ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಬಡ ಕುಟುಂಬಕ್ಕೆ ಧನಸಹಾಯ

ನಂದಗೋಕುಲ(ರಿ.) ಟ್ರಸ್ಟ್ ವತಿಯಿಂದ ಪುತ್ತೂರು ತಾಲೂಕಿನ ಪಂಜಿಗುಡ್ಡೆಯಲ್ಲಿ ತೀರಾ ಬಡತನ ಹಾಗೂ ಅನೇಕ ವರ್ಷದಿಂದ ಆರೋಗ್ಯ ಸಮಸ್ಯೆ ಇರುವ ಕುಶಾಲಪ್ಪ ರವರ ಕುಟುಂಬದವರಿಗೆ 25000 ರೂ.ಗಳ ಧನಸಹಾಯ ಮಾಡಲಾಯಿತು. ಈ ಸಂದರ್ಭ ಬನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಗೀತಾ, ಸದಸ್ಯರಾದ ರಮಣಿ ಗಾಣಿಗ ಹಾಗೂ ನಂದಗೋಕುಲ ಟ್ರಸ್ಟ್ ಸಂಘದ ಅಧ್ಯಕ್ಷರಾದ ಕಾರ್ತಿಕ್, ಕಾರ್ಯದರ್ಶಿಯರಾದ ಲಿಖಿತಾ...

ಸುಬ್ರಹ್ಮಣ್ಯ: ನಮ್ಮ ಬಿ.ಎ ಬಳಗದ ಆರನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮ – ಯುವ ತೇಜಸ್ಸು ಟ್ರಸ್ಟ್ ಗೆ ಧನಸಹಾಯ ಹಸ್ತಾಂತರ

ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯದ 2015-2016ನೇ ಸಾಲಿನ ಹಿರಿಯ ವಿದ್ಯಾರ್ಥಿವೃಂದ 'ನಮ್ಮ ಬಿ.ಎ ಬಳಗ' ಇದರ 6ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅ.23ರಂದು ನಮ್ಮ ಬಿ.ಎ. ಬಳಗದ ಸದಸ್ಯೆ ಗಾಯತ್ರಿ ಕೈಕಂಬ ರವರ ಮನೆಯಲ್ಲಿ ನಡೆಯಿತು. ಗೆಳೆಯರೆಲ್ಲರ ಒಟ್ಟುಗೂಡುವಿಕೆಯೊಂದಿಗೆ ಪ್ರತಿ ವರ್ಷದಂತೆ ಹರಟೆ ತಮಾಷೆಗಳೊಂದಿಗೆ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ನಡೆದ ಸಭಾ ಕಾರ್ಯಕ್ರಮದಲ್ಲಿ...
Ad Widget

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅ.25 ರಂದು ಕುಕ್ಕೆ ಕ್ಷೇತ್ರದಲ್ಲಿ ಯಾವುದೇ ಸೇವೆಯಿಲ್ಲ

ಅಕ್ಟೋಬರ್ 25ರಂದು ಸೂರ್ಯಗ್ರಹಣ ಇರುವುದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ ದಿನ ಯಾವುದೇ ಸೇವೆಗಳು, ಭೋಜನ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಅಕ್ಟೋಬರ್ 26ರಂದು ದೇವರ ನಿತ್ಯದ ಪೂಜಾ ಸಮಯಗಳಲ್ಲಿ ವ್ಯತ್ಯಯವಾಗುವುದರಿಂದ ಬೆಳಗ್ಗೆ 9ರಿಂದ ಭಕ್ತರಿಗೆ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಸುಬ್ರಹ್ಮಣ್ಯ :- ಭಾರತೀಯ ಮಜ್ದೂರ್ ಸಂಘದ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿ ರಚನೆ

ಭಾರತೀಯ ಮಜ್ದೂರ್ ಸಂಘ ಕಡಬ ತಾಲೂಕು, ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ಕಾಮಗಾರಿ ಮಜ್ದೂರ್ ಸಂಘ ಸುಬ್ರಹ್ಮಣ್ಯ ವಲಯದ ಗ್ರಾಮ ಸಮಿತಿಯನ್ನು ಅ.16 ರಂದು ರಚನೆ ಮಾಡಲಾಯಿತು. ನೂತನ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಗಿರೀಶ್ ಆಚಾರ್ಯ ಪೈಲಾಜೆ, ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಮಾನಾಡು ದೇವರಗದ್ದೆ, ಉಪಾಧ್ಯಕ್ಷರಾಗಿ ಬೆಳ್ಯಪ್ಪ ಆಚಾರ್ಯ ಐನೆಕಿದು, ಕೋಶಾಧಿಕಾರಿಯಾಗಿ ಗಿರೀಶ್ ಆಚಾರ್ಯ...

ಕೊಡಿಯಾಲ: ಅಂಗಾರ ಕಲ್ಲಗದ್ದೆ ನಿಧನ

ಕೊಡಿಯಾಲ ಗ್ರಾಮದ ಕಲ್ಲಗದ್ದೆ ನಿವಾಸಿ ಅಂಗಾರ ರವರು ಅಸೌಖ್ಯದಿಂದ ಅ.15ರಂದು ನಿಧನರಾದರು. ಅವರಿಗೆ ಸುಮಾರು 45 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಯಮುನಾ, ಮಗಳು ದೀಪಿಕಾ ಮತ್ತು ಮಗ ಶ್ರೇಯಸ್ಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಜೇಸಿ ಲಿಂಗಪ್ಪ ಬೆಳ್ಳಾರೆಯವರಿಗೆ ಕಲಾರತ್ನ ಪ್ರಶಸ್ತಿ

ಬೆಳ್ಳಾರೆ ಜೇಸಿಯ ಪೂರ್ವಾಧ್ಯಕ್ಷರಾದ ಲಿಂಗಪ್ಪಬೆಳ್ಳಾರೆಯವರು ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅ.16 ರಂದು ಜೇಸಿಐ ಬೆಳಣ್ ನಲ್ಲಿ ನಡೆಯುವ ವ್ಯವಹಾರ ಸಮ್ಮೇಳನದಲ್ಲಿ ಪಂಚರತ್ನ ಪ್ರಶಸ್ತಿಗಳಲ್ಲಿ ಒಂದಾದ ಕಲಾರತ್ನ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇವರು ಜೇಸೀ ವಲಯ ತರಬೇತುದಾರರಾಗಿ ಹಲವಾರು ತರಬೇತಿಗಳನ್ನು ನೀಡಿರುತ್ತಾರೆ.ನಾಯಕತ್ವ ಗುರಿ ನಿರ್ಧಾರ, ಮಾನವೀಯ ಸಂಬಂಧಗಳು ಮೊದಲಾದ ಅನೇಕ ತರಬೇತಿ ನೀಡಿರುತ್ತಾರೆ.ಹವ್ಯಾಸಿ ಯಕ್ಷಗಾನ...

ಸುಳ್ಯ : ಶಬ್ದದೊಂದಿಗೆ ಕಂಪಿಸಿದ ಭೂಮಿ

ತಾಲೂಕಿನ ಮರ್ಕಂಜದ ಭಾಗದಲ್ಲಿ ಇಂದು ಮುಂಜಾನೆ 5.30ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂ ಕಂಪನದ ಅನುಭವವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮರ್ಕಂಜ ಭಾಗದ ಕೆಲವು ಕಡೆ ಹಾಗೂ ನೆಲ್ಲೂರು ಕೆಮ್ರಾಜೆ, ದೇವಚಳ್ಳ ಗ್ರಾಮದ ಕೆಲವು ಕಡೆಗಳಲ್ಲಿ ಈ ಅನುಭವವಾಗಿದ್ದು, ಭಾರೀ ಶಬ್ದ ಉಂಟಾಗಿ ಕೆಲ ಸಮಯ ಕಂಪನವಾದ ಅನುಭವವಾಗಿದೆ ಎಂದು ತಿಳಿದು ಬಂದಿದೆ.

ಕಳಂಜ: ಸುನಂದಾ ಪಟ್ಟೆ ನಿಧನ

ಕಳಂಜ ಗ್ರಾಮದ ಪಟ್ಟೆ ಶಿವಪ್ಪ ಪೂಜಾರಿಯವರ ಪತ್ನಿ ಶ್ರೀಮತಿ ಸುನಂದಾ ಪಟ್ಟೆಯವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪತಿ ಶಿವಪ್ಪ ಪೂಜಾರಿ, ಪುತ್ರರಾದ ಭಾಸ್ಕರ, ಸದಾನಂದ, ಪ್ರಶಾಂತ್ ಹಾಗೂ ಪುತ್ರಿಯರಾದ ಅರುಣಾ ಪೈಚಾರು, ಉಮಾವತಿ ಮಾಡಾವು ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ನೆಲ್ಲೂರು ಕೆಮ್ರಾಜೆ : ನಿವೃತ್ತ ಬಿಲ್ ಕಲೆಕ್ಟರ್ ನಾರಾಯಣ ನಾಯ್ಕರಿಗೆ ಬೀಳ್ಕೋಡುಗೆ

ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ನ ನಿವೃತ್ತ ಬಿಲ್ ಕಲೆಕ್ಟರ್ ನಾರಾಯಣ ನಾಯ್ಕ ಮುಂಡೋಕಜೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಅ.7 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ.ಅಧ್ಯಕ್ಷೆ ಶೀಲಾವತಿ ಬೊಳ್ಳಾಜೆ ವಹಿಸಿದ್ದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿನ ಮಾಜಿ ಅಧ್ಯಕ್ಷರುಗಳಾದ ದಿವಾಕರ ನಾಯಕ್, ಶುಭಕರ ನಾಯಕ್, ರಾಧಾ ಕಿಲಾರ್ಕಜೆ, ಮಾಜಿ ಉಪಾಧ್ಯಕ್ಷರು, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ ಸಂಘದ...

ಗುತ್ತಿಗಾರು : ಪೋಲಿಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ – ನಿರೀಕ್ಷೆಗೂ ಮೀರಿ ಆಗಮಿಸಿದ ಯುವಕ ಯುವತಿಯರು

ಗುತ್ತಿಗಾರು ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೊಲೀಸ್ ಇಲಾಖಾ ಪರೀಕ್ಷೆಯ ಬಗ್ಗೆ ತರಬೇತಿ ಕಾರ್ಯಕ್ರಮ ಇಂದು ನಡೆಯಿತು. ಮಾಹಿತಿ ಕಾರ್ಯಾಗಾರವನ್ನು ಬೆಂಗಳೂರಿನ ಸುಬ್ರಹ್ಮಣ್ಯ ನಗರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ನಡೆಸಿಕೊಟ್ಟರು. ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಪಂಚಾಯತ್ ಪಿ. ಡಿ. ಓ. ಧನಪತಿ ನಿವೃತ್ತ ದೈ. ಶಿ....
Loading posts...

All posts loaded

No more posts

error: Content is protected !!