- Tuesday
- August 11th, 2026
ಕೊಲ್ಲಮೊಗ್ರು ಇಲ್ಲಿನ ಗಾಣಿಗನಮಜಲು ಎಂಬಲ್ಲಿ ಫೆ.04 ರಂದು ಅಗ್ನಿಗುಳಿಗ ಹಾಗೂ ರಾಜ ದೈವದ ನೇಮೋತ್ಸವವು ಭಕ್ತಿ ಸಡಗರದಿಂದ ನಡೆಯಿತು. ಕಟ್ಟ ಕೊಚ್ಚಿಲ ಮಯೂರವಾಹನ ದೇವಸ್ಥಾನದಲ್ಲಿ ವನಭೋಜನ ನಡೆದು ನಂತರ ದೈವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ನಡೆದು, ನಂತರ ಕಟ್ಟ ಮನೆತನದಿಂದ ದೈವಸ್ಥಾನಕ್ಕೆ ದೈವದ ಭಂಡಾರ ಬಂದು ನೇಮ ನಡೆದು ಅಲ್ಲಿಂದ ಮಿತ್ತೋಡಿ ಶ್ರೀ ಪುರುಷ ದೈವಸ್ಥಾನಕ್ಕೆ ಭಂಡಾರ...
ಮಾಣಿ ಮೈಸೂರು ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ಇಂದು ನಡೆದಿದೆ. ದುರ್ಘಟನೆ ಯಲ್ಲಿ ಬೈಕ್ ಸವಾರನ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಸ್ಥಳೀಯರು ಅವರನ್ನು ಸುಳ್ಯದ ಕೆ ವಿ ಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.ಗಾಯಾಳು ಮೈಸೂರು...
ಸುಳ್ಯ ದ ಅಪ್ರತಿಮ ಕಲಾವಿದೆ ಪೆನ್ಸಿಲ್ ಆರ್ಟ್ ಮೂಲಕ ಪ್ರಸಿದ್ಧಿ ಪಡೆದ ಸುಳ್ಯ ದ ಬೆಟ್ಟಂಪಾಡಿ ನಿವಾಸಿ ಕು|ಪೂಜಾ ಬೋರ್ಕಾರ್ ಗೆ ಪ್ರತಿಷ್ಠಿತ ಆಕ್ಸೀಸ್ ಮ್ಯಾಕ್ಸ್ ಸಂಸ್ಥೆಯು ಕಲಾರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಿತು. ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವ ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆ ಈ ಬಾರಿಯ ಕಲಾ ರತ್ನ ಪ್ರಶಸ್ತಿಗೆ...
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಹಣ ಸಂಗ್ರಾಹ ಕಚೇರಿಯನ್ನು ಬಳ್ಪ ವಿಕ್ರಮ ಯುವಕ ಮಂಡಲದಲ್ಲಿ ಉದ್ಘಾಟನೆ ಮಾಡಲಾಯಿತು. ಕಛೇರಿಯು ಒಡಿಯೂರು ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾತೇಶ್ ಭಂಡಾರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಘಟ ಸಮಿತಿಯ ಉಪಾಧ್ಯಕ್ಷ ಜಲಪುಪ್ಪ, ಕಾರ್ಯದರ್ಶಿ ಪ್ರಜ್ಞಾ ವಿಕ್ರಮ ಯುವಕಮಂಡಲದ ಅಧ್ಯಕ್ಷ ಶಶಿಧರ್ ಪಾನ, ಪಂಜ ವಲಯದ ಮಾಜಿ...
ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಜ.24,25 & 26 ರಂದು ಆನ್ ಲೈನ್ ಯೋಗ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಸುಳ್ಯದ ಭಾಗವಹಿಸಿದ ಮಿಥುನ ಅಶ್ವಥ್ ಜಬಳೆ ಯವರಿಗೆ ಯೋಗ ಪ್ರತಿಭಾ ಆವಾರ್ಡ್ 2025 ಲಭಿಸಿದೆ. ಇವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್ ಜಬಳೆಯವರ ಪತ್ನಿ. ಪಂಜದ ಬಾಬ್ಲುಬೆಟ್ಟು ಬಾಬುಗೌಡ ಚoದ್ರಾವತಿ ದಂಪತಿಗಳ ಪುತ್ರಿ.
ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣಿಸುತ್ತದೆ. ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್ ಪರಾನ್, ಬೀಡಿ, ಸಿಗರೇಟುಗಳ ದುರ್ಬಳಕೆಯಿಂದ ಬರುತ್ತದೆ. ಇದನ್ನು ವರ್ಜಿಸಿದ್ದಲ್ಲಿ ಮುಂದೊದಗುವ ಅನಾಹುತವನ್ನು ತಡೆಗಟ್ಟಬಹುದು. ಅದೇ...
ಆಲೆಟ್ಟಿ ಗ್ರಾಮದ ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆಯಲಿರುವ ದೈವಂಕಟ್ಟು ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ 04 ರಂದು ನಡೆಯಿತು. ಈ ಸಂದರ್ಭದಲ್ಲಿ ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷ ಸುದಾಕರ್ ರೈ, ಉದ್ಯಮಿ ಕೃಷ್ಣ ಕಾಮತ್ , ಮಹೋತ್ಸವ ಸಮಿತಿ ಪ್ರ. ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ...
ಯೇನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಉಪಾಧ್ಯರ ಚುನಾವಣೆ ಇಂದು ನಡೆಯಿತು. ಅಧ್ಯಕ್ಷರಾಗಿ ಭವಾನಿಶಂಕರ ಪೂಂಬಾಡಿ ಹಾಗೂ ಉಪಾಧ್ಯಕ್ಷರಾಗಿ ಗಿರೀಶ್ ಪದ್ನಡ್ಕ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ್ ನೆಕ್ರಾಜೆ, ಭರತ್ ನೆಕ್ರಾಜೆ, ದುರ್ಗಪ್ರಸಾದ್ ಪರಮಲೆ, ಶಿವಪ್ರಸಾದ್ ಮಾದನಮನೆ, ಗೋಪಾಲ ಗೌಡ ಮಾಣಿಬೈಲು, ಶ್ರೀಮತಿ ವಿಶಾಲಾಕ್ಷಿ ಕುಕ್ಕಪ್ಪನಮನೆ, ಶ್ರೀಮತಿ...
ಕಲ್ಮಡ್ಕ ಗ್ರಾಮದ ಹಿರಿಯ ಯಕ್ಷಗಾನ ಕಲಾವಿದ ರಾಮಣ್ಣ ಗೌಡ ರಾಮತ್ತಿಕಾರು ಫೆ.3 ರಂದು ಸಂಜೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹಲವಾರು ದಶಕಗಳಿಂದ ಕಲ್ಮಡ್ಕ ಸಂಗಮ ಕಲಾ ಸಂಘದಲ್ಲಿ ರಂಗತಯಾರಿ, ಅಭಿನಯ ತರಬೇತಿ, ಪರದೆ ತಯಾರಿ, ಯಕ್ಷರಂಗ ಪ್ರಸಾದನ, ವೇಷಭೂಷಣ ತಯಾರಿಕೆಯಲ್ಲಿ ಹೆಸರು ಗಳಿಸಿದ್ದ ಇವರು ಸುಳ್ಯ ತಾಲೂಕು ಕನ್ನಡ...
ದೊಡ್ಡೇರಿ ಸ.ಕಿ.ಪ್ರಾ. ಶಾಲೆಯ ನವೀಕೃತ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಫೆ.03 ರಂದು ನಡೆಯಿತು.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ ರಿಬ್ಬನ್ ಕತ್ತರಿಸುವ ಮೂಲಕ ಕಟ್ಟಡವನ್ನು ಉದ್ಘಾಟಿಸಿ ಶುಭ ಹಾರೈಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದೇವಕಿ ಕಾಟಿಪಳ್ಳ ರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರಾದ ಸತ್ಯವತಿ, ರತ್ನಾವತಿ,...
Loading posts...
All posts loaded
No more posts
