ಸುಳ್ಯ ನಗರದ ವಿವಿಧೆಡೆಗಳಲ್ಲಿ ಬರೆಕುಸಿತ

ಸುಳ್ಯ ನಗರದ ಕೆಲವು ಭಾಗಗಳಲ್ಲಿ ಬರೆಕುಸಿತ ಉಂಟಾಗುತ್ತಿದ್ದು ಜನರು ಆತಂಕದಲ್ಲಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಸುಳ್ಯ ತಾಲೂಕಿನಾದ್ಯಂತ ಜನರಲ್ಲಿ ಆತಂಕದ ಛಾಯೆ ಮೂಡಿದೆ. ಒಂದೆಡೆ ಕೊರೋನಾ ಮಹಾಮಾರಿಯು ಸುಳ್ಯವನ್ನು ಕಾಡುತ್ತಿದ್ದರೆ ಮತ್ತೊಂದೆಡೆ ಮಳೆಯು ತನ್ನ ರುದ್ರ ನರ್ತನದಿಂದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಕುಂಬರ್ಚೋಡು ಮನೆಯ ಮೇಲೆ ಬರೆ ಕುಸಿದು ಬಿದ್ದು ಸಂಪೂರ್ಣ ಹಾನಿ

ನಿನ್ನೆ ಸಂಜೆಯಿಂದಲೇ ಸುರಿದ ಭಾರಿ ಮಳೆಯಿಂದ ಸುಳ್ಯ ಕುಂಬರಚ್ಚೋಡು ಬಳಿ ರಾತ್ರಿ ವೇಳೆ ಮನೆ ಮೇಲೆ ಬರೆ ಕುಸಿದುಬಿದ್ದು ಮನೆ ಸಂಪೂರ್ಣ ಹಾನಿಗೊಂಡಿದೆ. ಬರೆ ಜರಿಯುವ ಸಂದರ್ಭದಲ್ಲಿ ಮನೆ ಮಂದಿ ಹೊರಗಡೆ ಬಂದಿದ್ದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ .
Ad Widget

ಕೌಡಿಚ್ಚಾರ್ ನ ವ್ಯಕ್ತಿಗೆ ಸುಳ್ಯ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡ

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಕೌಡಿಚ್ಚಾರ್ ನ ವ್ಯಕ್ತಿಗೆ ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪಾಸಿಟಿವ್ ಧೃಡಪಟ್ಟಿದೆ.

ಪೆರುವಾಜೆ : ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮ

ಇಂದಿರಾ ಪ್ರಿಯದರ್ಶನಿ ಚಾರಿಟೇಬಲ್ ಟ್ರಸ್ಟ್ ಬೆಳ್ಳಾರೆ ಇದರ ವತಿಯಿಂದ ಪೆರುವಾಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅಯುಷ್ಮಾನ್ ಭಾರತ್ ಯೋಜನೆ ನೋಂದಣಿ ಕಾರ್ಯಕ್ರಮವನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಉದ್ಘಾಟಿಸಿ ಶುಭಹಾರೈಸಿದರು.ಸಭಾಧ್ಯಕ್ಷತೆಯನ್ನು ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಚಾವಡಿ ಬಾಗಿಲು ವಹಿಸಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿ ವೀಕ್ಷಕ ಕೃಷ್ಣಪ್ಪ, ಪೆರುವಾಜೆ ಗ್ರಾಮ...

ಆಲೆಟ್ಟಿಯ ವ್ಯಕ್ತಿಗೆ ಇಂದು ಕೋವಿಡ್ ಪಾಸಿಟಿವ್

ಆಲೆಟ್ಟಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಇಂದು ಕೊರೊನ ಪಾಸಿಟಿವ್ ಬಂದಿದೆ. ಅವರನ್ನು ಸುಳ್ಯ ಕೋವಿಡ್ ಆಸ್ಪತ್ರೆ ನಲ್ಲಿ ಕಾರಂಟೈನ್ ಗೊಳಪಡಿಸಲಾಗಿದೆ.

ತಾಲೂಕಿನಾದ್ಯಂತ ಸುರಿದ ಭಾರಿ ಮಳೆಗೆ ತುಂಬಿ ಹರಿಯುತ್ತಿರುವ ನದಿಗಳು, ಕೆಲವೆಡೆ ಹಾನಿ

ಸುಳ್ಯ ತಾಲೂಕಿನಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ತಾಲೂಕಿನಾದ್ಯಂತ ನದಿ, ಹೊಳೆ ತುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.ಸುಳ್ಯದ ಪಯಸ್ವಿನಿ ನದಿ ಕೂಡ ಅಪಾಯದ ಮಟ್ಟಮೀರಿ ಹರಿಯುತ್ತಿದ್ದು ತಗ್ಗು ಪ್ರದೇಶಗಳಿಗೆ, ತೋಟಗಳಿಗೆ ನೀರು ನುಗ್ಗಿದೆ.ಕಲ್ಲುಗುಂಡಿಯ ಕಡೆಪಾಲದ ಬಳಿ ಬರೆ ಕುಸಿದು ರಸ್ತೆಗೆ ಮರ ಬಿದ್ದಿದ್ದನ್ನು ಅಗ್ನಿಶಾಮಕ ದಳ ತೆರವುಗೊಳಿಸಿದೆ. ಅನೆಗುಂಡಿ ಬಳಿ ಬರೆಕುಸಿದಿದೆ, ಕುಕ್ಕಂದೂರು ಸಮೀಪ...

ಅಮರ ಸುಳ್ಯ ಸುದ್ದಿ ಪತ್ರಿಕೆ ಮೂವರು ವರದಿಗಾರರಿಗೆ ಕೋವಿಡ್ 19 ಪಾಸಿಟಿವ್ :

ಅಮರ ಸುಳ್ಯ ಸುದ್ದಿ ಪತ್ರಿಕೆಯ ವರದಿಗಾರ ಬೆಳ್ಳಾರೆಯಲ್ಲಿ ಆಗಸ್ಟ್ 6ರಂದು ಕೋವಿಡ್ 19 ರ ತಪಾಸಣೆಯ ವೇಳೆ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ, ಪ್ರಾಥಮಿಕ ಸಂಪರ್ಕ ಹೊಂದಿದ ಹಿನ್ನೆಲೆಯಲ್ಲಿ ಸಂಸ್ಥೆಯ ಇಬ್ಬರು ವರದಿಗಾರರು ಇಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೆ ಒಳಗಾದಾಗ ಇಬ್ಬರಿಗೂ ಪಾಸಿಟಿವ್ ವರದಿ ಬಂದಿರುತ್ತದೆ.ಇದರಿಂದ ಇಬ್ಬರು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಕ್ವಾರಂಟೈನ್...

ಕಲ್ಲುಗುಂಡಿ : ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ , ಕರಸೇವಕರಿಗೆ ಸನ್ಮಾನ

1990ರಲ್ಲಿ ನಡೆದ ಶ್ರೀ ರಾಮ ಜನ್ಮಭೂಮಿ ಹೋರಾಟದಲ್ಲಿ ದ.ಕ.ಸಂಪಾಜೆ ಗ್ರಾಮದಿಂದ ಕರಸೇವಕರಾಗಿ ಪಾಲ್ಗೊಂಡ ಎಸ್.ಪಿ.ಲೋಕನಾಥ್, ಎಂ.ಎಲ್.ಪೂವಯ್ಯ , ಕೆ.ಶೀನಪ್ಪ ಕೈಪಡ್ಕ, ಪಿ.ಎಚ್. ವೆಂಕಪ್ಪ ಪೆರುಂಗೋಡಿ, ಕೆ.ಜಯರಾಮ ಕೊಚ್ಚಿ ಕಡೆಪಾಲ ಇವರುಗಳನ್ನು ಸುಳ್ಯಕೋಡಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ಭಕ್ತರ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಚಕರಾದ ನಾರಾಯಣ ರಾವ್, ಜ್ಯೋತಿಷಿ ಗುರುರಾಜ್, ಶಂಕರಪ್ರಸಾದ್ ರೈ, ಜಯಾನಂದ...

ಎಪಿಎಂಸಿಯ ತರಬೇತಿ ಶಿಬಿರದಲ್ಲಿ ಶಿಲಾನ್ಯಾಸದ ನೇರಪ್ರಸಾರ

ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಆತ್ಮ ನಿರ್ಭರ ಭಾರತಕ್ಕಾಗಿ ನೈಪುಣ್ಯ ತರಬೇತಿ ಶಿಬಿರ ನಡೆಯಿತ್ತಿದ್ದು ಅಯೋಧ್ಯೆ ರಾಮ ಮಂದಿರ ಇದರ ಭೂಮಿ ಪೂಜೆಯನ್ನು ಪರದೆಯ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು ಎಲ್ಲಾ ತರಬೇತಿ ಶಿಬಿರಾರ್ಥಿಗಳಿಗೂ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯ ನೇರ ಪ್ರಸಾರವನ್ನು ದೊಡ್ಡ ಪರದೆಯ ಮುಖಾಂತರ ವೀಕ್ಷಿಸಿದರು. ಈ...

ಮುಚ್ಚಿದ ಶಾಲೆಯನ್ನು ಮತ್ತೆ ತೆರೆಸಿದ ಅಶೋಕ್ ನೆಕ್ರಾಜೆ

ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾರೆ ಸುಬ್ರಹ್ಮಣ್ಯ ಕ್ಷೇತ್ರದ ತಾ.ಪಂ ಸದಸ್ಯ ಅಶೋಕ್ ನೆಕ್ರಾಜೆ.1963ರಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ದೇವರಹಳ್ಳಿ (ಕಲ್ಲಾಜೆ) ಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಇತ್ತೀಚಿನ ದಿನಗಳಲ್ಲಿ ಮಕ್ಕಳ್ಳಿಲ್ಲದೆ ಶಾಲೆ ಮುಚ್ಚಲ್ಪಟ್ಟಿತು. ಇತ್ತೀಚಿಗೆ ಊರವರು ಸುಬ್ರಹ್ಮಣ್ಯ ತಾಲೂಕ್ ಪಂಚಾಯತ್ ಕ್ಷೇತ್ರದ ಸದಸ್ಯ...
Loading posts...

All posts loaded

No more posts

error: Content is protected !!