ನಿಧನ : ಬಂದ್ಯಡ್ಕ ಲಿಂಗಪ್ಪ ಗೌಡ

ದೇಲಂಪಾಡಿ ಗ್ರಾಮದ ಬಂದ್ಯಡ್ಕ ದಿ.ಹೊನ್ನಪ್ಪ ಗೌಡರ ಪುತ್ರ ಲಿಂಗಪ್ಪ ಗೌಡ ರವರು ಮಾ.19ರಂದು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು.ಮೃತರು ತಾಯಿ ಸೇಸಮ್ಮ, ಪತ್ನಿ ಭಾರತಿ, ಪುತ್ರಿಯರಾದ ಕು.ಭೂಮಿಕಾ, ಕು.ಪೂರ್ವಿಕಾ, ಪುತ್ರ ಹಾರ್ಧಿಕ್ ಹಾಗೂ ನಾಲ್ವರು ಸಹೋದರಿಯರು ಸೇರಿದಂತೆ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ಕೊಲ್ಲಮೊಗ್ರು : ಆಕಸ್ಮಿಕವಾಗಿ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿಯ ಬೊಳಿಯಾನ ಮನೆಯ ಮಹಿಳೆಯೋರ್ವರ ಮೈಮೇಲೆ ಬೆಂಕಿ ತಗಲಿ ಗಾಯಗೊಂಡಿದ್ದು, 10 ದಿನಗಳ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವರದಿಯಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.ಬೊಳಿಯಾನ ಮನೆ ದಿ.ಚಿನ್ನಪ್ಪ ಗೌಡ ಅವರ ಪತ್ನಿ ತಿಲಕ ಮಾ.10ರಂದು ಅಡುಗೆ ಮನೆಯಲ್ಲಿ ಬೆಳಿಗ್ಗೆ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸೀರೆಗೆ ಬೆಂಕಿ ಹಿಡಿದು ತಿಲಕರವರ...
Ad Widget

ನಿಧನ : ವೇದಾವತಿ ಅಗೋಳಿಕಜೆ

ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಅಗೋಳಿಕಜೆ ದಿ.ಚಂದ್ರ ಗೌಡ ಅವರ ಪತ್ನಿ ವೇದಾವತಿ(75) ಆಗೋಳಿಕಜೆ ಅವರು ಮಾ.17 ರಂದು ವಯೋಸಹಜ ಅನಾರೋಗ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಮೂರು ಜನ ಪುತ್ರರಾದ ಚಿದಾನಂದ, ಶೇಖರ, ವಿನೋದ್ ಹಾಗೂ ಪುತ್ರಿ ಸುಶೀಲ ಇವರನ್ನು ಅಗಲಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ಲೋಕೇಶ್ ನೂಜಾಲು ನಿಧನ

ಪಿಕಪ್-ಸ್ಕೂಟಿ ಅಪಘಾತದಲ್ಲಿ ಗಾಯಗೊಂಡಿದ್ದ ಐವರ್ನಾಡಿನ ಲೋಕೇಶ್ ನೂಜಾಲುರವರು ಮಾ.17 ರಂದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.3 ತಿಂಗಳ ಹಿಂದೆ ಐವರ್ನಾಡಿನ ಚೀಮುಳ್ಳು ಎಂಬಲ್ಲಿ ಸ್ಕೂಟಿ ಮತ್ತು ಪಿಕಪ್ ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೆಲವು ದಿನಗಳ ಚಿಕಿತ್ಸೆ ಪಡೆದು ಇವರು ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಅವರು ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು...

ನಿಧನ : ಝುಲೈಖ ಕಾವಿನಮೂಲೆ ಬೆಳ್ಳಾರೆ

ಬೆಳ್ಳಾರೆ ಗ್ರಾಮದ ಕಾವಿನಮೂಲೆ ದಿ ಮೋನುಚ್ಚ ಪುಡ್ಕಜೆಯವರ ಪತ್ನಿ ಝುಲೈಖ(75) ರವರು ಮಾ 12 ರಂದು ರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಕಾವಿನಮೂಲೆಯ ಸ್ವಗೃಹದಲ್ಲಿ ನಿಧನರಾದರು.ಮೃತರು ಏಕೈಕ ಪುತ್ರ ಬೆಳ್ಳಾರೆ ಕೆಳಗಿನ ಪೇಟೆ ಪ್ರಗತಿ ಡ್ರೆಸ್ ಸೆಂಟರ್ ಮಾಲಕ ಹಮೀದ್ ರವರನ್ನು ಅಗಲಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸುಬ್ಬಮ್ಮ ಕಟ್ಟೆಹಿತ್ಲು ನಿಧನ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಹುಟ್ಟೂರು ಕಲ್ಮಡ್ಕದ ಕಟ್ಟೆಹಿತ್ತುನಲ್ಲಿ ವಾಸವಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಅಗಿರುವ ದಿ. ರಘುಕುಮಾ‌ರ್ ನಾಗಮಂಗಲರವರ ಪತ್ನಿ ಶ್ರೀಮತಿ ಸುಬ್ಬಮ್ಮ ಕಟ್ಟೆಹಿತ್ತು ಮಾ. 9 ರಂದು ನಿಧನರಾದರು. ಇವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಸಹೋದರಿಯರಾದ ಶ್ರೀಮತಿ ಜಯಲಕ್ಷ್ಮಿಯೇನೆಕಲ್ಲು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಕಲ್ಮಡ್ಕ ಅಂಗನವಾಡಿ...

ನಿಧನ : ಕೆಂಚಪ್ಪ ಗೌಡ ಬಾಳುಗೋಡು

ಬಾಳುಗೋಡು ಗ್ರಾಮದ ಬಾಳುಗೋಡು ಮನೆತನದ ಕೆಂಚಪ್ಪ ಗೌಡ ಬಾಳುಗೋಡು ರವರು ಮಾ.01ರಂದು ಅಲ್ಪಕಾಲದ ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಬೆಟ್ಟುಮಕ್ಕಿ ಶ್ರೀ ಶಿರಾಡಿ ದೈವಸ್ಥಾನದ ಪ್ರಧಾನ ಪೂಜಾರಿಗಳಾಗಿದ್ದ ಕೆಂಚಪ್ಪ ಗೌಡರು ಪತ್ನಿ ಶಾರದಾ, ಪುತ್ರರಾದ ದೀಪಕ್ ಬಾಳುಗೋಡು ಮತ್ತು ರಥಶಿಲ್ಪಿ ಕೀರ್ತನ್ ಬಾಳುಗೋಡು, ಸಹೋದರರು, ಸಹೋದರಿಯರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.

ಮಡಪ್ಪಾಡಿ : ಪುಷ್ಪಾವತಿ ತಳೂರು ನಿಧನ

ಮಡಪ್ಪಾಡಿ ಗ್ರಾಮದ ತಳೂರು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧರ್ಮಪಾಲ ರವರ ಧರ್ಮ ಪತ್ನಿ ಶ್ರೀಮತಿ ಪುಷ್ಪಾವತಿ ಯವರು ಅಲ್ಪಕಾಲದ ಅಸೌಖ್ಯದಿಂದ ಫೆ.11 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಹರ್ಷಿತ್, ದೀಕ್ಷಿತ್, ಪುತ್ರಿ ದೀಕ್ಷಾ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

ಪೂರ್ಣಚಂದ್ರ ಕಣೆಮರಡ್ಕ ನಿಧನ

ಮಂಡೆಕೋಲು ಗ್ರಾಮದ  ಪೂರ್ಣಚಂದ್ರ ಕಣೆಮರಡ್ಕ ಅಸೌಖ್ಯದಿಂದ ಫೆ.04 ರಂದು ನಿಧನರಾದರು. ಅವರು  ಮಂಡೆಕೋಲು ಗ್ರಾ.ಪಂ.ಮಾಜಿ ಸದಸ್ಯರಾಗಿ, ಕಳೇರಿ ಉಳ್ಳಾಕುಲು ದೈವಸ್ಥಾನದ ಸೇವಾ ಸಮಿತಿ ಅಧ್ಯಕ್ಷರಾಗಿ, ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಮೃತರು ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮಂಡೆಕೋಲು ಸೊಸೈಟಿ ನಿರ್ದೇಶಕಿ ಕುಸುಮಾ ದೇವರಗುಂಡ ನಿಧನ

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ, ಮಂಡೆಕೋಲು ಗ್ರಾಮದ ದೇವರಗುಂಡ ಯಶವಂತ ಡಿ.ಕೆ. ಯವರ ಪತ್ನಿ ಶ್ರೀಮತಿ ಕುಸುಮಾ ದೇವರಗುಂಡ ಅಸೌಖ್ಯದಿಂದ  ನಿಧನರಾದರು. ಅವರಿಗೆ ಸುಮಾರು 53 ವರ್ಷ ವಯಸ್ಸಾಗಿತ್ತು.
Loading posts...

All posts loaded

No more posts

error: Content is protected !!