ನಿಂತಿಕಲ್ಲು: ಶ್ರೀ ವಿಷ್ಣು ಎಂಟರ್‌ಪ್ರೈಸಸ್‌ ಶುಭಾರಂಭ

ನಿಂತಿಕಲ್ಲು ಸಮೀಪದ ಮುಪ್ಪೇರಿಯ ವನದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಸಂತ ಹಾಗೂ ಶ್ರೀಮತಿ ವಿಜಯವಸಂತ ಮಾಲಕತ್ವದ ಶ್ರೀ ವಿಷ್ಣು ಎಂಟರ್‌ಪ್ರೈಸಸ್‌ ಅ.11ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉಜಿರೆ ಸಮೀಪದ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಸ್ಕರ ಬಲ್ಯಾಯ ನಿಂತಿಕಲ್ಲು, ರಾಮಯ್ಯ ಗೌಡ ಮಾಸ್ತಿಮನೆ,...

ವನ್ಯ ಜೀವಿಗಳನ್ನು ಸಂರಕ್ಷಿಸೋಣ ಆಂದೋಲನ ಕೈಗೊಂಡ ನರೇಶ್ ಬೈಲೆ ಮೂರ್ನಾಡು ರವರಿಗೆ ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಸನ್ಮಾನ

"ವನ್ಯ ಜೀವಿಗಳನ್ನು ಸಂರಕ್ಷಿಸೋಣ" ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೆರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ ಸ್ವಾಗತಿಸಿ, ಕನ್ನಡದ ಶಾಲು ಹಾಕಿ, ಉಡುಗೊರೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ, ಗೌರವಾಧ್ಯಕ್ಷರಾದ ಅಶ್ರಫ್...
Ad Widget

ಸಂಪಾಜೆ :ವಲಯಾರಣ್ಯ ಕಛೇರಿಯಲ್ಲಿ ಆಯುಧ ಪೂಜೆ

ಸಂಪಾಜೆ ವಲಯ ಅರಣ್ಯ ಕಚೇರಿಯಲ್ಲಿ ಆಯುಧ ಪೂಜೆಯ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳು,ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಭಾಗೀರಥಿ ಹೊಸೊಳಿಕೆ

ದೇವಚಳ್ಳ ಗ್ರಾಮದ‌ ಹೊಸೊಳಿಕೆ ದಿ. ಕುಂಞಣ್ಣ ಗೌಡರ ಧರ್ಮಪತ್ನಿ ಭಾಗೀರಥಿ (90.ವ) ರವರು ಅ.13ರಂದು ನಿಧನರಾದರು. ಮೃತರು ಮಕ್ಕಳಾದ ಪಾವನೇಶ್ವರ ಹೊಸೊಳಿಕೆ, ಗಂಗಾಧರ ಹೊಸೊಳಿಕೆ, ಲೋಕೇಶ‌ ಹೊಸೊಳಿಕೆ, ಪುಷ್ಪವೇಣಿ ಭಾಸ್ಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಬೆಳ್ಳಾರೆ : ಸ್ವರ್ಣ ಬೈಕ್ ಪಾಯಿಂಟ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪಾಯಿಂಟ್ ನಲ್ಲಿ ಅ.14ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಗುತ್ತು, ಸಿಬ್ಬಂದಿಗಳಾದ ಭರತ್ ಹಾಗೂ ತೀರ್ಥೇಶ್, ಸತೀಶ್ ಕಳಂಜ, ಜಗದೀಶ್ ಮುಂಡುಗಾರು ಉಪಸ್ಥಿತರಿದ್ದರು.

ಹರಿಹರಪಲ್ಲತ್ತಡ್ಕ : ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಇಂದು ಶುಭಾರಂಭ

ಹರಿಹರಪಲ್ಲತ್ತಡ್ಕದ ವಿರಾಮಿಸು ಕಾಂಪ್ಲೆಕ್ಸ್ ನಲ್ಲಿ ಕಿಶೋರ್ ವಾಡ್ಯಪ್ಪನಮನೆ ಮಾಲಕತ್ವದ ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಇಂದು ಶುಭಾರಂಭಗೊಳ್ಳಲಿದೆ.

ತಳೂರು : ಶ್ರೀ ವಿಷ್ಣು ಅಟೋ ವರ್ಕ್ಸ್ ನಲ್ಲಿ ವಾಹನ ಪೂಜೆ

ತಳೂರಿನಲ್ಲಿರುವ ಚಂದ್ರಶೇಖರ ಆಚಾರಿಕಾನ ಮಾಲಕತ್ವದ ಶ್ರೀ ವಿಷ್ಣು ಅಟೋ ವರ್ಕ್ಸ್ ನಲ್ಲಿ ನವರಾತ್ರಿ ಉತ್ಸವ ಅಂಗವಾಗಿ ವಾಹನ ಪೂಜೆ ಅ.12 ರಂದು ನಡೆಯಿತು.

ಐವರ್ನಾಡು ಕಾಲೇಜಿನ ಶಿಕ್ಷಕಿ ಪ್ರೇಮಾರಿಗೆ ಕವಿಗೋಷ್ಟಿಯಲ್ಲಿ ಸನ್ಮಾನ

ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯ್ ಕುಮಾರ್ ರವರು ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಯಲ್ಲಿ ಅ.10 ರಂದು ನಡೆದ ಅಖಿಲ ಭಾರತ ಕೇಂದ್ರೀಯ ಕನ್ನಡ ಸಾಹಿತ್ಯ ವೇದಿಕೆಯ ತೃತೀಯ ಕವಿ ಕಾವ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.

ಬೆಳ್ಳಾರೆ: ಕ್ಷಯ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ನೆರವಿನ ಹಸ್ತ

ಬೆಳ್ಳಾರೆ ಗ್ರಾಮದ ದರ್ಖಾಸು ಬಳಿಯ ಚೀಮುಳ್ಳು ಎಂಬಲ್ಲಿ ಕ್ಷಯ ರೋಗದಿಂದ ಬಳಲುತ್ತಿದ್ದ ಓರ್ವ ವ್ಯಕ್ತಿಗೆ ಸೂಕ್ತ ಸೂರು ವ್ಯವಸ್ಥೆ ಮತ್ತು ಊಟ ಉಪಾಹಾರದ ಸೂಕ್ತ ವ್ಯವಸ್ಥೆ ಇಲ್ಲದಿರುವ ಬಗ್ಗೆ ಮನಗಂಡ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿಯವರು ಡಾ।। ಎಸ್ ನಾರಾಯಣ್ ಭಟ್ ಬೆಳ್ಳಾರೆ ಪ್ರತಿಷ್ಠಾನದ ನೆರವಿನ ಅಂಬ್ಯುಲೆನ್ಸ್...

ವಿದ್ಯಾಬೋಧಿನೀ ಹಿ.ಪ್ರಾ. ಶಾಲೆಯ ಭಜನಾ ತಂಡದ ವಿದ್ಯಾರ್ಥಿಗಳಿಂದ ಕುಣಿತ ಭಜನೆ ಸೇವೆ

ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲೆಯ ಭಜನಾ ತಂಡದ ವಿದ್ಯಾರ್ಥಿಗಳಿಂದ ನವರಾತ್ರಿ ಪ್ರಯುಕ್ತ ಶ್ರೀರಾಮ ಭಜನಾ ಮಂಡಳಿ ಎಣ್ಮೂರು ಇಲ್ಲಿ ಕುಣಿತ ಭಜನೆ ಸೇವೆ ನಡೆಸಲಾಯಿತು. ಶಾಲಾ ಶಿಕ್ಷಕ ಶಿವಪ್ರಸಾದ್ ಜಿ ಇವರ ನೇತೃತ್ವದಲ್ಲಿ ಕಣ್ವಶ್ರೀ ಕಲಾ ಕೇಂದ್ರ ಕಾಣಿಯೂರು ಇದರ ಸಂಚಾಲಕರಾದ ಸದಾನಂದ ಆಚಾರ್ಯ ಇವರ ನಿರ್ದೇಶನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು...
Loading posts...

All posts loaded

No more posts

error: Content is protected !!