ಫೆ.11- ಫೆ.14: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮ
ಮಾ.01ರಂದು ಮಹಾಶಿವರಾತ್ರಿ ಉತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.11 ಶುಕ್ರವಾರದಂದು ಆರಂಭಗೊಳ್ಳಲಿದ್ದು, ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11 ಶುಕ್ರವಾರದಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು...

ಡಾ| ಕೆ.ಟಿ ವಿಶ್ವನಾಥರಿಗೆ ವೆಂಕಟರಮಣ ಕ್ರೆಡಿಟ್.ಕೋ.ಆ ಸೊಸೈಟಿ ಕೊಕ್ಕಡ ಶಾಖೆಯಲ್ಲಿ ಸನ್ಮಾನ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥರವರು ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಿನ್ನೆಲೆಯಲ್ಲಿ ಏಷಿಯಾ ವೇದಿಕ್ ಕಲ್ಚರಲ್ ಯುನಿವರ್ಸಿಟಿ ವತಿಯಿಂದ ಕೊಡಲ್ಪಟ್ಟ ಗೌರವ ಡಾಕ್ಟರೇಟ್ ಪದವಿ ಪಡೆಸಿದ್ದು, ಈ ಹಿನ್ನೆಲೆಯಲ್ಲಿ ಸೊಸೈಟಿಯ ಕೊಕ್ಕಡ ಶಾಖೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ನಾರಾಯಣ ಗೌಡ ಪಿ.ಕೆ, ಲಕ್ಷ್ಮೀ ಕಾಂಪ್ಲೆಕ್ಸ್ ಕೊಕ್ಕಡ...
Ad Widget

ಐವರ್ನಾಡು: ಶ್ರೀ ಪಂಚಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಗೊನೆ ಮೂಹೂರ್ತ

ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವವು ಫೆ.8 ರಿಂದ ಫೆ.10 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ.2 ರಂದು ಬೆಳಗ್ಗೆ ಗಂಟೆ 10.00ಕ್ಕೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪ್ಪಾಡಿ, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ದೇವಸ್ಥಾನದ...

ಇವತ್ತು ಮಾಪಳಡ್ಕದಲ್ಲಿ ದಿಕ್ರ್ ನೇರ್ಚೆ ಹಾಗೂ ನೂತನವಾಗಿ ವಿನ್ಯಾಸಗೊಂಡ ದರ್ಸ್ ಕಟ್ಟಡ ಉದ್ಘಾಟನೆ

ಜಾತಿ ಮತ ಬೇದವಿಲ್ಲದೆ ಸರ್ವರಿಂದಲೂ ರೋಗ ಶಮನಕ್ಕಾಗಿ ನೇರ್ಚೆ ಸಮರ್ಪಿಸುವ ಅಭಯ ಕೇಂದ್ರ ಮಾಪಳಡ್ಕ ಮಖಾಂ ನಲ್ಲಿ ವರ್ಷಂ ಪ್ರತಿ ನಡೆಯುವ ಬೃಹತ್ ದಿಕ್ರ್ ನೇರ್ಚೆ ಇವತ್ತು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಸಾವಿರಾರು ಕುಟುಂಬಗಳು ವರ್ಷದಲ್ಲೊಂದು ಬಾರಿ ಕೋಳಿ ಪದಾರ್ಥ ಮತ್ತು ರೊಟ್ಟಿ ನೇರ್ಚೆಯಾಗಿ ತಂದು ಝಿಕ್ರ್ ಮಜ್ಲಿಸಿನಲ್ಲಿ ಪಾಲ್ಗೊಂಡು ಅಸ್ತಮ ಇನ್ನಿತರ ಶ್ವಾಸಕೋಶದ...

ಕಳಂಜ: ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಡಿಜಿಟಲ್ ಸೇವಾ ಕೇಂದ್ರದ ವಿಎಲ್ಎ ಆಗಿ ಭವಿತಾ ಬೇರಿಕೆ ನೇಮಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರವು ಕಳಂಜದಲ್ಲಿ ಉದ್ಘಾಟನೆಯಾಗಿದ್ದು, ಡಿಜಿಟಲ್ ಸೇವಾ ಕೇಂದ್ರದ ವಿಎಲ್ಎ ಆಗಿ ಕು|ಭವಿತಾ ಬೇರಿಕೆ ನೇಮಕಗೊಂಡಿದ್ದಾರೆ. ಇವರು ಕಳಂಜ ಗ್ರಾಮದ ಬೇರಿಕೆ ಲಕ್ಷ್ಮಣ ಗೌಡ ಹಾಗೂ ಶ್ರೀಮತಿ ದಮಯಂತಿ ಇವರ ಪುತ್ರಿ.

ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು ಕೊಯಿಲು ಕಾರ್ಯಕ್ರಮ

ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ ರಚನೆಗೆ ಕೇಂದ್ರ ಸರಕಾರ ಈಗಾಗಲೇ ಕರೆಕೊಟ್ಟಂತೆ ರಚನೆಗೊಂಡ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ (ರಿ) ಪುತ್ತೂರು ಇದರ ವತಿಯಿಂದ ನಡೆಯುತ್ತಿರುವ ವಿನೂತನ ಒಪ್ಪಂದ ಆಧಾರಿತ ಜೇನು ಕೃಷಿ ಕಾರ್ಯಕ್ರಮದಲ್ಲಿ ಈಗಾಗಲೇ ಜೇನು ಕೃಷಿಯಲ್ಲಿ ತೊಡಗಿಕೊಂಡ ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು...

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.19ರಂದು ಜರುಗಲಿದ್ದು, ಇದರ ಪೂರ್ವಭಾವಿಯಾಗಿ ಕೊಳ್ಳಿ ಮುಹೂರ್ತ ಕಾರ್ಯಕ್ರಮವು ಫೆ.01ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಗವದ್ಭಕ್ತರು ಉಪಸ್ಥಿತರಿದ್ದರು.

ಇಂದು ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ಶ್ರೀ ಹನುಮಗಿರಿ ಮೇಳದಿಂದ ಯಕ್ಷಗಾನ ಬಯಲಾಟ “ಶುಕ್ರನಂದನೆ”

ಯುವಕ ಮಂಡಲ(ರಿ.) ಕಳಂಜ ಇದರ ಆಶ್ರಯದಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಶ್ರೀ ಹನುಮಗಿರಿ ಮೇಳದಿಂದ "ಶುಕ್ರನಂದನೆ" ಎಂಬ ಪುರಾಣ ಕಥಾ ಭಾಗದ ಯಕ್ಷಗಾನ ಬಯಲಾಟ ಇಂದು ಸಂಜೆ ಗಂಟೆ 6.00ಕ್ಕೆ ಕೋಟೆಮುಂಡುಗಾರು ಶಾಲಾ ವಠಾರದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಕ್ಷಾಭಿಮಾನಿಗಳು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.

ನೆಲ್ಲೂರುಕೆಮ್ರಾಜೆ : ವಲಿಕಜೆ ಕಾಲನಿ ಬಳಿ ತೆರೆದ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ

ನೆಲ್ಲೂರುಕೆಮ್ರಾಜೆ ಗ್ರಾಮದ ಎಲಿಮಲೆ ವಲಿಕಜೆ ಕಾಲನಿ ಬಳಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಮೂರು ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ತೆರೆದ ಬಾವಿ ನಿರ್ಮಾಣಕ್ಕೆ ಗುದ್ದಲಿಪೂಜೆ ಜ.30 ರಂದು ನಡೆಯಿತು. ಸಚಿವ ಎಸ್ ಅಂಗಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಹೆಚ್ಚುವರಿ ಅನುದಾನ ಒದಗಿಸಿ ಪಂಪ್ ಅಳವಡಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ, ಬಿಜೆಪಿ...

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗುರು – ಶಿಷ್ಯೆಗೆ ಪ್ರಶಸ್ತಿ

6ನೇ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯು ಅಂಡಮಾನ್ ನಿಕೋಬಾರ್ ದ್ವೀಪದ ಆರ್. ಜಿ. ಟಿ ಪಬ್ಲಿಕ್ ವಿದ್ಯಾಲಯ ಶಾಲೆ ಪೋರ್ಟ್ ಬ್ಲೇರ್ ನಲ್ಲಿ ಆನ್ಲೈನ್ ಮೂಲಕ ನಡೆದ ಸ್ಪರ್ಧೆಯಲ್ಲಿ 21ರಿಂದ 30ರ ವಿಭಾಗದಲ್ಲಿ ಶರತ್ ಮರ್ಗಿಲಡ್ಕ ದ್ವಿತೀಯ ಸ್ಥಾನ,08 ರಿಂದ 10ರ ವಿಭಾಗದಲ್ಲಿ ಆರಾಧ್ಯ ಎ ರೈ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಇವರು ಶರತ್ ಮರ್ಗಿಲಡ್ಕ ರವರ...
Loading posts...

All posts loaded

No more posts

error: Content is protected !!