ಕುಕ್ಕೆ ದೇವಳಕ್ಕೆ ಬ್ಯಾಂಕ್ ಆಪ್ ಬರೋಡಾದಿಂದ ಕಂಪ್ಯೂಟರ್ ಕೊಡುಗೆ

ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಾಗರಪಂಚಮಿಯ ಶುಭ ದಿನ ಬ್ಯಾಂಕ್ ಆಫ್ ಬರೋಡಾದಿಂದ ಗಣಕಯಂತ್ರಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ಹಾಗೂ ಝೋನಲ್ ಹೆಡ್ ಶ್ರೀಮತಿ ಗಾಯತ್ರಿ.ಆರ್ಅವರು ಶ್ರೀ ದೇವಳಕ್ಕೆ ಸುಮಾರು ೧ ಲಕ್ಷದ ೨೫ ಸಾವಿರ ಮೌಲ್ಯದ ೫ ಕಂಪ್ಯೂಟರ್‌ಗಳನ್ನು ಮಂಜೂರಾತಿಗೊಳಿಸಿದ್ದರು. ಆ.21...

ಅಂಬೆಕಲ್ಲು : ನಾಗರ ಪಂಚಮಿ ಆಚರಣೆ

ನಾಗರ ಪಂಚಮಿಯ ಅಂಗವಾಗಿ ಎಲಿಮಲೆ ಅಂಬೆಕಲ್ಲು ತರವಾಡು ಮನೆಯಲ್ಲಿ ನಾಗನ ಕಲ್ಲಿಗೆ ಪೂಜೆ ಹಾಗೂ ಹಾಲು ಎರೆಯುವ ಕಾರ್ಯಕ್ರಮ ನಡೆಯಿತು. ಕುಟುಂಬದ ಸದಸ್ಯರು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.
Ad Widget

ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ ವಿಧಿಸಿದ ನ್ಯಾಯಾಲಯ

ಸುಳ್ಯದಲ್ಲಿ ಇಂದು ಲೋಕಾಯುಕ್ತ ಇಲಾಖೆ ಮಿಂಚಿನ ದಾಳಿ ನಡೆಸಿ ಲಂಚ ಸ್ವೀಕರಿಸಿದ ಗ್ರಾಮ ಆಡಳಿತಾಧಿಕಾರಿಯನ್ನು ಖೆಡ್ಡಕ್ಕೆ ಬೀಳಿಸಿದ್ದು, ಇದೀಗ ನ್ಯಾಯಮೂರ್ತಿ ಸೌಮ್ಯ ಜೆ ಎಮ್ ಎಫ್ ಸಿ 3ನೇ ಬೆಂಚು ಇವರ ಮುಂದೆ ಹಾಜರುಪಡಿಸಿದ್ದು ಗ್ರಾಮ ಆಡಳಿತಾಧಿಕಾರಿ ಮಿಯಾಸಾಬ್ ಮುಲ್ಲಾ ಅವರಿಗೆ ಅ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಕಾರಾಗೃಹಕ್ಕೆ ಕಳುಹಿಸಿದ್ದಾರೆ ಎಂದು...

ಸರಕಾರಿ ಪ್ರೌಢ ಶಾಲೆ ಎಣ್ಮೂರು: ತಾಲೂಕು ಮಟ್ಟದ ಪಿ.ಎಂ.ಪೋಷಣ್ ಪೂರಕ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮ – ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ

"ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸುವ ಮೂಲಕ ಸದೃಢ ಹಾಗೂ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ಬೆಳೆಯಬೇಕು" ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಅವರು ತಾಲೂಕು ಪಂಚಾಯತ್ ಸುಳ್ಯ, ಶಾಲಾ ಶಿಕ್ಷಣ ಇಲಾಖೆ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರೌಢ...

ಸುಳ್ಯದಲ್ಲಿ ಅದೈತ್ ಹುಂಡೈ ಶೋರೂಂ ಶುಭಾರಂಭ

ಸುಳ್ಯದ ಓಡಬಾಯಿಯಲ್ಲಿ ಅದೈತ ಹುಂಡೈ ಚತುಶ್ಯಕ್ರ ವಾಹನದ ಶೋರೂಂ ಆ. 18ರಂದು ಧನಲಕ್ಷ್ಮೀ ಪೂಜೆ, ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಆ. 17ರಂದು ಸಂಜೆ ವಾಸ್ತುಹೋಮ ಮತ್ತು ಸುದರ್ಶನ ಹೋಮ ನೆರವೇರಿತು. ಈ ಶುಭಸಂದರ್ಭದಲ್ಲಿ ಸಂಸ್ಥೆಯಸರ್ವಿಸ್ ವಿಭಾಗದ ಮುಖ್ಯಸ್ಥರಾದ ಶಶಿಕಾಂತ್ ಶೆಟ್ಟಿ, ಮಾರಾಟ ವಿಭಾಗದ ಮುಖ್ಯಸ್ಥರಾದ ಶಿವಪ್ರಸಾದ್, ಮಂಗಳೂರು ವಿಭಾಗದ ಅಕೌಂಟ್ಸ್ ಮ್ಯಾನೇಜರ್ ಸುಧಾಕರ್, ಸುಳ್ಯ ಸೇಲ್ಸ್...

ರಸ್ತೆ ಬದಿ ತ್ಯಾಜ್ಯ ಎಸೆದವರ ವಿರುದ್ದ ಕ್ರಮ ಕೈಗೊಳ್ಳದ ಪಂಚಾಯತ್

ಆಲೆಟ್ಟಿ ಗ್ರಾಮದ ಅರಂಬೂರು ಮುಖ್ಯ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದನ್ನು ಸ್ಥಳೀಯ ಗ್ರಾ.ಪಂ.ಸದಸ್ಯರಾದ ಸುಧೀಶ್ ಅರಂಬೂರು ಇವರ ನೇತೃತ್ವದಲ್ಲಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿಸಿದ್ದರು. ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಕವರ್ ನಲ್ಲಿ ತಂದು ಸುರಿದಿದ್ದು ಅದರಲ್ಲಿ ಅವರ ಹೆಸರು ಇದೆ ಅವೆಲ್ಲವನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿ ತಿಂಗಳುಗಳೇ ಮೂರು ಕಳೆದರು ಇನ್ನು ಕ್ರಮ...

ಸುಳ್ಯ : ರಸ್ತೆಯಲ್ಲೇ ಹರಿಯುತ್ತಿದೆ ಒಳಚರಂಡಿ ನೀರು – ಇದು ನಗರಾಡಳಿತದ ಸ್ವಚ್ಚತೆಗೆ ಹಿಡಿದ ಕೈಗನ್ನಡಿಯೇ?

ಸುಳ್ಯ ರಥಬಿದಿಯಿಂದ ಕೆರೆಮೂಲೆ ತೆರಳುವ ರಸ್ತೆಯಲ್ಲಿ ಇದೀಗ ಕೊಳಚೆ ನೀರು ಹರಿಯುತ್ತಿದೆ . ತಾಲೂಕಿನಾದ್ಯಾಂತ ಎಲ್ಲೆಡೆ ವೈರಲ್ ಫಿವರ್ ಬರುತ್ತಿದ್ದು ಈ ಕುರಿತಂತೆ ಆರೋಗ್ಯ ಇಲಾಖೆ ಮನೆ ಮನೆ ತೆರಳಿ ನೀರು ನಿಲ್ಲದಂತೆ ಶುಚಿತ್ವದ ಬಗ್ಗೆ ಮಾಹಿತಿ ನೀಡುತ್ತಿದೆ. ಆದರೆ ತಾಲೂಕು ಆಡಳಿತ ಹಾಗೂ ಎಲ್ಲಾ ಇಲಾಖೆಗಳು ಇಲ್ಲೆ ಇದ್ದರೂ ಸುಳ್ಯದ ಚರಂಡಿ ಸಮಸ್ಯೆಯ ಕುರಿತಾಗಿ...

ಸುಬ್ರಹ್ಮಣ್ಯ : ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮ

ಶ್ರೀ ವಾಣಿ ವನಿತಾ ಸಮಾಜ(ರಿ) ಸುಬ್ರಮಣ್ಯ, ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ(ರಿ) ಸುಳ್ಯ, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ (ರಿ) ಸುಬ್ರಮಣ್ಯ, ಅಂಬಿಕಾ ಗೊಂಚಲು ಸಮಿತಿ ಸುಬ್ರಮಣ್ಯ (ಸ್ತ್ರೀಶಕ್ತಿ), ಅಂಗನವಾಡಿ ಕೇಂದ್ರ ಸುಬ್ರಮಣ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಟಿದ ಗಮ್ಮತ್ ಕಾರ್ಯಕ್ರಮವನ್ನು ಸುಬ್ರಮಣ್ಯ ಅಂಗನವಾಡಿ ಕೇಂದ್ರದಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಸುಬ್ರಹ್ಮಣ್ಯ ಪ್ರೆಸ್...

ಸೇವಾಜೆ : ಶ್ರೀಕೃಷ್ಣ ಸಾಂಸ್ಕ್ರತಿಕ ಸೇವಾ  ಸಮಿತಿ ಪುನರ್ ರಚನೆ – ಅಧ್ಯಕ್ಷರಾಗಿ ರಕ್ಷಿತ್ ಪಟ್ಟೆ, ಕಾರ್ಯದರ್ಶಿಯಾಗಿ ಮೋಹನ ಹೊನ್ನೆಮೂಲೆ

ಸೇವಾಜೆ ಶ್ರೀಕೃಷ್ಣ ಸಾಂಸ್ಕ್ರತಿಕ ಸೇವಾ  ಸಮಿತಿ  ಇದರ   ನೂತನ ಪದಾಧಿಕಾರಿಗಳನ್ನು ಆ.13 ರಂದು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರಕ್ಷಿತ್ ಪಟ್ಟೆ, ಕಾರ್ಯದರ್ಶಿಯಾಗಿ ಮೋಹನ ಹೊನ್ನೆಮೂಲೆ ಉಪಾಧ್ಯಕ್ಷರಾಗಿ ಹಿತೇಶ್ ಬೊಮ್ಮೆಟ್ಟಿ, ಉಪ ಕಾರ್ಯದರ್ಶಿಯಾಗಿ ರೋಹಿತ್ ಮಂಜೊಳ್ಕಜೆ ಇವರುಗಳನ್ನು ಸದಸ್ಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಶ್ರೀ ಕೃಷ್ಣನ ಫೋಟೋವನ್ನು ಹಸ್ತಾಂತರ ಮಾಡುವ ಮೂಲಕ, ಸಾಂಕೇತಿಕವಾಗಿ ಜವಾಬ್ದಾರಿಯ...

ನಡುಗಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ 77ನೇ ಸ್ವಾತಂತ್ರ್ಯೋತ್ಸವವನ್ನು ಬಹು ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಮತಿ ಉಮೇಶ್ವರಿಯವರು ಧ್ವಜಾರೋಹಣಗೈದರು. ಬಳಿಕ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮುಂದೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರು ವಹಿಸಿದ್ದರು. ಈ ಸಂದರ್ಭದಲ್ಲಿ ಶಾಲಾ ಪುಟಾಣಿಗಳು ಭಾಷಣ, ಯೋಧರ...
Loading posts...

All posts loaded

No more posts

error: Content is protected !!