ಎಲಿಮಲೆ : ಮಿತ್ರ ಬಳಗ ನೂತನ ಸಮಿತಿ ರಚನೆ ; ಅಧ್ಯಕ್ಷ ಉದಯ ಚಳ್ಳ- ಕಾರ್ಯದರ್ಶಿ ನಿತಿನ್ ಗಟ್ಟಿಗಾರು

ಎಲಿಮಲೆ ಮಿತ್ರ ಬಳಗದ ವಾರ್ಷಿಕ ಮಹಾಸಭೆಯನ್ನು ಜು. 09 ರಂದು ಬಳಗದ ಕಚೇರಿಯಲ್ಲಿ ಕರೆಯಲಾಯಿತು.ಸಭೆಯ ಅಧ್ಯಕ್ಷತೆ ಯನ್ನು ಓಂಪ್ರಸಾದ್ ಕಜೆ ರವರು ವಹಿಸಿದ್ದರು. ವರದಿ ವಾಚನದ ಬಳಿಕ ಮಿತ್ರ ಬಳಗದ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಓಂ ಪ್ರಸಾದ್ ಕಜೆ, ನೂತನ ಅಧ್ಯಕ್ಷರಾಗಿ ಉದಯಕುಮಾರ್ ಚಳ್ಳ, ಉಪಾಧ್ಯಕ್ಷರಾಗಿ ದೀಕ್ಷಿತ್ ಚಿತ್ತಡ್ಕ, ಕಾರ್ಯದರ್ಶಿಯಾಗಿ ನಿತಿನ್ ಗಟ್ಟಿಗಾರು, ಜತೆ...

ಜಾರುಬಂಡಿಯಾದ ಶೆಟ್ಟಿಗದ್ದೆ ಜೋಗಿಬೆಟ್ಟು ಮಂಞನಕಾನ ರಸ್ತೆ – ಸುಮಾರು 50 ವರ್ಷದಿಂದ ಅಭಿವೃದ್ಧಿಯಾಗದ ರಸ್ತೆಯನ್ನು ತಾವೇ ದುರಸ್ತಿ ಪಡಿಸುತ್ತಿರುವ ಫಲಾನುಭವಿಗಳು

ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಗಿ ಹೋಗಿದ್ದಾರೆ . ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿವೆ . ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಶೆಟ್ಟಿಗದ್ದೆ - ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು....
Ad Widget

ಕೆ.ವಿ.ಜಿ.ಐ.ಟಿ.ಐ ಭಾಗಮಂಡಲದಲ್ಲಿ ಡಾ.ಉಜ್ವಲ್ ಊರುಬೈಲು ರವರಿಗೆ ಅಭಿನಂದನೆ.

ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿಗಳಾದ ಡಾ.ರೇಣುಕಾ ಪ್ರಸಾದ್ ಕೆ.ವಿ ರವರ ಆಡಳಿತದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಎ.ಜಿ ಐ.ಟಿ.ಐ ಭಾಗಮಂಡಲದಲ್ಲಿ, ಕೆ.ವಿ.ಜಿ. ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಉಜ್ವಲ್ ಊರುಬೈಲು ರವರನ್ನು ಜು. 16ರಂದು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮಾತನಾಡಿ, ಭಾಗಮಂಡಲ ಐ.ಟಿ.ಐ ಯ ಅಭಿವೃದ್ಧಿಗೆ...

ಮಡಪ್ಪಾಡಿ: ವಿದ್ಯುತ್ ಅದಾಲತ್ ಕಾರ್ಯಕ್ರಮ.

ಮಡಪ್ಪಾಡಿ ಗ್ರಾಮ ಪಂಚಾಯತ್ ನಲ್ಲಿ ಜು. 16 ರಂದು ವಿದ್ಯುತ್ ಅದಾಲತ್ ಕಾರ್ಯಕ್ರಮ. ಇಲ್ಲಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಮೆಸ್ಕಾಂ ಅಧಿಕಾರಿಗಳು, ಗ್ರಾಮ ಪಂಚಾಯತ್ ಅದ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮಾಜಿ ಗ್ರಾ.ಪಂ ಅಧ್ಯಕ್ಷರು, ಗ್ರಾಮಸ್ತರು ಕೆಲಸ.

ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಪ್ರಾರಂಭ

ಕೆ ವಿಜಿ ಅಮರಜ್ಯೊತಿ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಫೌಂಡೇಶನ್ ಕೋರ್ಸ್ ಜು.16 ರಂದು ಆರಂಭಿಸಲಾಯಿತು. ನುರಿತ ತಜ್ಞ, ತೆರಿಗೆ ಸಲಹೆಗಾರರ ಸನತ್ ಪೆರ್ವಾಡಿ ಅವರು ವಿದ್ಯಾರ್ಥಿಗಳಿಗೆ ಸಿಎ ಕೋಚಿಂಗ್ ತರಗತಿ ಆರಂಭಿಸಿದರು.ಸಿ ಎ ಫೌಂಡೇಶನ್ ಪರೀಕ್ಷೆಗೆ ಸಿದ್ಧಗೊಳಿಸಲು ಈ ಕೋರ್ಸ್ ಸಹಾಯವಾಗಲಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸುಳ್ಯ ತಾಲೂಕಿನಲ್ಲಿ ಪ್ರಪ್ರಥಮವಾಗಿ ಪಿ...

ಮತದಾನ ಬಹಿಷ್ಕಾರದ ಬ್ಯಾನರ್‌ ಹರಿದವರಿಗೆ ಶಿಕ್ಷೆ ನೀಡುವಂತೆ ದೈವದ ಮುಂದೆ ಪ್ರಾರ್ಥನೆ

ಸುಳ್ಯ ತಾಲೂಕಿನ ಅರಂತೋಡು ಎಲಿಮಲೆ ರಸ್ತೆ ದುರಸ್ತಿಗೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ ಬ್ಯಾನರ್ ಗಳನ್ನು 26 ಕಡೆ ಹಾಕಿದ್ದರು. ಸುಳ್ಯಕ್ಜೆ ಮುಖ್ಯಮಂತ್ರಿಗಳ ಆಗಮನದ ಹಿಂದಿನ ರಾತ್ರಿ ಕಿಡಿಗೇಡಿಗಳು 6 ಕಡೆಯ ಬ್ಯಾನರ್ ಅನ್ನು ಹೊಳೆಗೆ ಎಸೆದಿದ್ದರು. ಇದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು ಜು.15 ರ ಒಳಗೆ ಬ್ಯಾನರ್ ತೆಗೆದಿರುವವರು ಪುನಃ ಅಳವಡಿಸದಿದ್ದರೇ ಜನರೆಲ್ಲಾ ಒಂದಾಗಿ ಊರಿನ ದೈವದ...

ಕ್ಯಾಂಪ್ಕೋ ಸಂಸ್ಥೆಯಿಂದ ಚಿಕಿತ್ಸೆಗಾಗಿ ಸಹಾಯಧನ ವಿತರಣೆ

ಸುಳ್ಯ: ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ ಯೋಜನೆಯಡಿಯಲ್ಲಿ ಫಲಾನುಭವಿಗಳಾದ ಯು. ಸಿ. ಸಹದೇವ ಅವರ ಪತ್ನಿ ಶ್ರೀಮತಿ. ಯು. ಎಸ್. ಶಾಂತಿ, ಚೆಂಬು ಇವರಿಗೆ ಅಂಜಿಯೋಪ್ಲಾಸ್ಟಿ ಗೆ ಸಂಬಂಧಿಸಿ ರೂ.50000ದ ಚೆಕ್ ನ್ನು ಸಂಸ್ಥೆಯ ನಿರ್ದೇಶಕರಾದ ಕೃಷ್ಣ ಪ್ರಸಾದ ಮಡ್ತಿಲರವರು ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಇಂದು ವಿತರಿಸಿದರು. ಈ ಸಂದರ್ಭದಲ್ಲಿ ಪುತ್ತೂರು ವಲಯ ಮುಖ್ಯ ಮಾರುಕಟ್ಟೆ...

ಕಾಂತಮಂಗಲ : ಕಾರು-ಮಿನಿ ಲಾರಿ ಡಿಕ್ಕಿ

ಅಜ್ಜಾವರ ಗ್ರಾಮದ ಕಾಂತಮಂಗಲ ಜೀಜಾಭಾಯಿ ಸರ್ಕಲ್ ಬಳಿ ಆಲ್ಟೋ ಕಾರು ಹಾಗೂ ಮಿನಿ ಲಾರಿ ಮುಖಾಮುಖಿ ಡಿಕ್ಕಿಯಾದ ಘಟನೆ ಇಂದು ನಡೆದಿದೆ.

ಸುಬ್ರಹ್ಮಣ್ಯ : ಒಂದು ನಿಲ್ದಾಣ ಒಂದು ಉತ್ಪನ್ನ ಕೇಂದ್ರ ಆರಂಭ

ನೈಋತ್ಯ ರೈಲ್ವೇಯ ಮೈಸೂರು ವಿಭಾಗದ ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಜು.15 ರಂದು ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯ ಅಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮಳಿಗೆ ಉದ್ಘಾಟನೆ ನಡೆಯಿತು.ಕುಕ್ಕೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಮಳಿಗೆ ಉದ್ಘಾಟನೆ ಮಾಡಿದರು. ರೈಲು ಸ್ಟೇಷನ್ ಮಾಸ್ಟರ್ ಅಭಿನಂದನ್, ಸ್ಟೇಷನ್...

ರಾಜ್ಯ ಹೆದ್ದಾರಿ ಬದಿಯಲ್ಲಿ ಬೀಳುವ ಸ್ಥಿತಿಯಲ್ಲಿ ಮರ

ಜಾಲ್ಸೂರು ಗ್ರಾಮದಬೊಳುಬೈಲು ಎಂಬಲ್ಲಿ ಬೃಹತ್ಗಾತ್ರದ ಮರವೊಂದು ರಸ್ತೆಗೆ ಬೀಳುವ ಸ್ಥಿತಿಯಲ್ಲಿರುತ್ತದೆ.ದಿನ ನಿತ್ಯ ಸಾವಿರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದು ವಾಹನಗಳಮೇಲೆ ಮರ ಬಿದ್ದರೆ ದೊಡ್ಡ ಅನಾಹುತವಾಗಲಿದ್ದುಮರದ ಬುಡದಲ್ಲಿ ಈಗಾಗಲೇ ಮಣ್ಣು ಸಡಿಲಗೊಂಡು ದೊಡ್ಡ ಗಾಳಿ ಬೀಸಿದರೆ ಬೀಳುವ ಸ್ಥಿತಿಯಲ್ಲಿದೆ. ಮರ ಬಿದ್ದರೆ ಹೆಚ್ ಟಿ ವಿದ್ಯುತ್ ಕಂಬಗಳು ಮುರಿದು ಸುಳ್ಯ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕೊಡ ಹಾಗುವ...
Loading posts...

All posts loaded

No more posts

error: Content is protected !!