- Thursday
- September 10th, 2026
ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬೆಳ್ಳಾರೆ, ಪೆರುವಾಜೆ, ಕಳಂಜ, ಕೊಡಿಯಾಲ ಹಾಗೂ ಮುಪ್ಪೇರ್ಯ ಗ್ರಾಮಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಸಭೆ ಹಾಗೂ ಕಾರ್ಯಾಗಾರ ಜೂ.14ರಂದು ಸಂಜೆ ಬೆಳ್ಳಾರೆಯ ನಮೃತಾ ಕಲಾಮಂದಿರದಲ್ಲಿ ನಡೆಯಿತು. ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್...
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಂಜಿಗುಂಡಿ ಬಳಿ ಬೃಹತ್ ಮರವೊಂದು 33ಕೆವಿ ವಿದ್ಯುತ್ ಲೈನ್ ಮೇಲೆ ಬಿದ್ದು ಹಾನಿಯಾಗಿದೆ. ಕೆಲಹೊತ್ತು ರಸ್ತೆ ಸಂಚಾರ ಬಂದ್ ಆಗಿತ್ತು. ಬೆಳ್ಳಾರೆಯಿಂದ ಸುಳ್ಯಕ್ಕೆ ಕರೆಂಟ್ ಬೆಳ್ಳಾರೆಯಿಂದ ಸುಳ್ಯಕ್ಕೆ ಅಳವಡಿಕೆಯಾಗಿದ್ದ 33ಕೆವಿ ಭೂಗತ ಕೇಬಲ್ ತುರ್ತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತಿದ್ದು, ಮೆಸ್ಕಾಂ ನವರು ಇದೀಗ ಬೆಳ್ಳಾರೆಯಿಂದ ಸುಳ್ಯಕ್ಕೆ 33 ಕೆವಿ ವಿದ್ಯುತ್...
ಜೂ.13ರಂದು ಬೆಳಗ್ಗಿನ ಜಾವ ಸುಬ್ರಮಣ್ಯದಿಂದ ಅಕ್ರಮವಾಗಿ ಜಾನುವಾರುಗಳನ್ನು ಕದ್ದು ಸಾಗಾಟದ ಮಾಡುತ್ತಿದ್ದ ಪಿಕಪ್ ವಾಹನ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಪಲ್ಟಿಯಾದ ಘಟನೆ ಜೂ.13 ರಂದು ವರದಿಯಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳು ವಾಹನದಲ್ಲಿ ಇದ್ದ 2 ಗೋವುಗಳ ಹಗ್ಗ ಬಿಚ್ಚಿ ಯಾವುದೇ ಸುಳಿವು ಸಿಗದ ರೀತಿಯಲ್ಲಿ ಕೈಕಂಬದವರೆಗೆ ಓಡಿಸಿದ್ದರು. ನಂತರ ಪಲ್ಟಿಯಾಯದ ವಾಹನವನ್ನು ಮೇಲೆತ್ತುವ...
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯಮಂಡೆಕೋಲು, ಸುಳ್ಯಮೊ: 9591969197ದಿನಾಂಕ : 15-06-2026 - ಸೋಮವಾರ01) ಮೇಷರಾಶಿ : ಹಿರಿಯರಿಗೆ ಗೌರವ ಕೊಡುವುದು ಈ ದಿನ ನಿಮ್ಮ ಗಮನದಲ್ಲಿ ಇರಬೇಕು, ತಂದೆಯ ಆರೋಗ್ಯದ ಕಡೆ ಗಮನವಿರಲಿ, ವ್ಯಾಪಾರ ವ್ಯಾವಹಾರ ಮಾಡುವವರಿಗೆ ಈ ದಿನ ಅನಿರೀಕ್ಷಿತ ಲಾಭವನ್ನು ಪಡೆಯುತ್ತಿರಾ, ಈ ದಿನ ಧನಲಾಭವಾಗುವ ಸಾಧ್ಯತೆ ಕಂಡು ಬರುತ್ತಿದೆ. ಮನ ಬಂದಂತೆ ಖರ್ಚಿಗೆ...
ಸಚಿನ್ ಕ್ರೀಡಾ ಸಂಘ(ರಿ.) ಹರಿಹರ ಪಳ್ಳತ್ತಡ್ಕ ಇವರ ಸಾರಥ್ಯದಲ್ಲಿ ಜೂ.13 ಶನಿವಾರದಂದು ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದ ಕಲಾಮಂದಿರದಲ್ಲಿ ನಿವೃತ್ತ ಯೋಧರಾದ ಭಾಸ್ಕರ ಕೇಮಟಿ ರವರಿಗೆ ಅಭಿನಂದನಾ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.99 ಅಂಕ ಗಳಿಸಿ ರಾಜ್ಯಕ್ಕೆ 5ನೇ ಸ್ಥಾನ ಪಡೆದ ಕು.ಆಶಿಕಾ ಮುಂಡಾಜೆ ರವರಿಗೆ ಸನ್ಮಾನ ಸಮಾರಂಭ ನಡೆಯಿತು.ಬೆಳಿಗ್ಗೆ ಹರಿಹರ...
ಸುಬ್ರಹ್ಮಣ್ಯ, ಜೂನ್ 14 : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರವಿವಾರ 50 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿದ್ದು, ಕ್ಷೇತ್ರದಲ್ಲಿ ಭಕ್ತರ ಸಾಗರವೇ ಹರಿದು ಬಂದ ದೃಶ್ಯ ಕಂಡುಬಂತು. ಮಿಥುನ ಮಾಸ ಆರಂಭಗೊಂಡಿರುವುದು ಹಾಗೂ ಈ ವರ್ಷ ಮಳೆ ಪ್ರಮಾಣ ಕಡಿಮೆಯಿರುವ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ...
ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇದರ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಗುತ್ತಿಗಾರು ಇದರ ಅಧ್ಯಕ್ಷರಾದ ಪ್ರವೀಣ್ ಮುಂಡೋಡಿ ಇವರು ಉದ್ಘಾಟಿಸಿ ಶುಭಹಾರೈಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಚೆನ್ನಮ್ಮ.ಪಿ ವಹಿಸಿದ್ದರು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಸಾಲ್ತಾಡಿ, ಸದಸ್ಯರುಗಳಾದ ಅಚ್ಚುತ ಮಲ್ಕಜೆ,...
ಜೆ.ಸಿ.ಐ ಸುಳ್ಯ ಸಿಟಿ, ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು ಘಟಕ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ತಾಲೂಕು, ಜಂ ಇಯ್ಯತುಲ್ ಫಲಾಹ್(ರಿ.) ಸುಳ್ಯ ಘಟಕ, ಭಾರತೀಯ ರೆಡ್ ಕ್ರಾಸ್ ರಕ್ತನಿಧಿ ದ.ಕ ಜಿಲ್ಲೆ, ಲಯನ್ಸ್ ಕ್ಲಬ್ ಹಿರಿಯಡ್ಕ, ಡಿಸ್ಟಿಕ್ 317ಸಿ, ರಿಜಿನ್ VI, ಜೋನ್ III...
ಕೊಲ್ಲಮೊಗ್ರು : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಘ ರಚಿಸಲಾಯಿತು. ಚುನಾವಣಾ ದಿನಾಂಕ ಘೋಷಣೆ, ನಾಮಪತ್ರ ಸಲ್ಲಿಕೆ, ಚುನಾವಣಾ ಪ್ರಚಾರ, ತಮ್ಮ ಇಡೀ ಕಾರ್ಯಕ್ರಮವನ್ನು ಮತದಾನ ಗುರುತಿನ ಚೀಟಿಯಾಗಿ ಬದಲಿಸಿ, ಮೊಬೈಲ್ ಇ.ವಿ.ಎಂನಲ್ಲಿ ಮತದಾನ, ಮತ ಎಣಿಕೆ ಹೀಗೆ ಪ್ರಜಾಪ್ರಭುತ್ವ ಮಾದರಿಯಲ್ಲಿ ತಂತ್ರಜ್ಞಾನವನ್ನು ಬಳಿಸಿಕೊಂಡು ಮಂತ್ರಿ ಮಂಡಲವನ್ನು...
ಬೆಳ್ಳಾರೆ ಗ್ರಾಮದ ಉಮಿಕ್ಕಳ ವಾರ್ಡ್ ಸಂಖ್ಯೆ 143ರ ಬೂಡು-ಉಪ್ಪಂಗಳ-ಪಾಠಾಜೆಯನ್ನು ಸಂಪರ್ಕಿಸುವ ಕಾಂಕ್ರಿಟೀಕಣಗೊಂಡ ರಸ್ತೆಯನ್ನು ಜೂ. 12ರಂದು ಬೆಳಿಗ್ಗೆ 7 ಘಂಟೆಗೆ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.ಸುಮಾರು 14 ವರುಷಗಳಿಂದ ಇದು ಮರು ಡಾಮರೀಕರಣಗೊಳ್ಳದೆ ಸಂಚಾರ ದುಸ್ತರವಾಗಿತ್ತು. ಈ ವಾರ್ಡಿನ ನಿವಾಸಿಗಳು ಸಂಬಂಧಪಟ್ಟವರಲ್ಲಿ ಹಲವು ವರುಷಗಳಿಂದ ತಮ್ಮ ಅಹವಾಲನ್ನು ಮಂಡಿಸುತ್ತಿದ್ದರು.ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ...
Loading posts...
All posts loaded
No more posts
