ಸುಬ್ರಹ್ಮಣ್ಯ : ಸ್ವಾತಂತ್ರ್ಯೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ಅರಳಲಿದೆ ರಾಷ್ಟ್ರಧ್ವಜ

ಸ್ವಾತಂತ್ರ‍್ಯೋತ್ಸವದ ೭೫ ನೇ ವರ್ಷಾಚರಣೆಯ ಅಂಗವಾಗಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದ ಅಡಿಯಲ್ಲಿ ಹರ್ ಘರ್ ಝಂಡಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಗ್ರಾಮದಲ್ಲಿ ನಡೆಸುವುದು ನಮ್ಮ ಗುರಿಯಾಗಬೇಕು.ಗ್ರಾಮದ ಪ್ರತಿ ಮನೆಯಲ್ಲೂ ರಾಷ್ಟ್ರ ಧ್ವಜ ಅರಳಲು ಸರ್ವರ ಸಹಕಾರ ಅತ್ಯಗತ್ಯ. ೭೫ನೇ ಸ್ವಾತಂತ್ರ್ಯೋತ್ಸವದ ಸವಿ ನೆನಪಿಗಾಗಿ ಘರ್ ಘರ್ ಝಂಡಾ ಎಂಬ ಕಾರ್ಯಕ್ರಮವು ನೆರವೇರಲಿದೆ.ಈ ನಿಮಿತ್ತ ಸುಬ್ರಹ್ಮಣ್ಯ...

ಸಂಪಾಜೆ : ರಾಜ್ಯ ವಿಪತ್ತು ನಿರ್ವಹಣಾ ತಂಡ ಭೇಟಿ

ಸಂಪಾಜೆ ಭೂಕಂಪ ಪೀಡಿತ ಪ್ರದೇಶಕ್ಕೆ ರಾಜ್ಯ ವಿಪತ್ತು ನಿರ್ವಹಣಾ ತಂಡ ಜು.9 ರಂದು ಭೇಟಿ ನೀಡಿತು. ಈ ತಂಡದಲ್ಲಿ ಜಿಯೋಲೋಜಿಕಲ್ ಸರ್ವೆ ಆಫ್ ಇಂಡಿಯಾದ ರಾಹುಲ್, ಡಾ. ಶ್ರೀ ನಿವಾಸ್ ರೆಡ್ಡಿ ಜಗದೀಶ್ ರವರು ನಾಗೇಶ್ ಪಿ. ಆರ್, ಅಬೂಸಾಲಿ ಪಿ. ಕೆ., ಸರೋಜ ರವರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ...
Ad Widget

ಜು. 11 : ನಿಂತಿಕಲ್ಲಿನಲ್ಲಿ ಅಕ್ಷಯ ಮೊಬೈಲ್ ಶುಭಾರಂಭ

ನಿಂತಿಕಲ್ಲಿನ ವೃದ್ಧಿ ಕಾಂಪ್ಲೆಕ್ಸ್ ನಲ್ಲಿ ಕಡೀರ ಭುವನೇಶ್ ರವರ ಮಾಲಕತ್ವದಲ್ಲಿ ಅಕ್ಷಯ ಮೊಬೈಲ್ ಸೇಲ್ ಸರ್ವಿಸಸ್ ಮತ್ತು ಆ್ಯಕ್ಸಸರೀಸ್ ಜುಲೈ 11 ರಂದು ಶುಭಾರಂಭಗೊಳ್ಳಲಿದೆ. ಐಫೋನ್, ಸ್ಯಾಮ್ಸಾಂಗ್, ವಿವೋ, ಒಪ್ಪೊ, ನೋಕಿಯಾ, ಐಟೇಲ್, ಲಾವ, ಎಂ.ಐ, ರಿಯಲ್ ಮಿ, ಹಾಗೂ ಸ್ಮಾರ್ಟ್ ಫೋನ್ ಮತ್ತು ಮೊಬೈಲ್ ಫೋನ್ ಕವರ್, ಇಯರ್ ಫೋನ್, ಮೆಮೊರಿ ಕಾರ್ಡ್, ಚಾರ್ಜರ್...

ನವೀನ ಎಂ. ರವರಿಗೆ ಮೆಸ್ಕಾಂ ಜೆ.ಇ. ಆಗಿ ಮುಂಭಡ್ತಿ

ಬೆಳ್ಳಾರೆ ಮೆಸ್ಕಾಂ ಶಾಖೆಯ ಐವರ್ನಾಡು ವ್ಯಾಪ್ತಿಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನವೀನ್ ಎಂ. ಅವರಿಗೆ ಮೆಸ್ಕಾಂ ಜೆ.ಇ. ಆಗಿ ಮುಂಭಡ್ತಿ ದೊರೆತಿದೆ. ಅವರು ಮಂಗಳೂರಿನ ಕುಲಶೇಖರ ಸೇವಾ ಕೇಂದ್ರಕ್ಕೆ ನಿಯುಕ್ತಿಗೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಬೆಳ್ಳಾರೆಯಲ್ಲಿ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರು ಚಾಮನಗರದವರು.

ಪರ್ಸ್ ಕಳೆದು ಹೋಗಿದೆ

ಜು.07 ರಂದು ಸುಳ್ಯ ಪೇಟೆಯಲ್ಲಿ ಶಿವರಾಮ ಮಡಪ್ಪಾಡಿ ಎಂಬುವವರ ಪರ್ಸ್ ಕಳೆದು ಹೋಗಿದ್ದು, ಪರ್ಸ್ ನಲ್ಲಿ ಎ.ಟಿ.ಎಂ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಇನ್ನಿತರ ದಾಖಲೆಗಳು ಇದ್ದು, ಪರ್ಸ್ ಸಿಕ್ಕಿದವರು 6363169642 ನಂಬರ್ ಗೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

ಕೊಲ್ಲಮೊಗ್ರು :- ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಕೊಟ್ಟಿಗೆಯ ಛಾವಣಿ ದುರಸ್ತಿ

ಕೊಲ್ಲಮೊಗ್ರು ಗ್ರಾಮದ ವೇದಾವತಿ ತೋಟದಮಜಲು ಎಂಬುವವರ ಕೊಟ್ಟಿಗೆಯ ಛಾವಣಿ ಜು.06 ರಂದು ಭಾರೀ ಮಳೆಗೆ ಮುರಿದು ಹೋಗಿದ್ದು, ಮನೆಯವರು ಸೇವಾ ಪ್ರತಿನಿಧಿ ಮುಖಾಂತರ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಜು.08 ರಂದು ಮುರಿದು ಹೋಗಿದ್ದ ಕೊಟ್ಟಿಗೆಯ ಛಾವಣಿಯನ್ನು ಸರಿಪಡಿಸಿ ಪ್ಲಾಸ್ಟಿಕ್ ಹೊದಿಸಿ ದುರಸ್ತಿಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ...

ಚೆಂಬು : ಮತ್ತೊಮ್ಮೆ ಭಾರಿ ಶಬ್ಧ

ಚೆಂಬು ಗ್ರಾಮ ಕಳೆದ ರಾತ್ರಿ ಮತ್ತೊಮ್ಮೆ ಭೂಮಿಯೊಳಗಿಂದ ಶಬ್ದ ಕೇಳಿಬಂದ ಬಗ್ಗೆ ಜನ ಅಮರ ಸುದ್ದಿಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 4.39 ಕ್ಕೆ ಭಾರಿ ಶಬ್ಧವೊಂದು ಕೇಳಿ ಬಂದಿದೆ. ಚೆಂಬು ಗ್ರಾಮದ ಶಿವಪ್ರಕಾಶ್ ಎಂಬವರು ಈ ಬಗ್ಗೆ ಮಾತನಾಡಿ ರಾತ್ರಿ ಶಬ್ದ ಕೇಳಿ ಬಂದಿದೆ. ಭೂಮಿ ಕಂಪಿಸಿಲ್ಲ. ನಮಗೆ ಇದು ಮಾಮೂಲಿಯಾಗಿದೆ. ನಾವು ಈಗ ಭಯಪಡುತ್ತಿಲ್ಲ....

ಜು.13ರವರೆಗೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ನಿರೀಕ್ಷೆ

ಬೆಂಗಳೂರು ಜು.8: ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಜು.13ರವರೆಗೆ ಗುಡುಗು, ಗಾಳಿ ಸಹಿತ ಅತೀ ಭಾರಿ ಹಾಗೂ ಭಾರಿ ಮಳೆ ನಿರೀಕ್ಷೆ ಇದೆ. ಕರಾವಳಿಯ ಮೂರು ಜಿಲ್ಲೆಗಳಿಗೆ ಮೂರು ದಿನ 'ರೆಡ್ ಅಲರ್ಟ್' ಕೊಡಲಾಗಿದೆ. ಹವಾಮಾನದಲ್ಲಿ ಉಂಟಾಗಿರುವ ಬದಲಾವಣೆ, ವೈಪರಿತ್ಯಗಳ ಪ್ರಭಾವದಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಪ್ರದೇಶಗಳು ಅಕ್ಷರಶಃ ತತ್ತರಿಸಿವೆ. ಕಳೆದೊಂದು ವಾರದಿಂದ...

ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲ ವತಿಯಿಂದ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

ಮಡಪ್ಪಾಡಿಯ ಶ್ರೀ ರಾಮ ಭಜನಾಮಂಡಳಿ ಮತ್ತು ಯುವಕ ಮಂಡಲದಲ್ಲಿ ಅಭಿನಂದನಾ ಕಾರ್ಯಕ್ರಮ ಯುವಕ ಮಂಡಲ ಸಭಾಂಗಣದಲ್ಲಿ ನಡೆಯಿತು. ಸಂಜೆ 6 ಗಂಟೆಗೆ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಸಭಾ ಕಾರ್ಯಕ್ರಮ 2021-2 ನೇ ಶೈಕ್ಷಣಿಕ ಸಾಲಿನಲ್ಲಿ “ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ”, ಡಿಸ್ಟಿಂಕ್ಷನ್ (ಶೇ. 85)ಗಿಂತ ಹೆಚ್ಚು ಅಂಕಗಳಿಸಿದ ಮಡಪ್ಪಾಡಿ ಗ್ರಾಮ ಪ್ರತಿಭಾನ್ವಿತ...

‘ಪತ್ರಕರ್ತರ ಮಿತ್ರ’ ಕೋಟೆ ವಸಂತಕುಮಾರ್ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಪ್ರೆಸ್ ಕ್ಲಬ್ ಕಟ್ಟಡಕ್ಕೆ ದೇಣಿಗೆ

ಸುಳ್ಯ:'ಪತ್ರಕರ್ತರ ಮಿತ್ರ' ಎಂದೇ ಖ್ಯಾತರಾಗಿದ್ದ ಸಾಹಿತಿ, ಸಂಘಟಕ ದಿ.ಕೋಟೆ ವಸಂತಕುಮಾರ್ ಅವರ ಸ್ಮರಣಾರ್ಥವಾಗಿ ಕೋಟೆ ಫೌಂಡೇಷನ್ ವತಿಯಿಂದ ಸುಳ್ಯ ಪ್ರೆಸ್ ಕ್ಲಬ್ ನೂತನ ಕಟ್ಟಡ ನಿರ್ಮಾಣಕ್ಕೆ 50 ಸಾವಿರ ರೂ ದೇಣಿಗೆ ನೀಡಿದ್ದಾರೆ. ಫೌಂಡೇಷನ್ನ ಪದಾಧಿಕಾರಿಗಳಾದ ಕೋಟೆ ವಸಂತಕುಮಾರ್ ಅವರ ಪತ್ನಿ ಪಾರ್ವತಿ ಕೋಟೆ,‌ ಮಕ್ಕಳಾದ ಶಶಿಕಲಾ ಗಣಪಯ್ಯ, ಶಶಿಧರ ಕೋಟೆ, ರಘುರಾಮ ಕೋಟೆ ಹಾಗು...
Loading posts...

All posts loaded

No more posts

error: Content is protected !!