ಸೆ. 4ರಂದು ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ- ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ.

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಸುಳ್ಯದ ಅಂಬಟೆಡ್ಕದಲ್ಲಿರುವ ಮರಾಟಿ ಸಮಾಜ ಸೇವಾ ಸಂಘದ ಗಿರಿದರ್ಶಿನಿ ಸಭಾ ಭವನದಲ್ಲಿ ಸೆ. 4ರಂದು ಪೂ. 10:30 ಕ್ಕೆ ನಡೆಯಲಿದೆ. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸೀತಾನಂದ ಬೇರ್ಪಡ್ಕರವರು ವಹಿಸಲಿದ್ದಾರೆ. ಸಂಘದ ವತಿಯಿಂದ ಕೊಡಮಾಡುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು...

ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ರೋಟರಿ ಕಾಲೇಜ್ ನ ವಿದ್ಯಾರ್ಥಿಗಳು ಚಾಂಪಿಯನ್ .

ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆ. 17 ರಂದು ಸುಳ್ಯದ ಅಮೃತ ಭವನದಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸುಳ್ಯ ರೋಟರಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ - ದಿಶಾಲಕ್ಷ್ಮೀ ವಿ , ಆಶಿಕಾ ಜೆ, ಶ್ರಾವ್ಯ ಜೆ ಶೆಟ್ಟಿ, ಅಶ್ವಿನಿ ಎಸ್, ನೇಹಾ ಡಿ ಮತ್ತು ಬಾಲಕರ...
Ad Widget

ಬೆಳ್ಳಾರೆ: ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಮಾಹಿತಿ ಕಾರ್ಯಾಗಾರ

ಬೆಳ್ಳಾರೆ: ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ಗ್ರಾ.ಪಂ. ಬೆಳ್ಳಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ, ಬೆಳ್ಳಾರೆ ವಲಯ ಮತ್ತು ಸ್ನೇಹಶ್ರೀ ಮಹಿಳಾ ಮಂಡಲ ಬೆಳ್ಳಾರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆ, ಮಾಸ್ತಿಕಟ್ಟೆ, ನೆಟ್ಟಾರು, ಪಾಟಾಜೆ,...

ಅತ್ಯುತ್ತಮ ಕೃಷಿಕ ಹಾಗೂ ಹೈನುಗಾರಿಕೆ ಪ್ರಶಸ್ತಿಗೆ ಸಿ.ಹೆಚ್. ಮಹಮ್ಮದ್ ಅಶ್ರಫ್ ಚಂಡಮೂಲೆ ಆಯ್ಕೆ.

ದೇಲಂಪಾಡಿ: ಸುಳ್ಯದ ಇಂಡಿಯನ್ ಗ್ರಾನೈಟ್ಸ್ & ಟೈಲ್ಸ್ ಮಾಲಕ ಕೃಷಿಕರಾದ ಸಿ.ಹೆಚ್. ಮಹಮ್ಮದ್ ಅಶ್ರಫ್ ಚಂಡಮೂಲೆ ಅವರಿಗೆ ಗ್ರಾಮ ಪಂಚಾಯತ್ ವತಿಯಿಂದ ನೀಡಲಾಗುವ ಅತ್ಯುತ್ತಮ ಕೃಷಿಕ ಹಾಗೂ ಹೈನುಗಾರಿಕೆ ಪ್ರಶಸ್ತಿಯು ಗ್ರಾಮ ಪಂಚಾಯತ್‌ನಲ್ಲಿ ನಡೆದ ಕೃಷಿ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೂಲತಃ ಪರಪ್ಪೆಯವರಾದ ಅಶ್ರಫ್‌ರವರು ಅತ್ಯುತ್ತಮ ಪ್ರಗತಿ ಪರ ಕೃಷಿಕರು ಹಾಗೂ ಉತ್ತಮ...

ಕರಿಕೆಯ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿ ಡಾ.ಪಲ್ಲವಿ ಕೆ.ಸಿ. ನೇಮಕ

ಕರ್ನಾಟಕ ಸರ್ಕಾರದ ಆಯುಷ್ ಇಲಾಖೆಗೆ ಕೆಪಿಎಸ್ಸಿ ಮೂಲಕ ನೇಮಕಾತಿ ನಡೆದಿದ್ದು, ಡಾ. ಪಲ್ಲವಿ ಕೆ.ಸಿ.ಯವರು ಮಡಿಕೇರಿ ತಾಲ್ಲೂಕಿನ ಕರಿಕೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಸೇವೆಗೆ ನೇಮಕಾತಿಗೊಂಡಿದ್ದಾರೆ.ಮೂಲತಃ ಸುಳ್ಯ ತಾಲ್ಲೂಕಿನ ಅರಂತೋಡು ಗ್ರಾಮದ ಕರಿ0ಬಿ ಮನೆ ಚಿನ್ನಪ್ಪ ಗೌಡ ಮತ್ತು ಪುಷ್ಪಾವತಿ ಶಿಕ್ಷಕ ದಂಪತಿಗಳ ಪುತ್ರಿಯಾಗಿರುವ ಇವರು, 2006ರಿಂದ 2021ವರೆಗೆ ಸುದೀರ್ಘ 15 ವರ್ಷಗಳ ಕಾಲ ಕೊಲ್ಲಮೊಗ್ರ...

ಅಮರ ಮುಡ್ನೂರು : ಸುಳ್ಯ ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆ

ಸುಳ್ಯ ಅಮರ ಸಂಘಟನಾ ಸಮಿತಿಯ ವಾರ್ಷಿಕ ಮಹಾಸಭೆಯು ಆ. 14 ರಂದು ಅಮರ ಮುಡ್ನೂರು ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕುಸುಮಾಧರ ರವರು ವಹಿಸಿದ್ದರು. ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷ ಕುಸುಮಾಧರ ಹುಟ್ಟೂರು, ಅಧ್ಯಕ್ಷ ಪ್ರವೀಣ್ ಕುಲಾಲ್ ಪೈಲಾರ್, ಉಪಾಧ್ಯಕ್ಷ ಜಯಪ್ರಸಾದ್ ಸಂಕೇಶ, ಕಾರ್ಯದರ್ಶಿ ಭವಿತ ಬೇರಿಕೆ, ಜತೆಕಾರ್ಯದರ್ಶಿ...

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ಅರ್ಜಿ ಆಹ್ವಾನ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪರಿಹಾರ ಪಡೆಯಲು ರೈತರು ಕಡ್ಡಾಯವಾಗಿ ನಾಗರಿಕಾ ಸೇವಾ ಕೇಂದ್ರದಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ಅಥವಾ http://pmkisan.gov.in or ಪಾರ್ಮಸ್ರ ಕಾರ್ನರ್ ಮೂಲಕ ಆಧಾರ್ ಸಂಖ್ಯೆ ದಾಖಲಿಸಿ ಆಗಸ್ಟ್-31ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸದಿದ್ದಲ್ಲಿ ರೈತರ ಆರ್ಥಿಕ ನೆರವು ಸ್ಥಗಿತಗೊಳಿಸಲಾಗುವುದು. ಸುಳ್ಯ ತಾಲೂಕಿನ 3182 ರೈತ ಫಲಾನುಭವಿಗಳು ಇ-ಕೆವೈಸಿ ಮಾಡಲು ಬಾಕಿ...

ಗೃಹರಕ್ಷಕರನ್ನು ಜೀವರಕ್ಷಕರಾಗಿಸೋಣ:
ಡಾ: ಕಿಶನ್ ರಾವ್ ಬಾಳಿಲ

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮತ್ತು ಪೌರರಕ್ಷಣಾ ಪಡೆ ಇದರ ಸಂಯುಕ್ತ ಆಶ್ರಯದಲ್ಲಿ ಜೀವರಕ್ಷಾ ಟ್ರಸ್ಟ್ ಮತ್ತು ಫಾದರ್ ಮುಲ್ಲರ್ ಆಸ್ಪತ್ರೆ, ಮಂಗಳೂರು ಇವರ ಸಹಯೋಗದೊಂದಿಗೆ ಆ.19 ಶುಕ್ರವಾರದಂದು ಮಂಗಳೂರು ನಗರದ ಮೇರಿಹಿಲ್‌ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ಗೃಹರಕ್ಷಕರಿಗೆ ಹೃದಯ ಸ್ತಂಭನ ಮರುಪೂರಣ ಕೌಶಲ್ಯ ತರಬೇತಿ ಶಿಬಿರ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ...

ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಪೆರುವಾಜೆ ಶಾಲಾ ಆವರಣದಲ್ಲಿ ಸಸಿ ನೆಟ್ಟ ಭಾವೈಕ್ಯ ಯುವಕ ಮಂಡಲದ ಸದಸ್ಯರು

ಭಾವೈಕ್ಯ ಯುವಕ ಮಂಡಲದ ಸದಸ್ಯರಿಂದ ಪೆರುವಾಜೆ ಶಾಲಾ ಆವರಣದಲ್ಲಿ ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಇಂದು ಸಸಿ ನೆಡಲಾಯಿತು. ಈ ಸಂದರ್ಭದಲ್ಲಿ ಪೆರುವಾಜೆ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ತೇಜಪ್ಪ, ಭಾವೈಕ್ಯ ಯುವಕ ಮಂಡಲದ ಸದಸ್ಯರಾದ ರಜನೀಶ್ ಪೆರುವಾಜೆ, ಜಗನ್ನಾಥ ಪೆರುವಾಜೆ, ಹರ್ಷಿತ್ ಪೆರುವಾಜೆ ಉಪಸ್ಥಿತರಿದ್ದರು.

ಅರಂತೋಡು: ಕಲ್ಲುಗದ್ದೆ ಶೇಷಪ್ಪ ಮಾಸ್ಟರ್ ನಿಧನ

ಅರಂತೋಡು ಗ್ರಾಮದ, ಕಲ್ಲುಗದ್ದೆ ಶೇಷಪ್ಪ ಮಾಸ್ಟರ್ (ವ.98)ರವರು ಅಲ್ಪಕಾಲದ ಅಸೌಖ್ಯದಿಂದ ಆ.18ರಂದು ಬೆಳಿಗ್ಗೆ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರರಾದ ನಿವೃತ್ತ ಶಿಕ್ಷಕ ಚಂದ್ರಶೇಖರ ಮಾಸ್ಟರ್ ಕಲ್ಲುಗದ್ದೆ, ವಸಂತ ಕಲ್ಲುಗದ್ದೆ, ನಿವೃತ್ತ ಶಿಕ್ಷಕ ಶಾಂತರಾಮ ಮಾಸ್ಟರ್ ಐವರ್ನಾಡು, ದುಗಲಡ್ಕ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ವೆಂಕಟ್ರಮಣ ಮಾಸ್ಟರ್, ಪುತ್ರಿಯರಾದ ದಮಯಂತಿ ಶಿವಪ್ಪ ಐವರ್ನಾಡು,...
Loading posts...

All posts loaded

No more posts

error: Content is protected !!