- Thursday
- July 9th, 2026
https://youtu.be/xxYWgrNqtsE ಶ್ರೀ ದುರ್ಗಾಪರಮೇಶ್ವರಿ ಕೃಪಾಶ್ರಿತ ಸಂಚಾರಿ ತಿರುಗಾಟದ ಯಕ್ಷಗಾನ ಮೇಳ ಹಾಗೂ ಚೌಕಿಮನೆ ಪಂಜ ಇದರ ಜಂಟಿ ಸಹಯೋಗದೊಂದಿಗೆ ಮನೆ ಮನೆ ಯಕ್ಷಗಾನ ಪ್ರದರ್ಶನ ಗುತ್ತಿಗಾರು ಗ್ರಾಮದ ವಿವಿಧೆಡೆ ಆರಂಭಗೊಂಡಿದೆ. ಈ ತಿರುಗಾಟದ ಯಕ್ಷಗಾನ ತಂಡ ಕಳೆದ ಆರು ವರ್ಷಗಳಿಂದ 'ಸಂಸ್ಕಾರದಿಂದ ಸಂಸ್ಕೃತಿಯ ಉಳಿವಿಗಾಗಿ' ಯಕ್ಷಗಾನ ಪ್ರದರ್ಶನ ನೀಡುತ್ತಿದೆ.
ಆಧುನಿಕ ಮಾಧ್ಯಮಗಳು ಪ್ರಬಲವಾಗುತ್ತಿರುವ ಈ ಸಂದರ್ಭದಲ್ಲಿ ರಂಗಭೂಮಿಯನ್ನು ಉಳಿಸಿಕೊಳ್ಳುವುದು ಒಂದು ಸವಾಲಾಗಿದೆ. ಇಂತಹ ಆತಂಕಕಾರಿ ಸ್ಥಿತಿಯಲ್ಲಿಯೂ ಸುಳ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಬದ್ಧತೆಯಿಂದ ರಂಗಭೂಮಿಯನ್ನೇ ಬದುಕಾಗಿಸಿಕೊಂಡು ದುಡಿಯುತ್ತಿರುವ ಜೀವನರಾಂ ಓರ್ವ ಮಹಾನ್ ಸಾಧಕ' ಎಂದು ಹಿರಿಯ ರಂಗ ಕರ್ಮಿ, ಚಲನ ಚಿತ್ರ ನಟ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು. ಅವರು ಸುಳ್ಯದ...
ತಾಲೂಕು ಪಂಚಾಯತ್ ಅನುದಾನದಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳುಬಾಗಿಲು ನಲ್ಲಿ ಸೋಲಾರ್ ಬೀದಿ ದೀಪ ಅಳವಡಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಉದಯ ಕೊಪ್ಪಡ್ಕ ಮತ್ತಿತರರು ಉಪಸ್ಥಿತರಿದ್ದರು. ✍ಉಲ್ಲಾಸ್ ಕಜ್ಜೋಡಿ
ದ.ಕ.ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಗ್ರಾಮ ಪಂಚಾಯತ್ ಮಡಪ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಇಂದು ಆರೋಗ್ಯ ವಂತ ಹೆಣ್ಣು ಶಿಶು ಪ್ರದರ್ಶನ ಕಾರ್ಯಕ್ರಮ ಮತ್ತು ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಪಕ್ವಾಡ್ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ...
ಹರಿಹರ ಪಲ್ಲತಡ್ಕ ಗ್ರಾ.ಪಂ ನ ಹರಿಹರ ಪಲ್ಲತಡ್ಕ ಪೇಟೆಯಲ್ಲಿ ಮದ್ಯ ಮಾರಾಟ ಕೇಂದ್ರ ಆರಂಭವಾಗುವುದಾಗಿ ಪ್ರಚಾರದಲ್ಲಿದ್ದು ಅದನ್ನು ವಿರೋಧಿಸಿ ಮಾ.16 ರಂದು ಹರಿಹರೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು . ಸಭೆಯಲ್ಲಿ ಗ್ರಾಮ ವನ್ನು ಮದ್ಯ ಮುಕ್ತವಾಗಿರಿಸಲು ಒಕ್ಕೊರಲ ಆಗ್ರಹ ವ್ಯಕ್ತವಾಗಿದ್ದು ಮದ್ಯಮುಕ್ತ ಗ್ರಾಮ ಹೋರಾಟ ಸಮಿತಿ ರಚನೆ ರಚನೆಗೊಂಡಿತು. ಅಲ್ಲದೆ ಸಭೆಯಲ್ಲಿ ಹರಿಹರ ಗ್ರಾ.ಪಂ...
ಕಳಂಜ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ನಡಾವಳಿಯು ಮಾ. 19 ಮತ್ತು ಮಾ. 20 ರಂದು ನಡೆಯಲಿದೆ. ಒತ್ತೆಕೋಲ ನಡಾವಳಿಯ ಅಂಗವಾಗಿ ಮಾ. 19 ರಂದು ಸಂಜೆ ಗಂಟೆ 6.00ಕ್ಕೆ ಸ್ಥಾನದಿಂದ ಭಂಡಾರ ತೆಗೆಯುವುದು, ರಾತ್ರಿ ಗಂಟೆ 7.30ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, ರಾತ್ರಿ ಗಂಟೆ 8.00ರಿಂದ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಗಂಟೆ...
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಕಮಿಲಕ್ಕೆ ಬಿ ಎಸ್ ಎನ್ ಎಲ್ ಮಹಾಪ್ರಬಂಧಕ ಜಿ ಆರ್ ರವಿ ಅವರು ಸೋಮವಾರ ಭೇಟಿ ನೀಡಿದರು. ಕಮಿಲದಲ್ಲಿ ನೂತನವಾಗಿ ಆರಂಭವಾಗಿರುವ ವೇಗದ ಇಂಟರ್ನೆಟ್ ಸೇವೆ ಭಾರತ್ ಏರ್ ಫೈಬರ್ ವೀಕ್ಷಣೆ ಮಾಡಿದರು. ಈಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ ಎಸ್ ಎನ್ ಎಲ್ ವತಿಯಿಂದ ಆರಂಭಗೊಂಡಿರುವ ವೇಗದ ಇಂಟರ್ನೆಟ್ ಸೇವೆ...
ನಿಂತಿಕಲ್ಲು ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ನಿಂತಿಕಲ್ಲಿನಲ್ಲೇ ಪ್ರಪ್ರಥಮ ಬಾರಿಗೆ 'ಲಕ್ಕೀ ಡ್ರಾ' ಎಂಬ ಹೊಸ ಯೋಜನೆಯೊಂದನ್ನು ಆರಂಭಿಸಿದ್ದು, ಈ ಯೋಜನೆಯ ಪ್ರಥಮ ಲಕ್ಕೀ ಡ್ರಾ ವಿಜೇತರಾದ ಸುರೇಶ್ ದೇವರಗದ್ದೆ ಕೊಡಿಕಾಜೆಇವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನವನ್ನು ಸಂಸ್ಥೆಯ ಮಾಲಕರಾದ ಪ್ರಕಾಶ್ ಮಾಣಿಬೈಲು ಹಾಗೂ ಬಿಪಿನ್ ಯೇನೆಕಲ್ಲು ಹಸ್ತಾಂತರಿಸಿದರು....
ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಸುಳ್ಯ, ತಾಲೂಕಿನ ಎಲ್ಲಾ ಮಹಿಳಾ ಮಂಡಲಗಳು, ರೋಟರಿ ಕ್ಲಬ್ ಸುಳ್ಯ ಮತ್ತು ಇನ್ನರ್ ವೀಲ್ ಕ್ಲಬ್ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಮಾ. 21 ರಂದು ಸುಳ್ಯ ಯುವಜನ ಸಂಯುಕ್ತ ಮಂಡಳಿ ಮುಂಭಾಗದ ಜೆಓಸಿ ಗ್ರೌಂಡ್ ನಲ್ಲಿ ನಡೆಯಲಿದೆ. ಪಂದ್ಯಾಟದ ಉದ್ಘಾಟನೆಯನ್ನು ತಾ.ಪಂ.ಉಪಾಧ್ಯಕ್ಷೆ ಶ್ರೀಮತಿ...
ಸಂಪಾಜೆ ಶ್ರೀ ರಾಮಕೃಷ್ಣ ಭಜನಾ ಮಂದಿರಕ್ಕೆ, ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ನೀರಿನ ಟ್ಯಾಂಕ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಾಸುದೇವ ಕಟ್ಟೆಮನೆ, ಕಾರ್ಯದರ್ಶಿ ಶ್ರೀಮತಿ ಶುಭಾ ರವೀಂದ್ರ, ಲಯನ್ಸ್ ಸದಸ್ಯರಾದ ವೆಂಕಪ್ಪ ಬೊಳ್ಳೂರು, ಪಿ.ಬಿ. ಕಿಶೋರ್ , ಶ್ರೀ ವಿ.ಬಿ. ಪ್ರಶಾಂತ್, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ರೈ ಸಂಪಾಜೆ,...
Loading posts...
All posts loaded
No more posts
