ಜ್ಯೋತಿ ಇಂಡಸ್ಟ್ರೀಸ್ ಜಗನ್ನಾಥ ರೈ ಹೃದಯಾಘಾತದಿಂದ ನಿಧನ

ಸುಳ್ಯದ ಜ್ಯೋತಿ ಇಂಡಸ್ಟ್ರೀಸ್ ಮಾಲಕ ಹಾಗೂ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಕನ್ನೆಜಾಲು ಜಗನಾಥ ರೈ ಜ್ಯೋತಿ ಅವರು ಜು.18ರಂದು ಸಂಜೆ ತೀವ್ರ ಹೃದಯಾಘಾತಕ್ಕೊಳಗಾಗಿ ಇದೀಗ ಕೊನೆಯುಸಿರೆಳೆದಿದ್ದಾರೆ . ಇಎನ್ ಟಿ ಸ್ಪೆಷಲಿಸ್ಟ್ ಡಾ.ರವಿಶಂಕರ್ ರಲ್ಲಿ ಚಿಕಿತ್ಸೆಗೆಂದು ಬಂದಿದ್ದ ಅವರು ಅಲ್ಲಿಂದ ಹಿಂತಿರುಗಿ ಹೋಗುತ್ತಿರುವಾಗ ಹೃದಯಾಘಾತಕ್ಕೊಳಗಾದರು. ಕೂಡಲೇ ಅವರನ್ನು ಅವರ ಪುತ್ರಿ ಮತ್ತು ಅಳಿಯ ಕೆವಿಜಿ...

ಮೌನ ಮಾತಾದಾಗ ಕನ್ನಡ ಆಲ್ಬಮ್ ಸಾಂಗ್ ಶೀಘ್ರ ಬಿಡುಗಡೆ

ಸುಳ್ಯ ಕಲಾಸಕ್ತರು ನಿರ್ದೇಶಿಸಿ ಅಭಿನಯಿಸಿದ "ಮೌನ ಮಾತಾದಾಗ" ಎಂಬ ಕನ್ನಡ ಆಲ್ಬಮ್ ಸಾಂಗ್ ವಿಷ್ಣುನಾಗ ಶೇಟ್ ಯ್ಯೂಟ್ಯೂಬ್ ಚಾನೆಲ್ ನಲ್ಲಿ ಜು.24ರಂದು ಬಿಡುಗಡೆಗೊಳ್ಳಲಿದೆ. ಇದರ ನಿರ್ದೇಶನವನ್ನು ಕೀರ್ತನ್ ಶೆಟ್ಟಿ ಸುಳ್ಯ ಮಾಡಿದ್ದು ಇದರ ಸಾಹಿತ್ಯವನ್ನು ಪ್ರಶಾಂತ್ ವಿಟ್ಲ ಹಾಗೂ ಗಾಯನವನ್ನು ವಿಷ್ಣುನಾಗ ಶೇಟ್ ಇವರು ಮಾಡಿದ್ದಾರೆ. ಯಶ್ ಫೋಟೋಗ್ರಫಿ ಕಲ್ಲುಗುಂಡಿ ಛಾಯಾಗ್ರಹಣದೊಂದಿಗೆ ಜೀವನ್ ಕೆರೆಮೂಲೆ ಇವರು...
Ad Widget

ಗೆಲುವಿನ ಶಿಖರವ ಮುಟ್ಟುತಲಿ ಸಾಗಿದ ಹಾದಿಯ ಮರೆಯದಿರು

ನೂರು ಕಷ್ಟ ದಾಟಿ ಸಾಗಿ ಗೆಲುವು ಪಡೆದುಕೊಂಡೆ ನೀ, ಗೆಲುವು ಪಡೆದ ಸಂತಸದಲಿ ಕಳೆದ ದಿನವ ಮರೆತೆ ನೀ, ಬಂದ ಹಾದಿ ತೊರೆದೆ ನೀ…ನಿನ್ನ ಗೆಲುವ ಮೆಟ್ಟಿಲಾದ ನಿನ್ನವರ ಮರೆತೆ ನೀ, ನಾನೇ ಎಂಬ ಜಂಭದಲ್ಲಿ ಪ್ರೀತಿ ಸ್ನೇಹ ಮರೆತೆ ನೀ, ಕಳೆದ ಎಲ್ಲಾ ದಿನಗಳನ್ನು ಮರೆತು ಮುಂದೆ ನಡೆದೆ ನೀ…ಸೋಲೇ ಗೆಲುವ ಮೆಟ್ಟಿಲೆಂಬ ಮಾತನ್ನು...

ಬೊಳುಬೈಲು ಕಾರಿನ ಮೇಲೆ ಮುರಿದುಬಿದ್ದ ಮರದ ಗೆಲ್ಲು – ಅಪಾಯದಿಂದ ಪಾರು

ಜಾಲ್ಸೂರು ಗ್ರಾಮದ ಬೊಳುಬೈಲು ಬಳಿ ಚಲಿಸುತ್ತಿದ್ದ ಸ್ವಿಫ್ಟ್ ಕಾರಿನ ಮೇಲೆ ಮರದ ಗೆಲ್ಲು ಮುರಿದು ಬಿದ್ದು ಕಾರು ಹಾನಿಗೊಂಡ ಘಟನೆ ವರದಿಯಾಗಿದೆ. ಜಯನಗರ ನಿವಾಸಿ ಮುಜೀಬ್ ಎಂಬುವವರು ಬೊಳುಬೈಲಿನಲ್ಲಿರುವ ಪೀಸ್ ಸ್ಕೂಲಿನಿಂದ ತಮ್ಮ ಮಗುವನ್ನು ಕರೆ ತರುವ ವೇಳೆ ಕುಂಬರ್ಚೋಡು ಬಳಿ ಬರುತ್ತಿದ್ದಂತೆ ಮೇಲಿನಿಂದ ಕಾರಿನ ಮುಂಭಾಗದ ಗಾಜಿನ ಭಾಗಕ್ಕೆ ಮರದ ಗೆಲ್ಲು ಬಿದ್ದಿದೆ.ಘಟನೆಯಿಂದ ಕಾರಿನ...

ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಇಮೇಲ್ ಅಭಿಯಾನ – ಇಂದು ಚಾಲನೆ

ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಪ್ರದಾನ ಮಂತ್ರಿಗಳ ಕಾರ್ಯಾಲಯದ ವೆಬ್ಸೈಟ್ ವಿಳಾಸಕ್ಕೆ ಇಮೇಲ್ ಕಳಿಸುವ ಅಭಿಯಾನ ಇಂದಿನಿಂದ ಆರಂಭಿಸಲಾಗುವುದು ನಡೆಸಲಾಗುವುದು ಎಂದು ಅಡ್ತಲೆ ನಾಗರಿಕ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳುತಿಳಿಸಿದ್ದಾರೆ. ವಾರ್ಡ್ ನ ಸಮಸ್ತ ಜನತೆ ಪ್ರಧಾನ ಮಂತ್ರಿಗಳಿಗೆ ನೇರ ಇ ಮೇಲ್ ಮಾಡುವ ಅಭಿಯಾನಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ. ನಮ್ಮ ಊರಿನಿಂದ ಗರಿಷ್ಠ ಇ...

ಎನ್ನೆಂಸಿ: ಯುವ ರೆಡ್ ಕ್ರಾಸ್ ಘಟಕದಿಂದ ವಿಶ್ವ ಜನಸಂಖ್ಯಾ ದಿನಾಚರಣೆ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜನಸಂಖ್ಯೆ ಮಿತಿ ಮೀರಿ ಏರುತ್ತಿರುವ ಇಂದಿನ ದಿನದಲ್ಲಿ ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ. ರೆಡ್ ಕ್ರಾಸ್ ಘಟಕ...

ಗುತ್ತಿಗಾರು : ಆರು ತಿಂಗಳಲ್ಲೇ ಕುಸಿದು ಬಿದ್ದ ತಡೆಗೋಡೆ – ಕಳಪೆ ಆರೋಪ

ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಚತ್ರಪ್ಪಾಡಿ -ಹಾಲೆಮಜಲು ಸಂಪರ್ಕ ರಸ್ತೆಯ ಚತ್ರಪ್ಪಾಡಿ ಚಂದ್ರಶೇಖರ ಆಚಾರ್ಯರವರ ಮನೆಯ ಬಳಿ ತಾಲೂಕು ಪಂಚಾಯತ್ ವತಿಯಿಂದ ರೂ 1 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಿರುವ ತಡೆಗೋಡೆ ಕುಸಿದು ಬಿದ್ದಿದೆ. ಅಡಿಪಾಯ ತೆಗೆಯದೇ ನಿರ್ಮಿಸಿರುವುದರಿಂದ ಭಾರಿ ಮಳೆಗೆ 6 ತಿಂಗಳಲ್ಲೇ ಮಗುಚಿ ಬಿದ್ದಿದೆ. ಇದರಿಂದ ಸಂಪರ್ಕ ರಸ್ತೆ ಕೊಚ್ಚಿ...

ಸುಳ್ಯ : ಅಮರ ಸುಳ್ಯ – 1837 ಚಲನಚಿತ್ರಕ್ಕೆ ಮುಹೂರ್ತ- ಪೋಸ್ಟರ್ ಬಿಡುಗಡೆ

ಕಲಾಮಾಯೆ(ರಿ ) ಎನೆಕಲ್ ಫಿಲ್ಮ್ ಸಂಸ್ಥೆಯ ಸಾರತ್ಯದಲ್ಲಿ ವಿದ್ಯಾಧರ ಕುಡೆಕಲ್ಲು ಇವರ ಅಮರ ಸುಳ್ಯ -1837 ಬ್ರಿಟಿಷ್ ವಸಾಹತುಶಾಹಿ ವಿರುದ್ಧದ ಸಶಸ್ತ್ರ ಹೋರಾಟ ಸಂಶೋಧನ ಕೃತಿ ಆಧಾರಿತ ಅರೆಭಾಷೆ ಮತ್ತು ಕನ್ನಡ ಚಲನಚಿತ್ರದ ಪ್ರಾರ್ಥನಾ ಮುಹೂರ್ತ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜುಲೈ 15 ರಂದು ಶ್ರೀ ಮಿತ್ತೂರು ಉಳ್ಳಾಕುಲು ಮತ್ತು ನಾಯರ್ ದೈವಗಳ ಮೂಲಸ್ಥಾನ...

ಸಿ.ಆರ್.ಪಿ. ಸಂತೋಷ್ ಅವರಿಗೆ “ಶಿಕ್ಷಣ ಸಾರಥಿ” ರಾಜ್ಯ ಪ್ರಶಸ್ತಿ

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ರಿ.ಮೈಸೂರು ಇವರಿಂದ ಕೊಡಲ್ಪಡುವ ರಾಜ್ಯಮಟ್ಟದ ಉತ್ತಮ ಸಿ ಆರ್ ಪಿ ಗಳಿಗೆ ನೀಡುವ "ಶಿಕ್ಷಣ ಸಾರಥಿ" ಪ್ರಶಸ್ತಿಗೆ ದೇವಚಳ್ಳ‌ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಸಂತೋಷ್ ಆಯ್ಕೆಯಾಗಿದ್ದಾರೆ. ಇವರು 2007 ರಲ್ಲಿ ಸ.ಕಿ.ಪ್ರಾ.ಶಾಲೆ ಅಚ್ರಪ್ಪಾಡಿಯಲ್ಲಿ ವೃತ್ತಿ ಜೀವನ ಆರಂಭಿಸಿ , ಬಳಿಕ ಸ.ಹಿ.ಪ್ರಾ.ಶಾಲೆ.ದೇವಚಳ್ಳ ಇಲ್ಲಿ ಐದು ವರ್ಷಗಳ...

ಧಾರಕಾರ ಮಳೆಗೆ ಜಾರುಬಂಡಿಯಾದ ಶೆಟ್ಟಿಗದ್ದೆ- ಜೋಗಿಬೆಟ್ಟು- ಮಂಞನಕಾನ ರಸ್ತೆ; ಸರಿಸುಮಾರು 50 ವರ್ಷಕ್ಕಿಂತಲೂ ಹಳೆಯ ರಸ್ತೆಯನ್ನು ಸರಿಪಡಿಸಿದ ರಸ್ತೆಯ ಫಲಾನುಭವಿಗಳು

ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಹೈರಾಣಾಗಿ ಹೋಗಿದ್ದಾರೆ. ಹಲವಾರು ಕಡೆ ಪ್ರಕೃತಿ ವಿಕೋಪಗಳು ಆಗುತ್ತಿದ್ದು, ಜನರ ಜೀವನದ ಕೊಂಡಿಯಂತಿರುವ ರಸ್ತೆಗಳು ಹದೆಗೆಟ್ಟು ಹೋಗಿವೆ. ಇಂತಹುದೆ ಸಮಸ್ಯೆ ಸುಮಾರು 50 ವರ್ಷಕ್ಕಿಂತಲೂ ಅಧಿಕ ಹಳೆಯದಾದ ರಸ್ತೆಗೆ ಒದಗಿ ಬಂದಿದೆ. ನೂರಾರು ಮನೆಗಳಿಗೆ ಸಂಪರ್ಕದ ಮೂಲವಾಗಿರುವ ಕಲ್ಮಡ್ಕ ಗ್ರಾಮದ ಶೆಟ್ಟಿಗದ್ದೆ - ಮಂಞನಕಾನ ರಸ್ತೆಯ ಪಾಡು ಹೇಳತೀರದಂತಾಗಿತ್ತು....
Loading posts...

All posts loaded

No more posts

error: Content is protected !!