ಗುತ್ತಿಗಾರು ಸೊಸೈಟಿಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30 ರ ತನಕ – ಸುವರ್ಣ ಸಹಕಾರ ಮಾರ್ಟ್ ದಿನಸಿ ವ್ಯಾಪಾರ ಮಳಿಗೆಯಲ್ಲಿ ಬೆಳಿಗ್ಗೆ 6.30 ರಿಂದ 10.00 ರವರೆಗೆ ಸೇವೆ ಲಭ್ಯ

ಕೊರೋನ ಮಹಾಮಾರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವುದರಿಂದ ಎ 28 ರಿಂದ ಮೇ.12 ರವರೆಗೆ ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೆಳಿಗ್ಗೆ 8.00 ಗಂಟೆಯಿಂದ ಮಧ್ಯಾಹ್ನ 12.30ವರೆಗೆ ಸಂಘದ ವ್ಯವಹಾರ ಇರುತ್ತದೆ. ( ರಜಾ ದಿನ ಹೊರತುಪಡಿಸಿ )ಸುವರ್ಣ ಸಹಕಾರ ಮಾರ್ಟ್ ದಿನಸಿ ವ್ಯಾಪಾರ ಮಳಿಗೆಯ ವ್ಯವಹಾರ ಸಮಯ ಬೆಳಿಗ್ಗೆ 6.30 ರಿಂದ...

ವೆಂಕಟರಮಣ ಸೊಸೈಟಿಯಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಸೇವೆ ಲಭ್ಯ

ಎ.28 ರಿಂದ ರಾಜ್ಯಾದ್ಯಂತ ಜನತಾ ಲಾಕ್‌ಡೌನ್ ಇರುವುದರಿಂದ ಗ್ರಾಹಕರ ಅನುಕೂಲತೆಗಾಗಿ ಸುಳ್ಯ ವೆಂಕಟರಮಣ ಕ್ರೆಡಿಟ್ ಕೋ.ಆಪರೇಟಿವ್ ಸೊಸೈಟಿ ಹಾಗೂ ಶಾಖೆಗಳಲ್ಲಿ ಪ್ರತಿದಿನ ವ್ಯವಹಾರದ ಸಮಯವನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ಸೊಸೈಟಿ ಪ್ರಕಟಣೆಯಲ್ಲಿ ತಿಳಿಸಿದೆ.
Ad Widget

ಈಜಲು ಹೋದ ಎರ್ಮೆಟ್ಟಿಯ ಇಬ್ಬರ ಸಹಿತ ಮೂವರು ಮಕ್ಕಳು ದುರ್ಮರಣ

ಸಮುದ್ರಕ್ಕೆ ಈಜಲೆಂದು ಹೋದ ಮೂವರು ನೀರು ಪಾಲಾಗಿ ದುರ್ಮರಣಕ್ಕೀಡಾದ ಘಟನೆ ಎ.26 ರಂದು ಸಂಜೆ ನಡೆದಿದೆ. ನೆಲ್ಲೂರು ಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಬೈರಪ್ಪ & ಸಾವಿತ್ರಿ ಎಂಬವರ ಪುತ್ರರಾದ 18 ವರ್ಷ ಪ್ರಾಯದ ಕಾರ್ತಿಕ್ ಮತ್ತು 19 ವರ್ಷ ಪ್ರಾಯದ ಕೀರ್ತನ್ ಹಾಗೂ ಪುತ್ತೂರು ತಾಲೂಕಿನ ನೆಕ್ಕರೆ ಪುಟ್ಟಣ್ಣ ಎಂಬವರ ಸುಮಾರು 17 ವರ್ಷ ಪ್ರಾಯದ...

ಪೈಚಾರಿನಲ್ಲಿ ಮೆಡ್ ಸಿಟಿ ಮೆಡಿಕಲ್ಸ್ ಮತ್ತು ಪೆಟ್ ಲೈಫ್ ಶಾಪ್ ಶುಭಾರಂಭ

ಪೈಚಾರಿನ ಬಿ.ಎಂ. ಕಾಂಪ್ಲೆಕ್ಸ್‌ನಲ್ಲಿ ಶ್ರೀಮತಿ ಪವಿತ್ರಾಕ್ಷಿ ಮತ್ತು ದುರ್ಗಾದಾಸ್ ಕಡ್ಲಾರು ಮಾಲಕತ್ವದ ಅಲೋಪತಿ, ಆಯುರ್ವೆದ , ಸಾಕುಪ್ರಾಣಿ, ಹೈನುಗಾರಿಕೆಗಳ ಔಷಧಿ ಮಳಿಗೆ ಮೆಡ್ ಸಿಟಿ ಮೆಡಿಕಲ್ಸ್ ಮತ್ತು ಪೆಟ್‌ಲೈಪ್ ಶಾಪ್ ಎ.25ರಂದು ಬೆಳಿಗ್ಗೆ ಶುಭಾರಂಭಗೊಂಡಿತು.ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಮೆಡಿಕಲ್‌ ಶಾಪ್ ಉದ್ಘಾಟಿಸಿದರು. ವೇದಮೂರ್ತಿ ಪುರೋಹಿತ ನಾಗರಾಜ್ ಭಟ್, ಸುಳ್ಯ ನ.ಪಂ. ಅಧ್ಯಕ್ಷ ವಿನಯಕುಮಾರ್ ಕಂದಡ್ಕ,...

ಸಚಿವ ಅಂಗಾರರ ನೇತೃತ್ವದಲ್ಲಿ ಕೋವಿಡ್ ನಿರ್ವಹಣಾ ತಂಡ ರಚನೆ

ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟ ಸುಳ್ಯ ಮತ್ತು ಕಡಬ ತಾಲೂಕಿಗೆ ಸಂಬಂಧ ಪಟ್ಟಂತೆ ಕೋವಿಡ್ - 19 ಎರಡನೇ ಅಲೆಯ ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಮತ್ತು ಈ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುವುದಕ್ಕಾಗಿ ಕೋವಿಡ್ - 19 ನಿರ್ವಹಣಾ ತಂಡವನ್ನು ರಚಿಸಲಾಗಿದೆ ಸಾರ್ವಜನಿಕರು ಅಗತ್ಯ ಸಂದರ್ಭದಲ್ಲಿ ನಿರ್ವಹಣಾ ತಂಡದ ಸಹಕಾರ ಪಡೆಯುವಂತೆ...

ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯಕ್ರಮಗಳ ಬಗ್ಗೆ ನಿಗಾವಹಿಸಲು ಫ್ಲೈಯಿಂಗ್ ಸ್ಕ್ವಾಡ್ ರಚನೆ

ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ರಾಜ್ಯಾದಂತ ಸಾರ್ವಜನಿಕ ಸಮಾರಂಭ, ಆಚರಣೆಗಳು, ಮನರಂಜನೆ ಕಾರ್ಯಕ್ರಮಗಳಿಗೆ ಜನರ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ದೃಷ್ಟಿಯಿಂದ ಫ್ಲೈಯಿಂಗ್ ಸ್ಕ್ವಾಡ್ ರಚಿಸಿ ಆದೇಶಿಸಿದೆ. ಸುಳ್ಯ ನಗರ ಪಂಚಾಯತ್ ಹಾಗೂ ಉಬರಡ್ಕಮಿತ್ತೂರು ಭಾಗದ ಫ್ಲೈಯಿಂಗ್ ಸ್ಕ್ವಾಡ್ ಆಗಿ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ,...

ನಾಳೆ ಸಂಜೆಯಿಂದ ಮೇ 10 ರವರೆಗೆ ಕರ್ನಾಟಕ ಲಾಕ್

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ನಾಳೆ ಸಂಜೆಯಿಂದ ಮೇ 10 ರವರೆಗೆ ಕರ್ನಾಟಕ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕೋಟೆಮುಂಡುಗಾರು : ನಿದ್ರೆಗೆ ಜಾರಿದ ಬಿಎಸ್ಎನ್ಎಲ್ ಟವರ್ – ಜನರ ಸಂಕಷ್ಟ ಕೇಳೋರು ಯಾರು

ಕಳೆದ ಹದಿನೈದು ದಿನಗಳಿಂದ ಕೋಟೆಮುಂಡುಗಾರಿನಲ್ಲಿರುವ ಬಿ ಎಸ್ ಎನ್ ಎಲ್ ಟವರ್ ಸ್ತಬ್ದವಾಗಿದೆ.ಕಳಂಜ ಮತ್ತು ಬಾಳಿಲ ಗ್ರಾಮದ ಬಹುಭಾಗದ ಗ್ರಾಹಕರು ಇದನ್ನು ಅವಲಂಬಿಸಿರುತ್ತಾರೆ. ಸಂಬಂಧಪಟ್ಟವರ ಗಮನಕ್ಕೆ ತಂದರೂ ಇನ್ನು ಕೂಡಾ ಸ್ಪಂದನ ಕಾಣುವುದಿಲ್ಲ. ಕಳಂಜದ "ನಮ್ಮೆಲ್ಲರ ಬಳಕೆದಾರರ ವೇದಿಕೆ"ಯವರು ನಿರಂತರ ಬಿಎಸ್ ಎನ್ ಎಲ್ ಅಧಿಕಾರಿಗಳನ್ನು ನೆನಪಿಸುವ ಕೆಲಸ ಮಾಡಿರುತ್ತಾರೆ. ಎಸ್ ಡಿ ಇ ರವರ...

ಎ. 27 ರಂದು ಗಾಂಧಿನಗರ ಪ್ರೌಢಶಾಲೆಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ

ಗಾಂಧಿನಗರ ಪ್ರೌಢಶಾಲೆಯಲ್ಲಿ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮ ಎ. 27 ರಂದು ನಡೆಯಲಿದೆ. ಅದುದರಿಂದ 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆದು ಕೊಳ್ಳಬಹುದು. ಅಲ್ಲಿಗೆ ಬರುವವರು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಮೊಬೈಲ್ ಫೋನ್ ತರಬೇಕು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ10 ರಿಂದ ಸಂಜೆ 4 ಗಂಟೆಯ ತನಕ ಲಸಿಕೆ ವಿತರಣೆ ನಡೆಯಲಿದೆ.

ರಕ್ತದಾನ ಮಾಡಲು ಎನ್ ಎಸ್ ಯು ಐ ಮನವಿ

ಮೇ 1 ರಿಂದ ವ್ಯಾಕ್ಸಿನೇಷನ್ ಪಡೆಯುವುದರಿಂದ ವ್ಯಾಕ್ಸಿನೇಷನ್ ಪಡೆದ 60 ದಿನಗಳವರೆಗೆ ರಕ್ತದಾನ ಮಾಡುವಂತಿಲ್ಲ. ಹಾಗಾಗಿ ರಕ್ತದ ಬೇಡಿಕೆ ಹೆಚ್ಚಾಗಲಿದ್ದು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಒಕ್ಕೂಟದ ಕಾರ್ಯಕರ್ತರು ತಮ್ಮ ನಗರದ ರಕ್ತ ನಿಧಿಗಳಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕಾಗಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಸುಳ್ಯ ವಿಧಾನಸಭಾ ಕ್ಷೇತ್ರ ವಿನಂತಿಸುತ್ತದೆ...
Loading posts...

All posts loaded

No more posts

error: Content is protected !!