ಸುಳ್ಯದಲ್ಲಿ ಇಂದು 54 ಕ್ಕೆ ಏರಿದ ಕೊರೊನಾ ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು ಇಂದು 54 ಕೊರೊನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 29 ಕ್ಕೆ ಇಳಿದಿತ್ತು. ತಾಲೂಕಿನಲ್ಲಿ ಒಟ್ಟು 415 ಕ್ಕೆ ಸಕ್ರೀಯ ಪ್ರಕರಣ ಏರಿಕೆ ಕಂಡಿದೆ.

ಗುತ್ತಿಗಾರು ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆ

ಗುತ್ತಿಗಾರು ಗ್ರಾಮ ಪಂಚಾಯತ್ ಕೋವಿಡ್ ಕಾರ್ಯಪಡೆ ಸಭೆಯು ಮೇ.25 ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೇವತಿ ಆಚಳ್ಳಿ ಇವರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಈ ಸಭೆಯಲ್ಲಿ ನಿರ್ಣಯಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ...
Ad Widget

ಹರಿಹರ ಕೊಲ್ಲಮೊಗ್ರ ಭಾಗದ ಜನರ ತುರ್ತು ಸೇವೆಗೆ ವಾಹನ ವ್ಯವಸ್ಥೆ – ವೆಚ್ಚ ಭರಿಸಲಿದೆ ಕುಕ್ಕೆ ಆಡಳಿತ ಮಂಡಳಿ

ಕೊಲ್ಲಮೊಗ್ರ ಹರಿಹರ ಬಾಳುಗೋಡು ಕಲ್ಮಕಾರು ಗ್ರಾಮಗಳ ಜನರಿಗೆ ಕೋವಿಡ್ ಹಾಗೂ ಅತೀ ಅಗತ್ಯ ಸೇವೆಗಳಿಗಾಗಿ ವಾಹನವೊಂದು ದಿನದ ಇಪ್ಪತ್ಕಾಲ್ಕು ಗಂಟೆಯು ಉಚಿತವಾಗಿ ಕಾರ್ಯನಿರ್ವಹಿಸಲಿದೆ. ಈ ವಾಹನದ ಸಂಪೂರ್ಣ ವೆಚ್ಚವನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಮಂಡಳಿ ಭರಿಸಲಿದೆ. ತುರ್ತು ಸೇವೆಗಳಿಗೆಉದಯ ಶಿವಾಲ 9483904542, 8431200521, ಕೇಶವ ಅಂಬೆಕಲ್ಲು 6361822198, ಪುಷ್ಪರಾಜ್ ಪಡ್ಪು 9449162052 ಇವರನ್ನು ಸಂಪರ್ಕಿಸಬಹುದು.

ಗುತ್ತಿಗಾರು : ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರ ಹರ್ಷಿತ್ ಜಿ.ಬಿ. ರವರಿಂದ ಕಿಟ್ ವಿತರಣೆ

ಗುತ್ತಿಗಾರು ಮೇ| ಆಶಾಭಾರತಿ ಎಸೋಸಿಯೇಟ್ಸ್ ಆಡಳಿತ ಪಾಲುದಾರರಾದ ಹರ್ಷಿತ್ ಜಿ.ಬಿ.ರವರು ಕೋರೋನಾ ಪೀಡಿತ ಸಂತ್ರಸ್ತರ ನೆರವಿಗೆ ನೀಡುತ್ತಿರುವ ಕಿಟ್ ಗಳನ್ನು ಗುತ್ತಿಗಾರು ಗ್ರಾ.ಪಂ ಗೆ ಇಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ‌ ಅಭಿವೃದ್ಧಿ ಅಧಿಕಾರಿ ಶ್ಯಾಂ ಪ್ರಸಾದ್ ಯಂ.ಆರ್ , ಗ್ರಾ.ಪಂ. ಅಧ್ಯಕ್ಷೆ ರೇವತಿ ಆಚಳ್ಳಿ , ಸದಸ್ಯರಾದ ಮಾಯಿಲಪ್ಪ ಕೊಂಬೊಟ್ಟು , ಭರತ್ ಕೆ.ವಿ...

ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಚಿವ ಅಂಗಾರ ಭೇಟಿ

ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಸಚಿವರಾದ ಶ್ರೀ ಅಂಗಾರ ರವರು ಮೇ 25 ರಂದು ಕೊಲ್ಲಮೊಗ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಕೋವಿಡ್ ನ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎರಡು oxigen concentrator ನೀಡಿದರು. ಮತ್ತು ಕೋವಿಡ್ ಕಾರ್ಯಪಡೆಯು ರೋಗಿಗಳನ್ನು ಸಾಗಿಸುವ ತುರ್ತು ವಾಹನದ...

ಸುಳ್ಯದಲ್ಲಿ ಇಂದು 29 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 29 ಕೊರೋನಾ ಪಾಸಿಟಿವ್ ಕಂಡುಬಂದಿದೆ. ನಿನ್ನೆ 55 ಪಾಸಿಟಿವ್ ಬಂದಿತ್ತು. ಒಟ್ಟು 393 ಸಕ್ರೀಯ ಪ್ರಕರಣಗಳಿವೆ.

ಪೆರಾಜೆ : ಲಾರಿ ಗುದ್ದಿ ವಿದ್ಯುತ್ ಕಂಬ ತುಂಡು – ಚಾಲಕ ಪಾರು

ಪೆರಾಜೆ ಸಮೀಪ ಕಲ್ಚರ್ಪೆಯಲ್ಲಿ ಸುಳ್ಯ ಕಡೆಗೆ ಬರುತ್ತಿದ್ದ ಮಿನಿ ಟೆಂಪೋ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಇಂದು ಮುಂಜಾನೆ ನಡೆದಿದೆ. ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಕೋವಿಡ್ ಕೇರ್ ಸೆಂಟರ್ ಸಚಿವ ಎಸ್.ಅಂಗಾರರಿಂದ ಉದ್ಘಾಟನೆ – “ಕೋವಿಡ್ ಕೇರ್ ಸೆಂಟರ್‌ ಗ್ರಾಮೀಣ ಜನರ ಆರೋಗ್ಯ ವೃದ್ಧಿಗೆ ಪೂರಕ”

ಪಂಜದ ಮೊರಾರ್ಜಿ ವಸತಿ ಶಾಲೆಯಲ್ಲಿ ನಿರ್ಮಿತವಾದ ಸುವ್ಯವಸ್ಥಿತವಾದ ಕೋವಿಡ್ ಕೇರ್ ಸೆಂಟರ್‌ನಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಭಾಗ್ಯ ಸಮೃದ್ಧಿಗೆ ಪೂರಕವಾಗಿದೆ.ಇಲ್ಲಿ ಸೋಂಕಿತರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಸರಕಾರದಿಂದ ಮಾಡಲಾಗಿದೆ.ಅಲ್ಲದೆ ಆಮ್ಲಜನಕ ಕನ್ಸಲೇಟರ್ ಅನ್ನು ಒದಗಿಸಿದ್ದೇವೆ. ಕಾಲಕಾಲಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ವ್ಯವಸ್ಥಿತವಾಗಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸರ್ವರೂ ಆರೋಗ್ಯ ರಕ್ಷಣೆಗೆ ಕರ ಜೋಡಿಸಬೇಕು. ನಮ್ಮೊಳಗೆ ಉಂಟಾಗುವ...

ಸುಳ್ಯ : ಮೆಸ್ಕಾಂ ಸಿಬ್ಬಂದಿಗಳಿಗೆ ಲಸಿಕೆ ವಿತರಣೆ

ಕೊರೊನಾ ವಾರಿಯರ್ ಗಳೆಂದು ಮೆಸ್ಕಾಂ ಸಿಬ್ಬಂದಿಗಳನ್ನು ಸರಕಾರ ಪರಿಗಣಿಸಿರುವ ಹಿನ್ನೆಲೆಯಲ್ಲಿ ಇಂದು ಪುರಭವನದಲ್ಲಿ ಇಲಾಖೆಯ ಸಿಬ್ಬಂದಿಗಳಿಗೆ ಲಸಿಕೆ ವಿತರಣೆ ನಡೆಯಿತು.

ಮತ್ತೆ ಏರಿಕೆ ಕಂಡ ಕೊರೊನಾ – ಇಂದು ಸುಳ್ಯದಲ್ಲಿ 55 ಪಾಸಿಟಿವ್

ಸುಳ್ಯ ತಾಲೂಕಿನಲ್ಲಿ ಇಂದು 55 ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ 44 ಪ್ರಕರಣ ಸೇರಿದಂತೆ ಕಳೆದೊಂದು ವಾರದಿಂದ ಇಳಿಕೆ ಕಂಡಿದ್ದ ಕೊರೊನಾ ಪ್ರಕರಣ ಪುನಃ ಏರಿಕೆ ಕಂಡಿದೆ.
Loading posts...

All posts loaded

No more posts

error: Content is protected !!