- Saturday
- August 15th, 2026
ಗುಲ್ಬರ್ಗ ವಿಶ್ವವಿದ್ಯಾನಿಲಯದಿಂದ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪಡೆದ ಯೆನೆಪೋಯ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಹಾಜಿ ಯೆನೆಪೋಯ ಅಬ್ದುಲ್ಲಕುಂಞಿ ಯವರಿಗೆ ಸುಳ್ಯ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಪರವಾಗಿ ಮಂಗಳೂರಿನಲ್ಲಿ ಸನ್ಮಾನಿಸಲಾಯಿತು.ದ. ಕ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಸ್ಲಿಂ ಸಮುದಾಯದ ಉಲಮಾ -ಉಮರಾ ನೇತಾರರ ಸೌಹಾರ್ದ ಸಂಗಮದಲ್ಲಿ ಈ ಗೌರವಾರ್ಪಣೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕಾಣಚೂರು ಮೆಡಿಕಲ್ ಕಾಲೇಜು...
ಅಜ್ಜಾವರ ಅಡ್ಪಂಗಾಯ ವಿವೇಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜಮೀಯತುಲ್ ಫಲಾಹ್ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಸಸಿ ನೆಡುವ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಅಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಜಮೀಯತುಲ್ ಫಲಾಹ್ ಅಧ್ಯಕ್ಷರಾದ ಹಸ್ಯೆನಾರ್ ಹಾಜಿ ಗೊರಡ್ಕ, ಕಾರ್ಯದರ್ಶಿ ಹಸ್ಯೆನಾರ್ ವಳಂಲಬೆ, ನಿರ್ದೇಶಕರಾದ ಸಿದ್ದೀಕ್ ಕಟ್ಟೆಕಾರ್, ಮತ್ತು ಶಾಲಾ ಮುಖ್ಯೋಪಾಧ್ಯಾಯ ಹೀರಾ...
ಇತ್ತೀಚೆಗೆ ನಿಧನರಾದ ಸುಬ್ರಹ್ಮಣ್ಯದ ಹಿರಿಯ ಪತ್ರಕರ್ತರಾದ ಮಂಜುನಾಥ ರಾವ್ ಅವರಿಗೆ ಜೂ.07 ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಾರ್ವಜನಿಕ ಶ್ರದ್ದಾಂಜಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ಹಿರಿಯ ಸಾಮಾಜಿಕ ಧುರೀಣ ಚಂದ್ರಶೇಖರ ಮೇಲ್ನಾಡ್ ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿದರು. ನಂತರ ಪತ್ರಕರ್ತ ವಿಶ್ವನಾಥ ನೆಡುತೋಟ ಪ್ರಾಸ್ತಾವಿಕ ನುಡಿಗಳೊಂದಿಗೆ ನುಡಿ ನಮನ ಸಲ್ಲಿಸಿದರು. ನಂತರ ಶಿವರಾಮ...
ಅಕಾಡೆಮಿ ಆಫ್ ಲಿಬರಲ್ ಜ್ಯುಕೇಶನ್ (ರಿ) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ ಯವರು, ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಉಜ್ವಲ್ ಊರುಬೈಲುರವರನ್ನು ಕೆ.ವಿ.ಜಿ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಸಲಹೆಗಾರರನ್ನಾಗಿ ನೇಮಕ ಮಾಡಿರುತ್ತಾರೆ. ಇವರು ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ, ಕೆ.ವಿ.ಜಿ...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಗುತ್ತಿಗಾರು ವಲಯದ ಗುತ್ತಿಗಾರು ಮತ್ತು ವಳಲಂಬೆ ಕಾರ್ಯಕ್ಷೇತ್ರದ ಸಿ ಎಸ್ ಸಿ ಕೇಂದ್ರದಲ್ಲಿ ವಿ ಎಲ್ ಇ ಕಲೆಕ್ಷನ್ ಪಾಯಿಂಟ್ ಇಂದು ಉದ್ಘಾಟನೆಗೊಂಡಿತುಒಕ್ಕೂಟದ ಅಧ್ಯಕ್ಷ ಜಿ ಅಚ್ಯುತ ಗುತ್ತಿಗಾರು ಇವರು ದೀಪ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ಬಾಲಕೃಷ್ಣ ಗೌಡ ಸೇವಾ ಪ್ರತಿನಿಧಿ...
ಪುತ್ತೂರಿನ ಮುಳಿಯ ಜ್ಯುವೆಲರ್ಸ್ ಆಯೋಜಿಸಿದ್ದ ರಜೆಯ ವಿಹಾರ ಚಿಣ್ಣರ ವಿಚಾರ 10 ರಿಂದ 15 ವರ್ಷದ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪಿ. ಎನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಸಾನ್ವಿ ಪಿ.ಎನ್. ಸುಳ್ಯ ಕಸಬಾ ಕೇರ್ಪಳ ನಿವಾಸಿ ವಿನುತಾ ನಾರಾಯಣ ಹಾಗೂ...
ಸಂಪಾಜೆ ವಲಯದ, ದಬ್ಬಡ್ಕ ಉಪ ವಲಯದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಊರಿನ ನಾಗರಿಕರು ಪಾಲ್ಗೊಂಡು, ಅರಣ್ಯದ ಒಳಗಡೆ ವಿವಿಧ ಜಾತಿಯ ಬೀಜ ಗಳನ್ನು ಬಿತ್ತಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿ ಮಧು ಸೂದನ್, ಉಪ ವಲಯ ಅರಣ್ಯ ಅಧಿಕಾರಿ ನಿಸಾರ್ ಮೊಹಮ್ಮದ್, ಅರಣ್ಯ ರಕ್ಷಕರಾದ ಕಾರ್ತಿಕ್. ಡಿ ಮತ್ತು ಚಂದ್ರಪ್ಪ,...
ಸುಳ್ಯದ ಅಂಬಟಡ್ಕದಲ್ಲಿರುವ ಮಾಣಿಬೆಟ್ಟು ಕಾಂಪ್ಲೆಕ್ಸ್ ನಲ್ಲಿ ಅವಿನಾಶ್ ಕೆಮನಬಳ್ಳಿ ಅವರ ಮಾಲಕತ್ವದ ಪಾರ್ಟ್ಸ್ ವರ್ಲ್ಡ್ ಸಂಸ್ಥೆಯು ಜೂ.3ರಂದು ಶುಭಾರಂಭಗೊಂಡಿತು. ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅವರು ಉದ್ಘಾಟಿಸಿ, ಶುಭಹಾರೈಸಿದರು. ಅವಿನಾಶ್ ಅವರ ತಂದೆ ಗಂಗಾಧರ ಮಣಿಯಾಣಿ, ಮುರಳೀಧರನ್ ಕೆಮನಬಳ್ಳಿ ಹಾಗೂ ಮಹಾಲಿಂಗ ಮಣಿಯಾಣಿ ಏವಂದೂರು, ಗಂಗಾಧರ ಮಣಿಯಾಣಿ ಮೂಲಡ್ಕ ಅವರುಗಳು ದೀಪ ಬೆಳಗಿಸಿದರು. ಈ...
ಪೋಲೀಸರ ಮೇಲೆ ಹಲ್ಲೆ ನಡೆಸಿದರೆನ್ನಲಾದ ಪ್ರಕರಣದ ಆರೋಪಿಗಳನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಪ್ರಕರಣದ ವಿವರ : ಸುಳ್ಯ ಪೋಲೀಸ್ ಠಾಣಾ ಗುಪ್ತವಾರ್ತೆ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ ಸ್ಟೇಬಲ್ ಬಾಲಕೃಷ್ಣ ಎಂಬವರು ಇಲಾಖಾ ಮೋಟಾರ್ ಸೈಕಲಿನಲ್ಲಿ ಠಾಣಾ ಸಿಬ್ಬಂದಿ ಪಂಪಾಪತಿ ರೆಪ್ಪಿ ಎಂಬುವವರೊಂದಿಗೆ 2013 ಮೇ.12 ರಂದು ಸಂಜೆ ಅಮರಮುಡ್ನೂರು ಗ್ರಾಮದ ದೊಡ್ಡತೋಟ ಮೇರ್ಕಜೆ ಎಂಬಲ್ಲಿಗೆ...
ಕರ್ತವ್ಯಕ್ಕೆ ಅಡ್ಡಿಪಡಿಸಿ ಅರಣ್ಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಸರ್ಕಾರಿ ಸ್ವತ್ತನ್ನು ನಾಶಪಡಿಸಿ ಜೀವ ಬೆದರಿಕೆ ಒಡ್ಡಿದ್ದ ಆರೋಪದ ಆರೋಪಿಯನ್ನು ಸುಳ್ಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ.ಪ್ರಕರಣದ ವಿವರ : ದಿನಾಂಕ 07/09/2016 ರಂದು ಅಲೆಟ್ಟಿ ಗ್ರಾಮದ ನಾರ್ಕೋಡು ಎಂಬಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಆರೋಪಿ ಆಶಿಶ್ ಕುಮಾರ್ ಚಾಲಕನಿಗೆ ಖಾಲಿ ಟಿಪ್ಪರ್ ಲಾರಿಯನ್ನು ನಿಲ್ಲಿಸಲು ಸೂಚಿಸಿದ್ದು, ಆರೋಪಿ...
Loading posts...
All posts loaded
No more posts
