ಅಕ್ರಮ ದನ ಸಾಗಾಟ ಪಿಕಪ್ ವಾಹನದೊಂದಿಗೆ ಮೂವರು ಪೊಲೀಸರ ವಶಕ್ಕೆ

ಸುಳ್ಯದ ನಾವೂರು ಎಂಬಲ್ಲಿಂದ ಎರಡು ದನ ಹಾಗೂ ಒಂದು ಹೋರಿಯನ್ನು ಪಿಕಪ್ ವಾಹನದಲ್ಲಿ ದುಗಲಡ್ಕ ಮಾರ್ಗವಾಗಿ ಕಡಬಕ್ಕೆ ಜೂನ್ 15ರಂದು ಸಂಜೆ ವೇಳೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ವಿಷಯದ ಖಚಿತ ಮಾಹಿತಿ ತಿಳಿದ ದುಗಲಡ್ಕ ಪರಿಸರದ ಯುವಕರು ವಾಹನವನ್ನು ತಡೆದು ಪಿಕಪ್ ನಲ್ಲಿದ್ದ ಮೂವರನ್ನು ವಿಚಾರಿಸಿ ಥಳಿಸಿದರೆನ್ನಲಾಗಿದೆ. ವಿಷಯ ತಿಳಿದು ಸುಳ್ಯ ಪೋಲಿಸರು ಸ್ಥಳಕ್ಕೆ ಧಾವಿಸಿ...

ಕೈ ಸುಡುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ – ಸತತ ಏರಿಕೆಯಿಂದ ಗ್ರಾಹಕ ಕಂಗಾಲು

ಕೊರೊನಾ ಲಾಕ್ ಡೌನ್ ಬಳಿಕ ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆಯಾಗಿದೆ. ಪೆಟ್ರೋಲ್ ಲೀಟರಿಗೆ ಇಂದು 59 ಪೈಸೆ ಹಾಗೂ ಡೀಸೆಲಿಗೆ 58 ಪೈಸೆ ಏರಿದ್ದು ರಾಜಧಾನಿ ದೆಹಲಿಯಲ್ಲಿ ಕ್ರಮವಾಗಿ ಪೆಟ್ರೋಲಿಗೆ 75.16 ರೂಪಾಯಿ ಹಾಗೂ ಡೀಸೆಲಿಗೆ 73.39 ರೂಪಾಯಿ ಆಗಿದೆ.ಹಾಗೆಯೇ ಮುಂಬೈನಲ್ಲಿ ಈ ದರ ಕ್ರಮವಾಗಿ 82.10 ಹಾಗೂ 72.03...
Ad Widget

ದರ್ಖಾಸು ಸೇತುವೆ ಮೆಳೈಸಿದ ರಾಜಕೀಯ : ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಉದ್ಘಾಟನೆ – ಬಿಜೆಪಿಯಿಂದ ಕೂಡ ಉದ್ಘಾಟನೆ ಇದೆಯೇ ?

ಆಲೆಟ್ಟಿ ಗ್ರಾಮದ ದರ್ಖಾಸು ಸೇತುವೆ ಪ್ರಾರಂಭದಿಂದ ಹಿಡಿದು ಉದ್ಘಾಟನೆ ವೇಳೆವರೆಗೂ ರಾಜಕೀಯ ಮೆಳೈಸಿತು.ಸ್ಥಳೀಯ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ನಡೆದ ಉದ್ಘಾಟನೆ ನಡೆದಿದೆ.ಇನ್ನೂ ಬಿಜೆಪಿ ಅಥವಾ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಕೂಡ ಉದ್ಘಾಟನೆ ಇದೆಯೇ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.ಕರಾವಳಿ ಅಭಿವೃದ್ದಿ ಪ್ರಾಧಿಕಾರದಿಂದ ಸುಳ್ಯ ತಾಲೂಕು ಅಲೆಟ್ಟಿ ಗ್ರಾಮದ ತೊಟಕೊಚ್ಚಿ ಪುತ್ಯ ರಸ್ತೆಯ ದರ್ಖಾಸು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ...

ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ್ ಕಂಡ್ರೆ ಸುಳ್ಯದ ಮುಖಂಡರ ಜೊತೆ ಚರ್ಚೆ

ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಯವರು ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ ಬಳಿಕ ಸುಬ್ರಮಣ್ಯದ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಸುಳ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಚರ್ಚೆ ನಡೆಸಿದರು. ಸಾಮಾಜಿಕ ಜಾಲತಾಣ ಹಾಗು ಡಿ ಕೆ ಶಿವಕುಮಾರ್ ರವರ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರ ಪದಗ್ರಹಣದ ತಾಲೂಕಿನಲ್ಲಿ ನಡೆಯುತ್ತಿರುವ ಸಿದ್ಧತೆಗಳ ಕುರಿತು ಚರ್ಚಿಸಿದರು ....

ಅರ್ಗುಡಿ ಸದಾಶಿವ ದೇವಸ್ಥಾನದ ರಸ್ತೆ ಶ್ರಮದಾನ

ಬೇಂಗನಡ್ಕ ಅರ್ಗುಡಿ ಸದಾಶಿವ ದೇವಸ್ಥಾನ ರಸ್ತೆಯನ್ನು ಶ್ರಮದಾನದ ಮೂಲಕ ಗ್ರಾಮಸ್ಥರು ದುರಸ್ತಿಗೊಳಿಸಿದರು.

ಗುರುವಾರದ ವರೆಗೆ ಮುಂಗಾರು ದುರ್ಬಲ

ಗುಜರಾತ್ ಮತ್ತು ಮುಂಬಯಿ ಸಮುದ್ರ ತೀರದ ಬಳಿ ವಾಯುಭಾರ ಕುಸಿತದ ಲಕ್ಷಣಗಳಿವೆ. ಇನ್ನು 2 ದಿನಗಳಲ್ಲಿ ಮುಂಬೈ ಭಾರಿ ಮಳೆಯ ಮುನ್ಸೂಚೆನೆ ಇದೆ. ಕರ್ನಾಟಕ ಹಾಗೂ ಕೇರಳ ಕರಾವಳಿ ಭಾಗಗಳಲ್ಲಿ ಜೂನ್ 18 ರವರೆಗೆ ಮುಂಗಾರು ದುರ್ಬಲ ಇರಬಹುದು ಎಂದು ತಿಳಿದುಬಂದಿದೆ.

ಕೆ ಪಿ ಪಿ ಸಿ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಸುಬ್ರಹ್ಮಣ್ಯ ಭೇಟಿ

ಕೆ ಪಿ ಪಿ ಸಿ ಕಾರ್ಯಧ್ಯಕ್ಷ ಈಶ್ವರ್ ಕಂಡ್ರೆ ಅವರು ಇಂದು ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು . ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಮಾಜಿ ಕಾರ್ಯದರ್ಶಿ ವೆಂಕಪ್ಪ ಗೌಡ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಸೂರಜ್ ಹೊಸೂರು, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ಸುರೇಶ್ ಎಂ...

ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡುವೆ ದ್ವಿಚಕ್ರ ವಾಹನ ಸಂಚಾರ ಗ್ರಾಪಂ ಮಾಜಿ ಅಧ್ಯಕ್ಷ ರಿಂದ ಗುತ್ತಿಗೆದಾರರಿಗೆ ತರಾಟೆ

ಗಾಂಧಿನಗರ ಆಲೆಟ್ಟಿ ಸಂಪರ್ಕಿಸುವ ರಸ್ತೆ ಸುಮಾರು 157 ಮೀಟರ್ ಕಾಂಕ್ರೀಟಿಕರಣ ಗೊಳ್ಳುತ್ತಿದ್ದು ಎರಡು ವಾರಗಳಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಭಾಗದಲ್ಲಿ ಬರುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ನಾಗಪಟ್ಟಣ ಸೇತುವೆಯ ಬಳಿ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬಂದು ಸುಳ್ಯ ಪೇಟೆಯಿಂದ ತಮ್ಮ ತಮ್ಮ ವ್ಯವಹಾರಗಳನ್ನು ಮುಗಿಸಿ ಹೋಗಬೇಕಾಗಿದೆ. ಸುಳ್ಯಕ್ಕೆ ಬರಲು ಪರ್ಯಾಯ...

ನಾಳೆ ಸುಳ್ಯದಲ್ಲಿ ಕರೆಂಟಿಲ್ಲ

ಜೂ.16ರಂದು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರುಗಳಲ್ಲಿ ತುರ್ತು ನಿಯತಕಾಲಿಕ ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ 11ಕೆ.ವಿ ಕೇರ್ಪಳ,ಶ್ರೀರಾಂಪೇಟೆ, ಸಂಪಾಜೆ,ಕೊಲ್ಚಾರ್, ಕಾವು,ಅಜ್ಜಾವರ,ಕೇನ್ಯ-ಸುಬ್ರಮಣ್ಯ ಫೀಡರುಗಳಲ್ಲಿ ಬೆಳಿಗ್ಗೆ 10ರಿಂದ ಸಾಯಂಕಾಲ 6ರ ತನಕ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಗಾಂಧಿನಗರ: ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಶುಭಾರಂಭ

ಗಾಂಧಿನಗರ ಆಲೆಟ್ಟಿ ರಸ್ತೆಯ ಸಮೀಪ ಬದ್ರುದ್ದೀನ್ ಪಟೇಲ್ ಹಾಗೂ ಹಾಜಿ ಇಸ್ಮಾಯಿಲ್ ರವರ ನೇತೃತ್ವದಲ್ಲಿ ನೂತನ ತಂತ್ರಜ್ಞಾನ ಹೊಂದಿರುವ ಪಟೇಲ್ ಕ್ಲಿನಿಕಲ್ ಲ್ಯಾಬೊರೇಟರಿ ಜೂ.15ರಂದು ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಶ್ರೀ ಚೆನ್ನಕೇಶವ ದೇವಸ್ಥಾನ ಮೋಕ್ತೇಸ ಹರ ಪ್ರಸಾದ್ ತುದಿಯಡ್ಕ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ನೂತನ ಸಂಸ್ಥೆಗೆ ಶುಭ...
Loading posts...

All posts loaded

No more posts

error: Content is protected !!