- Monday
- August 17th, 2026
31.07.2024ರಂದು ವಯೋನಿವೃತ್ತಿ ಹೊಂದಲಿರುವ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಾನ್ಯ ರಮೇಶ್ ಬಿ ಇ ರವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪಂಜ ಸ್ಥಳೀಯ ಸಂಸ್ಥೆಯ ವತಿಯಿಂದ ಜು.16ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ಸಭಾಭವನದಲ್ಲಿ ಜರುಗಿದ ವಾರ್ಷಿಕ ಮಹಾಸಭೆ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಅಭಿವಂದಿಸಿ ಸನ್ಮಾನಿಸಲಾಯಿತು. ಶ್ರೀಯುತರನ್ನು ಪಂಜ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಮಾಧವ ಬಿ...
ಜೆಸಿಐ ವಲಯ 15 ರ ವಲಯಾಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮ ಜು.13 ರಂದು ಬೆಳ್ಳಾರೆಯ ಜೆ.ಡಿ. ಆಡಿಟೋರಿಯಂ ನಲ್ಲಿ ಅದ್ದೂರಿ ಯಾಗಿ ನಡೆಯಿತು. ಜೆಸಿಐ ಬೆಳ್ಳಾರೆ ವತಿಯಿಂದ ನೀಡಲಾದ ಬೆಳ್ಳಾರೆ ಅಜಪಿಲ ದೇವಸ್ಥಾನದ ಬೋರ್ವೆಲ್ ಗೆ ಜಲ ಮರುಪೂರಣ ಯೋಜನೆಯನ್ನು ಮತ್ತು ಮಾರ್ಗಸೂಚಿ ಫಲಕವನ್ನು ವಲಯದ್ಯಕ್ಷರು ಬಿಡುಗಡೆ ಮಾಡಿದರು. ಜೆಸಿಐ ಆಲಂಗಾರು...
ಬಿಜೆಪಿ ದ.ಕ.ಜಿಲ್ಲಾ ಕಾರ್ಯಕಾರಿ ಸದಸ್ಯರಾಗಿ ಮಾಜಿ ತಾ.ಪಂ. ಉಪಾಧ್ಯಕ್ಷೆ ಪುಷ್ಪ ಮೇದಪ್ಪ ಉಳುವಾರು ಆಯ್ಕೆಯಾಗಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಇವರನ್ನು ಜಿಲ್ಲಾ ಕಾರ್ಯಕಾರಿ ಸದಸ್ಯರನ್ನಾಗಿ ನೇಮಕಗೊಳಿಸಿದ್ದಾರೆ. ಇವರು ತಾಲೂಕು ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದಾರೆ.
ಸಂಪಾಜೆ ಭಾಗದಲ್ಲಿ ತುರ್ತು ಸೇವೆಗಾಗಿ ತಾಜ್ ಟರ್ಲಿ ಸಂಪಾಜೆ ಮಾಲಿಕತ್ವದ ಹೊಸ ಆಂಬುಲೆನ್ಸ್ ಸೇವೆ ಆರಂಭಿಸಿದೆ. ತುರ್ತು ಸೇವೆಗಾಗಿ ಮೊಬೈಲ್ ಸಂಖ್ಯೆ 9686947071 ಕ್ಕೆ ಕರೆ ಮಾಡಿ
ಸುಳ್ಯದ ನಾವೂರಿನಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಕಸ ಹಾಗೂ ಒಡೆದ ಬಾಟಲಿಗಳನ್ನು ಎಸೆದಿದ್ದು, ಮೆಸ್ಕಾಂ ಸಿಬ್ಬಂದಿಗಳು ಕೆಲಸ ನಿರ್ವಹಿಸಲು ತೊಂದರೆ ಅನುಭವಿಸುವಂತಾಗಿದೆ. ವಿದ್ಯುತ್ ಸಮಸ್ಯೆಯಾದಾಗ ಮಳೆಯನ್ನು ಲೆಕ್ಕಿಸದೇ ಮೆಸ್ಕಾಂ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೇ ಪವರ್ ಮ್ಯಾನ್ ಗಳಿಗೆ ಕರ್ತವ್ಯ ನಿರ್ವಹಿಸುವ ವೇಳೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರ ಬಗ್ಗೆ ಯಾರು ಗಮನ...
ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ , 01 ನಿಮಿಷದಲ್ಲಿ 29 ಬಾರಿ ಉಪವಿಷ್ಠ ಕೋನಾಸನದಿಂದ ರಾಮದೂತಾನಸನಕ್ಕೆ ಪರಿವರ್ತಿಸುವ ಮೂಲಕ ಅಂತಾರಾಷ್ಟ್ರೀಯ ಯೋಗ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ದಾಖಲಿಸಿಕೊಂಡಿದ್ದಾರೆ.ಇವರು ವಾಲ್ತಾಜೆ ಶ್ರೀ ಪ್ರಶಾಂತ್ ವಾಲ್ತಾಜೆ ಮತ್ತು ಶ್ರೀಮತಿ ಚೈತ್ರ ರವರ ಪುತ್ರಿ. ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್...
ರಾಜ್ಯ ಹೆದ್ದಾರಿಯ ಗಾಂಧಿನಗರ-ಆಲೆಟ್ಟಿ ತಿರುವಿನಲ್ಲಿ ಮೋರಿ ಸ್ಲಾಬ್ ಕುಸಿದಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ. ಸ್ಥಳೀಯಾಡಳಿತ ಎಚ್ಚೆತ್ತುಕೊಂಡು ಸಂಭವನೀಯ ಅಪಾಯ ತಡೆಯಬೇಕಾಗಿದೆ. ಅಧಿಕಾರಿಗಳ ವರ್ತನೆಗೆ ಬೇಸತ್ತಿರುವ ಸ್ಥಳೀಯ ವರ್ತಕರು ಗಿಡನೆಟ್ಟು ಗಮನ ಸೆಳೆದಿದ್ದಾರೆ.
https://youtu.be/h2ES9PDBg8w?si=HMRvdsZFZYx5Fhbg ಸುಳ್ಯ ತಾಲೂಕಿನಾದ್ಯಂತ ಜನತೆ ನಿರಂತರ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಮನಗಂಡು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಮುಖ್ಯವಾಗಿ ಅಜ್ಜಾವರ , ಸಂಪಾಜೆ , ಅರಂತೋಡು , ಮರ್ಕಂಜ , ಮಂಡೆಕೋಲು ಸೇರಿದಂತೆ ಇತರ ಇತರೆ ಗ್ರಾಮಗಳ ಸಮಸ್ಯೆಗಳ ಬಗ್ಗೆ ದೂರಿದರು. ಸೋಮಾರಿ ಅಧಿಕಾರಿಗಳಿಗೆ ದಿಕ್ಕಾರ...
ಗುತ್ತಿಗಾರಿನ ಬಸ್ ನಿಲ್ದಾಣದಲ್ಲಿ ಅಳವಡಿಸಿದ ಸಿಸಿ ಕ್ಯಾಮರಾ ಕಳ್ಳತನವಾದ ಘಟನೆ ಜು.14 ರಂದು ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ವನ್ನು ಕ್ಯಾಮರಾ ಯಾರೋ ಕಿತ್ತು ತೆಗೆಯುವ ದೃಶ್ಯ ಸೆರೆಯಾಗಿದೆ.
1972ನೇ ಇಸವಿಯಲ್ಲಿ ಆರಂಭಗೊಂಡ ಶಾರದಾಂಬ ಉತ್ಸವ 52 ವರ್ಷಗಳು ಅದ್ದೂರಿಯಾಗಿ ಮುಗಿಸಿ 53ನೇ ವರ್ಷದ ಉತ್ಸವವನ್ನು ನಡೆಸಲು ವಿವಿಧ ಸಮಿತಿಯ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ದಸರ ಉತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಸಂಸದ ಕ್ಯಾ|ಬ್ರಿಜೇಶ್ ಚೌಟ, ಅಧ್ಯಕ್ಷರಾಗಿ ಸುಳ್ಯ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಖಜಾಂಚಿಯಾಗಿ ಸುನಿಲ್ ಕುಮಾರ್ ಕೇರ್ಪಳ...
Loading posts...
All posts loaded
No more posts
