ಐವರ್ನಾಡು: ಪಾಲೆಪ್ಪಾಡಿ- ಅಮಲ ರಸ್ತೆ ದುರಸ್ತಿಗೆ ಆಗ್ರಹಿಸಿ ಜ.3ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ

ಐವರ್ನಾಡು, ಪಾಂಬಾರು, ಅಮಲ, ರಸ್ತೆಯ ದುರಸ್ತಿಯಾಗಿರದೇ ಇರುವುದನ್ನು ವಿರೋಧಿಸಿ ಜ.3 ರಂದು ಐವರ್ನಾಡು ಗ್ರಾ.ಪಂ. ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಹೋರಾಟದ ಕುರಿತು ಡಿ. 25 ರಂದು ಪಾಲೆಪ್ಪಾಡಿ ಮಂಜುಶ್ರೀ ಕ್ರೀಡಾಂಗಣದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು. ಹೋರಾಟ ಸಮಿತಿಯ ಅಧ್ಯಕ್ಷರಾಗಿ ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಹಾಗೂ ಉಪಾಧ್ಯಕ್ಷರನ್ನಾಗಿ ಅಶೋಕ್ ಎಡಮಲೆ ಅವರನ್ನು ಆರಿಸಲಾಯಿತು.ಈ ಸಂದರ್ಭದಲ್ಲಿ...

ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಕೊರಗಜ್ಜನ ನೇಮೋತ್ಸವ

ಪೆರುವಾಜೆ ಗ್ರಾಮದ ಕೊಲ್ಯ-ಪೆರುವಾಜೆ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ವರ್ಷಾವಧಿ ಕೊರಗಜ್ಜನ ನೇಮೋತ್ಸವವು ಡಿ.24 ಶುಕ್ರವಾರದಂದು ನಡೆಯಿತು. ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಕೊರಗಜ್ಜ ದೈವದ ಭಂಡಾರ ತೆಗೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ರಾತ್ರಿ ವರ್ಷಾವಧಿಯ ಶ್ರೀ ಕೊರಗಜ್ಜ ದೈವದ ನೇಮೋತ್ಸವ ಜರುಗಿತು. ಈ ಸಂದರ್ಭದಲ್ಲಿ ಶ್ರೀಮತಿ ಮತ್ತು...
Ad Widget

ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಸನ್ಯಾಸಿಗುಡ್ಡೆ ಬ್ರಹ್ಕಕಲಶದಲ್ಲಿ ಭಜನಾ ಸೇವೆ

ಕೆದಂಬಾಡಿ ಸನ್ಯಾಸಿ ಗುಡ್ಡೆ ಶ್ರೀರಾಮ ಮಂದಿರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶದಲ್ಲಿ ಇಂದು ಏಕಾಹ ಭಜನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿದ್ಯಾಬೋಧಿನಿ ಹಿರಿಯ ಪ್ರಾಥಮಿಕ ಶಾಲಾ ಭಜನಾ ತಂಡದಿಂದ ಭಜನಾ ಸೇವೆ ನಡೆಸಲಾಯಿತು. ಶಾಲಾ ಎಸ್ಡಿಎಂಸಿ ಉಪಾಧ್ಯಕ್ಷೆ ಹರಿಣಾಕ್ಷಿ ಮತ್ತು ತರಬೇತುದಾರರಾದ ಸದಾನಂದ ಆಚಾರ್ಯ ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ಭಜನಾ ತಂಡದ ಸುಮಾರು 24 ಸದಸ್ಯರು...

ಬದ್ರೀಯಾ ಕಲ್ಚರಲ್ ಸೆಂಟರ್ ಕಳಂಜ ಇದರ ನೂತನ ಕಛೇರಿಯ ಉದ್ಘಾಟನೆ

ಕಳಂಜ ಬುಖಾರಿಯ ಜುಮಾ ಮಸೀದಿಯ ಬಳಿ ಬದ್ರೀಯಾ ಕಲ್ಚರಲ್ ಸೆಂಟರ್ ಕಳಂಜ ಇದರ ನೂತನ ಕಛೇರಿಯ ಉದ್ಘಾಟನೆ ಕಾರ್ಯಕ್ರಮವು ಡಿ.24ರಂದು ಮಧ್ಯಾಹ್ನ 2 ಗಂಟೆಗೆ ನಡೆಯಿತು. ಉದ್ಘಾಟನೆಯನ್ನು ಊರ ಗಣ್ಯರಾದ ಉದಯ ಚಿಕನ್ ಸೆಂಟರ್ ಮಾಲಕ ಮುಹಮ್ಮದ್ ಕೆ.ಎಂ ನೆರವೇರಿಸಿದರು. ಕಾರ್ಯಕ್ರಮಕ್ಕೆ ದುವಾಶೀರ್ವಾದವನ್ನು ಸಂಶುದ್ದೀನ್ ಪೈಝಿ ಮಾಪಳ್ ನೆರವೇರಿಸಿದರು. ಗಣ್ಯ ಉಪಸ್ಥಿತಿಯಲ್ಲಿ ಬದ್ರೀಯಾ ಕಲ್ಚರಲ್ ಸೆಂಟರ್...

ಹರಿಹರ ಪಲ್ಲತ್ತಡ್ಕ : ಸಂಗಮ ಕ್ಷೇತ್ರದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠೆ

ಹರಿಹರ ಪಲ್ಲತ್ತಡ್ಕದ ಶ್ರೀ ಸಂಗಮ ಕ್ಷೇತ್ರದಲ್ಲಿ ಡಿ.24 ರಂದು ಬೆಳಿಗ್ಗೆ ಗಣಹೋಮ, ಸತ್ಯನಾರಾಯಣ ಪೂಜೆ ಹಾಗೂ ಬಾಲಾಲಯ ಪ್ರತಿಷ್ಠೆ ನಡೆಯಿತು. 2 ವರ್ಷಗಳ ಹಿಂದೆ ಬಾಲಕೃಷ್ಣ ನಾಯರ್ ರವರ ಮುಖಾಂತರ ನಡೆದ ಪ್ರಶ್ನೆಯಲ್ಲಿ ಸಂಗಮ ಕ್ಷೇತ್ರದಲ್ಲಿ ಈಗ ಇರುವ ಅಯ್ಯಪ್ಪ ಸ್ವಾಮಿ ಮಂದಿರವನ್ನು ತೆಗೆದು ಹೊಸದಾಗಿ ಮಂದಿರ ನಿರ್ಮಾಣ ಮಾಡಬೇಕು ಎಂದು ಕಂಡುಬಂದಿದ್ದು, ಕೊರೊನಾದ ಕಾರಣದಿಂದ...

ಹರಿಹರ ಪಲ್ಲತ್ತಡ್ಕ : ಪಾದಾಚಾರಿ ಮಹಿಳೆಗೆ ಸ್ಕೂಟಿ ಡಿಕ್ಕಿ

ಡಿ.22 ರಂದು ಕೊಲ್ಲಮೊಗ್ರ ಕಡೆಯಿಂದ ಗಡಿಕಲ್ಲಿನ ಜಯಪ್ರಕಾಶ್ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿಯೊಂದು ರಸ್ತೆಯಲ್ಲಿ ಹೋಗುತ್ತಿದ್ದ ಪುಟ್ಟಮ್ಮ ಎಂಬ ವೃದ್ಧ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ಅವರ ಬಲ ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಸ್ಕೂಟಿ ಸವಾರ ರಸ್ತೆಗೆ ಬಿದ್ದು ತಲೆಗೆ ಹಾಗೂ ಕೈಗೆ ಸ್ವಲ್ಪ ಗಾಯವಾಗಿದ್ದು, ಹೊಟ್ಟೆಯ ಭಾಗಕ್ಕೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಅಪಘಾತದ ಸಂದರ್ಭದಲ್ಲಿ...

ಜ.17: ಬಳ್ಪ ಉಳ್ಳಾಕುಲು ಮತ್ತು ಶಿರಾಡಿ ರಾಜನ್ ದೈವಗಳ ಪುನರ್‌ಪ್ರತಿಷ್ಠೆ

ಬಳ್ಪ ಮತ್ತು ಕೇನ್ಯ ಗ್ರಾಮ ದೈವ ಶ್ರೀ ಉಳ್ಳಾಕುಲು ಮತ್ತುಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳಪುನರ್‌ಪ್ರತಿಷ್ಠಾ ಮಹೋತ್ಸವ 2022 ಜನವರಿ 17 ಸೋಮವಾರದಂದು ಪೂರ್ವಾಹ್ನ 08-45ರ ಮೀನ ಲಗೃದ ಶುಭ ಮುಹೂರ್ತದಲ್ಲಿಕೆಮ್ಮಿಂಜೆ ವೇದಮೂರ್ತಿ ಬ್ರಹ್ಮಶ್ರೀ ತಂತ್ರಿ ಸುಬ್ರಹ್ಮಣ್ಯ ಬಳ್ಳುಕರಾಯರನೇತೃತ್ವದಲ್ಲಿ ವಿವಿಧ ತಾಂತ್ರಿಕ ವೈದಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಜನವರಿ 16 ರಿಂದ ಆರಂಭಗೊಂಡು ಜ....

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ – 100 ಕೋಟಿಗೂ ಮಿಕ್ಕಿ ವ್ಯವಹಾರ,43.5ಲಕ್ಷ ನಿವ್ವಳ ಲಾಭ

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-21 ನೇ ಸಾಲಿನವಾರ್ಷಿಕ ಮಹಾಸಭೆಯು ಡಿ.19 ರಂದು ಸಂಘದ ಅಧ್ಯಕ್ಷ ಪಿ ಉದಯ ಕುಮಾರ್ ಬೆಟ್ಟ ರವರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ಜರುಗಿತು. ಸಂಘವು ರೂ.100 ಕೋಟಿ 42 ಲಕ್ಷಕ್ಕೂ ಮಿಕ್ಕಿ ವ್ಯವಹಾರ ನಡೆಸಿ ರೂ.43ಲಕ್ಷ 64,287.81 ನಿವ್ವಳ ಲಾಭ ಗಳಿಸಿದೆ. ರೂ.1,73,03,559.32 ವಿವಿಧ ನಿಧಿಗಳಿವೆ. ರೂ.13,65,59,169.95...

ಜಾತ್ಯಾತೀತ ದಳದ ತಾಲೂಕು ಅಧ್ಯಕ್ಷರಾಗಿ ಸುಕುಮಾರ ಕೋಡ್ತುಗುಳಿ

ಸುಳ್ಯ ತಾಲೂಕು ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ನ್ಯಾಯವಾದಿ ಸುಕುಮಾರ ಕೋಡ್ತುಗುಳಿಯವರನ್ನು ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ನೇಮಕಗೊಳಿಸಿದ್ದಾರೆ. ಇವರು 1990 ರಿಂದ 99 ರವರೆಗೆ ಯುವ ಜನತಾದಳದ ಅಧ್ಯಕ್ಷರಾಗಿ ದುಡಿದಿದ್ದಾರೆ. ಯುವ ಜನತಾದಳದ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಯುವ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಜೀವಿಜಯ ರವರು ಲೋಕಸಭಾ ಚುನಾವಣೆಗೆ...

ಕಾರಣವೇನು…?

ಸುತ್ತಲಿನ ಪರಪಂಚ ಕತ್ತಲಾಗಿಹುದು, ನಾ ಸಾಗುವ ದಾರಿಯು ಮುಚ್ಚಿಹೋಗಿಹುದು…ನನ್ನ ಬದುಕು ಇಂದು ಬೂದಿ ಮುಚ್ಚಿದ ಕೆಂಡದಂತಾಗಿಹುದು,ಇದು ಸಿಡಿಯುವುದೋ ಶಮನಗೊಳ್ಳುವುದೋ ತಿಳಿಯದಾಗಿಹುದು…ಸಿಡಿದರೆ ನನ್ನ ಬದುಕು ಅಂತ್ಯವಾಗುವುದು, ಶಮನಗೊಂಡರೆ ಹೊಸ ಬದುಕು ಆರಂಭವಾಗುವುದು… ಪ್ರತಿಯೊಂದು ಅಂತ್ಯಕ್ಕೂ ಅರಂಭವಿಹುದು, ಪ್ರತಿಯೊಂದು ಘಟನೆಗೂ ಕಾರಣವೊಂದಿಹುದು…ಆ ಕಾರಣವಿಂದು ನಿಗೂಢವಾಗಿಹುದು…ಆ ನಿಗೂಢತೆಯ ಮೌನದಲ್ಲೂ ಉತ್ತರವೊಂದಡಗಿಹುದು…ಆ ಉತ್ತರ ತಿಳಿಯುವ ದಾರಿಯು ಮುಚ್ಚಿ ಹೋಗಿಹುದು, ಯಾರ ಕಣ್ಣಿಗೂ...
Loading posts...

All posts loaded

No more posts

error: Content is protected !!