- Wednesday
- August 5th, 2026
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸರಕಾರದಿಂದ ನೇಮಕಗೊಂಡ ಶಾಸಕ ಎಸ್. ಅಂಗಾರ ಹಾಗೂ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಧಿಕಾರ ಸ್ವೀಕರಿಸಿದರು. ಕೃಷ್ಣ ಶೆಟ್ಟಿ ಕಡಬ ಅವರ ಬದಲಾಗಿ ಮನೋಹರ ರೈ ಅವರನ್ನು ಸರಕಾರ ನೇಮಕಗೊಳಿಸಿತ್ತು. ಅಧಿಕಾರ ಸ್ವೀಕಾರ ವೇಳೆ ಸಮಿತಿ ಸದಸ್ಯರುಗಳಾದ ಮೋಹನ ರಾಮ್ ಸುಳ್ಳಿ, ಪಿ.ಜಿ.ಎಸ್...
ಖಾಸಗಿ ಬಸ್ ನಿಲ್ದಾಣದ ಎದುರು ಫುಟ್ ಪಾತ್ ಕುಸಿತಗೊಂಡು ಹಲವು ಸಮಯ ಕಳೆದರೂ ದುರಸ್ತಿ ಪಡಿಸಿರಲಿಲ್ಲ. ಇದಕ್ಕೆ ಬಿದ್ದು ಕೆಲವರು ಗಾಯಗೊಂಡ ಘಟನೆ ಕೂಡ ನಡೆದಿತ್ತು. ಇದನ್ನು ಗಮನಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಫುಟ್ ಪಾತ್ ದುರಸ್ತಿಗೊಳಿಸಿ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಕರವೇ ಅಧ್ಯಕ್ಷ ಅಶೋಕ್ ಕುಮಾರ್,ರುಕ್ಮಯ್ಯ ಕುರುಂಜಿ,ನಾರಾಯಣ, ಗಣೇಶ ಪಲ್ಲತಡ್ಕ,ವಿಜಯ ಕುರುಂಜಿ,ಚಿದಾನಂದ ಕಲ್ಲಗುಡ್ಡೆ,ಯೋಗೀಶ್...
ಸುಳ್ಯ ತಾಲೂಕಿನ ಕಸಬಾ ಗ್ರಾಮದ ಕಲ್ಲು ಮುಟ್ಲು ಜಯರಾಮ ನಾಯರ್ ಎಂಬವರ ಮನೆಯ ಮುಂಭಾಗದಲ್ಲಿ ಭೂ ಕುಸಿತ ಉಂಟಾಗಿ ಅವರಿಗೆ ಯಾವುದೇ ಪರಿಹಾರ ಸಿಗದೇ ಅವರು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಗೆ ತಿಳಿಸಿದ್ದರು. ಈ ಬಗ್ಗೆ ಅಧ್ಯಕ್ಷರಾದ ಪಿ.ಸುಂದರ ಪಾಟಾಜೆಯವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೂಡಲೇ ಸಂದಿಸಿದ್ದು...
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಲುನಾಡ್ (ರಿ), ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಹಾಗೂ ಕಲಾ ವಿಕಾಸ (ರಿ) ಕಳಂಜ ಇವರ ಜಂಟಿ ಆಶ್ರಯದಲ್ಲಿ ನಡೆದ 'ಬಲೆ ತುಲು ಲಿಪಿ ಕಲ್ಪುಗ' ಕಾರ್ಯಾಗಾರ ಹಾಗೂ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ವತಿಯಿಂದ ಕಳೆದೆರಡು ತಿಂಗಳಿನಿಂದ ನಡೆದು ಕೊಂಡು ಬಂದಿದ್ದ ಭಜನಾ ಶಿಬಿರದ ಸಮಾರೋಪ...
ಸುಬ್ರಮಣ್ಯಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವೃದ್ಧ ದಂಪತಿಗಳಿಗೆ ಮರಳಿ ಊರಿಗೆ ತೆರಳಲು ಕೈಯಲ್ಲಿ ಹಣವಿಲ್ಲದೆ ಸುಳ್ಯ ಬಸ್ ನಿಲ್ದಾಣದಲ್ಲಿ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುತ್ತಿದ್ದ ಸಂದರ್ಭ ಸ್ಥಳೀಯರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಗರ ಪಂಚಾಯತಿ ಸದಸ್ಯ ರಿಯಾಜ್ ಕಟ್ಟೆಕಾರ್ ರವರು ವೃದ್ಧ ದಂಪತಿಗಳಿಗೆ ಊರಿಗೆ ತೆರಳಲು ಬಸ್ಸಿನ ದರವನ್ನು ನೀಡಿ ಮಾನವೀಯತೆಯನ್ನು ಮೆರೆದಿದ್ದಾರೆ. ಶೌಚಾಲಯದ ಸ್ವಚ್ಛತೆಯ...
ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ, ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆಯಲ್ಲಿಈ ವರ್ಷದ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ದೀಪ ಬೆಳಗಿಸಿ ಉದ್ಘಾಟಿಸಿದರು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಅತಿಥಿಗಳಾಗಿದ್ದು ಶುಭ ಹಾರೈಸಿದರು. ಹಿಮ್ಮೇಳ ಗುರು ಕುಮಾರ ಸುಬ್ರಹ್ಮಣ್ಯ ವಳಕುಂಜ ಉಪಸ್ಥಿತರಿದ್ದರು. ರಂಗಮನೆ ಅಧ್ಯಕ್ಷರಾದ ಜೀವನ್...
ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ನೂತನ ನಿರ್ದೇಶಕರಾಗಿ ಸತೀಶ್ ಮೂಕಮಲೆ ಆಯ್ಕೆಯಾಗಿದ್ದಾರೆ. ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ, ವಳಲಂಬೆ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ವಳಲಂಬೆ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಯುವಕ ಮಂಡಲ ಗುತ್ತಿಗಾರು, ನ್ಯೂ ಯಂಗ್ ಸ್ಟಾರ್ ಸ್ಪೋರ್ಟ್ಸ್ ಕ್ಲಬ್, ಮಿತ್ರಬಳಗ ವಳಲಂಬೆ, ಶ್ರೀ ಕೃಷ್ಣ...
ಸುಬ್ರಹ್ಮಣ್ಯದ ಬಿ.ಆರ್.ಕಾಂಪ್ಲೆಕ್ಸ್ ನಲ್ಲಿ ಮೋದಿಕೇರ್ ಉತ್ಪನ್ನಗಳ ಡಿಸ್ಟ್ರಿಬ್ಯೂಟ್ ಪಾಯಿಂಟ್ ಮಹಮ್ಮಾಯಿ ಎಲೆಕ್ಟ್ರಾನಿಕ್ಸ್, ಈಝಿ ಬಜಾರ್ ಹತ್ತಿರ ಇಂದು ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಧೀರೇನ್ ಪರಮಲೆ ಉದ್ಘಾಟಿಸಿ ಮಾತನಾಡಿ ಇಂದಿನ ಕಾಲದಲ್ಲಿ ನಾವು ಆಶಾವಾದ ಹೊಂದಿದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು. ನೆಟ್ಟಣದ ಸಿ ಪಿ ಸಿ ಆರ್ ಐ ತಾಂತ್ರಿಕ ಅಧಿಕಾರಿ ಗೋಪಾಲಕೃಷ್ಣ...
ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ಪ್ರಖಂಡದ ವತಿಯಿಂದ ತೊಡಿಕಾನ ದೇವರಗುಂಡಿ ಹಾಗೂ ಮೀನಿನ ಗುಂಡಿ ಸ್ವಚ್ಛತೆ ನಡೆಸಲಾಯಿತು. ಅಧ್ಯಕ್ಷ ಸೋಮಶೇಖರ್ ಪೈಕ, ರಂಜಿತ್ ಸುಳ್ಯ ಕಾರ್ಯದರ್ಶಿ, ನವೀನ್ ಎಲಿಮಲೆ, ಸನತ್ ಚೊಕ್ಕಾಡಿ, ಧನುಷ್ ಮುರೂರ್, ಮಹೇಶ್ ಕುತ್ಯಾಳ, ರಾಜೇಂದ್ರ ಅರಂತೋಡು ಮತ್ತಿತರರು ಭಾಗವಹಿಸಿದ್ದರು.
Loading posts...
All posts loaded
No more posts
