Ad Widget

ಬದಲಾಗಲಿದೆ ಕ್ರೀಡಾ ಜಗತ್ತು! ಕರೊನಾ ನಂತರ ಹೇಗಿರುತ್ತೆ ಕ್ರೀಡೆ; ಸ್ವಚ್ಛತೆಗೆ ಆದ್ಯತೆ, ಸಾಮಾಜಿಕ ಅಂತರ ಅಗತ್ಯ

ಮಹಾಮಾರಿ ಕರೊನಾದಿಂದಾಗಿ ಈಗ ಜಗತಿಕ ಕ್ರೀಡಾಲೋಕ ಸ್ತಬ್ಧಗೊಂಡಿದೆ. ಸದ್ಯಕ್ಕೆ ಕ್ರೀಡಾ ಚಟುವಟಿಕೆಗಳ ಪುನರಾರಂಭ ಸುಲಭವಲ್ಲ. ಆದರೆ ಮುಂದೊಂದು ದಿನ ಖಂಡಿತ ವಾಗಿಯೂ ಕ್ರೀಡಾಸ್ಪರ್ಧೆಗಳು ಮತ್ತೆ ಶುರುವಾಗಲಿವೆ. ಆದರೆ, ಅದು ಕರೊನಾ ಬರುವುದಕ್ಕೆ ಮುಂಚೆ ಇದ್ದುದಕ್ಕಿಂತ ಸಾಕಷ್ಟು ಬದಲಾವಣೆಗಳನ್ನು ಕಾಣಲಿದೆ ಮತ್ತು ಈ ಬದಲಾವಣೆಯೂ ಅಗತ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಹೇಗಿರಬಹುದು ಎಂಬ ಪ್ರಶ್ನೆಗೆ ಭಾರತದ...

ಅಜ್ಜಾವರ-ಮಂಡೆಕೋಲು-ಕನ್ಯಾನ ತನಕ ವಿದ್ಯುತ್ ಲೈನ್ ಸ್ವಚ್ಛತಾ ಕಾರ್ಯ ನಡೆಸಿದ ಗ್ರಾಮಸ್ಥರು

ಅಜ್ಜಾವರ ಹೈಸ್ಕೂಲ್ ಬಳಿಯಿಂದ ಮಾರ್ಗ ಶಿವಾಜಿನಗರ ಮಂಡೆಕೋಲು ಕನ್ಯಾನ ತನಕ ವಿದ್ಯುತ್ ಲೈನ್ ಸ್ವಚ್ಛಗೊಳಿಸುವ ಕಾರ್ಯ ಮೇ.17ರ ಆದಿತ್ಯವಾರದಂದು ನಡೆಯಿತು. ವೀರಕೇಸರಿ ಮಿತ್ರವೃಂದದ ನೇತೃತ್ವದಲ್ಲಿ ನಡೆದ ಈ ಶ್ರಮದಾನ ಕಾರ್ಯದಲ್ಲಿ ಹಿಂದುಜಾಗರಣ ವೇಧಿಕೆ ಶಿವಾಜಿನಗರದ ಸದಸ್ಯರು ಹಾಗೂ ಇನ್ನಿತರ ಸಂಘಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು. ಸುಮಾರು ಅರವತ್ತು ಜನರಷ್ಟು ಶ್ರಮದಾನದಲ್ಲಿ ಭಾಗವಹಿಸಿದ್ದು ಅಡ್ಪಂಗಾಯ, ಮಾರ್ಗ, ಶಿವಾಜಿನಗರ, ಕನ್ಯಾನ...
Ad Widget

ಸುಬ್ರಹ್ಮಣ್ಯ ಸುತ್ತಮುತ್ತ ಭಾರಿ ಮಳೆ , ಮರ ಬಿದ್ದು ರಸ್ತೆ ತಡೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಪರಿಸರದಲ್ಲಿ ಇಂದು ಮುಂಜಾನೆ ಭಾರೀ ಗಾಳಿ ಮಳೆ ಸುರಿದ ಪರಿಣಾಮವಾಗಿ ರಸ್ತೆಗೆ ಅಡ್ಡಲಾಗಿ ಬೃಹತ್ ಗಾತ್ರದ ಮರಬಿದ್ದು, ಕೆಲಹೊತ್ತು ಸುಬ್ರಹ್ಮಣ್ಯ-ಏನೆಕಲ್ಲು ರಸ್ತೆಸಂಚಾರ ಸ್ಥಗಿತಗೊಂಡ ಘಟನೆ ಸಂಭವಿಸಿದೆ. ಏನೆಕಲ್ಲು ಬಳಿಯ ಬೂದಿಪಳ್ಳ ಎಂಬಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮವಾಗಿ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮೆಸ್ಕಾಂ ಮತ್ತು...

ನಾರ್ಣಕಜೆ : ಮರ ಬಿದ್ದು ವಾಹನ ಸಂಚಾರಕ್ಕೆ ತಡೆ

ನಾರ್ಣಕಜೆ ಬಸ್ ನಿಲ್ದಾಣದ ಸಮೀಪ ಇಂದು ಮುಖ್ಯ ರಸ್ತೆಗೆ ಮರ ಬಿದ್ದು ಕೆಲ ಹೊತ್ತು ಸಂಚಾರಕ್ಕೆ ತಡೆಯುಂಟಾಗಿತ್ತು. ವಿದ್ಯುತ್ ಲೈನ್ ನ ಎರಡು ಕಂಬಗಳು ಮುರಿದು ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಮೆಸ್ಕಾಂ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು.

ಅಂಗಡಿ ಲೈಸೆನ್ಸ್ ನವೀಕರಣ, ತ್ಯಾಜ್ಯ ಶುಲ್ಕ ಸಂಗ್ರಹಣೆ ನ್ಯಾಯಯುತವಲ್ಲ : ವಿನಯಕುಮಾರ್ ಕಂದಡ್ಕ

ಸುಳ್ಯದ ಎಲ್ಲಾ ವರ್ತಕರು ಕಳೆದ ಎರಡು ತಿಂಗಳಿಂದ ವ್ಯವಹಾರ ಸ್ಥಗಿತ ಗೊಳಿಸಿ ಸಂಕಷ್ಟದಲ್ಲಿರುವಾಗ ಸರಕಾರದ ಆದೇಶದ ಹೆಸರಿನಲ್ಲಿ ವಿಪರೀತ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ವಸೂಲು ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ನಗರ ಬಿಜೆಪಿ ಅಭಿಪ್ರಾಯ ಪಟ್ಟಿದೆ.ಈ ಬಾರಿಯ ಅಂಗಡಿ ಲೈಸೆನ್ಸ್ ನವೀಕರಣಕ್ಕೆ ವರ್ತಕರು ನೀಡಿದ ಸಂದರ್ಭದಲ್ಲಿ ವಿವಿಧ ರೀತಿಯ ವ್ಯವಹಾರಗಳಿಗೆ 600ರೂ ನಿಂದ...

ಸುಳ್ಯ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಶಾಸಕ ಎಸ್ ಅಂಗಾರ

ಸುಳ್ಯ ತಾಲೂಕಿನ ಹಲವು ವರ್ಷಗಳ ಕನಸಾಗಿರುವ 110 ಕೆವಿ ವಿದ್ಯುತ್ ವಿತರಣಾ ಸಬ್ ಸ್ಟೆಷನ್ ಕಾಮಗಾರಿಯ ಬಗ್ಗೆ ಕೊರೋನ ವೈರಸ್ ಸಮಸ್ಯೆ ಮುಗಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವುದಾಗಿ ಶಾಸಕ ಅಂಗಾರ ಹೇಳಿದರು.ಮೇ 17ರಂದು ಸುಳ್ಯ ಐ ಬಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಕಾಮಗಾರಿಗೆ ಅರಣ್ಯ ಭೂಮಿ ಮಂಜೂರಾತಿ...

ಕನಕಮಜಲು: ನಾಡಿಗೆ ಬಂದ ಕಾಳಿಂಗ ಸರ್ಪ ಮರಳಿ ಕಾಡಿಗೆ

ಕನಕಮಜಲ ಗ್ರಾಮದ ಪಂಜಿಗುಂಡಿ ಕಾಲನಿ ಬಳಿ ಮೇ ೧೬ ರಂದು ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ ವಾಗಿತ್ತು. ಸ್ಥಳೀಯ ನಿವಾಸಿಗಳು ಉರಗ ಪ್ರೇಮಿ ಜಾಲ್ಸೂರಿನ ಶ್ಯಾಮ್ ಭಟ್ ಅವರಿಗೆ ತಿಳಿಸಿರುತ್ತಾರೆ. ಸ್ಥಳಕ್ಕೆ ಆಗಮಿಸಿದ ಶ್ಯಾಮ್ ಭಟ್ ಕಾಳಿಂಗ ಸರ್ಪವನ್ನು ಮೇ.೧೭ ರಂದು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದುಬಂದಿದೆ.

ಮಡಿಕೇರಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಕಾರ್ಮಿಕ : ಸುಳ್ಯದಲ್ಲಿ ಅಸ್ವಸ್ಥಗೊಂಡಾಗ ಉಪಚರಿಸಿದ ಸ್ಥಳೀಯರು

ಸುಳ್ಯದ ಕೆಲವು ಯುವಕರು ಮಾನವೀಯತೆ ಮೆರೆದು ಕಾಲ್ನಡಿಗೆಯಲ್ಲಿ ಹೊರಟಿದ್ದ ವ್ಯಕ್ತಿ ಅಸ್ವಸ್ಥಗೊಂಡು ಸುಳ್ಯದಲ್ಲಿ ಬಿದ್ದ ವ್ಯಕ್ತಿಯನ್ನು ಉಪಚರಿಸಿ ಸ್ವಗ್ರಾಮಕ್ಕೆ ತೆರಳಲು ವ್ಯವಸ್ಥೆ ಮಾಡಿದ ಘಟನೆ ಮೇ ೧೭ ನಡೆದಿದೆ. ಮಂಗಳೂರಿನ ಕಟೀಲು ನಿವಾಸಿ ನಾರಾಯಣ ರೈ ಯವರು ಮಡಿಕೇರಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ದೇಶದಾದ್ಯಂತ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಕೆಲಸ ಇಲ್ಲದೆ ಇತ್ತ ಊರಿಗೂ ತೆರಳಲಾಗದೆ...

ಬಡ ಕುಟುಂಬದ ಮನೆಯ ಬೆಳಕಾದ ಗುತ್ತಿಗಾರು ಗ್ರಾ.ಪಂ.ನ ಕೋವಿಡ್ ಕಾರ್ಯಪಡೆ

ಸುಳ್ಯ (ದಕ್ಷಿಣ ಕನ್ನಡ): ಲಾಕ್ಡೌನ್ ಸಮಯದಲ್ಲಿ ಗ್ರಾಮ ಪಂಚಾಯತ್ ಕಚೇರಿಯಿಂದ ಹೊರಬಂದು ಬಡ ವ್ಯಕ್ತಿಯ ಮನೆ ಛಾವಣಿ ಏರಿ, ಮನೆ ರಿಪೇರಿ ಮಾಡಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಯುತ ಗುತ್ತಿಗಾರು ನೇತೃತ್ವದ ಕೋವಿಡ್ ಕಾರ್ಯಪಡೆ ಮಾನವೀಯತೆಯ ಕೆಲಸ ಮಾಡಿ ಸಮಾಜಕ್ಕೆ ಮಾದರಿಯಾಗಿದೆ. ವಾಸಯೋಗ್ಯ ಮನೆ ಇಲ್ಲದೆ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಯ ನಡುವ ಮಳೆಗಾಲದ...

ಅಮರ ಸಂಘಟನೆಯಿಂದ ‘ಅಮ್ಮ ಐ ಲವ್ ಯೂ ‘ ಅಭಿಯಾನ

ಮೇ 10 ರಂದು ವಿಶ್ವ ತಾಯಂದಿರ ದಿನದ ಪ್ರಯುಕ್ತ ಅಮರ ಸಂಘಟನಾ ಸಮಿತಿ ವತಿಯಿಂದ ವಿಶೇಷ ಅಭಿಯಾನವೊಂದನ್ನು ಆಯೋಜಿಸಲಾಗಿತ್ತು. "ಅಮ್ಮ ಐ ಲವ್ ಯೂ" ಎಂಬ ಶೀರ್ಷಿಕೆಯಡಿ ಸೆಲ್ಫಿ ಫೋಟೋ ಅಭಿಯಾನವನ್ನು ಆಯೋಜಿಸಲಾಗಿತ್ತು. ಅಮರ ಮುಡ್ನೂರು ಹಾಗೂ ಪಡ್ನೂರಿನ ಅಮರ ಸಂಘಟನಾ ಸಮಿತಿ ನಡೆಸಿದ ಈ ಅಭಿಯಾನದಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿ ಸೆಲ್ಫಿ ಫೋಟೋಗಳು ಸಂಗ್ರಹವಾಗುವುದರ...
Loading posts...

All posts loaded

No more posts

error: Content is protected !!