆಮಜಲು ಶಾಲೆಯಲ್ಲಿ ಶೈಕ್ಷಣಿಕ ಶಿಬಿರ ಹಾಗೂ ಯೋಗ ಕಾರ್ಯಕ್ರಮ

ಯೋಗ ತರಬೇತಿ ನೀಡಿದ ಶರತ್ ಮರ್ಗಿಲಡ್ಕ ಎಣ್ಣೆಮಜಲು ಕಿ.ಪ್ರಾ.ಶಾಲೆ ಹಾಗೂ ಸಿ ಸಿ ಆರ್ ಟಿ ಗ್ರೂಪ್ ಸಹಯೋಗದೊಂದಿಗೆ ಶೈಕ್ಷಣಿಕ ಶಿಬಿರ ಹಾಗೂ ಯೋಗ ಕಾರ್ಯಕ್ರಮ ಮಾ.6ರಂದು ಉದ್ಘಾಟನೆಗೊಂಡಿತು. ಉದ್ಘಾಟನೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಚಂದ್ರಶೇಖರ ಪಟೋಳಿ ನೆರವೇರಿಸಿದರು. ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಕುಸುಮಾ ರೈ ವಹಿಸಿದ್ದರು. ಸಿ ಸಿ ಆರ್ ಟಿ ಗ್ರೂಪ್...

ಬಳ್ಪ : ಮನೆ ನಿರ್ಮಾಣಕ್ಕೆ 25 ಲಕ್ಷ ದಾನ ಮಾಡಿ ಆದರ್ಶ ಮೆರೆದ ಉದ್ಯಮಿ

ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಮನವಿಯ ಮೇರೆಗೆ ಸಂಸದರ ಆದರ್ಶ ಗ್ರಾಮ ಕಡಬ ತಾಲೂಕಿನ ಬಳ್ಪ ಗ್ರಾಮದಲ್ಲಿ ಸರ್ಕಾರಿ ಸೌಲಭ್ಯ ಪಡೆಯಲು ದಾಖಲೆಗಳ ಕೊರತೆ ಹೊಂದಿದ ಬಡ 5 ಕುಟುಂಬಗಳಿಗೆ ಮನೆ ನಿರ್ಮಿಸಿ ಕೊಡಲು ಇಂಗ್ಲೆಂಡ್ ನ ಉದ್ಯಮಿ ರೋನ್ ರೋಡ್ರಿಗಾಸ್ ರವರು ರೂ. 25 ಲಕ್ಷದ ಚೆಕ್ ಅನ್ನು...

ಡಾ. ಸೀತಾರಾಮ ಪಲ್ಲೋಡಿಯವರ “ಕಾಡು-ನುಡಿ-ನಾಡು” ಕವನ ಸಂಕಲನ ಬಿಡುಗಡೆ

ಉಪನ್ಯಾಸಕ, ಉದಯೋನ್ಮುಖ ಕವಿ ಡಾ. ಸೀತಾರಾಮ ಪಲ್ಲೋಡಿಯವರ "ಕಾಡು-ನುಡಿ-ನಾಡು” ಕವನ ಸಂಕಲನ ಇತ್ತೀಚೆಗೆ ಸುಬ್ರಹ್ಮಣ್ಯದಲ್ಲಿ ನಡೆದ ಕಡಬ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿತು. ಕಡಬ ತಾಲೂಕು ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿನವೀನ್ ಕುಮಾರ್ ಭಂಡಾರಿಯವರು ಕವನ ಸಂಕಲನ ಬಿಡುಗಡೆಗೊಳಿಸಿದರು.

ಸುಳ್ಯ : ಎನ್ ಎಸ್ ಯು ಐ ಅಧ್ಯಕ್ಷರಾಗಿ ಕೀರ್ತನ್ ಗೌಡ ಕೊಡಪಾಲ

ಸುಳ್ಯ ವಿಧಾನ ಸಭಾ ಕ್ಷೇತ್ರದ ನೂತನ NSUI ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಕೀರ್ತನ್ ಗೌಡ ಕೊಡಪಾಲ ಆಯ್ಕೆಯಾಗಿದ್ದಾರೆ. ಇವರು ಮಡಪ್ಪಾಡಿ ಗ್ರಾಮದ ಕೊಡಪಾಲ ದಿನೇಶ್ ಹಾಗೂ ವಸಂತಿ ಯವರ ಪುತ್ರ.

ಉಬರಡ್ಕ : ಗ್ರಾ.ಪಂ.ಕಛೇರಿಯಲ್ಲಿ ಸೋಲಾರ್ ಸಿಸ್ಟಮ್ ಉದ್ಘಾಟನೆ

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಕಚೇರಿಗೆ ಸರಕಾರದ ಆದೇಶದಂತೆ 14ನೇ ಹಣಕಾಸು ಮತ್ತು 15ನೇ ಹಣಕಾಸು ಅನುದಾನದಲ್ಲಿ ಪವರ್ ಒನ್ ಮೈಕ್ರೋ ಸಿಸ್ಟಮ್ ಪ್ರೈ.ಲಿ ಸಂಸ್ಥೆಯ ಮುಖಾಂತರ 3 ಕಿಲೋ ವ್ಯಾಟ್ ಸಾಮರ್ಥ್ಯದ Grid Interactive Hybrid Solar Rooftop Power Plants (ಸೋಲಾರ್ ಸಿಸ್ಟಮ್)ಗಳನ್ನು ಸುಳ್ಯ ತಾಲೂಕು ಪಂಚಾಯತ್ ಗೆ ಸಂಬಂದಪಟ್ಟಂತೆ ಉಬರಡ್ಕ ಮಿತ್ತೂರು...

ಮಾ. 14: ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಚಂಡಿಕಾ ಹೋಮ

ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ 15ನೇ ವರ್ಷದ ಚಂಡಿಕಾ ಹೋಮವು ಮಾ. 14ರಂದು ನಡೆಯಲಿದೆ. ಬೆಳಿಗ್ಗೆ ಗಂಟೆ 6.30ಕ್ಕೆ ದೇವತಾ ಪ್ರಾರ್ಥನೆ, 8.00 ಗಂಟೆಗೆ ಕಲಶ ಪ್ರತಿಷ್ಠೆ, ಮಧ್ಯಾಹ್ನ 12.00 ಗಂಟೆಗೆ ಉಭಯ ದೇವರಿಗೆ ಪೂಜೆ, ಬಳಿಕ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆದು ಭೂರಿ ಸಮಾರಾಧನೆ ನಡೆಯಲಿದೆ. ರಾತ್ರಿ...

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸಿ ಸರ್ಕಾರ ಬಿಡುಗಡೆ ಮಾಡಿದೆ. ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಈ ಹಿಂದೆ ಸರಕಾರ ನೇಮಿಸಿದ್ದಅಭಿವೃದ್ಧಿ ಸಮಿತಿಯ ಕೆಲ ಸದಸ್ಯರನ್ನು ಉಳಿಸಿಕೊಂಡು ಹೊಸದಾಗಿ ನಾಲ್ಕು ಮಂದಿ ಸದಸ್ಯರ ಸೇರ್ಪಡೆಗೊಳಿಸಿ 9 ಮಂದಿಯ ವ್ಯವಸ್ಥಾಪನ ಸಮಿತಿ ರಚಿಸಿ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಮಾ.5...

ನಿನಾದ ತಂಟೆಪ್ಪಾಡಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶದ ಮಾಹಿತಿ

ಕಳಂಜ ಗ್ರಾಮದ ನಿನಾದ ತಂಟೆಪ್ಪಾಡಿಯಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಉದ್ಯೋಗ ಅವಕಾಶದ ಮಾಹಿತಿ ಮತ್ತು ನೀವು ಹೇಗೆ ಪತ್ರಕರ್ತರು ಅಥವಾ ನಿರೂಪಕರಾಗಬಹುದು ಎನ್ನುವ ಉಚಿತ ತರಬೇತಿ ಕಾರ್ಯಕ್ರಮವು ಮಾರ್ಚ್ 14 ರ ಭಾನುವಾರದಂದು ನಡೆಯಲಿದೆ. ತರಬೇತಿಯನ್ನು ವಿಜಯಟೈಮ್ಸ್ ಮುಖ್ಯ ಸಂಪಾದಕರಾದ ಶ್ರೀಮತಿ ವಿಜಯಲಕ್ಷ್ಮಿ ಶಿಬರೂರು ಹಾಗೂ ಡಿಜಿಟಲ್ ಮೀಡಿಯಾ ಎಕ್ಸ್ ಪರ್ಟ್ ಶ್ರೀ ಅಲ್ವಿನ್ ಮೆಂಡೋನ್ಸಾ ಅವರು...
Loading posts...

All posts loaded

No more posts

error: Content is protected !!