ಅಯ್ಯನಕಟ್ಟೆ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ

ಅಯ್ಯನಕಟ್ಟೆಯ ಶ್ರೀ ಕೃಷ್ಣ ಆಟೋ ವರ್ಕ್ಸ್ ನಲ್ಲಿ ಅ.15ರಂದು ಆಯುಧಪೂಜೆ ಕಾರ್ಯಕ್ರಮ ನೆರವೇರಿತು. ಗಣಹೋಮ, ಆಯುಧಪೂಜೆ ಹಾಗೂ ವಾಹನಪೂಜೆ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಆಟೋ ವರ್ಕ್ಸ್ ಮಾಲಕ ಜಯಪ್ರಕಾಶ್ ಅಯ್ಯನಕಟ್ಟೆ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುಳ್ಯ : ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ಆಯುಧ ಪೂಜೆ

ಸುಳ್ಯದ ಆನಂದ ಇಲೆಕ್ಟ್ರಿಕಲ್ಸ್ ನಲ್ಲಿ ನವರಾತ್ರಿ ಕಾರ್ಯಕ್ರಮದ ಅಂಗವಾಗಿ ಆಯುಧ ಪೂಜೆ,ವಾಹನ ಪೂಜೆ , ಸಿಬ್ಬಂದಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾಲಕರಾದ ಲ| ಆನಂದ ಪೂಜಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಬೆಳ್ಳಾರೆ: ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ

ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.15ರಂದು ನಡೆಯಿತು. ಪುರುಷೋತ್ತಮ ದೇರ್ಕಜೆ ಪೂಜಾ ವಿಧಿವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಣಮ್ಯ ಕಾರ್ ಕೇರ್ ಸಂಸ್ಥೆಯ ಮಾಲಕರಾದ ಶಾಂತಮೂರ್ತಿ ಕಿಲಂಗೋಡಿ ಹಾಗೂ ರಮೇಶ್ ಮಠತ್ತಡ್ಕ, ಸಿಬ್ಬಂದಿಗಳಾದ ಮಧುಸೂದನ್, ಅಲೆಕ್ಸ್ ಡಿ'ಸೋಜ, ಪ್ರವೀಣ್, ರಮೇಶ್ ಹಾಗೂ ಚಂದ್ರಶೇಖರ ತಂಟೆಪ್ಪಾಡಿ ಉಪಸ್ಥಿತರಿದ್ದರು. ಕಳಂಜ ಗ್ರಾ.ಪಂ....

ಪೇರಾಲು : ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಶುಭಾರಂಭ

ಯುವ ಉದ್ಯಮಿ ಅಜಿತ್ ಬನ್ನೂರು ಅವರು ಪೇರಾಲುವಿನಲ್ಲಿ ಸ್ಥಾಪಿಸಿದ ಹಾಳೆ ತಟ್ಟೆ ತಯಾರಿಕಾ ಘಟಕ ಬಯೋ ಟ್ರೆಂಡ್ಸ್ ಫುಡ್ ವೇರ್ಸ್ ಇದರ ಉದ್ಘಾಟನಾ ಸಮಾರಂಭ ಸೆ 14ರಂದು ನಡೆಯಿತು.ಕಾರ್ಯಕ್ರಮವನ್ನು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್ ಅಂಗಾರ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಜನಸೇವಾ ವಿಶ್ವಸ್ಥ ಮಂಡಳಿ,ಜನಸೇವಾ ವಿದ್ಯಾಕೇಂದ್ರದ ಪ್ರಧಾನ ಕಾರ್ಯದರ್ಶಿ ಅ.ಸ....

ಗುತ್ತಿಗಾರು : ಶಿವದುರ್ಗಾ ಇಲೆಕ್ಟ್ರಿಕಲ್ಸ್ ಶುಭಾರಂಭ

ಗುತ್ತಿಗಾರಿನ ಮುತ್ತಪ್ಪ ನಗರದ ಶ್ರೀಹರಿ ಕಾಂಪ್ಲೆಕ್ಸ್ ನಲ್ಲಿ ವಿನೋದ್ ಕುಮಾರ್ ಕೆ ಮಾಲಕತ್ವದ ಶಿವದುರ್ಗಾ ಎಲೆಕ್ಟ್ರಿಕಲ್ಸ್ ಇಂದು ಶುಭಾರಂಭಗೊಂಡಿತು. ಇಲ್ಲಿ ಎಲೆಕ್ಟ್ರಿಕಲ್ಸ್ ವಸ್ತುಗಳ ಸೇಲ್ಸ್ ಮತ್ತು ಸರ್ವಿಸ್, ಕಟ್ಟಡದ ವೈರಿಂಗ್, ಮೋಟಾರ್ ವೈಂಡಿಂಗ್, ಹಾಗೂ ಎಲ್ಲಾ ತರಹದ ವಿದ್ಯುತ್ ಉಪಕರಣಗಳ ರಿಪೇರಿ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

ವಳಲಂಬೆ : ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

ವಳಲಂಬೆಯಲ್ಲಿ ಕಳೆದ 5 ವರ್ಷಗಳಿಂದ ಸೇವೆ ನೀಡುತ್ತಿರುವ ಶಂಖಶ್ರೀ ಅಟೋ ವರ್ಕ್ಸ್ ಸ್ಥಳಾಂತರ ಗೊಂಡ ವಳಲಂಬೆ ದೇವಸ್ಥಾನದ ಸಮೀಪ ಶುಭಾರಂಭಗೊಂಡಿತು. ಗಣಪತಿ ಹವನ, ನವರಾತ್ರಿ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ನೆರವೇರಿತು. ಮಾಲಕರಾದ ರಿತೇಶ್ ಬಿ. ಪೈಕ ಸ್ವಾಗತಿಸಿ, ವಂದಿಸಿದರು. ವೆಂಕಟ್ ವಳಲಂಬೆ, ದುರ್ಗೇಶ್ ಮಣಿಯಾನ, ದೇವಣ್ಣ ಗೌಡ ವಳಲಂಬೆ, ಕುಮಾರ ಅಡ್ಡನಪಾರೆ, ಚಿದಾನಂದ...

ನಿಂತಿಕಲ್ಲು: ಜನ್ಯ ಎಂಟರ್‌ಪ್ರೈಸಸ್‌ನಲ್ಲಿ ಆಯುಧಪೂಜೆ ಕಾರ್ಯಕ್ರಮ

ನಿಂತಿಕಲ್ಲಿನ ಎಣ್ಮೂರು ಬ್ರದರ್ಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಜನ್ಯ ಎಂಟರ್‌ಪ್ರೈಸಸ್‌ನಲ್ಲಿ ಅ.15ರಂದು ಆಯುಧಪೂಜೆ ನಡೆಯಿತು. ಪೂರ್ವಾಹ್ನ ಗಣಹೋಮ ನೆರವೇರಿತು.ಈ ಸಂದರ್ಭದಲ್ಲಿ ಜನ್ಯ ಎಂಟರ್‌ಪ್ರೈಸಸ್‌ ಮಾಲಕ ಕಿರಣ್ ಭೀಮಗುಳಿ, ಪುನೀತ್ ಪುತ್ತೂರು, ನಮ್ಮಿರಾಜ್, ಪ್ರವೀಣ್ ಕಾರ್ಜ, ವಿಜೇತ್, ನಿತೇಶ್ ಕಳಂಜ, ಚಿತ್ತರಂಜನ್ ಪಲಗೇಣಿ, ಗುರುಪ್ರಸಾದ್ ಪುತ್ತೂರು, ಚೇತನ್, ಸಚಿನ್ ಗೋಳ್ಯಾಡಿ, ಎಣ್ಮೂರು ಶ್ರೀರಾಮ್ ಸ್ಟೋರ್ ಮಾಲಕರಾದ ಜಯರಾಮ್,...

ಅಯ್ಯನಕಟ್ಟೆ ಶ್ರೀದೇವಿ ಇಂಡಸ್ಟ್ರಿಯಲ್ ವರ್ಕ್ಸ್ ನಲ್ಲಿ ಆಯುಧಪೂಜೆ

ಅಯ್ಯನಕಟ್ಟೆಯ ಶ್ರೀದೇವಿ ಇಂಡಸ್ಟ್ರಿಯಲ್ ವರ್ಕ್ಸ್ ನಲ್ಲಿ ಆಯುಧಪೂಜೆ ಕಾರ್ಯಕ್ರಮ ಅ.15ರಂದು ನಡೆಯಿತು. ಪೂರ್ವಾಹ್ನ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಮಾಲಕರಾದ ಜಯಪ್ರಸಾದ್ ಕೋಟೆಮುಂಡುಗಾರು, ಶ್ರೀಮತಿ ವೀಣಾ ಜಯಪ್ರಸಾದ್ ಕೋಟೆಮುಂಡುಗಾರು, ಮಾಲಕರ ಮಕ್ಕಳಾದ ಕು.ಜಾಹ್ನವಿ, ಮಾ.ಜಿತೇಶ್, ಮಾಲಕರ ತಾಯಿ ಶ್ರೀಮತಿ ಬಾಲಕ್ಕಿ, ಅಶ್ವಿನ್ ಎಂ.ಆರ್, ಹರೀಶ್ ಮುಂಡುಗಾರು ಎಂ.ಆರ್.ನಾರಾಯಣ, ಶ್ರೀಮತಿ ಸುಮಲತಾ ನಾರಾಯಣ, ಬೇಬಿ ಜ್ಞಾನ, ಶ್ರೀಕಾಂತ್...

ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧ ಪೂಜೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧಪೂಜಾ ಕಾರ್ಯಕ್ರಮವು ಅಕ್ಟೋಬರ್ 14ರಂದು ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ರತ್ನಾವತಿ ಡಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕೇತರ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೆಸ್ಕಾಂನಲ್ಲಿ ಆಯುಧ ಪೂಜೆ

ಸುಳ್ಯ ಮೆಸ್ಕಾಂನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಜೂನಿಯರ್ ಇಂಜಿನಿಯರ್ ಗಳಾದ ಬೋರಯ್ಯ, ಸುರೇಶ್ ಭಟ್, ಜಯಪ್ರಕಾಶ್ ಕೆ., ಹಾಗೂ ಗುತ್ತಿಗೆದಾರರು, ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Loading posts...

All posts loaded

No more posts

error: Content is protected !!