ಮನೆಯಿಲ್ಲದೇ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾದ ಸುಳ್ಯದ ಅಮರ ಸಂಘಟನಾ ಸಮಿತಿ

ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡು ಮನೆಯೂ ಇಲ್ಲದೇ ಚಿಕ್ಕ ಮಕ್ಕಳ ಜೊತೆ ಜೀವನ ನಡೆಸುತ್ತಿರುವ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದ್ದಾರೆ. ಒಂದು ಹೆಜ್ಜೆ ಉತ್ತಮ ಸಮಾಜಕ್ಕಾಗಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅಮರ ಸಂಘಟನಾ ಸಮಿತಿ ಸುಳ್ಯ ತಾಲೂಕು ಇದರ ನೇತೃತ್ವದಲ್ಲಿ ಕಡಬ ತಾಲೂಕು ಪುಣ್ಚಪ್ಪಾಡಿ ಗ್ರಾಮ ಪಂಚಾಯತ್...

ಇಂದಿನಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಸೇವೆಗಳು ಪುನರಾರಂಭ

ದ.ಕ.ಜಿಲ್ಲಾಧಿಕಾರಿಗಳ ಆದೇಶದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲಾ ಪೂಜೆ,ಹಾಗೂ ಸೇವೆಗಳಿಗೆ ಅನುಮತಿ ನೀಡಿದೆ. ಭಕ್ತಾದಿಗಳು ಕೋವಿಡ್ ನಿಯಮ ಪಾಲನೆಯೊಂದಿಗೆ ದೇವರ ಸೇವೆಗಳಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Ad Widget

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ನಗರ ಅಭ್ಯಾಸ ವರ್ಗ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಕ್ಕೆ ಸುಬ್ರಮಣ್ಯ ಘಟಕದ ನಗರ ಅಭ್ಯಾಸವರ್ಗವು ಜ.30 ಆದಿತ್ಯವಾರದಂದು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಬಸವೇಶ್ ಕೋರಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ, ಸಂದೇಶ್ ರೈ ಮಜಕ್ಕಾರ್ ರೋಹಿತ್ ಯಕ್ಷಗಾನ ಕಲಾವಿದರು ಹಾಗೂ ಉಪಾಧ್ಯಕ್ಷರು ಐತ್ತೂರು ಗ್ರಾಮ ಪಂಚಾಯತ್ ಹಾಗೂ ಎಸ್ಎಸ್ ಪಿಯು ಕಾಲೇಜಿನ ಪ್ರಾಚಾರ್ಯರಾದ ಹಾಗೂ...

ಫೆ.01(ನಾಳೆ): ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01(ನಾಳೆ) ರಂದು ನಡೆಯಲಿದೆ. ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಬೆಳಗ್ಗೆ ಗಂಟೆ 10.00ಕ್ಕೆ ಸರಿಯಾಗಿ ನಡೆಯಲಿದ್ದು ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಳಂಜ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀಶ ರೈ ಗುರಿಕ್ಕಾನ ವಿನಂತಿಸಿದ್ದಾರೆ.

ಮುಳ್ಳುಬಾಗಿಲು : ದೈವಗಳ ನೇಮೋತ್ಸವ

ಮುಳ್ಳುಬಾಗಿಲು ಶಿರಾಡಿ, ಪುರುಷ, ಗುಳಿಗ ದೈವಸ್ಥಾನದಲ್ಲಿ ಕಳೆದ ವರ್ಷ ಮೇ ತಿಂಗಳಿನಲ್ಲಿ ನಡೆಯಬೇಕಾಗಿದ್ದ ದೈವಗಳ ನೇಮೋತ್ಸವವು ಕೊರೋನಾ ಕಾರಣದಿಂದ ನಡೆಸಲಾಗಲಿಲ್ಲ. ಆದ್ದರಿಂದ ಈ ವರ್ಷದ ಜ.29 ರಂದು ಭಂಡಾರ ತೆಗೆದು ಜ.30 ರಂದು ದೈವಗಳ ನೇಮೋತ್ಸವ ನಡೆಸಲಾಯಿತು. ವರದಿ :- ಉಲ್ಲಾಸ್ ಕಜ್ಜೋಡಿ

ಎಸ್ ಕೆ ಎಸ್ ಎಸ್ ಎಫ್ ನೂತನ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಅಬ್ದುಲ್ಲಾ ಫೈಝಿ ರವರಿಗೆ ಹುಟ್ಟೂರು ಪೈಂಬಚಾಲ್ ನಲ್ಲಿ ಸನ್ಮಾನ

SKSSF ಪೈಂಬಚ್ಚಾಲ್ ಶಾಖೆ ಇದರ ವತಿಯಿಂದ ಮಜ್ಲಿಸುನ್ನೂರ್ ಹಾಗೂ ನೂತನ ವಲಯ ಅಧ್ಯಕ್ಷರಾದ ಅಬ್ದುಲ್ಲ ಫೈಝಿ ರವರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ 30-01-2022 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಖಿಲ್ರ್ ಜಮಾ ಮಸೀದಿ ಅಧ್ಯಕ್ಷರಾದ ಇಸುಬು, ಶಾಖೆಯ ಅಧ್ಯಕ್ಷರಾದ ಮೂಸ ಮೌಲವಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಂಘಟನಾ ಕಾರ್ಯದರ್ಶಿ ಅಬ್ದುಲ್ ವಹಾಬ್, ವಿಖಾಯ ಕಾರ್ಯದರ್ಶಿ ಮಹಮ್ಮದ್...

ಸಮಾಜ ಸೇವಕ ರವಿ ಕಕ್ಕೆಪದವು ಅವರಿಗೆ ಗೌರವ ಡಾಕ್ಟರೇಟ್‌

ಸುಬ್ರಹ್ಮಣ್ಯದ ಉದ್ಯಮಿ, ಸಮಾಜಸೇವಕ, ಜೇಸಿಐ ರಾಷ್ಟ್ರೀಯ ಪ್ರಶಸ್ತಿ ವಿಜೇತ ರವಿ ಕಕ್ಕೆಪದವು ಅವರ ಸೇವೆಯನ್ನು ಗುರುತಿಸಿ ಚೆನ್ನೈನ “ಏಶಿಯನ್ ಕಲ್ಟರ್ ರಿಸರ್ಚ್ ಯುನಿವರ್ಸಿಟಿ ಗೌರವ ಡಾಕ್ಟರೇಟ್ ನೀಡಲಿದೆ. ತಮಿಳುನಾಡಿನ ಹೊಸೋರು ನಲ್ಲಿ ಡಾಕ್ಟರೇಟ್ ಪ್ರದಾನ ಸಮಾರಂಭ ಫೆ. 3 ರಂದು ನಡೆಯಲಿದೆ

ಬಶೀರ್ ಆರ್.ಬಿ. ಅವರಿಗೆ ಡಾಕ್ಟರೇಟ್ ಗೌರವ : ಫೆ.3 ರಂದು ತಮಿಳುನಾಡಿನಲ್ಲಿ ಪ್ರದಾನ

ಪೈಚಾರ್‌ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಗುರುತಿಸಲ್ಪಟ್ಟ, ಬಶೀರ್ ಆರ್.ಬಿ. ಪೈಚಾರ್ ಅವರಿಗೆ ಚೆನ್ನೈ ಏಷಿಯನ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿ ಯಿಂದ ಗೌರವ ಡಾಕ್ಟರೇಟ್ ಗೆ ಆಯ್ಕೆಯಾಗಿದ್ದಾರೆ. ಫೆ.3 ರಂದು ತಮಿಳುನಾಡಿನ ಹೊಸೋರುನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಜ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಿದ್ದಾರೆ. ಇವರು ಮುಳುಗು ತಜ್ಞರಾಗಿ ಕೂಡ...

ಏನೆಕಲ್ಲು : ಶ್ರೀ ಕ್ಷೇ.ಧ. ಗ್ರಾ.ಯೋಜನೆಯ ಡಿಜಿಟಲ್ ಸೇವಾಕೇಂದ್ರ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಸುಳ್ಯ ತಾಲೂಕು ಇದರ ವತಿಯಿಂದ ಸುಬ್ರಹ್ಮಣ್ಯ ವಲಯದ ಏನೆಕಲ್ಲು ಹಣ ಸಂಗ್ರಹಣಾ ಕೇಂದ್ರದಲ್ಲಿ ಡಿಜಿಟಲ್ ಸೇವಾ ಕೇಂದ್ರವನ್ನು ಏನೆಕಲ್ಲು ಸಹಕಾರಿ ಬ್ಯಾಂಕ್ ನ ಅದ್ಯಕ್ಷ ಭವಾನಿಶಂಕರ ಪೂಂಬಾಡಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.ಈ ಕಾರ್ಯಕ್ರಮಕ್ಕೆ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸ್ಥಾಪಕಾಧ್ಯಕ್ಷರು ಹಾಗೂ ನಿಕಟಪೂರ್ವ ಅದ್ಯಕ್ಷರಾದ ಶಿವಪ್ರಸಾದ್...

ಐವರ್ನಾಡು : ದಿ|ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ

ಐವರ್ನಾಡಿನ ರಾಜಕೀಯ ಮುಂದಾಳು,ಕೊಡುಗೈದಾನಿಯಾಗಿ,ಐವರ್ನಾಡಿನ ಅಭಿವೃದ್ಧಿಗೆ ಕಾರಣರಾಗಿದ್ದ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿ ರಚನೆಗೆ ಭೂಮಿ ಪೂಜೆಯು ಜ.31 ರಂದು ನಡೆಯಿತು.ಬೆಳಿಗ್ಗೆ ಪಾಲೆಪ್ಪಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಪುತ್ಥಳಿಯ ರಚನಾ ಸ್ಥಳದಲ್ಲಿ ಭೂಮಿ ಪೂಜೆ ನಡೆಯಿತು.ಪುತ್ಥಳಿ ರಚನಾ ಸಮಿತಿಯ ಗೌರವಾಧ್ಯಕ್ಷೆ ಶ್ರೀಮತಿ ಜ್ಯೋತ್ಸ್ನಾ ಪಾಲೆಪ್ಪಾಡಿ ಭೂಮಿ ಪೂಜೆ ನೆರವೇರಿಸಿದರು. ಪುರೋಹಿತ ಗಿರೀಶ್ ಅಸ್ರಣ್ಣ ಧಾರ್ಮಿಕ...
Loading posts...

All posts loaded

No more posts

error: Content is protected !!