- Sunday
- September 13th, 2026
ದ್ವಾದಶ ರಾಶಿಗಳ ದಿನ ಭವಿಷ್ಯಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 959196919701)ಮೇಷ ರಾಶಿದೂರ ಪ್ರಯಾಣದಲ್ಲಿ ಎಚ್ಚರಿಕೆ ವಹಿಸಬೇಕು. ಹಿರಿಯರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಒಳ್ಳೆಯದಲ್ಲ. ಮನೆಯ ಹೊರಗೆ ಗೊಂದಲಮಯ, ವಾತಾವರಣ ವಿರುತ್ತದೆ. ಉದ್ಯೋಗಿಗಳು ಹೆಚ್ಚುವರಿ ಜವಾಬ್ದಾರಿಗಳನ್ನು ಹೊಂದಿರುತ್ತಾರೆ, ಮತ್ತು ಸ್ಥಿರ ಆಸ್ತಿ ಮಾರಾಟದಲ್ಲಿ ನಿರೀಕ್ಷಿತ ಲಾಭವನ್ನು ಹೊಂದಿರುವುದಿಲ್ಲ. ಆರ್ಥಿಕವಾಗಿ ಗೊಂದಲಮಯ ಪರಿಸ್ಥಿತಿಗಳಿರುತ್ತದೆ,...
ಅರಂತೋಡು ಗ್ರಾಮದ ಅಡ್ತಲೆ ಕುಟುಂಬದ ಹಿರಿಯರಾದ ಕೃಷ್ಣಪ್ಪ ಗೌಡ ಅಡ್ತಲೆ(ದರ್ಖಾಸ್) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು (ಏ.05) ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.ಮೃತರು ಐವರು ಹೆಣ್ಣುಮಕ್ಕಳು, ಅಳಿಯಂದಿರು, ಸಹೋದರರು, ಸಹೋದರಿಯರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯವನ್ನು ನಾಳೆ(ಏ.06) ಬೆಳಿಗ್ಗೆ 10:00 ಗಂಟೆಯ ಒಳಗಾಗಿ ನಡೆಸಲಾಗುವುದೆಂದು ಮೃತರ ಮನೆಯವರು ತಿಳಿಸಿದ್ದಾರೆ.
ಚೆಂಬು ಗ್ರಾಮದ ಆನೆಹಳ್ಳ ಚೌಟಾಜೆ ದಿ|ರಾಮಣ್ಣ ಗೌಡ ಇವರ ಧರ್ಮಪತ್ನಿ ಶ್ರೀಮತಿ ಗೌರಮ್ಮ ಚೌಟಾಜೆ ಅಲ್ಪಕಾಲದ ಅಸೌಖ್ಯದಿಂದ ಇಂದು(ಏ.05) ನಿಧನರಾದರು. ಮೃತರ ಅಂತಿಮ ಸಂಸ್ಕಾರವನ್ನು ಏ.06 ಸೋಮವಾರದಂದು ಪೂರ್ವಾಹ್ನ 10:00 ಗಂಟೆಗೆ ನಡೆಯಲಿದೆ.ಮೃತರು ಪುತ್ರರಾದ ಕುಶಾಲಪ್ಪ ಚೌಟಾಜೆ, ತಿರುಮಲೇಶ್ವರ ಚೌಟಾಜೆ, ಶೇಷಪ್ಪ ಚೌಟಾಜೆ, ಅಕ್ವಾ ಸೊಲ್ಯೂಷನ್ ನ ಜಯರಾಮ ಚೌಟಾಜೆ ಹಾಗೂ ಪುತ್ರಿಯರಾದ ವಾರಿಜ, ನಿರ್ಮಲಾಕ್ಷಿ,...
ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಅರಂಬೂರು ಸಮೀಪ ಬೈಕ್ ಗೆ ಕಾರು ಢಿಕ್ಕಿಯಾದ ಘಟನೆ ಇದೀಗ ನಡೆದಿದೆ. ಬೈಕ್ ಸವಾರರಿಗೆ ಗಾಯಗಳಾಗಿದ್ದು, ಇಬ್ಬರನ್ನು ಸರಕಾರಿ ಆಸ್ಪತ್ರೆಗೆ ಹಾಗೂ ಗಂಭೀರ ಗಾಯಗೊಂಡ ಓರ್ವನನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಹರಿಹರ ಪಳ್ಳತ್ತಡ್ಕ ಗ್ರಾಮದ ಸಂಗಮ ಕ್ಷೇತ್ರ ಶ್ರೀ ಅಯ್ಯಪ್ಪ ಸ್ವಾಮಿ ಆರಾಧನಾ ಮಂದಿರದ ನೂತನ ಗರ್ಭಗುಡಿಗೆ ಏ.04ರಂದು ದಾರಂದ ಮುಹೂರ್ತ ನೆರವೇರಿತು.ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ರವರು ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.ಈ ಸಂದರ್ಭದಲ್ಲಿ ಹಿಮ್ಮತ್.ಕೆ.ಸಿ, ಮಾಧವ ಚಾಂತಾಳ, ಜಯಪ್ರಕಾಶ್ ಕಜ್ಜೋಡಿ, ಜಗದೀಶ್ ಪಡ್ಪು, ಡಾ.ಚಂದ್ರಶೇಖರ ಕಿರಿಭಾಗ, ನಿತಿನ್ ಮಲ್ಲಾರ,...
ಯೇಸು ಕ್ರಿಸ್ತರ ಕಷ್ಟಾನುಭವ ಹಾಗೂ ಮರಣದ ಸ್ಮರಣೆಯ ‘ಶುಭ ಶುಕ್ರವಾರ’ದ ಪವಿತ್ರ ವಿಧಿವಿಧಾನಗಳನ್ನು ಪಂಜದ ಸಂತ ರೀಟಾ ಚರ್ಚ್ನಲ್ಲಿ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು.ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಈ ಸಂಜೆಯ ಆರಾಧನಾ ವಿಧಿಯ ನೇತೃತ್ವ ವಹಿಸಿದ್ದರು.ಈ ಪವಿತ್ರ ವಿಧಿಯು ಸಾಷ್ಟಾಂಗ ನಮನ, ಯೇಸು ಕ್ರಿಸ್ತರ ಕಷ್ಟಾನುಭವದ ವಾಚನ,...
ಬರಹ : ಉಲ್ಲಾಸ್ ಕಜ್ಜೋಡಿಗ್ರಾಮೀಣ ಪ್ರದೇಶಗಳಲ್ಲಿ “ಸಂತೆ ಮಾರುಕಟ್ಟೆ” ಎನ್ನುವುದು ತುಂಬಾ ಪ್ರಸಿದ್ಧ. ವಾರದಲ್ಲಿ ಒಂದು ದಿವಸ ಅಥವಾ ಕೆಲವು ಕಡೆಗಳಲ್ಲಿ ವಾರಪೂರ್ತಿ ನಡೆಯುವಂತಹ ಈ ಸಂತೆ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ತರಕಾರಿಗಳು, ವಿವಿಧ ರೀತಿಯ ಹಣ್ಣುಗಳು, ಬಟ್ಟೆಗಳು, ಬೇಳೆ-ಕಾಳುಗಳು, ಗೃಹೋಪಯೋಗಿ ವಸ್ತುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದಂತಹ ಎಲ್ಲಾ ರೀತಿಯ ವಸ್ತುಗಳು ಒಂದೇ...
ಗುತ್ತಿಗಾರು ಆಸರೆ ಇಲೆಕ್ಟ್ರಾನಿಕ್ಸ್ ನಲ್ಲಿ ಪ್ರತಿಷ್ಟಿತ ಟಾಟಾ ಕಂಪನಿಯ 55 ಇಂಚಿನ ವಿನೂತನ ಮಾದರಿಯ QLED ಟಿವಿ ಬಿಡುಗಡೆಗೊಂಡಿತು. ಮೊದಲ ಗ್ರಾಹಕರಾಗಿ ಸುಬ್ರಹ್ಮಣ್ಯ ಠಾಣೆಯ ಪೋಲಿಸ್ ಕಾನ್ಟೇಬಲ್ ಸತೀಶ್ ಇವರು ಖರೀದಿಸಿದರು. ವಿನೂತನ ಮಾದರಿಯ ಟಿವಿ ಹಲವಾರು ವೈಷಿಷ್ಟತೆಯನ್ನು ಹೊಂದಿದೆ ಮತ್ತು ಉತ್ತಮ ಸೇವೆ ಹಾಗೂ ಕಡಿಮೆ ದರದಲ್ಲಿ ದೊರೆಯುತ್ತದೆ ಎಂಬುದಾಗಿ ಮಾಲಕರು ತಿಳಿಸಿದ್ದಾರೆ. ಈ...
ದಿನಾಂಕ : 04 ಏಪ್ರಿಲ್ 2026ವಾರ : ಶನಿವಾರಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 04) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.ಅಡಿಕೆ ಧಾರಣೆಹೊಸ ಅಡಿಕೆ : 260-305-460-500ಹಳೆ ಅಡಿಕೆ...
ಸುಬ್ರಹ್ಮಣ್ಯ ಏಪ್ರಿಲ್ 3: ರಾಜ್ಯ ಸರಕಾರ ಶುಕ್ರವಾರ ಘೋಷಿಸಿದ ರಜಾ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಊರುಗಳಿಂದ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಬಂದು ಶೇಷ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಠೆ, ಸರ್ಪ ಸಂಸ್ಕಾರ ಹಾಗೂ ಮಹಾಪೂಜೆ ಮತ್ತು ಇನ್ನಿತರ ಸೇವೆಗಳನ್ನು ನಡೆಸಿ ಧನ್ಯರಾದರು. ಈ ಸಂದರ್ಭದಲ್ಲಿ ದೇವಳದ ಅಧಿಕಾರಿವೃಂದದವರು, ಸಿಬ್ಬಂದಿ...
Loading posts...
All posts loaded
No more posts
