ಕುಕ್ಕುಜಡ್ಕ : ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಸಚಿವರಿಂದ ಸನ್ಮಾನ

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಾಧನೆಗೈದ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ ವಿದ್ಯಾರ್ಥಿಗಳಾದ ಮನುಶ್ರೀ ಕೆ. (612), ದಿಶಾ ಎಂ.ವಿ. (598), ರೀನಾ ಪಿ.ಕೆ.(598), ಪ್ರತೀಕ್ ಎಂ.(589), ಕಾರ್ತಿಕ್ ಪಿ.(579), ರೇಖಾಶ್ರೀ ಎನ್.(576), ಚೈತನ್ಯ ಪಿ.(575), ರಚನ್ (568), ಚೈತ್ರಾ ಕೆ.(547) ಇವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರು,...

ಕೊಡಿಯಾಲ: ಮರಿಕೆ ಕಾಲೋನಿಯಲ್ಲಿ ಕೈಕೊಟ್ಟ ವಿದ್ಯುತ್, ಸಂಕಷ್ಟದಲ್ಲಿ ಕಾಲೋನಿ ನಿವಾಸಿಗಳು

ಕೊಡಿಯಾಲ ಗ್ರಾಮದ ಮರಿಕೆ ಕಾಲೋನಿಯಲ್ಲಿ ವಿದ್ಯುತ್ ಲೈನ್ ಕಡಿತಗೊಂಡಿದ್ದು, ನಿನ್ನೆ ಬೆಳಿಗ್ಗೆಯಿಂದ ವಿದ್ಯುತ್ ಇಲ್ಲದೆ ಕಾಲೋನಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಕಾಲೋನಿ ನಿವಾಸಿಗಳು ಪಂಚಾಯತ್ ನಳ್ಳಿ ನೀರನ್ನೇ ಆಶ್ರಯಿಸಿದ್ದು, ವಿದ್ಯುತ್ ಸಮಸ್ಯೆಯಿಂದ ಪರದಾಡುವಂತಾಗಿದೆ.ಈ ಭಾಗದ ಲೈನ್ ಮ್ಯಾನ್ ರಜೆಯಲ್ಲಿದ್ದು, ಬೇರೆ ಲೈನ್ ಮ್ಯಾನ್ ಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ವಿದ್ಯುತ್ ಸಹಾಯವಾಣಿಗೆ...
Ad Widget

ಕೋಳಿ ಸಾಕಾಣಿಕೆಯ ಫುಡ್ ಅಕ್ರಮವಾಗಿ ಮಾರಾಟ – ಪೋಲಿಸ್ ದೂರು – ಮುಚ್ಚಳಿಕೆ

ಪ್ರಮುಖ ಕೋಳಿ ಸಾಕಾಣಿಕೆ ಕಂಪೆನಿಯಾಗಿರುವ ಮಾ. ಇಂಟಿಗ್ರೇಶನ್ ಇದರ ಒಪ್ಪಂದದ ಪ್ರಕಾರ ಕೋಳಿ ಸಾಕಾಣಿಕೆಗೆ ಪಡೆದ ಫುಡ್ ಅನ್ನು ಅಕ್ರಮವಾಗಿ ಬೇರೆ ಕೋಳಿ ಫಾರ್ಮ್ ಗೆ ಮಾರಾಟ ಮಾಡುತ್ತಿರುವ ವ್ಯಕ್ತಿಯ ಬಗ್ಗೆ ಕಂಪೆನಿಯ ಅಧಿಕಾರಿಗಳು ಪೋಲೀಸರಿಗೆ ದೂರು ನೀಡಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಐವರ್ನಾಡು ನಿವಾಸಿ ಪುರುಷೋತ್ತಮ ಎಂಬವರು ಮಾ. ಇಂಟಿಗ್ರೇಶನ್ ನ ಮುಖಾಂತರ ಒಪ್ಪಂದದ...

ಕವನ : ಬದುಕಿನ ಗುರುತು

ಬದುಕ ಪುಟಗಳಲಿ ಕನಸಿನ ಗುರುತು…ಸೋಲಿನ ಪ್ರತಿ ಹೆಜ್ಜೆಯಲೂ ಗೆಲುವಿನ ಗುರುತು…ನೋವಿನ ಪ್ರತಿ ಹೆಜ್ಜೆಯಲೂ ನಲಿವಿನ ಗುರುತು…ತಿಳಿದೂ ತಿಳಿಯದೆಯೇ ಸಾಗುವ ಪಯಣ, ಹೆಜ್ಜೆ ಗುರುತಿನ ಜೊತೆ ನಿಲ್ಲದ ಪಯಣ…ಕೊನೆಯೇ ಇರದ ಈ ಬದುಕಲಿ, ಕೊನೆಯಾಗುವುದು ನಮ್ಮಯ ಬದುಕು…ಬದುಕಿನ ಈ ಪುಸ್ತಕದಿ ಪುಟಗಳು ನೂರು, ನೋಡುವುದು ಹೇಗೆ ಮುಂದಿನ ಪುಟವ…ಪ್ರತಿಯೊಂದು ಪುಟಗಳಲೂ ನಾಳಿನ ಬದುಕು, ಪ್ರತಿ ಹೆಜ್ಜೆ ಗುರುತಿನಲೂ...

ಹರಿಹರ ಪಲ್ಲತ್ತಡ್ಕ : ಉಚಿತ ಆರೋಗ್ಯ ತಪಾಸಣಾ ಶಿಬಿರ

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಮಂಗಳೂರು ದ.ಕ, ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಹಾಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮೇ.24 ರಂದು ಕಾರ್ಮಿಕ ಇಲಾಖೆ ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ,...

ಮೇ.28 : ರಂಗಮನೆಯಲ್ಲಿ ಗಾನ ನೃತ್ಯ ಅಕಾಡೆಮಿಯ ಆರೋಹಣ 2022 ಕಾರ್ಯಕ್ರಮ

ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಮೇ 28 ರಂದು ಸಂಜೆ 4.00 ಕ್ಕೆ  ಗಾನ ನೃತ್ಯ ಅಕಾಡೆಮಿ ಮಂಗಳೂರು ಮತ್ತು ಸುಳ್ಯ ಶಾಖೆಯ ವತಿಯಿಂದ " ಆರೋಹಣ 2022" ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನಿರ್ದೇಶಕಿ ವಿದುಷಿ ಶ್ರೀಮತಿ ವಿದ್ಯಾಶ್ರೀ ರಾಧಾಕೃಷ್ಣ ಹಾಗೂ ಗಾನ ನೃತ್ಯ ಅಕಾಡೆಮಿಯ ವಿದ್ಯಾರ್ಥಿ ಬಳಗದಿಂದ  ಭರತನಾಟ್ಯ ಶಾಸ್ತ್ರೀಯ ಮತ್ತು...

ದೇವಚಳ್ಳ ಗ್ರಾ.ಪಂ. ಮಾಜಿ ಸದಸ್ಯ ಮೋಹನ ಗೌಡ ಮುಂಡೋಡಿ ನಿಧನ

ದೇವಚಳ್ಳ ಗ್ರಾಮದ ಮುಂಡೋಡಿ ನಿವಾಸಿ,‌ ಗ್ರಾ.ಪಂ ಮಾಜಿ ಸದಸ್ಯರಾದ ಮೋಹನ ಗೌಡ‌ ಮುಂಡೋಡಿಯವರು ಅಲ್ಪಕಾಲದ ಅಸೌಖ್ಯದಿಂದ ಮೇ 23 ರಂದು ನಿಧನರಾದರು. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಶುಭ ವಿವಾಹ : ಯತೀಶ್ – ಮಣಿಶ್ರೀ

ಮಡಪ್ಪಾಡಿ ಗ್ರಾಮದ ಗಟ್ಟಿಗಾರು ದಿ. ಮಾಧವ ಗೌಡರ ಪುತ್ರ ಯತೀಶ್ ರವರ ವಿವಾಹವು ನೆಲ್ಲೂರು ಕೆಮ್ರಾಜೆ ಗ್ರಾಮದ ಉಳಿಯದಮಜಲು ( ಪಾತಿಕಲ್ಲು) ಶ್ರೀಧರ ಗೌಡರ ಪುತ್ರಿ ಮಣಿಶ್ರೀ ಯೊಂದಿಗೆ ಮೇ. 25 ರಂದು ಮಾವಿನಕಟ್ಟೆ ಉದಯಗಿರಿ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.

ಕೊಲ್ಲಮೊಗ್ರ : ಕೈಹಿಡಿದೆಳೆದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಮಹಿಳೆ – ಆರೋಪಿ ಪೋಲಿಸ್ ವಶ

ಹೋಟೆಲ್ ನಲ್ಲಿದ್ದಾಗ ತನ್ನ ಕೈ ಹಿಡಿದು ಎಳೆದಿದ್ದಾರೆಂದು ಮಹಿಳೆಯೊಬ್ಬರು ಪೋಲೀಸರಿಗೆ ದೂರು ನೀಡಿದ್ದು ಆರೋಪಿಯನ್ನು ಬಂಧಿಸಿದ ಘಟನೆ ಕೊಲ್ಲಮೊಗ್ರದಿಂದ ವರದಿಯಾಗಿದೆ.ಕೈ ಹಿಡಿದೆಳೆದು ಮನೆಗೆ ಕರೆದು ಕಪಾಳಮೋಕ್ಷ ಮಾಡಿಸಿಕೊಂಡ ಆರೋಪಿ ಕೊಲ್ಲಮೊಗ್ರ ನಿವಾಸಿ ಮಹಮ್ಮದ್ ನನ್ನು ಸುಬ್ರಹ್ಮಣ್ಯ ಪೋಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಕೇನ್ಯ : ಕಾಂಗ್ರೆಸ್ ವಾರ್ಡ್ ಸಭೆ

ಬಳ್ಪ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇನ್ಯ ಗ್ರಾಮದಲ್ಲಿ ಮೇ.23 ರಂದು ಕಾಂಗ್ರೆಸ್ ಸಮಿತಿಯ ವಾರ್ಡ್ ಸಭೆ ನಡೆಯಿತು.ಗ್ರಾಮ ಉಸ್ತುವಾರಿಯಾದ ರವೀಂದ್ರ ಕುಮಾರ್ ರುದ್ರಪಾದ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಕೇನ್ಯ ವಾರ್ಡ್ ಸಮಿತಿಯನ್ನು ರಚಿಸಲಾಯಿತು. ಕೇನ್ಯ ವಾರ್ಡ್ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಕಾಶ್ ಗೆಜ್ಜೆ, ಉಪಾಧ್ಯಕ್ಷರುಗಳಾಗಿ ವಿಠಲ್ ರೈ ಕಂಡೆಬಾಯಿ, ಸೀತಾರಾಮ ರೈ, ಪ್ರದಾನ ಕಾರ್ಯದರ್ಶಿಯಾಗಿ...
Loading posts...

All posts loaded

No more posts

error: Content is protected !!