ನೋಟಿಸ್ ನೀಡಲು ಆರಂಭಿಸಿದ ಬಳಿಕವು ಎಚ್ಚೆತ್ತುಕೊಂಡಿಲ್ಲ ವಾಹನ ಸವಾರರು – ಮತ್ತೆ ಮತ್ತೆ ನಿಯಮ ಉಲ್ಲಂಘನೆ!

ಸುಳ್ಯ : ಸುಳ್ಯ ನಗರದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು ಇದನ್ನು ಪೋಲಿಸ್ ಇಲಾಖೆಯು ಗಂಭೀರವಾಗಿ ಪರಿಗಣಿಸಿ ನೋಟಿಸ್ ನೀಡಿ ನ್ಯಾಯಲಯದಲ್ಲಿ ದಂಡ ಕಟ್ಟುವಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು. ಸುಳ್ಯದ ರಾಮ ಭಜನಾ ಮಂದಿರದ ಮುಂಭಾಗದಲ್ಲಿ ಕೆಲ ವಾಹನ ಸವಾರರು ಪಾರ್ಕಿಂಗ್ ನಿಯಮ ಉಲ್ಲಂಘಿಸಿ ವಾಹನ ಪಾರ್ಕಿಂಗ್ ಮಾಡುತ್ತಿದ್ದು, ಸರತಿ ಸಾಲಿನಲ್ಲಿ ಮೂರು ಕಾರುಗಳು...

ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ

ಸುಳ್ಯ ಮೆಸ್ಕಾಂ ಕಛೇರಿಯಲ್ಲಿ ಗಾಂಧಿಜಯಂತಿ ಆಚರಣೆ ನಡೆಯಿತು.‌ ಜೂನಿಯರ್ ಇಂಜಿನಿಯರ್ ಗಳಾದ ಮಹೇಶ್ ಕೆ. ದಿವ್ಯ, ಉಷಾ, ಮೇಲ್ವಿಚಾರಕರಾದ ಧರ್ಮಪಾಲ, ರಫೀಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Ad Widget

ಶಾಸ್ತ್ರೀಜಿ ಮತ್ತು ಗಾಂಧೀಜಿಯವರ ಆದರ್ಶಗಳನ್ನು ನಿತ್ಯ ಅಳವಡಿಸಿಕೊಳ್ಳೋಣ: ಡಾ|| ಚೂಂತಾರು

ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಛೇರಿ ಮೇರಿಹಿಲ್‍ನಲ್ಲಿ ದಿನಾಂಕ: 02-10-2024ರಂದು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರು ಜಂಟಿಯಾಗಿ ಗಾಂಧೀಜಿಯವರ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಟನಮನ ಸಲ್ಲಿಸಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಮತ್ತು ಗಾಂಧೀಜಿಯವರ ತ್ಯಾಗ, ಸೇವೆ ಹಾಗೂ ಬಲಿದಾನವನ್ನು...

ಅರಂತೋಡು : ಎನ್.ಎಂ.ಪಿ‌.ಯು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ ಪಿಂಡಿಮನೆ

ಪಾಪ್ಯುಲರ್ ಎಜುಕೇಶನ್ ಸೊಸೈಟಿ ( ರಿ )ಅರಂತೋಡು ಇದರ ಆಡಳಿತ ಒಳಪಟ್ಟ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆರಂತೋಡು ಇದರ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾಗಿ  ಸೋಮಶೇಖರ.ಸರ್ ಪಿಂಡಿಮನೆ ಅಧಿಕಾರ ಸ್ವೀಕರಿಸಿದರು.

ಹರಿಹರ ಪಳ್ಳತ್ತಡ್ಕ : ಸಚಿನ್ ಕ್ರೀಡಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆಕೋಶಾಧಿಕಾರಿಯಾಗಿ ಚೇತನ್ ಕಾಟೂರುಕ್ರೀಡಾ ಕಾರ್ಯದರ್ಶಿಯಾಗಿ ದಯಾನಂದ ಪರಮಲೆ ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸೆ.29 ರಂದು ನಡೆಯಿತು.ಸಂಘದ ಗೌರವಾಧ್ಯಕ್ಷರಾಗಿ ಪ್ರದೀಪ್ ಕಜ್ಜೋಡಿ, ನೂತನ ಅಧ್ಯಕ್ಷರಾಗಿ ಜಗದೀಶ್ ವಾಡ್ಯಪ್ಪನಮನೆ, ಕಾರ್ಯದರ್ಶಿಯಾಗಿ ದೀಕ್ಷಿತ್ ದೊಡ್ಡಕಜೆ, ಕೋಶಾಧಿಕಾರಿಯಾಗಿ ಚೇತನ್ ಕಾಟೂರು, ಕ್ರೀಡಾ ಕಾರ್ಯದರ್ಶಿಯಾಗಿ...

ಗುತ್ತಿಗಾರು : ಭೂ ಸೇನೆಯ ಯೋಧ ತಿರುಮಲೇಶ್ವರ ಕೆ. ಸೇವಾ ನಿವೃತ್ತಿ

ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ ತಿರುಮಲೇಶ್ವರ ಕಡ್ತಲ್‌ಕಜೆ (ಅಬೀರ)ರವರು 24 ವರ್ಷಗಳ ಸೇವೆ ಸಲ್ಲಿಸಿ ಸೆ.30ರಂದು ಸೇವೆಯಿಂದ ನಿವೃತ್ತಿಗೊಂಡಿದ್ದಾರೆ.ಇವರು ತಮ್ಮ ವಿದ್ಯಾಭ್ಯಾಸವನ್ನು 1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ, 8 ರಿಂದ ಪ್ರಥಮ ಪಿಯುಸಿಯನ್ನು ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಇವರು ಸೆ.2000ರಲ್ಲಿ ಪಿಯುಸಿ ಓದುತ್ತಿದ್ದಾಗಲೇ ಸೇನೆಗೆ ಆಯ್ಕೆಗೊಂಡರು.‌ ಒಟ್ಟು 24...

ಕಸ ಎಸೆದ ಅಂಬಟೆಡ್ಕದ ಸ್ಟಿಕ್ಕರ್ ಕಟ್ಟಿಂಗ್ ಶಾಪ್ ನ ಮಾಲಕರಿಗೆ ರೂ. 5000 ದಂಡ

ಸುಳ್ಯ ಅಂಬಟೆಡ್ಕ ಬಳಿ  ಕಂಪ್ಯೂಟರೈಸ್ಡ್ ಸ್ಟಿಕರ್ ಕಟ್ಟಿಂಗ್ ಎಂಬ ಸಂಸ್ಥೆಯವರು ತಮ್ಮಲ್ಲಿಯ ಕಸದ ರಾಶಿಯನ್ನು ಅಂಬಟೆಡ್ಕ ಪ್ರೆಸ್ ಕ್ಲಬ್ ಬಳಿ ಬಿಸಾಕಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ಪರಿಶೀಲಿಸಿ 5000 ರೂ ದಂಡನೆ ವಿಧಿಸಲಾಯಿತು

ತೊಡಿಕಾನ ದೇವಸ್ಥಾನದ ವಿಚಾರವಾಗಿ ತೀರ್ಥರಾಮರು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಜಾತಿ ನಿಂದನೆಯ ಪ್ರಮಾದ – ತೀರ್ಥರಾಮರಿಂದ ಕ್ಷಮೆಯಾಚನೆಯ ಬಳಿಕ ಪ್ರಕರಣ ಸುಖಾಂತ್ಯ

https://youtu.be/1LvFzIBDdy4?si=td4WWFfiMcgQQV38 ತೊಡಿಕಾನ ದೇವಸ್ಥಾನದ ನೂತನ ಆಡಳಿತ ಸಮಿತಿಯ ವಿಚಾರವಾಗಿ ತೀರ್ಥರಾಮ ಪರ್ನೋಜಿ ಎಂಬವರು ಸೆ.25 ರಂದು ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಅವರು ಆಲೆಟ್ಟಿ ಗ್ರಾಮದ ಸತ್ಯಪ್ರಸಾದ್ ಗಬಲ್ಕಜೆ ಅವರನ್ನು ಉಲ್ಲೇಖಿಸಿ ಜಾತಿ ನಿಂದನೆಯಾಗುವಂತೆ ಮಾತನಾಡಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ಸಹಿತ ವರದಿ ಪ್ರಸಾರಗೊಂಡಾಗ ತೀರ್ಥರಾಮರವರು ಜಾತಿ ನಿಂದನೆ ಮಾಡಿರುವ ವಿಚಾರ ಹಾಗೂ ಈ ಹಿಂದೆ...

ಪೆರಾಜೆ : ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಎನ್.ಎ ಜ್ಞಾನೇಶ್ ಪುನರಾಯ್ಕೆ

ಜ್ಯೋತಿ ವಿದ್ಯಾಸಂಘದ ವಾರ್ಷಿಕ ಮಹಾಸಭೆಯು ಜ್ಯೋತಿ ಪ್ರೌಢಶಾಲೆಯಲ್ಲಿ ಸಂಘದ ಅಧ್ಯಕ್ಷ ಎನ್.ಎ ಜ್ಞಾನೇಶ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಎನ್.ಎ ಜ್ಞಾನೇಶ್ ರವರನ್ನು ಪುನರಾಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಮುಡುಕಜೆ ಹರಿಶ್ಚಂದ್ರ, ಕೋಶಾಧಿಕಾರಿಯಾಗಿ ಲೋಕನಾಥ್ ಅಮೆಚೂರು ಇವರುಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರುಗಳಾಗಿ ಪ್ರಸನ್ನ ನಿಡ್ಯಮಲೆ ಹಾಗೂ ಪ್ರವೀಣ್ ಮಜಿಕೋಡಿ ರವರನ್ನು ನೂತನವಾಗಿ ಆಯ್ಕೆ ಮಾಡಲಾಯಿತು.ಈ...

ಅನ್ಸಾರಿಯಾ ನೂತನ ಗ್ರಂಥಾಲಯಕ್ಕೆ ಪ್ರಭಾಕರ ಶಿಶಿಲ ರಿಂದ ಪುಸ್ತಕ ಕೊಡುಗೆ

ವಿದ್ಯಾಸಂಸ್ಥೆಗಳಲ್ಲಿ ಪುಸ್ತಕ ಒದಲು ಸಮಯ ಮೀಸಲಿಡಬೇಕು: ಡಾ.ಶಿಶಿಲ ತಾಲೂಕಿನ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣವನ್ನು ಒಂದೇ ಕ್ಯಾಂಪಸ್ ನಲ್ಲಿ ನೀಡುತ್ತಿರುವ ಅನ್ಸಾರಿಯಾ ಎಜುಕೇಷನ್ ಸೆಂಟರ್ ಇದರ ಅಧೀನದ ದಅವಾ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಶೀಘ್ರದಲ್ಲೇ ಉದ್ಘಾಟನೆಯಾಗಲಿದೆ.ಇದಕ್ಕೆ ಬೇಕಾದ ಸುಮಾರು 50ಕ್ಕಿಂತ ಹೆಚ್ಚು ಪುಸ್ತಕಗಳನ್ನು ಹಿರಿಯ ಲೇಖಕರು, ವಿಶ್ರಾಂತ ಪ್ರಾಂಶುಪಾಲರಾದ ಡಾ| ಪ್ರಭಾಕರ್ ಶಿಶಿಲ ತಾವು...
Loading posts...

All posts loaded

No more posts

error: Content is protected !!