ತೊಡಿಕಾನ : ಹೋಟೆಲ್ ಮಾಲಕ ಆತ್ಮಹತ್ಯೆ

ತೊಡಿಕಾನದಲ್ಲಿ ಹೋಟೆಲ್ ನಡೆಸುತ್ತಿದ್ದ ಮುಪ್ಪಸೇರು ಧರ್ಮಪಾಲ ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ. ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ. ಮನೆಯ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಾಯಿ,ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರ ರನ್ನು ಅಗಲಿದ್ದಾರೆ.

ಮೊಗ್ರ ಸೇತುವೆ – ಕಮಿಲ ರಸ್ತೆ ಸಮಸ್ಯೆ : ಕಮಿಲ ನಾಗರಿಕರಿಂದ ಪ್ರಧಾನಿಗಳಿಗೆ ವಿಡಿಯೋ ಸಿಡಿ ರವಾನೆ

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಪ್ರದೇಶದಲ್ಲಿ ಸೇತುವೆ ನಿರ್ಮಾಣ ಹಾಗೂ ಗುತ್ತಿಗಾರು-ಕಮಿಲ-ಬಳ್ಪ ರಸ್ತೆ ಸಮಸ್ಯೆಯ ವಿಡಿಯೋ ಸಹಿತ ವಿವರಣೆಯ ಸಿಡಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರು ಕಮಿಲ ಅಂಚೆ ಕಚೇರಿ ಮೂಲಕ ಮಂಗಳವಾರ ಕಳುಹಿಸಿದ್ದಾರೆ.ಇಂದು ಆಧುನಿಕ ಮಾಧ್ಯಮಗಳಿದ್ದರೂ ಅಂಚೆ ಕಚೇರಿ ಮೂಲಕವೇ ಸಮಸ್ಯೆಗಳನ್ನು...
Ad Widget

ಮನ್ವಿತ್ ಆರ್. ಪಡ್ಡಂಬೈಲು – ಜ್ಞಾನ ಮಂದಾರ’ ಅರಳು ಮಲ್ಲಿಗೆ ‘ರಾಜ್ಯ ಪ್ರಶಸ್ತಿ ಗೆ ಆಯ್ಕೆ

     ಜ್ಞಾನಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರು ಕೊಡ ಮಾಡುವ ರಾಜ್ಯಮಟ್ಟದ 'ಅರಳುಮಲ್ಲಿಗೆ' ಪ್ರಶಸ್ತಿ ಗೆ ಬಹುಮುಖ ಪ್ರತಿಭೆಯ ಮಾ| ಮನ್ವಿತ್ ಆರ್.ಪಡ್ಡಂಬೈಲ್ ಆಯ್ಕೆಯಾಗಿರುತ್ತಾನೆ.               ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಮನ್ವಿತ್ ಬಾಲ್ಯದಿಂದಲೇ ಚಿತ್ರಕಲೆ,ಯಕ್ಷಗಾನ ,ಸಂಗೀತ, ಕೊಳಲು,ನಾಟಕ  ಮುಂತಾದ ಕಲೆಗಳಲ್ಲಿ ಆಸಕ್ತಿ ಹೊಂದಿದ್ದು ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಬಹುಮಾನವನ್ನು...

ಮುಕ್ಕೂರು : ಯುವಸೇನೆ ಟ್ರೋಫಿ-2020 ಹಾಗೂ ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ – ಎಲ್ಲರನ್ನು ಒಂದುಗೂಡಿಸುವ ಸಾಮರ್ಥ್ಯ ಕ್ರೀಡೆಗಿದೆ : ಆಂಜನೇಯ ರೆಡ್ಡಿ

ಯಾರೆಂದರೆ ಮುಕ್ಕೂರು : ಎಲ್ಲ ವರ್ಗದ, ಪ್ರದೇಶದ ಜನರನ್ನು ಬೇಧಭಾವ ಇಲ್ಲದೆ ಸಾಮರಸ್ಯದ ಮನೋಭಾವದಿಂದ ಒಂದುಗೂಡಿಸುವ ಸಾಮರ್ಥ್ಯ ಇರುವುದು ಕ್ರೀಡೆಗೆ ಮಾತ್ರ ಎಂದು ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಹೇಳಿದರು. ಯುವ ಸೇನೆ ಮುಕ್ಕೂರು ಇದರ ಆಶ್ರಯದಲ್ಲಿ ಮುಕ್ಕೂರು ಶಾಲಾ ಕ್ರೀಡಾಂಗಣದಲ್ಲಿ ನ.8 ರಂದು ನಡೆದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಯುವಸೇನ...

ಕಲ್ಲುಗುಂಡಿ ಹೊರಠಾಣೆಗೆ ಫ್ಯಾನ್ ಕೊಡುಗೆ

ಸಂಪಾಜೆ ಲಯನ್ಸ್ ಕ್ಲಬ್ ವತಿಯಿಂದ ಕಲ್ಲುಗುಂಡಿ ಹೊರಠಾಣೆ ಕಚೇರಿಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು. ಠಾಣಾಧಿಕಾರಿ ಚಾಮಯ್ಯರವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷರಾದ ಲಯನ್ ವಾಸುದೇವ ಕಟ್ಟೆಮನೆ, ಲಯನ್ ಪ್ರಶಾಂತ್ ಬಾಲನ್, ಲಯನ್ ಕಿಶೋರ್‍ ಪಿ.ಬಿ ಉಪಸ್ಥಿತರಿದ್ದರು.

ಸುಳ್ಯ : ಯುವಜನ ಸಂಯುಕ್ತ ಮಂಡಳಿ ನಿರ್ದೇಶಕರಾಗಿ ಸಂಜಯ್ ನೆಟ್ಟಾರ್

ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಇದರ ನೂತನ ನಿರ್ದೇಶಕರಾಗಿ ಸಂಜಯ್ ನೆಟ್ಟಾರ್ ಆಯ್ಕೆಯಾಗಿದ್ದಾರೆ. ಇವರು ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಅಧ್ಯಕ್ಷರಾಗಿದ್ದಾರೆ.

ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಅವರಿಗೆ ಸುಳ್ಯದಲ್ಲಿ ನುಡಿನಮನ

ಸುಳ್ಯ: ಮಹಾತ್ಮ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಇಂದು ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಮಲ್ಪೆ ಇವರಿಗೆ ಟ್ರಸ್ಟ್ ಕಚೇರಿಯಲ್ಲಿ ನುಡಿನಮನ ಸಲ್ಲಿಸಲಾಯಿತು.ತೆಂಕು -- ಬಡಗು ತಿಟ್ಟು ಮತ್ತು ತಾಳಮದ್ಧಳೆಯಲ್ಲೂ ಪ್ರಸಿದ್ಧಿ ಪಡೆದ ಕರಾವಳಿಯ ಸಾಮ್ರಾಟ " ಸಾಮಗ "ಅವರ ಬಗ್ಗೆ ಟ್ರಸ್ಟ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಮತ್ತು ಉಪಾಧ್ಯಕ್ಷರಾದ ಶಶಿಧರ ಎಂ ಜೆ...

ಬೀದಿಗುಡ್ಡೆ: ಸುಮಾರು 8.39 ಕೋಟಿ ವೆಚ್ಚದ ರಸ್ತೆ ನಿರ್ಮಾಣವಾಗಲಿರುವ ರಸ್ತೆ ಬಗ್ಗೆ ಶಾಸಕ ಅಂಗಾರರಿಂದ ಗ್ರಾಮಸ್ಥರಿಗೆ ಮಾಹಿತಿ

ಬಳ್ಪ ಗ್ರಾಮದ ಅಡ್ಡಬೈಲು - ಬೀದಿಗುಡ್ಡೆ - ಬೋಗಾಯನಕೆರೆ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಎಸ್. ಅಂಗಾರರಿಂದ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕಾರ್ಯಕ್ರಮವು ನ. 9ರಂದು ಬಳ್ಪ ಶ್ರೀ ಭಾರತೀ ತೀರ್ಥ ಸಭಾಂಗಣದಲ್ಲಿ ನಡೆಯಿತು. ಬಿ.ಜೆ.ಪಿ. ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ...

ಚೊಕ್ಕಾಡಿ : ಮಯೂರಿ ಯುವತಿ ಮಂಡಲದ ವತಿಯಿಂದ ಮ್ಯಾಟ್ ಮತ್ತು ಪಿಲ್ಲೋ ರಚನೆ ಬಗ್ಗೆ ತರಬೇತಿ

ಮಯೂರಿ ಯುವತಿ ಮಂಡಲ (ರಿ.) ಚೊಕ್ಕಾಡಿ ಇದರ ವತಯಿಂದ ಮ್ಯಾಟ್ ಮತ್ತು ಪಿಲ್ಲೋ ತಯಾರಿ ತರಬೇತಿ ಕಾರ್ಯಕ್ರಮ ವು ಇತ್ತೀಚೆಗೆ ಜರಗಿತು. ಕಾರ್ಯಕ್ರಮದಲ್ಲಿ ಯುವತಿ ಮಂಡಲ ದ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯೆಯರು ಉಪಸ್ಥಿತರಿದ್ದರು. ಅನೇಕ ಮಂದಿ ಇದರ ಸದುಪಯೋಗವನ್ನು ಪಡೆದುಕೊಂಡರು.

ಚಂದ್ರ ಕೋಲ್ಚಾರ್ ಗೆ ಸಹಕಾರಿ ರತ್ನ ಪ್ರಶಸ್ತಿ

ಕರ್ನಾಟಕ ರಾಜ್ಯ ಸರಕಾರದಿಂದ ಕೊಡಲ್ಪಡುವ "ಸಹಕಾರಿ ರತ್ನ " ಪ್ರಶಸ್ತಿಗೆ ದ. ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಭಾಜನರಾಗಿದ್ದಾರೆ.‌ ಇವರು ಐವರ್ನಾಡು ಪ್ರಾ.ಕೃ.ಪ.ಸ.ಸಂಘ ಗೌರವಾಧ್ಯಕ್ಷರಾಗಿದ್ದಾರೆ. ಹಾಗೂ ವೆಂಕಟರಮಣ ಕ್ರೆಡಿಟ್‌ ಕೋ ಆಪರೇಟಿವ್ ಸೊಸೈಟಿ ಇದರ ನಿರ್ದೇಶಕರಾಗಿದ್ದಾರೆ.
Loading posts...

All posts loaded

No more posts

error: Content is protected !!