ಗ್ಯಾರಂಟಿ ಯೋಜನೆ ಸಮಸ್ಯೆಗಳಿದ್ದರೆ ಸುಳ್ಯ ಗ್ಯಾರಂಟಿ ಯೋಜನಾ ಕಚೇರಿಯನ್ನು ಸಂಪರ್ಕಿಸಿ -ಭರತ್ ಮುಂಡೋಡಿ

ಸುಳ್ಯ ತಾಲೂಕಿಗೆ ಬಂದಿರುವ ಒಟ್ಟು ಮೊತ್ತಗಳ ಕುರಿತು ಸಮಗ್ರ ಮಾಹಿತಿ ನೀಡಿದ ಮುಂಡೋಡಿ . ಪಂಚ ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಿ ವಂಚಿತರಾಗಿರುವ ಫಲಾನುಭವಿಗಳ ಸರ್ವೆ ನಡೆಸಿ ಸರಕಾರಕ್ಕೆ ವರದಿ ನೀಡಿ ಅರ್ಹರಿಗೆ ಯೋಜನೆ ತಲುಪುವಂತೆ ನಮ್ಮ ಸಮಿತಿ ಮಾಡಲಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್‌ ಮುಂಡೋಡಿ‌ ಹೇಳಿದ್ದಾರೆ.ಆ.28 ರಂದು ಸುಳ್ಯ ತಾಲೂಕು...

ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ – ವಿದ್ಯಾ ಬೋಧಿನಿ ಪ್ರೌಢಶಾಲೆ ಬಾಳಿಲ ಪ್ರಥಮ, ರೋಟರಿ ಪ್ರೌಢಶಾಲೆ ಸುಳ್ಯ ದ್ವಿತೀಯ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ತೃತೀಯ

ಕರ್ನಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಶಾಲಾ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಇಂದು ನಡೆಯಿತು. ಈ ವಿಜ್ಞಾನ ನಾಟಕ ಸ್ಪರ್ಧೆಯನ್ನು ಏಸುರಾಜ್ ಸಹಾಯಕ ಕಾರ್ಯ ನಿರ್ವಹಣಾಧಿಕಾರಿಗಳು ಕುಕ್ಕೆ...
Ad Widget

ಸಂಪಾಜೆ: ಸೆ.07-  ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯ ಗಣೇಶ ಚತುರ್ಥಿ

ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಶ್ರೀ ಗಣೇಶ ಚತುರ್ಥಿಯು ಸೆ.07 ರಂದು ನಡೆಯಲಿದೆ. ಬೆಳಿಗ್ಗೆ 5:30 ಕ್ಕೆ ಗಣಪತಿ ಹವನ, ಸಾಮೂಹಿಕ ಗಣಪತಿ ಹವನ, 9 ಗಂಟೆಗೆ ಕದಿರು ಕಟ್ಟುವುದು, ಮಧ್ಯಾಹ್ನ ಮಹಾಪೂಜೆ ನಡೆಯಲಿದೆ. ಬಳಿಕ ಅನ್ನ ಪ್ರಾಶನ ಮತ್ತು ನವನ್ನಾ ಸಂತರ್ಪಣೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಗಂಧ ಪ್ರಸಾದ...

ಅರಂತೋಡು :  ಭಜನಾ ಪರಿಷತ್ತಿನ ವಲಯ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ತೀರ್ಥರಾಮ ಆಡ್ಕಬಳೆ, ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಕಜೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  ಸುಳ್ಯ ತಾಲೂಕು ಸಂಪಾಜೆ ವಲಯ, ಭಜನಾ ಪರಿಷತ್  ಸುಳ್ಯ ತಾಲೂಕು ಸಂಪಾಜೆ ವಲಯ ಮಟ್ಟದ ಸಭೆಯು ಆ.27 ರಂದು  ಅರಂತೋಡು ಗ್ರಾಮ ಪಂಚಾಯತ್ ನ ಅಮೃತ ಸಭಾಭವನದಲ್ಲಿ ನಡೆಯಿತು. ಸಭೆಯನ್ನು ಶ್ರೀ ದುರ್ಗಾ ಮಾತಾ ಭಜನಾ ಮಂದಿರದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿಯ ಅಧ್ಯಕ್ಷರಾದ ...

ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ನೋಬೆಲ್ ಎಜುಕೇಶನ್ ಸೆಂಟರ್ ಈರೋಡ್  ತಮಿಳುನಾಡು ಇವರು ಆಯೋಜಿಸಿದ ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಬೆಳ್ಳಾರೆಯ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಐವರು ವಿದ್ಯಾರ್ಥಿಗಳಿಗೆ ಪ್ರಶಸ್ತಿಯು  ಲಭಿಸಿದೆ. ವಿದ್ಯಾರ್ಥಿಗಳಾದ ಶ್ರೇಯಸ್, ನೇಸರ, ಸಾನಿಧ್ಯ, ಹೃದನ್, ನಿನಾದ್, ಪ್ರಶಸ್ತಿ ಪಡೆದಿದ್ದಾರೆ. ಒಟ್ಟು 45 ವಿದ್ಯಾರ್ಥಿಗಳು ಭಾಗವಹಿಸಿದ್ದು, ಜೊತೆಗೆ  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಿ.ಬಿ.ಎಸ್.ಇ ಸ್ಕೂಲ್ ಉಜಿರೆ...

ಮಂಡೆಕೋಲು: ಯಾದವ ಪ್ರಾದೇಶಿಕ ಸಮಿತಿ ಹಾಗೂ ಯಾದವ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ಯಾದವ ಸಭಾ ಪ್ರಾದೇಶಿಕ ಸಮಿತಿ ಮಂಡೆಕೋಲು ಹಾಗೂ ಯಾದವ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಡೆಕೋಲು ಇದರ ಸಹಯೋಗದೊಂದಿಗೆ ಆ.26 ರಂದು ಶ್ರೀ ಕೃಷ್ಣ ಜನಾಷ್ಟಮಿ ಕಾರ್ಯಕ್ರಮವು ಯಾದವ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮವು ಪ್ರಾತಃಕಾಲದಲ್ಲಿ ಶ್ರೀ ಗಣಪತಿ ಹವನ ಮತ್ತು ಶ್ರೀಕೃಷ್ಣ ಕಲ್ಫೋತ್ತ ಪೂಜೆಯೊಂದಿಗೆ ಪ್ರಾರಂಭವಾಯಿತು ಬೆಳಿಗ್ಗೆ ಗಂಟೆಗೆ 10ರಿಂದ 11ಗಂಟೆಯವರೆಗೆ ಭಜನಾ ಸಂಕೀರ್ತನೆ ಆ...

ಮುಂಗಾರು ಹಂಗಾಮಿ ಬೆಳೆಸಮೀಕ್ಷೆ ತಮ್ಮ ಬೆಳೆಗಳ ನಿಖರವಾದ ದಾಖಲಾತಿಗೆ ರೈತರಿಗೆ ಅವಕಾಶ

ಬೆಳೆ ದಾಖಲಾತಿ ಮಾಡುವ ವಿಧಾನ ಹೇಗೆ ಮತ್ತು ಯಾವ ಕ್ಯೂಆರ್ ಕೋಡ್ ಬಳಸಬೇಕು ಹಾಗಿದ್ದರೆ ಸಂಪೂರ್ಣ ಮಾಹಿತಿ ಇಲ್ಲಿದೆ. ಸುಳ್ಯ:2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ರೈತರು ತಮ್ಮ ಆಂಡೋಯ್ಡ್ ಮೊಬೈಲಿನ ಮೂಲಕ ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್‌ನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸುಳ್ಯ ಸಹಾಯಕ...

ಸುಳ್ಯದ ವಿಜಯಕುಮಾರ್‌ರವರಿಗೆ ‘ಹಾಡು ಬಾ ಸಂಗೀತ ಗಾನ ಪ್ರಶಸ್ತಿ’

ಚಲನ ಚಿತ್ರ ಸಂಗೀತ ಕರೋಕೆ ವಿ.ಕೆ ಬ್ರದರ‍್ಸ್ ಹಾಸನ, ಇವರು ಮಂಗಳೂರಿನ ಕ್ರೂಸ್ ಮತ್ತು ಡೈನ್ ಲೋಬೋ ರಿವರ್‌ವೇವ್‌ನಲ್ಲಿ ಆ.25ರಂದು ನಡೆದ ಗಾಯಕರುಗಳ ಚಲನಚಿತ್ರ ಕರೋಕೆಯನ್ನು ಹಾಡಿ ಸುಳ್ಯದ ವಿಜಯಕುಮಾರ್‌ರವರು 'ಹಾಡು ಬಾ ಸಂಗೀತ ಗಾನ ಪ್ರಶಸ್ತಿ' ಪತ್ರ ಪಡೆದಿರುತ್ತಾರೆ ಹಾಗೂ ಇವರು ಸುಳ್ಯದ ಟಿ.ಎ.ಪಿ.ಸಿ.ಎಮ್.ಎಸ್ ನಲ್ಲಿ ಉದ್ಯೋಗಿಯಾಗಿದ್ದಾರೆ.

ವಳಲಂಬೆಯಲ್ಲಿ 21 ನೇ ವರ್ಷದ ಗಣೇಶೋತ್ಸವ – ಸೆ.07 ರಂದು ಪ್ರತಿಷ್ಠೆ, ಸೆ.08 ರಂದು ಶ್ರೀ ಗಣೇಶನ ಭವ್ಯ ಶೋಭಯಾತ್ರೆ

ವಳಲಂಬೆಯ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಸೆ.07 ಮತ್ತು ಸೆ. 08 ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.‌ ಕಾರ್ಯಕ್ರಮ : ಸೆ. 07 ಶನಿವಾರ ಬೆಳಿಗ್ಗೆ ಗಂಟೆ 9-00ಕ್ಕೆ ಗಣಪತಿ ಪ್ರತಿಷ್ಠೆ, ಬೆಳಿಗ್ಗೆ ಗಂಟೆ 9-15ರಿಂದ ಸಾಮೂಹಿಕ...

ಸುಳ್ಯ: ಫುಟ್ ಪಾತ್ ನಲ್ಲಿ ದೊಡ್ಡ ಗಾತ್ರದ  ಪೈಪ್ ಗಳು- ಸಾರ್ವಜನಿಕರಿಗೆ ಕಿರಿಕಿರಿ

ಸುಳ್ಯ ನಗರದ ಕೇರ್ಪಳಕ್ಕೆ ಹಾದು ಹೋಗುವ  ಹಾಸ್ಟೆಲ್ ಬಳಿ  ಫುಟ್ ಪಾತ್ ನಲ್ಲಿ   ದೊಡ್ಡ ದೊಡ್ಡ ಗಾತ್ರದ  ಪೈಪ್ ಗಳನ್ನು ತಂದು ಹಾಕಿದ್ದು  ಪಾದ ಸಂಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ.  ಇದಕ್ಕೆ ಸಂಬಂಧಪಟ್ಟ ಇಲಾಖೆ ಗಮನ ಹರಿಸುವರೇ? ಹಾಗೂ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವರೇ? ಎಂದು ಕಾದು ನೋಡಬೇಕಾಗಿದೆ.
Loading posts...

All posts loaded

No more posts

error: Content is protected !!