ಪೆರಾಜೆ : ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ಕೊಡಗು ಮತ್ತು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಕೊಕ್ಕೋ ಬೆಳೆಯ ಸಮಗ್ರ ನಿರ್ವಹಣೆ ಮತ್ತು ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ ಬಗ್ಗೆ ವಿಚಾರಗೋಷ್ಠಿ ಮತ್ತು ಪ್ರಾತ್ಯಕ್ಷಿಕೆಯು ಡಿ.14 ರಂದು ಸಹಕಾರ ಸದನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಹಾಗೂ ತಾಲೂಕು ಸಾಗುವುಳಿ...

ಪರಪ್ಪೆ ಬಳಿ ಕಾರು ಅಪಘಾತ – ತಾಯಿ,ಮಗು ಮೃತ್ಯು

ಜಾಲ್ಸೂರು ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಮದುವೆ ದಿಬ್ಬಣದ ಇನೋವಾ ಕಾರು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಸುಳ್ಯ ಮೂಲದ ತಾಯಿ ಮತ್ತು ಮಗುಮೃತಪಟ್ಟು ನಾಲ್ವರು ತೀವ್ರ ಜಖಂಗೊಂಡ ಘಟನೆ ಡಿ12 ರಂದು ಸಂಜೆ ನಡೆದಿದೆ. ಸುಳ್ಯದ ನಾವೂರು ಬೋರುಗುಡ್ಡೆ ನಿವಾಸಿ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ೨೮ ವರ್ಷದ...
Ad Widget

ಬೆಳ್ಳಾರೆ ಕೆಪಿಎಸ್ ಶಾಲಾ ಮುಖ್ಯೋಪಾಧ್ಯಾಯ
ಮಾಯಿಲಪ್ಪರಿಗೆ ‘ಅಕ್ಷರ ಸಿರಿ ರಾಜ್ಯ ಪ್ರಶಸ್ತಿ’

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಕೊಡಮಾಡುವ `ಅಕ್ಷರ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳ್ಳಾರೆ ಕೆ.ಪಿ.ಎಸ್. ಶಾಲಾ ಮುಖ್ಯೋಪಾಧ್ಯಾಯರಾದ ಮಾಯಿಲಪ್ಪರವರು ಭಾಜನರಾಗಿದ್ದು, ನ.೩೦ರಂದು ತುಮಕೂರಿನ ತಿಪಟೂರಿನಲ್ಲಿ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮಾವೇಶದಲ್ಲಿ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಪ್ರಶಸ್ತಿ ಪ್ರದಾನಗೈದರು.ಮಾಯಿಲಪ್ಪರು ೨೦೨೨ನೇ ಸಾಲಿನ ದ.ಕ. ಜಿಲ್ಲಾ ಶಿಕ್ಷಕ ಪ್ರಶಸ್ತಿ ಪಡೆದಿದ್ದರಲ್ಲದೆ, ಹಲವು ಸಂಘ ಸಂಸ್ಥೆಗಳು...

ಶಿಕ್ಷಣದಲ್ಲಿ ಭಾರತೀಯ ಕೌಶಲ್ಯಗಳಿಗೆ ಒತ್ತು ಕೊಡಿ:
ಶ್ರೀ ಶ್ರೀ ವಿದ್ಯಾ ಪ್ರಸನ್ನ ಸ್ವಾಮೀಜಿ

*ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಹಾಗೂ ಶ್ರೀ ವೇದವ್ಯಾಸ ವಿದ್ಯಾಲಯ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ* ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಇದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕೆಲಸ ಶಿಕ್ಷಕರಿಂದ ಹಾಗೂ ಹೆತ್ತವರಿಂದ ಆಗಬೇಕು. ಪ್ರತಿಭೆಯ ಅನಾವರಣ ಆಗಬೇಕಾದರೆ ಸತತ ಸಾಧನೆ ಅಗತ್ಯ. ಶಿಕ್ಷಣದಲ್ಲಿ ಭಾರತೀಯ ಕೌಶಲ್ಯಗಳಿಗೆ ಹೆಚ್ಚು ಒತ್ತು ಕೊಡಬೇಕು. ಬಾಲ್ಯದಿಂದಲೇ ಮಕ್ಕಳಿಗೆ...

ದೈವ ನರ್ತನ, ಕೊಳಲುವಾದನ, ಯಕ್ಷಗಾನಕ್ಕೂ ಸೈ – ಈ ಸಕಲ ಕಲಾ ವಲ್ಲಭ ವಿಜಿತ್ ಮೈತಡ್ಕ

ಮುಂದೆ ಗುರಿ, ಹಿಂದೆ ಗುರು ಇದ್ದು ಸಾಧಿಸುವ ಛಲ ಇದ್ದರೆ ಸಾಧಕನಿಗೆ ಸಾಧನೆ ಅಸಾಧ್ಯವಲ್ಲ ಎಂಬ ಮಾತು ಜನಜನಿತ. ಆದರೆ ಹಿಂದೆ ಗುರುವಿಲ್ಲದಿದ್ದರೂ ಸಾಧನೆಯ ಹುಮ್ಮಸ್ಸು, ಗಮ್ಯ ತಲುಪಲು ಬೇಕಾದ ಪ್ರಯತ್ನ, ಶ್ರದ್ಧೆ ಇದ್ದರೆ ಯಾವುದೇ ಕಲೆಯನ್ನು ಸಿದ್ಧಿಸಿಕೊಂಡು ಪ್ರಸಿದ್ಧಿ ಪಡೆಯಬಹುದೆಂದು ತೋರಿಸಿಕೊಟ್ಟವರು ತಾಲೂಕಿನ ಮಂಡೆಕೋಲು ಗ್ರಾಮದ ಮೈತಡ್ಕದ ವಿಜಿತ್ ಕುಮಾರ್. ದೈವ ನರ್ತನ ವೃತ್ತಿಯ...

ಆದಿ ಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯದಲ್ಲಿ ಗ್ರಾಮ ವಾಸ್ತವ್ಯ

ಡಿಸೆಂಬರ್ 20, 21, 22ರಂದು ಆದಿ ಚುಂಚನಗಿರಿ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಸುಳ್ಯ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅವರ ಆಗಮನ ಸುಳ್ಯದ ನಮ್ಮ ಕುಲ ಬಾಂಧವರಿಗೆ ಒದಗಿ ಬಂದ ಯೋಗ ಭಾಗ್ಯವೆಂದು ಪರಿಗಣಿಸಿ, ನಾವೆಲ್ಲರೂ ಏಕ ಮನಸ್ಸಿನಿಂದ ಒಗ್ಗಟ್ಟಾಗಿ ಪೂಜ್ಯರ ಆಗಮನದ...

ಶುಭವಿವಾಹ: ಚಿ|ರಾ|ಭಾಸ್ಕರ – ಚಿ|ಸೌ|ಚೈತ್ರಾ

ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ತಿಮ್ಮಣ್ಣ ನಾಯ್ಕರ ಸುಪುತ್ರ ಚಿ|ರಾ|ಭಾಸ್ಕರ ರವರ ವಿವಾಹವು ಬಂಟ್ವಾಳ ತಾಲೂಕು ನೆಟ್ಲಮುಡ್ನೂರು ಗ್ರಾಮದ ಪಂತಡ್ಕ ಶ್ರೀ ಸೇಸಪ್ಪ ನಾಯ್ಕರ ಸುಪುತ್ರಿ ಚಿ|ಸೌ|ಚೈತ್ರಾ ರವರೊಂದಿಗೆ ಡಿ.04ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಶುಭವಿವಾಹ: ಚಿ|ಪ್ರಸಾದ – ಚಿ|ಸೌ|ಅಶ್ವಿನಿ

ಬೆಳ್ಳಾರೆ (ಕೊಳ್ತಿಗೆ) ಶ್ರೀಮತಿ ಸುಮತಿ ಮತ್ತು ಶ್ರೀ ಸತ್ಯನಾರಾಯಣ ಆಚಾರ್ಯರ ಸುಪುತ್ರ ಚಿ|ಪ್ರಸಾದ ರವರ ವಿವಾಹವು ಕಯ್ಯಾರು ಶ್ರೀಮತಿ ಆಶಾ ಮತ್ತು ಶ್ರೀ ಚಂದ್ರಶೇಖರ ಆಚಾರ್ಯರ ಸುಪುತ್ರಿ ಚಿ|ಸೌ|ಅಶ್ವಿನಿ ರವರೊಂದಿಗೆ ಡಿ.02 ಶುಕ್ರವಾರದಂದು ಪುತ್ತೂರಿನ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆಯಿತು.

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ : ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನ

ಚೊಕ್ಕಾಡಿ ವಿದ್ಯಾ ಸಂಸ್ಥೆಗಳು ಕುಕ್ಕುಜಡ್ಕ ಮತ್ತು ಅಮರ ತರಂಗ ಸುಳ್ಯ ಇದರ ಸಹಯೋಗದೊಂದಿಗೆ ಜಿಂದಾಲ್ ಅಲ್ಯೂಮಿನಿಯಂ ಕಂಪನಿಯ ಉದಾರ ಕೊಡುಗೆಯಾದ ನೂತನ ಶೌಚಾಲಯ ಕಟ್ಟಡ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಅಮರ ಸುಳ್ಯದ ಸಮರ ನಾಯಕ ಕೆದಂಬಾಡಿ ರಾಮಯ್ಯ ಗೌಡ ನಾಟಕ ಪ್ರದರ್ಶನವು ನವಂಬರ್ 30ರಂದು ಕುಕ್ಕುಜಡ್ಕ ವಿದ್ಯಾಸಂಸ್ಥೆಯ ಸುವರ್ಣ ರಂಗ ಸಭಾಭವನದಲ್ಲಿ ನಡೆಯಿತು. ಮೀನುಗಾರಿಕೆ, ಬಂದರು...

ಮಡಪ್ಪಾಡಿಯಲ್ಲಿ ಲಘು ಭೂಕಂಪನ – ಭಾರಿ ಶಬ್ದ

ಮಡಪ್ಪಾಡಿಯಲ್ಲಿ ಭೂಕಂಪನವಾಗಿರುವ ಬಗ್ಗೆ ವರದಿಯಾಗಿದ್ದು, ಗ್ರಾಮದ ಕಡ್ಯ, ಹಾಡಿಕಲ್ಲು ಪ್ರದೇಶದಲ್ಲಿ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿರುವುದಾಗಿ ತಿಳಿದು ಬಂದಿದೆ. ಹಲವರಿಗೆ ಶಬ್ದ ಕೇಳಿರುವ ಬಗ್ಗೆ, ಕಂಪನದ ಅನುಭವವಾಗಿರುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. 7.30 ರ ಸಮಯದಲ್ಲಿ ದೊಡ್ಡ ಸದ್ದು ದೇವಚಳ್ಳ ಭಾಗದಲ್ಲೂ ಕೇಳಿಸಿದೆ ಎಂದು ತಿಳಿದುಬಂದಿದೆ.
Loading posts...

All posts loaded

No more posts

error: Content is protected !!