- Friday
- July 31st, 2026
ದೇಶಿ ಬಳಕೆದಾರರ ಡೇಟಾವನ್ನು ಕದಿಯುತ್ತಿದೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈಗಾಗಲೇ ಚೀನಾದ 59 ಅಪ್ಲಿಕೇಷನ್ ನಗಳನ್ನು ರದ್ದು ಮಾಡಿದೆ. ಆದರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. 275 ಚೀನೀ ಅಪ್ಲಿಕೇಶನ್ಗಳು, ರಾಷ್ಟ್ರೀಯ ಭದ್ರತೆ ಮತ್ತು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಗಾಗಿ ಸರ್ಕಾರದ ರೇಡಾರ್ನಲ್ಲಿವೆ.ರಾಷ್ಟ್ರೀಯ ಭದ್ರತಾ ಉಲ್ಲಂಘನೆ ಮಾಡ್ತಿರುವ ಆರೋಪದ ಮೇಲೆ 275 ಆ್ಯಪ್ ಗಳ ಪಟ್ಟಿಯನ್ನು...
ದ್ವಿತೀಯ ಪಿ.ಯು.ಸಿ. ಪರೀಕ್ಷೆ ಯಲ್ಲಿ ಸುಳ್ಯ ನೆಹರೂ ಮೆಮೋರಿಯಲ್ ಸಂಸ್ಥೆಯ ವಾಣಿಜ್ಯ ವಿಭಾಗದ ( ಎಸ್. ಇ. ಬಿ. ಎ.)ವಿದ್ಯಾರ್ಥಿನಿ ಅಕ್ಷತಾ.ಎಸ್. 581(96.83./.)ಅಂಕ ಗಳನ್ನು ಗಳಿಸಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾಳೆ . ಈ ಸಾಧಕಿ ಕನ್ನಡದಲ್ಲಿ 96, ಇಂಗ್ಲೀಷ್ 90, ಅರ್ಥಶಾಸ್ತ್ರ -95, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ 3 ವಿಷಯಗಳಲ್ಲಿ 100 ಪೂರ್ಣ...
ಕ್ಯಾಂಪ್ಕೋ ನಿಯಮಿತ ಮಂಗಳೂರು.ಶಾಖೆ : ಸುಳ್ಯ.(27.07.2020 ಸೋಮವಾರ) ಅಡಿಕೆ ಧಾರಣೆಹೊಸ ಅಡಿಕೆ 305 - 360ಹಳೆ ಅಡಿಕೆ 305 - 375ಡಬಲ್ ಚೋಲ್ 305 - 375 ಫಠೋರ 220 - 290ಉಳ್ಳಿಗಡ್ಡೆ 110 - 200ಕರಿಗೋಟು 110 - 185 ಕಾಳುಮೆಣಸುಕಾಳುಮೆಣಸು 250 - 300 ಕೊಕ್ಕೋಒಣ ಕೊಕ್ಕೋ :- 150 - 175ಹಸಿ...
ಇನ್ನೂ ಮೂರು ವಾರ ಭಾನುವಾರದ ಲಾಕ್ಡೌನ್ ಮುಂದುವರೆಯಲಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ತಡೆಗೆ ಪ್ರತಿದಿನ ರಾತ್ರಿ ಕರ್ಫ್ಯೂ ಮತ್ತು ಪ್ರತಿ ಭಾನುವಾರ ಲಾಕ್ಡೌನ್ ಜಾರಿ ಮಾಡಲಾಗಿದೆ.ಆಗಸ್ಟ್ 2 ರವರೆಗೆ ಭಾನುವಾರದ ಲಾಕ್ಡೌನ್ ಜಾರಿ ಮಾಡಲಾಗಿದೆ. ಮುಂದಿನವಾರಕ್ಕೆ ಲಾಕ್ಡೌನ್ ಮುಕ್ತಾಯವಾಗಬಹುದು. ಇಲ್ಲವೇ ಈ ವಾರಕ್ಕೆ ಲಾಕ್ಡೌನ್ ಕೊನೆಯಾಗಬಹುದು ಎಂದು ಹೇಳಲಾಗಿತ್ತು.ಆದರೆ, ಇನ್ನು ಮೂರು ವಾರ ಲಾಕ್ಡೌನ್ ಮುಂದುವರಿಸಲು...
ಸುಳ್ಯದಲ್ಲಿ ನ್ಯಾಯವಾದಿಯಾಗಿರುವ ಕೃಷ್ಣ ಪ್ರಸಾದ್ ದೋಳ ದ.ಕ. ಜಿಲ್ಲಾ ನೋಟರಿಯಾಗಿ ಕೇಂದ್ರ ಸರಕಾರದಿಂದ ನೇಮಕಗೊಂಡಿದ್ದಾರೆ.ಇವರು ನೆಲ್ಲೂರು ಕೆಮ್ರಾಜೆ ಗ್ರಾಮದ ದೋಳ ಮನೆಯ ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಗೌಡ ಮತ್ತು ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ತಂಗಮ್ಮ ಡಿ.ಬಿ.ಯವರ ಪುತ್ರ. ಇವರ ಪತ್ನಿ ಶ್ರೀಮತಿ ಸೌಮ್ಯ ಪಿ.ಎನ್. ಸುಳ್ಯದಲ್ಲಿ ಉಪವಲಯಾ ರಣ್ಯಾಧಿಕಾರಿಯಾಗಿದ್ದಾರೆ. ಕೃಷ್ಣ ಪ್ರಸಾದರು ಪದವಿ ಪೂರ್ವ...
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೋನ ವೈರಸ್ ಮಹಾಮಾರಿಯು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಸಾರ್ವಜನಿಕ ಸ್ಥಳಗಳು ಹಾಗೂ ಸರಕಾರಿ ಇಲಾಖಾ ಕಚೇರಿಗಳ ಪರಿಸರಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಲಾಗುತ್ತಿದೆ.ಸಾರ್ವಜನಿಕರು ಹೆಚ್ಚಾಗಿ ವಿವಿಧ ಉದ್ದೇಶಗಳಿಂದ ಪೊಲೀಸ್ ಠಾಣೆಗಳಿಗೆ ಬರುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಇಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಠಾಣೆಯ ಒಳಭಾಗ ಮತ್ತು ಹೊರಭಾಗ ಪರಿಸರವನ್ನು ಸ್ಯಾನಿಟೈಸ್ ಮಾಡಲಾಗಿದೆ.
ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಸುಬ್ರಹ್ಮಣ್ಯ ಇಲ್ಲಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ತಾರಕೇಶ್ವರಿ ಯು.ಎಸ್. ಅವರು "ಕರಾವಳಿ ಕರ್ನಾಟಕದಲ್ಲಿ ಹಿಂದುತ್ವದ ರಾಜಕಾರಣ - ದಕ್ಷಿಣ ಕನ್ನಡದಲ್ಲಿ ಹಿಂದೂ ಸಂಘ ಸಂಸ್ಥೆಗಳ ವಿಸ್ತರಣೆ ಮತ್ತು ಹಿಂದುತ್ವದ ಸಿದ್ದಾಂತದ ಪ್ರಸರಣದ ಒಂದು ಅಧ್ಯಯನ" ಎಂಬ ವಿಷಯವನ್ನು ಅಧ್ಯಯನ ಮಾಡಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ...
ಕಮಿಲ ಪುಚ್ಚಪ್ಪಾಡಿ ಬಸ್ ನಿಲ್ದಾಣದ ಪರಿಸರ ಕುಡುಕರ ಹಾವಳಿಯಿಂದ ಕಸ,ಬಾಟಲ್ ರಾಶಿ ಬಿದ್ದು ಅಸಹ್ಯವೆನಿಸುವ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ಸ್ಥಳೀಯ ಕುಲದೇವತಾ ಪ್ರಗತಿ ಬಂಧು ತಂಡದ ಸದಸ್ಯರು ಸ್ವಚ್ಛಗೊಳಿಸಿದರು.ಜತೆಗೆ ಗೋಡೆಗೆ ಪೈಂಟ್ ಮಾಡಿ ಸುಂದರಗೊಳಿಸಿದ್ದಾರೆ. ಈ ಕಾರ್ಯಕ್ಕೆ ಸಂಘದ ಸದಸ್ಯರಾದ ಲೋಕೇಶ್ ಕಮಿಲ, ಪೂವಪ್ಪ ಪೂಜಾರಿ, ವೆಂಕಪ್ಪ ಪೂಜಾರಿ, ಲಿತಿನ್, ಅನಿಲ್ ಹಾಗೂ ನಿಖಿಲ್ ಸಾಥ್...
ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರವು ಈದ್ ನಮಾಝ್ ನಿರ್ವಹಿಸುವ ಮಸೀದಿಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಈ ನಿಟ್ಟಿನಲ್ಲಿ ಈದ್ ನಮಾಜ್ ಗೆ ಪೂರ್ವ ಸಿದ್ಧತೆಯಾಗಿ ಇಂದು ಪಂಜ ನೆಕ್ಕಿಲ ಜುಮಾ ಮಸೀದಿಯಲ್ಲಿ ಮಸೀದಿ ಪರಿಸರವನ್ನು ಸ್ವಚ್ಛತೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಸಂಘಟನೆಯ ಮುಖಂಡರು , ಟೀಮ್ ಇಸಾಬ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.
Loading posts...
All posts loaded
No more posts
