ಕಾಂಚೋಡು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ಅಣ್ಣಪ್ಪಾದಿ ದೈವಗಳ ನೇಮೋತ್ಸವವು ಫೆ.11ರಿಂದ ಫೆ.14ರ ತನಕ ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಇಂದು (ಫೆ.04) ದೇವಾಲಯದಲ್ಲಿ ಪೂರ್ವಾಹ್ನ ದೇವತಾ ಪ್ರಾರ್ಥನೆ ನಡೆಸಿ ನಂತರ ಗೊನೆ ಮುಹೂರ್ತ ಕಾರ್ಯಕ್ರಮ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮದರ್ಶಿಗಳಾದ ಪರಮೇಶ್ವರಯ್ಯ ಕಾಂಚೋಡು, ಪರಶುರಾಮ ಕಾಯಾರ ದೊಡ್ಡಮನೆ, ಶ್ರೀ ಕ್ಷೇತ್ರದ ಅರ್ಚಕರಾದ...

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿ

ಒಂದೇ ಬಾಳೆಗೊನೆಯಲ್ಲಿ ಎರಡು ಪೂಂಬೆ ಸೃಷ್ಟಿಯಾದ ಅಪರೂಪದ ಪ್ರಕೃತಿ ವಿಸ್ಮಯ ದೇವಚಳ್ಳ ಗ್ರಾಮದ ದೇವದಲ್ಲಿ ಕಾಣಸಿಕ್ಕಿದೆ. ದೇವ ಮನೆ ರಾಮಣ್ಣ ಗೌಡರ ತೋಟದಲ್ಲಿರುವ ಗಾಳಿ ಬಾಳೆಗೊನೆಯಲ್ಲಿ ಎರಡು ಪೂಂಬೆ ಬಿಟ್ಟಿದೆ. ಪ್ರಕೃತಿಗೆ ಯಾರು ಸಾಟಿ ಇಲ್ಲ ಎಂಬುದಕ್ಕೆ ಈ ವಿಸ್ಮಯವೇ ಸಾಕಲ್ಲವೇ?
Ad Widget

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನ್ನಿಧ್ಯದಲ್ಲಿ ವಾರ್ಷಿಕ ಕೋಲೋತ್ಸವ, ಸಾಧಕರಿಗೆ ಸನ್ಮಾನ

ನೆಟ್ಟಾರು ಕಿನ್ನಿಮಜಲು ಶ್ರೀ ಸ್ವಾಮಿ ಕೊರಗಜ್ಜ ಸಾನಿಧ್ಯದಲ್ಲಿ ಘಂಟೆ ತೆಂಬೆರೆಯಲ್ಲಿ ಶ್ರೀ ಕೊರಗಜ್ಜ ದೈವದ ಕೋಲೋತ್ಸವವು ಫೆ.03 ಗುರುವಾರದಂದು ನಡೆಯಿತು. ವಾರ್ಷಿಕ ಕೋಲೋತ್ಸವದ ಅಂಗವಾಗಿ ಸಂಜೆ ಭಜನಾ ಸಂಕೀರ್ತಣೆ ನಡೆದು ನಂತರ ಕಲ್ಲುರ್ಟಿ-ಮಂತ್ರದೇವತೆ ಹಾಗೂ ಗುಳಿಗನಿಗೆ ಪರ್ವ ಮತ್ತು ಕಲ್ಲುರ್ಟಿ ದರ್ಶನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಿನ್ನಿಮಜಲು ಹೇಮಂತ್...

ಎಡಮಂಗಲ: ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವ

ಎಡಮಂಗಲದ ಪಿಲಿಕುಂಜ ಸ್ಥಾನ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಮಹಾಲಿಂಗರಾಯ ಗ್ರಾಮ ದೈವ ಮತ್ತು ಅನಾದಿ ಶ್ರೀ ದೈವಗಳ ನೇಮೋತ್ಸವದ ಅಂಗವಾಗಿ ಇಂದು ಶ್ರೀ ಮಹಾಲಿಂಗರಾಯ ಮತ್ತು ಶ್ರೀ ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು. ನೇಮೋತ್ಸವದ ಬಳಿಕ ಶ್ರೀ ದೈವಗಳ ಕೈಕಾಣಿಕೆ, ಹರಕೆ ಸೇವೆ, ದೈವಗಳ ಅನುಗ್ರಹದ ನುಡಿಯೊಂದಿಗೆ ವರ್ಷಾವಧಿ ಬೂಲ್ಯಪ್ರಸಾದ ವಿತರಣೆ ನಡೆಯಿತು....

ಫೆ.11- ಫೆ.14: ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ, ಅಣ್ಣಪ್ಪಾದಿ ದೈವಗಳ ನೇಮ
ಮಾ.01ರಂದು ಮಹಾಶಿವರಾತ್ರಿ ಉತ್ಸವ

ಬಾಳಿಲ ಗ್ರಾಮದ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮವು ಫೆ.11 ಶುಕ್ರವಾರದಂದು ಆರಂಭಗೊಳ್ಳಲಿದ್ದು, ಫೆ.14 ಸೋಮವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಪ್ರತಿಷ್ಠಾ ವಾರ್ಷಿಕೋತ್ಸವದ ಅಂಗವಾಗಿ ಫೆ.11 ಶುಕ್ರವಾರದಂದು ಸಂಜೆ ಗಂಟೆ 4.30ಕ್ಕೆ ತಂತ್ರಿಗಳವರ ಆಗಮನ, ಸಂಜೆ ಗಂಟೆ 5.00ಕ್ಕೆ ಊರ ಭಕ್ತಾದಿಗಳಿಂದ ಬಾಳಿಲದಿಂದ ಮೆರವಣಿಗೆ ಮೂಲಕ ಶ್ರೀ ದೇವಳಕ್ಕೆ ಹಸಿರು...

ಡಾ| ಕೆ.ಟಿ ವಿಶ್ವನಾಥರಿಗೆ ವೆಂಕಟರಮಣ ಕ್ರೆಡಿಟ್.ಕೋ.ಆ ಸೊಸೈಟಿ ಕೊಕ್ಕಡ ಶಾಖೆಯಲ್ಲಿ ಸನ್ಮಾನ

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಟಿ ವಿಶ್ವನಾಥರವರು ಸಂಘಟನಾ ಕ್ಷೇತ್ರದಲ್ಲಿ ಸಾಧನೆಗೈದಿರುವ ಹಿನ್ನೆಲೆಯಲ್ಲಿ ಏಷಿಯಾ ವೇದಿಕ್ ಕಲ್ಚರಲ್ ಯುನಿವರ್ಸಿಟಿ ವತಿಯಿಂದ ಕೊಡಲ್ಪಟ್ಟ ಗೌರವ ಡಾಕ್ಟರೇಟ್ ಪದವಿ ಪಡೆಸಿದ್ದು, ಈ ಹಿನ್ನೆಲೆಯಲ್ಲಿ ಸೊಸೈಟಿಯ ಕೊಕ್ಕಡ ಶಾಖೆಯಲ್ಲಿ ಸನ್ಮಾನಿಸಲಾಯಿತು. ಸಂಘದ ಸದಸ್ಯರಾದ ನಾರಾಯಣ ಗೌಡ ಪಿ.ಕೆ, ಲಕ್ಷ್ಮೀ ಕಾಂಪ್ಲೆಕ್ಸ್ ಕೊಕ್ಕಡ...

ಐವರ್ನಾಡು: ಶ್ರೀ ಪಂಚಲಿಂಗೇಶ್ವರ ದೇವಾಲಯದ ಜಾತ್ರೋತ್ಸವದ ಪ್ರಯುಕ್ತ ಗೊನೆ ಮೂಹೂರ್ತ

ಐವರ್ನಾಡಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರತಿಷ್ಟಾ ವಾರ್ಷಿಕೋತ್ಸವವು ಫೆ.8 ರಿಂದ ಫೆ.10 ರವರೆಗೆ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವು ಫೆ.2 ರಂದು ಬೆಳಗ್ಗೆ ಗಂಟೆ 10.00ಕ್ಕೆ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀನಿವಾಸ ಮಡ್ತಿಲ, ವೈದಿಕ ಮುಖ್ಯಸ್ಥರಾದ ರಾಜಾರಾಮ ರಾವ್ ಉದ್ದಂಪ್ಪಾಡಿ, ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಸ್.ಎನ್ ಮನ್ಮಥ, ದೇವಸ್ಥಾನದ...

ಇವತ್ತು ಮಾಪಳಡ್ಕದಲ್ಲಿ ದಿಕ್ರ್ ನೇರ್ಚೆ ಹಾಗೂ ನೂತನವಾಗಿ ವಿನ್ಯಾಸಗೊಂಡ ದರ್ಸ್ ಕಟ್ಟಡ ಉದ್ಘಾಟನೆ

ಜಾತಿ ಮತ ಬೇದವಿಲ್ಲದೆ ಸರ್ವರಿಂದಲೂ ರೋಗ ಶಮನಕ್ಕಾಗಿ ನೇರ್ಚೆ ಸಮರ್ಪಿಸುವ ಅಭಯ ಕೇಂದ್ರ ಮಾಪಳಡ್ಕ ಮಖಾಂ ನಲ್ಲಿ ವರ್ಷಂ ಪ್ರತಿ ನಡೆಯುವ ಬೃಹತ್ ದಿಕ್ರ್ ನೇರ್ಚೆ ಇವತ್ತು ಮಗ್ರಿಬ್ ನಮಾಝ್ ಬಳಿಕ ನಡೆಯಲಿದೆ. ಸಾವಿರಾರು ಕುಟುಂಬಗಳು ವರ್ಷದಲ್ಲೊಂದು ಬಾರಿ ಕೋಳಿ ಪದಾರ್ಥ ಮತ್ತು ರೊಟ್ಟಿ ನೇರ್ಚೆಯಾಗಿ ತಂದು ಝಿಕ್ರ್ ಮಜ್ಲಿಸಿನಲ್ಲಿ ಪಾಲ್ಗೊಂಡು ಅಸ್ತಮ ಇನ್ನಿತರ ಶ್ವಾಸಕೋಶದ...

ಕಳಂಜ: ಶ್ರೀ.ಕ್ಷೇ.ಧ.ಗ್ರಾ. ಯೋಜನೆಯ ಡಿಜಿಟಲ್ ಸೇವಾ ಕೇಂದ್ರದ ವಿಎಲ್ಎ ಆಗಿ ಭವಿತಾ ಬೇರಿಕೆ ನೇಮಕ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರವು ಕಳಂಜದಲ್ಲಿ ಉದ್ಘಾಟನೆಯಾಗಿದ್ದು, ಡಿಜಿಟಲ್ ಸೇವಾ ಕೇಂದ್ರದ ವಿಎಲ್ಎ ಆಗಿ ಕು|ಭವಿತಾ ಬೇರಿಕೆ ನೇಮಕಗೊಂಡಿದ್ದಾರೆ. ಇವರು ಕಳಂಜ ಗ್ರಾಮದ ಬೇರಿಕೆ ಲಕ್ಷ್ಮಣ ಗೌಡ ಹಾಗೂ ಶ್ರೀಮತಿ ದಮಯಂತಿ ಇವರ ಪುತ್ರಿ.

ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು ಕೊಯಿಲು ಕಾರ್ಯಕ್ರಮ

ರೈತರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ರೈತ ಉತ್ಪಾದಕ ಸಂಸ್ಥೆ ರಚನೆಗೆ ಕೇಂದ್ರ ಸರಕಾರ ಈಗಾಗಲೇ ಕರೆಕೊಟ್ಟಂತೆ ರಚನೆಗೊಂಡ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆ (ರಿ) ಪುತ್ತೂರು ಇದರ ವತಿಯಿಂದ ನಡೆಯುತ್ತಿರುವ ವಿನೂತನ ಒಪ್ಪಂದ ಆಧಾರಿತ ಜೇನು ಕೃಷಿ ಕಾರ್ಯಕ್ರಮದಲ್ಲಿ ಈಗಾಗಲೇ ಜೇನು ಕೃಷಿಯಲ್ಲಿ ತೊಡಗಿಕೊಂಡ ಅಜ್ಜಾವರ ಮಂಡೆಕೋಲು ಉತ್ಸಾಹಿ ರೈತರ ಗುಂಪಿನ ಪ್ರಥಮ ಜೇನು...
Loading posts...

All posts loaded

No more posts

error: Content is protected !!