- Monday
- September 14th, 2026
ಗಾಂಧಿನಗರ ಸುಳ್ಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಮೇಲುಸ್ತುವಾರಿ ಸಮಿತಿ ಸಭೆ ಗಾಂಧಿನಗರ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಅಂಗಾರ ವಹಿಸಿದ್ದರು. ಎಂಬಿ ಫೌಂಡೇಶನ್ ಅಧ್ಯಕ್ಷ ಎಂಬಿ ಸದಾಶಿವ.,ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ ಸುಳ್ಯ,ಶಾಲಾ ಸಮಿತಿಯ ಹಿರಿಯ ಸಲಹೆಗಾರರು ಎಂ ವೆಂಕಪ್ಪ ಗೌಡ, ಎನ್...
ಕಲ್ಮಕಾರು ಗ್ರಾಮದ ಪಡ್ಪು ವಸಂತ ರವರ ಪುತ್ರ ಲೋಹಿತ್ (24) ಇಂದು ಮಧ್ಯಾಹ್ನ ಮನೆಯ ಸಮೀಪದ ಮಾವಿನಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತ ಲೋಹಿತ್ ತಂದೆ,ಹಾಗೂ ತಂಗಿಯನ್ನು ಅಗಲಿದ್ದಾರೆ.
ಯಾವ್ದೋ ಒಂದು ಮದುವೆ ಕಾಗದದಲ್ಲಿ ಅಚ್ಚಾಗುವ ದೇವರ ಭಾವಚಿತ್ರವನ್ನು ಕತ್ತರಿಸಿಟ್ಟು ಪೂಜಿಸುವಷ್ಟು ದೇವರ ಮೇಲೆ ನಂಬಿಕೆಯಿಟ್ಟಿರುವ ನಾವು. ಒಂದೊಮ್ಮೆ ದೇವರ ಭಾವಚಿತ್ರಕ್ಕೆ ಗೊತ್ತಿಲ್ಲದೆ ತುಳಿದರೂ ಮುಂದೇನು ಅನಾಹುತವಾದಿತೆಂದು ನೂರೊಂದು ಬಾರಿ ದೇವರನ್ನು ಜಪಿಸುವ ನಾವು. ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಸುಟ್ಟು ಸಂಭ್ರಮಿಸುವುದು ಸಾಧುವೇ..?ದೀಪಾವಳಿ ಎಂದಾಕ್ಷಣ ನಮಗೆ ತಕ್ಷಣ ನಮಗೆಪಟಾಕಿಗಳೇ! ಅದೂ ಹಬ್ಬದ ಸಂಭ್ರಮದ ತೀವ್ರತೆಯನ್ನು ಅಳತೆ...
ಕೊಲ್ಲಮೊಗ್ರು ಗ್ರಾಮದ ಜಾಲುಮನೆ ಸಂಪರ್ಕಿಸುವ ಜಾಲುಮನೆ ಕಿರು ಸೇತುವೆ ಭಾರಿ ಮಳೆಗೆ ಕುಸಿತಗೊಂಡಿದೆ. ಸಂಪರ್ಕ ಕಡಿತಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ನೀಡಿದ ಮಾಜಿ ತಾಪಂ ಸದಸ್ಯ ಪಿ ಸಿ ಜಯರಾಮ್ ಸೇತುವೆ ವೀಕ್ಷಿಸಿ ಸಮಸ್ಯೆ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.ಈ ಬಗ್ಗೆ ಅವರು ಕೂಡಲೇ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸೇತುವೆ ಕುಸಿತದಿಂದ ಸುಮಾರು...
ಜಗವಿಖ್ಯಾತ ಮೈಸೂರು ದಸರಾಕ್ಕೆ ವೈಭವಕ್ಕೆ ಇಂದು ಚಾಲನೆ ದೊರೆತಿದೆ. ಜಯದೇವ ಆಸ್ಪತ್ರೆ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ ರವರು ಬೆಳಿಗ್ಗೆ 7.40ರ ಬ್ರಾಹ್ಮೀ ಮುಹೂರ್ತದಲ್ಲಿ ದೇವಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಬಿ.ಎಸ್.ಯಡಿಯೂರಪ್ಪ, ಡಿ.ಸಿ.ಯಂ. ಅಶ್ವತ್ಥ್ ನಾರಾಯಣ, ಶಾಸಕರಾದ ರಾಮದಾಸ್, ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು....
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ನಡೆಸುವ ಜವಾಬ್ದಾರಿಯನ್ನು ಸೂರಜ್ ಹೊಸೂರು ಅವರನ್ನು ಕೆಪಿಸಿಸಿ ನೇಮಕ ಮಾಡಿದೆ. ಇವರಿಗೆ ನಾದೂರು ಜಿ.ಪಂ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಚೆಂಬು ಗ್ರಾಮದ ಹೊಸೂರಿನವರಾದ ಇವರು ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗಿ ಶ್ರಮಿಸುತ್ತಿದ್ದಾರೆ.
ಅರಂತೋಡು ಬಿಳಿಯಾರಿನಲ್ಲಿ ವಿದ್ಯಾರ್ಥಿ ನಿಲಯದ ಬಳಿ ಪತ್ತೆಯಾದ ಕಾಳಿಂಗ ಸರ್ಪವನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉರಗ ತಜ್ಞ ಶಿವಾನಂದ ಕುಕ್ಕುಂಬಳ ರವರು ಹಿಡಿದು ಸುಳ್ಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಂಗಾಧರ ಬನ, ಶರಫು ಅರಂತೋಡು,ರಿಯಾಝ್ ಸಣ್ಣಮನೆ,ಸುಹೇಲ್ ಅರಂತೋಡು,ಅಸ್ಲಂ ಅರಂತೋಡು,ನಾಸಿರ್ ಪೆರಾಜೆ ಯವರು ಸಹಕರಿಸಿದರು .
ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಬಾಳಿಲ-ಮುಪ್ಪೇರ್ಯ ಇದರ ಆಶ್ರಯದಲ್ಲಿ 16ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ. 24 ರಂದು ಬಾಳಿಲ ವಿದ್ಯಾಬೋಧಿನೀ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ನಡೆಯಲಿದೆ. ಅ. 24 ರಂದು ಬೆಳಿಗ್ಗೆ 9.00 ಗಂಟೆಗೆ ಶ್ರೀ ಶಾರದಾ ದೇವಿಯ ವಿಗ್ರಹ ಆಗಮನದ ಬಳಿಕ ಗಣಪತಿ ಹವನ, ಶಾರದಾ ದೇವಿಯ ಪ್ರತಿಷ್ಠಾಪನೆ, ಶ್ರೀದೇವಿಗೆ...
ಮಡಿಕೇರಿ ಭಾಗಮಂಡಲದ ತಲಕಾವೇರಿಯಲ್ಲಿ ನಾಳೆ (ಅ. 17) ಬೆಳಿಗ್ಗೆ 7.03 ರ ಕನ್ಯಾ ರಾಶಿಯಲ್ಲಿ ತೀರ್ಥೋದ್ಭವ ಸಂಭ್ರಮ ನಡೆಯಲಿದೆ ಎಂದು ತಿಳಿದುಬಂದಿದೆ.
Loading posts...
All posts loaded
No more posts
