ಜನಪ್ರತಿನಿಧಿಗಳಿಂದ ಸಂಪೂರ್ಣ ಈಡೇರದ ಭರವಸೆ : ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಗೆ ಗಡುವು – ಪ್ರತಿಭಟನೆಯ ಎಚ್ಚರಿಕೆ

ಅರಂತೋಡು ಎಲಿಮಲೆ ರಸ್ತೆ ಅಭಿವೃದ್ಧಿಯ ಕೂಗು ಮತ್ತೆ ಕೇಳಿಬಂದಿದ್ದು, ಜನಪ್ರತಿನಿಧಿಗಳ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲು ಜನ ತೀರ್ಮಾನಿಸಿದ್ದು ಈ ಬಗ್ಗೆ ಶಾಸಕರಿಗೆ ನಾಗರಿಕ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮನವಿ ಮಾಡಿ ಬೇಡಿಕೆ ಈಡೇರಿಸಲು ಗಡುವು ನೀಡಿದ್ದಾರೆ. ಪ್ರಸಿದ್ಧ ತೀರ್ಥ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಸಂಪರ್ಕಿಸಲು ಅರಂತೋಡು...

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಅಂತರ್ ಪದವಿಪೂರ್ವ ಕಾಲೇಜು ಫೆಸ್ಟ್

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತಕ್ಕೆ ಒಳಪಟ್ಟ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರ ಮತ್ತು ಉದ್ಯಮ ಆಡಳಿತ ವಿಭಾಗದಿಂದ , ಅಂತಿಮ ವಾಣಿಜ್ಯ ಪದವಿ ಮತ್ತು ಉದ್ಯಮ ಆಡಳಿತ ಪದವಿ ವಿದ್ಯಾರ್ಥಿಗಳು ಆಯೋಜಿಸಿದ ಅಂತರ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರೇರಣ ಎಂಬ ಪೆಸ್ಟ್ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ ದಿನೇಶ್ ಪಿ ಟಿ...
Ad Widget

ಹರಿಹರ ಪಳ್ಳತ್ತಡ್ಕ : ಉಪಚುನಾವಣೆ – ಪೃಥ್ವಿಚಂದ್ರ ಮುಂಡಾಜೆ, ಯಕ್ಷಿತ್ ಕಜೆಗದ್ದೆ ಅವರಿಂದ ನಾಮಪತ್ರ ಸಲ್ಲಿಕೆ

ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ನಲ್ಲಿ ದಿವಾಕರ ಮುಂಡಾಜೆ ರವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ನ.12 ರಂದು ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.ಈ ಹಿಂದೆ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಇತ್ತೀಚೆಗೆ ಅಗಲಿದ ದಿ. ದಿವಾಕರ ಮುಂಡಾಜೆ ರವರ ಸಹೋದರ ಪೃಥ್ವಿಚಂದ್ರ ಮುಂಡಾಜೆ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ...

ಪುತ್ತೂರಿನ ರಾಧಾ’ಸ್ ಫ್ಯಾಮಿಲಿ ಶೋ ರೂಂ ನ ಬಿಗ್‌ಬಾಸ್ ರಾಧಾ’ಸ್ ಉತ್ಸವದ 5ನೇ ವಾರದ ಡ್ರಾ

ಪ್ರತಿಷ್ಠಿತ ವಸ್ತ್ರ ಮಳಿಗೆ ಪುತ್ತೂರಿನ ರಾಧಾ'ಸ್ ಫ್ಯಾಮಿಲಿ ಶೋ ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ'ಸ್ ಉತ್ಸವ'ದಲ್ಲಿ ಗ್ರಾಹಕರು ಅಮೋಘ ಡಿಸ್ಕೊಂಟ್ ಗಳೊಂದಿಗೆ ಜವುಳಿ ಖರೀದಿಸುವುದರೊಂದಿಗೆ ಭರ್ಜರಿ ಬಹುಮಾನಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಯಶಸ್ವಿಯಾಗಿ ಐದನೇ ವಾರದ ಡ್ರಾ ನಡೆದಿದ್ದು,ಪ್ರಥಮ ಬಹುಮಾನವನ್ನು ವೀಕ್ಷಿತ, ಉಪ್ಪಿನಂಗಡಿ, ದ್ವಿತೀಯ ಹಸೀನಾ ಚಿಕ್ಕಮಂಗಳೂರು, ತೃತೀಯ ಸೋಮನಾಥ, ಕಲ್ಲಡ್ಕ, ಆಕರ್ಷಕ ಬಹುಮಾನವನ್ನು ಅನಘಾ ಕಾಮತ್ ಪುತ್ತೂರು,...

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಸ್ಥಾನದ ಉಪ ಚುನಾವಣೆ ಬಹಿಷ್ಕರಿಸಲು ನಿರ್ಧಾರ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಐನೆಕಿದು ವಾರ್ಡ್ ನಲ್ಲಿ ತೆರವಾದ ಸದಸ್ಯ ಸ್ಥಾನದ ಉಪ ಚುನಾವಣೆ ನಡೆಯಲಿದ್ದು, ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಈಗಾಗಲೇ ಘೋಷಣೆಯಾಗಿರುವ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡದೇ ಬಹಿಷ್ಕರಿಸಲು ನಿರ್ಧರಿಸುವುದಾಗಿ ತಿಳಿದುಬಂದಿದೆ.ನವೆಂಬರ್ 08 ರಂದು ಐನೆಕಿದು ಸಮುದಾಯ ಸಭಾಭವನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯವರ ಉಪಸ್ಥಿತಿಯಲ್ಲಿ...

ಕಸ್ತೂರಿ ರಂಗನ್ ಜಾರಿ ವಿರುದ್ಧ ನಡೆಯುವ ಪ್ರತಿಭಟನೆಗೆ ಜಯಪ್ರಕಾಶ್ ಕೂಜುಗೋಡು ಬೆಂಬಲ

ನವೆಂಬರ್ 15ರಂದು ಗುಂಡ್ಯದಲ್ಲಿ ನಡೆಯುವ ಕಸ್ತೂರಿ ರಂಗನ್ ವರದಿ ಜಾರಿಯನ್ನು ವಿರೋಧಿಸಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಇದರ ನೇತೃತ್ವ ದಲ್ಲಿ ನಡೆಯುವ ಬೃಹತ್ ಹೋರಾಟಕ್ಕೆ ಸುಬ್ರಮಣ್ಯ ಐನಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದ.ಕ ಮತ್ತು ಉಡುಪಿ ಜಿಲ್ಲಾ HOPCOMS ಮಂಗಳೂರು ಮತ್ತು ಸುಭಿಕ್ಷಾ ಸಾವಯವ ಕೃಷಿಕರ ಬಹುರಾಜ್ಯ ಸಹಕಾರಿ...

ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಿ ರೈತ ಪರ ಹೋರಾಟದಲ್ಲಿ ಕೈಜೋಡಿಸಲು ಕಿಶೋರ್ ಶಿರಾಡಿ ಮನವಿ

ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ನ. 15  ಶುಕ್ರವಾರದಂದು ಬೆಳಿಗ್ಗೆ 10:30ಕ್ಕೆ ಗುಂಡ್ಯದಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು, ಪ್ರತಿಭಟನೆ ಪರಿಣಾಮಕಾರಿಯಾಗಲು ದಕ್ಷಿಣ ಕನ್ನಡ ಜಿಲ್ಲೆಯ ಭಾದಿತ ಗ್ರಾಮದ ಅಂಗಡಿ ಹಾಗೂ ಹೋಟೆಲ್ ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ  ರೈತ ಪರ ಹೋರಾಟದಲ್ಲಿ ಕೈಜೋಡಿಸಬೇಕೆಂದು ಮಲೆನಾಡು ಜನ ಹಿತ ರಕ್ಷಣವೇದಿಕೆಯ ಸಂಚಾಲಕ ಕಿಶೋರ್...

ಭಾರತ್ ಸ್ಕೌಟ್ಸ್ ಗೈಡ್ಸ್ ವಿಭಾಗೀಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ – ವಿನೋಬನಗರ ವಿವೇಕಾನಂದ ಹಿ.ಪ್ರಾ. ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ಮೈಸೂರು ನಲ್ಲಿ ಇಂದು ನಡೆದ ಭಾರತ್ ಸ್ಕೌಟ್ ಗೈಡ್ಸ್ ಕರ್ನಾಟಕ ಮೈಸೂರು ವಿಭಾಗೀಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆಯಲ್ಲಿ ವಿನೋಬನಗರದ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ತಂಡ ಭಾಗವಹಿಸಿ ಕಬ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತದೆ.ಶಾಲಾ ವಿದ್ಯಾರ್ಥಿಗಳಾದ ಆಶಯ್.ಜಿ.ಸಿ, ಲಕ್ಷಯ್.ಬಿ ಜಿ, ಕೃತಿಕ್.ಕೆ ,...

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಕೊಲ್ಲಮೊಗ್ರ ಗ್ರಾಮ ಗೌಡ ತರುಣ ಘಟಕ ಬೆಂಬಲ

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಕೊಲ್ಲಮೊಗ್ರ ಗ್ರಾಮ ಗೌಡ ಸಮಿತಿ ಹಾಗೂ ಗೌಡ ಸಮಿತಿಯ ತರುಣ ಘಟಕವು ಸಂಪೂರ್ಣ ಬೆಂಬಲವನ್ನು ಘೋಷಿಸಿದೆ ಎಂದು ತರುಣ ಘಟಕದ ಅಧ್ಯಕ್ಷರಾದ ಸತೀಶ್ ದೋಲನಮನೆ ಹಾಗೂ ತರುಣ ಘಟಕದ ಕಾರ್ಯದರ್ಶಿ ಕೀರ್ತಿಶ್ ಬಾಳೆಬೈಲು ಹೇಳಿಕೆಯಲ್ಲಿ ತಿಳಿಸಿದ್ದಾರೆ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ನವೆಂಬರ್ 15 ಕ್ಕೆ ...

ಸುಳ್ಯ : ತಾಲೂಕು ಕಬಡ್ಡಿ ಅಸೋಸಿಯೇಶನ್ ವಾರ್ಷಿಕ ಮಹಾಸಭೆ – ಅಧ್ಯಕ್ಷರಾಗಿ ಬಿ.ಕೆ.ಮಾಧವ ಪುನರಾಯ್ಕೆ, ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪಂಜದಬೈಲು , ಕೋಶಾಧಿಕಾರಿಯಾಗಿ ಕೊರಗಪ್ಪ ಬೆಳ್ಳಾರೆ

ಸುಳ್ಯ ತಾಲೂಕು ಕಬಡ್ಡಿ ಅಸೋಸಿಯೇಶನ್ ಇದರ ಮಹಾಸಭೆಯು ಅಧ್ಯಕ್ಷರಾದ ಮಾಧವ ಬಿಕೆ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 9 ರಂದು ಯುವಜನ ಸಂಯುಕ್ತ ಮಂಡಳಿಯ ಸಭಾಂಗಣದಲ್ಲಿ ನಡೆಯಿತು. 2023-2024 ನೇ ವಾರ್ಷಿಕ ವರದಿಯನ್ನು ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಕಾರ್ಯದರ್ಶಿ ಕೆ ಟಿ.ವಿಶ್ವನಾಥ ಸಭೆಗೆ ಮಂಡಿಸಿದರು. ಸದ್ರಿ ಸಭೆಯು ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿತು. ಬಳಿಕ, ಗತ ವರ್ಷದ...
Loading posts...

All posts loaded

No more posts

error: Content is protected !!