Ad Widget

ಮಡಪ್ಪಾಡಿ : ಸೀತಮ್ಮ ಕಾಯರಕಟ್ಟೆ ನಿಧನ

ಮಡಪ್ಪಾಡಿ ಗ್ರಾಮದ ಕಾಯರಕಟ್ಟೆ ಮನೆ ದಿ| ಬಾಲಣ್ಣ ಗೌಡ ರವರ ಪತ್ನಿ ಸೀತಮ್ಮ ರವರು ಇಂದು ಸ್ವಗೃಹದಲ್ಲಿ ನಿಧನರಾದರು.ಇವರಿಗೆ 90 ವರ್ಷ ವಯಸ್ಸಾಗಿತ್ತು.ಮೃತರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಪೆರಾಜೆ : ಅನಾರೋಗ್ಯದಿಂದ ಯುವಕ ಮೃತ್ಯು

ಪೆರಾಜೆ ಗ್ರಾಮದ ಪೀಚೆ ಮನೆ ಪುರುಷೋತ್ತಮ ಗೌಡರ ಮಗ ದೀಕ್ಷಿತ್(30) ಅನಾರೋಗ್ಯದಿಂದ ನಿಧನರಾದ ಘಟನೆ ಜು.18ರಂದು ನಡೆದಿದೆ.ಹಠಾತ್ ಅಸೌಖ್ಯಕ್ಕೊಳಗಾದ ದೀಕ್ಷಿತ್ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದರು.‌ ಅದರಂತೆ ಆಂಬ್ಯುಲೆನ್ಸ್‌ ನಲ್ಲಿ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.ಮೃತರು ತಾಯಿ...
Ad Widget

ಅರಂತೋಡು : ಸ್ನೇಹ ಹೋಟೆಲ್ ಮಾಲಕ ಯೋಗೀಶ್ ಗೂನಡ್ಕ ನಿಧನ

ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಸುಮಾರು 24 ವರ್ಷ ಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದ ಯೋಗೀಶ್(42) ರವರು ಜು.16 ರಂದು ನಿಧನರಾದರು. ಮೃತರು ತಾಯಿ ಮೀನಾಕ್ಷಿ, ಪತ್ನಿ ಲಲಿತಾ(ರೇಶ್ಮಾ), ಪುತ್ರರಾದ ಧನುಷ್ ಹಾಗೂ ಗೌಶಿಕ್ ರನ್ನು ಅಗಲಿದ್ದಾರೆ.

ನಿಧನ : ಬಾಲಗೋಪಾಲ್ ಸುಬ್ರಹ್ಮಣ್ಯ

ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ನಿವಾಸಿಯಾದ ಸುಬ್ರಹ್ಮಣ್ಯದಲ್ಲಿ ಪಂಕ್ಚರ್ ಅಂಗಡಿ ನಡೆಸುತ್ತಿದ್ದ ಬಾಲಗೋಪಾಲ್ ಸುಬ್ರಹ್ಮಣ್ಯ ರವರು ಜು.12 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅಸೌಖ್ಯದಿಂದಿದ್ದ ಅವರಿಗೆ 60 ವರ್ಷ ವಯಸ್ಸಾಗಿತ್ತು.ಗುತ್ತಿಗಾರಿನಲ್ಲಿ ಟಯರ್ ವರ್ಕ್ಸ್ ಅಂಗಡಿಯನ್ನು ನಡೆಸುತ್ತಿದ್ದ ಅವರು ಕಳೆದ 15 ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ರಶ್ಮಿ ಅಟೋ ವರ್ಕ್ಸ್ ಎಂಬ ಶಾಪ್ ಅನ್ನು ನಡೆಸುತ್ತಿದ್ದರು.ಮೃತರು...

ನಿಧನ : ಆಯಿಷಾ ಬೆಳ್ಳಾರೆ

ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ‌ ಕಾರ್ಯದರ್ಶಿ ದಾವೂದ್ ಸಅದಿಯವರ ತಾಯಿ ಆಯಿಷಾ ಅವರು ಅಲ್ಪಕಾಲದ ಅಸೌಖ್ಯದಿಂದ ಜು 10ರಂದು ನಿಧನರಾದರು.ಅವರಿಗೆ 80 ವರುಷ ವಯಸ್ಸಾಗಿತ್ತು.ಅವರು ದಾವೂದ್ ಸಅದಿ‌ ಸೇರಿದಂತೆ ಐದು ಗಂಡು ಹಾಗೂ ಆರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.(ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ)

ಪೆರಾಜೆಯಲ್ಲಿ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ಮೃತ್ಯು

ಇತ್ತೀಚೆಗೆ ಪೆರಾಜೆ ಕಲ್ಚರ್ಪೆ ಸಮೀಪ ಬೈಕ್ ಸ್ಕಿಡ್ ಆಗಿ ಗಂಭೀರ ಗಾಯಗೊಂಡ ಐವರ್ನಾಡು ನಿವಾಸಿ ಗೋಪಿನಾಥ ನಿಡುಬೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಲೆಗೆ ಗಂಭೀರ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊಡಿಯಾಲ : ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಗುಲಿ ಶಾಕ್ ; ವ್ಯಕ್ತಿ ಮೃತ್ಯು

ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ವ್ಯಕ್ತಿಯೊಬ್ಬರು ವಿದ್ಯುತ್‌ ಶಾಕ್ ನಿಂದ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ.ಕಲ್ಲಪಣೆಯ ದಿವಾಕರ ಆಚಾರ್ಯ(45) ಎಂಬವರು ಮನೆಗೆ ಹೋಗುವ ದಾರಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ವೈರ್ ತಾಗಿ ಮೃತಪಟ್ಟ ಘಟನೆ ನಡೆದಿದ್ದು, ಅವರು ವೈರ್ ಅನ್ನು ಕೈಯಲ್ಲಿ ಹಿಡಿಕೊಂಡ ಸ್ಥಿತಿಯಲ್ಲಿದ್ದರು.ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.

ಪಶುವೈದ್ಯಕೀಯ ಆಸ್ಪತ್ರೆಯ ನಿವೃತ್ತ ಉದ್ಯೋಗಿ ವಿಜಯ ಪಡ್ಡಂಬೈಲ್ ನಿಧನ

ಸುಳ್ಯದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅಜ್ಜಾವರ ಗ್ರಾಮದ ಪಡ್ಡಂಬೈಲ್ ವಿಜಯ ರವರು ಜು.04 ರಂದು ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 63 ವರ್ಷ ವಯಸ್ಸಾಗಿತ್ತು.ಅವರ ಪಾರ್ಥಿವ ಶರೀರವನ್ನು ರಾತ್ರಿಯೇ ಪಡ್ಡಂಬೈಲಿನ ಅವರ ಮನೆಗೆ ತರಲಾಗಿದ್ದು, ಇಂದು ಪೂರ್ವಾಹ್ನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ.ಮೃತರು ಪತ್ನಿ, ಪುತ್ರ, ಪುತ್ರಿ, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು...

ನಿಧನ : ಮಾಧವ ಗೌಡ ಏನಡ್ಕ

ಎಡಮಂಗಲ ಗ್ರಾಮದ ಏನಡ್ಕ ಮಾಧವ ಗೌಡ ರವರು ಜು.03 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಸುನಂದಾ, ಸಹೋದರರಾದ ಈಶ್ವರ ಗೌಡ ಏನಡ್ಕ, ಲೋಕಪಾಲ ಗೌಡ ಏನಡ್ಕ, ಆನಂದ ಗೌಡ ಏನಡ್ಕ, ಪದ್ಮನಾಭ ಗೌಡ ಏನಡ್ಕ, ಶಿವರಾಮ ಗೌಡ ಏನಡ್ಕ, ಸಹೋದರಿ ಮೋಹಿನಿ ದಾಸಪ್ಪ ಪಾಲೋಳಿ ಹಾಗೂ ಕುಟುಂಬಸ್ಥರು, ಬಂಧು-ಮಿತ್ರರನ್ನು ಅಗಲಿದ್ದಾರೆ.

ನಿಧನ : ಗುರುವ ಮೊಗೇರ ಪಳ್ಳಿಮಜಲು

ಬೆಳ್ಳಾರೆ ಗ್ರಾಮದ ಪಳ್ಳಿಮಜಲು ನಿವಾಸಿ ಗುರುವ ಮೊಗೇರ ರವರು ಜೂ.23 ರಂದು ರಾತ್ರಿ ನಿಧನರಾದರು.ಮೃತರಿಗೆ 43 ವರ್ಷ ವಯಸ್ಸಾಗಿತ್ತು.ಇವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಕಳೆದೆರಡು ತಿಂಗಳಿನಿಂದ ಡಯಾಲಿಸಿಸ್ ಗೆ ಒಳಗಾಗುತ್ತಿದ್ದರು.ಮೃತರು ಪತ್ನಿ ಸುಶೀಲಾ, ಪುತ್ರರಾದ ತೇಜಸ್, ಶೈಲೇಶ್, ಪುತ್ರಿ ವಿದ್ಯಾ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.(ವರದಿ : ಎಂ.ಎ ಮುಸ್ತಫಾ ಬೆಳ್ಳಾರೆ)
Loading posts...

All posts loaded

No more posts

error: Content is protected !!