ಪಂಜ : ಯುವಕ ಮಂಡಲಗಳ ಸಹಯೋಗದಿಂದ ಬೃಹತ್ ಸ್ವಚ್ಚತಾ ಕಾರ್ಯಕ್ರಮ

ಕೇಂದ್ರ ಸರ್ಕಾರದ ಸ್ವಚ್ಚಾ ಭಾರತ ಕಾರ್ಯಕ್ರಮ ಪಂಜ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಿಂದ ಮೊದಲ್ಗೊಂಡು ಅಡ್ಡತೋಡು,ಪಲ್ಲೋಡಿ,ಕರಿಕ್ಕಳ,ಪೊಳಂಜ ರಸ್ತೆ, ಪಂಜ ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಪೊದೆಗಳನ್ನು ಕಡಿದು ಸ್ವಚ್ಚ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಯುವಕ ಮಂಡಲಗಳ ಉತ್ಸಾಹಿ ಯುವಕರ ಅವಿರತ ಶ್ರಮದಿಂದ ಈ...

ನಾಳೆ ಎಸ್ಕೆ ಎಸ್ ಎಸ್ ಎಫ್ ವತಿಯಿಂದ ಸುಳ್ಯದಲ್ಲಿ ಪ್ರತಿಭಟನೆ

ಸುಳ್ಯ: ಮುಸ್ಲಿಂ ಸಮುದಾಯದ ವಿರುದ್ದವಾಗಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ, ಪ್ರಚೋದನಾಕಾರಿ ಹೇಳಿಕೆ ಹಾಗೂ ಪ್ರವಾದಿ (ಸ-ಅ)ನಿಂದನೆಯನ್ನು ವಿರೋಧಿಸಿಎಸ್ಕೆಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆದೇಶ ಮೇರೆಗೆನಾಳೆ ಸೋಮವಾರ ಸಂಜೆ 4 ಗಂಟೆಗೆ ಸುಳ್ಯದ ಹಳೆ ಬಸ್ಸು ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ.ಪ್ರಚೋದನೆಯನ್ನು ಪ್ರಬುದ್ಧತೆಯಿಂದ ಎದುರಿಸೋಣವೆಂಬ ಶೀರ್ಷಿಕೆಯಲ್ಲಿ ಜಿಲ್ಲೆಯ ಹನ್ನೆರಡು ವಲಯದಲ್ಲಿ ಏಕಕಾಲಕ್ಕೆ ಪ್ರತಿಭಟನೆನಡೆಯಲಿದೆಯೆಂದು SKSSF ಸುಳ್ಯ...
Ad Widget

ಇಕ್ಬಾಲ್ ಬಾಳಿಲರಿಗೆ ರಾಷ್ಟ್ರೀಯ ವಿದ್ಯಾವಿಭೂಷಣ ಪ್ರಶಸ್ತಿ.

ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ ಕೊಡಮಾಡುವ ರಾಷ್ಟ್ರ ಮಟ್ಟದ ವಿದ್ಯಾ ವಿಭೂಷಣ ಪ್ರಶಸ್ತಿಗೆ ಈ ವರ್ಷ ರಾಜ್ಯ ಮಟ್ಟದ ತರಬೇತುದಾರ ಕೆ.ಎಂ.ಇಕ್ಬಾಲ್ ಬಾಳಿಲರವರು ಆಯ್ಕೆ ಗೊಂಡಿರುತ್ತಾರೆ.ಆಯ್ಕೆ ಘೋಷಣೆ ಮತ್ತು ಪಶಸ್ತಿ ಪತ್ರವನ್ನು ಅಕ್ಟೋಬರ್ 10ರಂದು ಗೂಗುಲ್ ಮೀಟ್ ಮೂಲಕ ನಡೆಸಲಾಗಿದ್ದು ಕೋವಿಡ್ ಸಂಪೂರ್ಣ ಮುಕ್ತಿಗೊಂಡ ಬಳಿಕ ಅಂತಾರಾಷ್ಟ್ರೀಯ ಸಮ್ಮೇಳದಲ್ಲಿ ಪ್ರಶಸ್ತಿ ಪುರಸ್ಕಾರ ಮಾಡುವುದಾಗಿ ಸಂಘಟಕರು ತಿಳಿಸಿದ್ದಾರೆ.ಶೈಕ್ಷಣಿಕ...

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ- ವಿಶೇಷ ಪೂಜೆ

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ಮಾರ್ಗದರ್ಶನದಂತೆ ಪೂರ್ವ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ನವರಾತ್ರಿ ಉತ್ಸವ ನಡೆಯುತ್ತಿದ್ದುದೇವಾಲಯದ ಅರ್ಚಕರಾದ ಶ್ರೀ ಕೇಶವ ಪೂದೆನ್ನಾಯರವರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಆ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನವರಾತ್ರಿ ಉತ್ಸವವು ಅ.14ರವರೆಗೆ ನಡೆಯಲಿದ್ದು, ಆ ದಿನ ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಲಿದೆ....

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ನಲ್ಲಿ ಪ್ರಾಚಿ ಆ್ಯಂಟಿಕ್ ಕಲೆಕ್ಷನ್ ಬಿಡುಗಡೆ

ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಪುತ್ತೂರು ಮಳಿಗೆಯಲ್ಲಿ "ಪ್ರಾಚಿ ಆ್ಯಂಟಿಕ್ ಕಲೆಕ್ಷನ್" ಪಾರಂಪರಿಕ ವಿನ್ಯಾಸದ ಚಿನ್ನಾಭರಣಗಳ ಸಂಗ್ರಹವನ್ನು ಅ.08 ರಂದು ಬಿಡುಗಡೆ ಮಾಡಲಾಯಿತು. ನೂತನ "ಪ್ರಾಚಿ ಆ್ಯಂಟಿಕ್ ಕಲೆಕ್ಷನ್ " ವಿಭಾಗವನ್ನು ಪುತ್ತೂರಿನ ಖ್ಯಾತ ವೈದ್ಯ ದಂಪತಿ ಡಾ.ಚಂದ್ರಶೇಖರ ರಾವ್ ಮತ್ತು ಡಾ.ಪೂರ್ಣಾ.ಸಿ. ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅತಿಥಿಗಳನ್ನು ವೇದಾ ಲಕ್ಷ್ಮೀಕಾಂತ್ ಹಾಗೂ ಮೇಘ ಸುಧನ್ವ...

ಗುತ್ತಿಗಾರು : ಸುವರ್ಣ ಸಹಕಾರ ಮಾರ್ಟ್ ನಲ್ಲಿ ವಿಶೇಷ ಬಹುಮಾನ ಗೆಲ್ಲುವ ಅವಕಾಶ

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸುವರ್ಣ ಸಹಕಾರ ಮಾರ್ಟ್ ನಲ್ಲಿ ನವರಾತ್ರಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯಿತಿ ಮತ್ತು ಲಕ್ಕಿ ಡ್ರಾದ ಮೂಲಕ ವಿಶೇಷ ಬಹುಮಾನ ಗೆಲ್ಲುವ ಅವಕಾಶವಿದೆ.500 ಮೇಲ್ಪಟ್ಟ ಖರೀದಿಗೆ ಕೂಪನ್ ನೀಡುತ್ತಿದ್ದು, ಡ್ರಾ ವಿಜೇತರಿಗೆ ಪ್ರಥಮ ಬಹುಮಾನ ಮಿಕ್ಸಿ ಗ್ರೈಂಡರ್, ದ್ವಿತೀಯ ಥರ್ಮಲ್ ರೈಸ್ ಕುಕ್ಕರ್ ಪಾಟ್,...

ಪಂಜ : ನವರಾತ್ರಿ ಅಂಗವಾಗಿ ಭಜನಾ ಕಾರ್ಯಕ್ರಮ

ನವರಾತ್ರಿ ಉತ್ಸವದ ಪ್ರಯುಕ್ತ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಎರಡನೇ ದಿನವಾದ ಇಂದು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ (ರಿ) ನಾಗತೀರ್ಥ ಇದರ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ಭಕ್ತರಿಗೆ ದೇವಾಲಯದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಯಿತು.

ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ನಿಂತಿಕಲ್ಲು: ಲಕ್ಕೀ ಡ್ರಾ ಸ್ಕೀಮ್ ಆರಂಭ

ನಿಂತಿಕಲ್ಲಿನ ಸನ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸೋಲಾರ್ ಪಾಯಿಂಟ್ & ಹೋಂ ಅಪ್ಲೈಯನ್ಸಸ್ ಸಂಸ್ಥೆಯು ವಿನೂತನ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಇದೀಗ 3ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು 'ಲಕ್ಕೀ ಡ್ರಾ' ಎಂಬ ಹೊಸ ಸ್ಕೀಮ್ ಆರಂಭಿಸುತ್ತಿದೆ. ಈ ಯೋಜನೆಯು ಅ.29ರಿಂದ ಪ್ರಾರಂಭಗೊಳ್ಳಲಿದ್ದು, ಬಂಪರ್ ಬಹುಮಾನವಾಗಿ ಹೀರೋ ಎಚ್.ಎಫ್...

ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆ – ಶೇಕಡಾ 8.5 ಡಿವಿಡೆಂಡ್ ಘೋಷಣೆ

*ಶೇಕಡಾ 8.5 ಡಿವಿಡೆಂಡ್ ಘೋಷಣೆ* ಕಳಂಜ ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2020 - 21 ನೇ ಸಾಲಿನ ವಾರ್ಷಿಕ ಮಹಾಸಭೆಯು ಅ.08ರಂದು ಸಂಘದ ಪ್ರಧಾನ ಕಛೇರಿ ಕೋಟೆಮುಂಡುಗಾರಿನ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಕೂಸಪ್ಪ ಗೌಡ ಮುಗುಪ್ಪುರವರು ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಸಂಘದ ಸಿಬ್ಬಂದಿ ಉಮೇಶ್  ಕಾರ್ಯಸೂಚಿ ಮಂಡಿಸಿದರು. ಸಂಘದ...

ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಗಳು

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ 18 ಪೇಟೆ ದೇವಸ್ಥಾನಗಳಿಗೊಳಪಟ್ಟ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ 'ಶ್ರೀ ನವರಾತ್ರಿ ಮಹೋತ್ಸವಗಳು' ಅ.07ನೇ ಗುರುವಾರದಂದು ಪ್ರಾರಂಭಗೊಂಡಿದ್ದು ಬೆಳಿಗ್ಗೆ ದೀಪೋಜ್ವಲನ ನೆರವೇರಿತು. ಅ.08ರಂದು ಮಧ್ಯಾಹ್ನ ದೇವಸ್ಥಾನದ ಉಭಯ ದೇವರಿಗೆ ಮಹಾಪೂಜೆ ನಡೆಯಿತು. ಬಳಿಕ ಭೂರಿಭೋಜನ ನಡೆಯಿತು. ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ...
Loading posts...

All posts loaded

No more posts

error: Content is protected !!