ಹಾಲು ಹಲ್ಲು ಎಂಬ ಬ್ರಹ್ಮಾಸ್ತ್ರ

ಮಕ್ಕಳಲ್ಲಿ ಮೊದಲು ಹುಟ್ಟುವ ಹಲ್ಲುಗಳು ಹಾಲಿನಷ್ಟೇ ಶುಭ್ರವಾಗಿ ಇರುವುದರಿಂದ ಅದನ್ನು ಹಾಲು ಹಲ್ಲು ಎಂದು ಕರೆಯುತ್ತಾರೆ. ಸಾಮಾನ್ಯವಾಗಿ 20 ಹಾಲು ಹಲ್ಲುಗಳು ಮಕ್ಕಳಲ್ಲಿ ಇದ್ದು, ಅವುಗಳು ಬಿದ್ದು ಹೋದಾಗ ಶಾಶ್ವತ ಹಲ್ಲುಗಳು ಅವುಗಳ ಜಾಗದಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಆಡು ಮಾತಿನಲ್ಲಿ ಹೇಳುವುದಾದರೆ 32 ಶಾಶ್ವತ ಹಲ್ಲುಗಳು ಇವೆಯಾದರೂ, ಇತ್ತೀಚಿನ ದಿನಗಳಲ್ಲಿ ಕೊನೆಯ ನಾಲ್ಕು ದವಡೆ ಹಲ್ಲುಗಳು...

ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ…ಮೇ 16

ಪ್ರತಿ ವರ್ಷ ಮೇ 16 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023 ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ.ಏನಿದು ಡೆಂಗ್ಯೂ ಜ್ವರ?ಡೆಂಗ್ಯೂ...
Ad Widget

ಕಥೆ : ಕಗ್ಗತ್ತಲ ರಾತ್ರಿಯಲ್ಲಿ ಬೆಚ್ಚಿಬೀಳಿಸಿದ ಸದ್ದು…

ಅದೊಂದು ದಿನ ರಾತ್ರಿ ಗುಡುಗು-ಸಿಡಿಲಿನ ಆರ್ಭಟದೊಂದಿಗೆ ಜೋರಾಗಿ ಮಳೆ ಸುರಿಯುತ್ತಿತ್ತು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಮೇಶ್ ಎರಡು ದಿವಸಗಳ ಕಾಲ ಆಫೀಸ್ ಗೆ ರಜೆ ಹಾಕಿ ನಾಳೆ ತನ್ನೂರಿಗೆ ಹೊರಡಲು ಸಿದ್ಧನಾಗಿದ್ದ. ಆದರೆ ಊರಿಗೆ ಹೋಗುವ ಮೊದಲು ಬಾಕಿ ಇರುವ ತನ್ನ ಆಫೀಸ್ ಕೆಲಸಗಳನ್ನು ಇಂದೇ ಮಾಡಿ ಮುಗಿಸಬೇಕೆಂದು ಆತ ಕಂಪ್ಯೂಟರ್ ಎದುರು ಕುಳಿತ.ರಾತ್ರಿ...

ಪ್ರೇತಗಳ ಮದುವೆ ( ಕುಲೆ ಮದಿಮೆ )

ನಮ್ಮ ತುಳುನಾಡು ವೈವಿಧ್ಯಮಯ ಸಂಸ್ಕೃತಿಯ ನಾಡು. ಇಲ್ಲಿ ಹಲವಾರು ರೀತಿಯ ಆಚರಣೆಗಳು, ಆರಾಧನೆಗಳ ಮೂಲ ಸ್ಥಾನವಾಗಿದೆ.ಬೇರೆ ಬೇರೆ ರೀತಿಯ ಸಂಸ್ಕೃತಿ - ಸಂಸ್ಕಾರವನ್ನು ಕಾಣಬಹುದು. ಬೆಮ್ಮರ ಸೃಷ್ಟಿ ತುಳುನಾಡಿನಲ್ಲಿ ಆರಾಧನೆಗೆ ಬಹುಮುಖ್ಯ ಸ್ಥಾನಮಾನವಿದೆ.ಕಳೆದು ಹೋದ ಪೂರ್ವಜರನ್ನು ಆರಾಧಿಸುವ ವಿಶೇಷವಾದ ಆರಾಧನ ಪ್ರಕ್ರಿಯನ್ನು ಕಾಣಬಹುದು. ನ್ಯಾಯಕ್ಕಾಗಿ ಹೋರಾಡಿದ ಅದೆಷ್ಟೋ ವೀರ ನಾಯಕರು ಇಂದು ದೈವತ್ವ ಪಡೆದು ಆರಾಧನೆ...

ಅಮರ ಸುಳ್ಯ ಸುದ್ದಿ ಯುಗಾದಿ ವಿಶೇಷಾಂಕ ನಾಳೆ (ಎ.08) ಬಿಡುಗಡೆ

ಸುಳ್ಯದ ಜನಪರ ಪತ್ರಿಕೆಯಾಗಿ ಕಳೆದ 13 ವರ್ಷಗಳಿಂದ ಪಕ್ಷ , ಜಾತಿ ಮತ ಭೇದವಿಲ್ಲದೆ ಸಮಾಜದ ಕೈ ಗನ್ನಡಿಯಾಗಿ ನಿರಂತರವಾಗಿ ಮೂಡಿ ಬರುತ್ತಿರುವ ಅಮರ ಸುಳ್ಯ ಸುದ್ದಿ ವಾರಪತ್ರಿಕೆ ಮೂರನೇ ವರ್ಷದ ಯುಗಾದಿ ವಿಶೇಷಾಂಕವನ್ನು ಹೊರತಂದಿದೆ. ಏ. 08 ರಂದು ಸುಳ್ಯ ತಹಶೀಲ್ದಾರ್ ಜಿ ಮಂಜುನಾಥ್ ಇವರ ಉಪಸ್ಥಿತಿಯಲ್ಲಿ ಯುಗಾದಿ ವಿಶೇಷಾಂಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಈ...

ಸುಳ್ಯ : ತಾಲೂಕು ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ – ಬಡ ರೋಗಿಗಳ ಪಾಡೇನು – ಜನಪ್ರತಿನಿಧಿಗಳೇ, ಅಧಿಕಾರಿಗಳೇ ಆಸ್ಪತ್ರೆ ಕಡೆಗೆ ಒಮ್ಮೆ ಇಣುಕಿ ನೋಡಿ!!!!

ನಿರಂತರವಾಗಿ ಎಂಟು ವರ್ಷಗಳಿಂದ ಪ್ರಸೂತಿ ವೈದ್ಯರಿಲ್ಲದೇ ಖಾಸಗಿ ವೈದ್ಯರ ಮೊರೆ ಹೋಗುತ್ತಿರುವ ಸರಕಾರಿ ಆಸ್ಪತ್ರೆ ಆಸ್ಪತ್ರೆಯಲ್ಲಿ ನೌಕರರು ಎಷ್ಟಿರಬೇಕು ಹಾಗೂ ಇದೀಗ ಇರುವ ನೌಕರರ ಸಂಖ್ಯೆ ಗೊತ್ತಾ? ಹಾಗಿದ್ದರೆ ಈ ವರದಿಯನ್ನೊಮ್ಮೆ ನೋಡಿ! ಸುಳ್ಯ : ಸುಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲೂಕು ಆರೋಗ್ಯ ಕೇಂದ್ರವಾಗಿ ಮಾಜಿ ಸಚಿವರು ಶಾಸಕರಾದ ಎಸ್ ಅಂಗಾರರ ಮುತುವರ್ಜಿಯಲ್ಲಿ ಚಾಲನೆ...

ಕವನ : ಸ್ವಾರ್ಥದ ಬದುಕಿನಲ್ಲಿ ಸಾಧಿಸಿದ್ದಾದರೂ ಏನು…?

ಮನುಷ್ಯನ ದೇಹವನ್ನು ಬಿಟ್ಟು ಹೊರಟ ಆತ್ಮವು ಯೋಚಿಸುವುದು “ನಾನೇನು ಸಾಧಿಸಿದೆ ಬದುಕಿನಲ್ಲಿ ಇಂದು, ಬದುಕಿನ ಪ್ರತಿಕ್ಷಣವೂ ಸ್ವಾರ್ಥದಿಂದಲೇ ಜೀವಿಸಿದೆ ಎಂದು...ಕಣ್ಣೆದುರೇ ಕಷ್ಟದಲ್ಲಿದ್ದವರ ಕಡೆಗಣಿಸಿದ ದುಷ್ಟನು ನಾನು, ದುಃಖದಿಂದ ಅಳುತ್ತಿದ್ದವರ ಕಣ್ಣೀರ ನೋಡಿಯೂ ನೋಡದಂತೆ ದೂರ ಹೋದವನು ನಾನು...ಬದುಕಿನುದ್ದಕ್ಕೂ ಸ್ವಾರ್ಥಸಾಧನೆಗಾಗಿಯೇ ಬದುಕಿದ ಪಾಪಾತ್ಮನು ನಾನು, ಪುಣ್ಯದ ಬೆಲೆಯನ್ನು ಅರಿಯದ, ನಿಸ್ವಾರ್ಥದ ಅರ್ಥವನ್ನೂ ತಿಳಿಯದ ಪರಮಸ್ವಾರ್ಥಿಯು ನಾನು...ನಾನೇ ಎಲ್ಲಾ,...

ಇಂದು ಮಕ್ಕಳ ಕೈಗೊಂದು ಪುಸ್ತಕ ಕೊಡಿ

ಮಕ್ಕಳು ಇಂದಿನ ಯುವ ಜನಾಂಗದಲ್ಲಿ ತಮ್ಮ ಭವಿಷ್ಯವನ್ನು ರೂಪಿಸುವಂತಹ ಕೈಗಳು ಪ್ರಸ್ತುತ ಜಂಗಮವಾಣಿಯಂತಹ ಕಂಪ್ಯೂಟರ್, ದೂರದರ್ಶನ, ಇಂತಹ ಹಲವಾರು ಸಾಮಾಜಿಕ ಮಾಧ್ಯಮದೊಂದಿಗೆ ವಾಲುತ್ತಿದ್ದಾರೆ. ಪುಸ್ತಕಗಳನ್ನು ಓದುವ ಆ ಪುಟ್ಟ ಕೈಗಳು ತಂತ್ರಜ್ಞಾನದ ಕಡೆಗೆ ದಾಪುಗಾಲು ಹಾಕುತ್ತಿದೆ. “ ಪುಸ್ತಕಗಳಿಗಿಂತ ಅತ್ಯುತ್ತಮ ಮಿತ್ರ ಬೇರಾರಿಲ್ಲ” ಆದರೆ ಹಿಂದಿನ ಯುಗದಲ್ಲಿ ಶಾಲೆಯನ್ನು ಬಿಟ್ಟು ಸಂಜೆಯ ತಂಪಗಿನ ವಾತಾವರಣದ ಜಗಲಿಯಲ್ಲಿ...

ಕವನ : ಬದುಕಿನಲ್ಲಿ ತಾಳ್ಮೆಯಿರಲಿ, ಬದುಕಿನ ಮೇಲೆ ಪ್ರೀತಿಯಿರಲಿ…

ಬದುಕಿರುವಾಗಲೇ ಖುಷಿಯಿಂದ ಬದುಕಿ, ಸಾವು ಹೇಳಿ-ಕೇಳಿ ಬರುವುದಿಲ್ಲ, ಸತ್ತ ಮೇಲೆ ಈ ಬದುಕೇ ಇರುವುದಿಲ್ಲ...ಜೊತೆಗಿರುವಾಗಲೇ ಎಲ್ಲರನ್ನೂ ಪ್ರೀತಿಸಿ, ದೂರವಾದ ಮೇಲೆ ದುಃಖಿಸಿದರೆ ಪ್ರಯೋಜನವೇ ಇರುವುದಿಲ್ಲ...ಆದಷ್ಟು ಕೋಪ-ಸಿಟ್ಟುಗಳನ್ನು ಹತೋಟಿಯಲ್ಲಿ ಇರಿಸಿಕೊಳ್ಳಿ, ಒಂದು ಕ್ಷಣದ ಸಿಟ್ಟು ಅದೆಷ್ಟೋ ಸಂಬಂಧಗಳನ್ನು ದೂರ ಮಾಡಿದ ಉದಾಹರಣೆಗಳಿವೆಯಲ್ಲಾ...!ನಿಮ್ಮ ಕಣ್ಣೆದುರು ಇತರರಿಗೆ ಕಷ್ಟ ಬಂದಾಗ ಅವರ ಕಷ್ಟಗಳಿಗೆ ಕೈ ಜೋಡಿಸಿ, ನಾವು ಇತರರ ಕಷ್ಟಕ್ಕೆ...

ಮನೆಯು ಸದ್ಗುಣಗಳನ್ನು ಬೆಳೆಸಿಕೊಳ್ಳುವ ತಾಣ

ಮಕ್ಕಳು ಮಾನವ ಲೋಕದ ಸುಂದರ ಪುಷ್ಪಗಳು. ಅಂತಹ ಮೃದು ಹೃದಯಗಳಲ್ಲಿ ಉತ್ತಮ ಮೌಲ್ಯಗಳನ್ನು, ಸಮಾಜ ಬಯಸುವ ಉತ್ತಮ ಹೃದಯವಂತಿಕೆಯನ್ನು ತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ಬೆಳೆಸುವ ಪ್ರಪ್ರಥಮ ಸ್ಥಳ ಮನೆ. ಅಂದರೆ ತಂದೆ ತಾಯಿ. ಮನೆ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುವ ಒಂದು ಸಾಮಾಜಿಕ ಸಂಸ್ಥೆಯಾಗಿದೆ. ಮಕ್ಕಳ ಪ್ರಾರಂಭಿಕ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ. ಈ ಕಲಿಕೆ ಮುಂದಿನ...
Loading posts...

All posts loaded

No more posts

error: Content is protected !!