ಪಾಲಡ್ಕ : ಹಾಲು ಸಾಗಾಟದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಢಿಕ್ಕಿ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಎಂಬಲ್ಲಿ ಹಾಲು ಸಾಗಾಟದ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಘಟನೆ ಇಂದು ನಡೆದಿದೆ. ಢಿಕ್ಕಿಯಾದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಮೈಸೂರಿನಲ್ಲಿ ಬೈಕ್ ಅಪಘಾತ – ಕಾಂತಮಂಗಲದ ಯುವಕ ಮೃತ್ಯು

ಮೈಸೂರಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಅಜ್ಜಾವರ ಕಾಂತಮಂಗಲ ಯುವಕ ನಿಕೇಶ್ ಮೃತಪಟ್ಟ ಘಟನೆ ಜು.26 ನಡೆದಿದೆ. ಜು.24ರಂದು ಮೈಸೂರಿನಲ್ಲಿ ಬೈಕ್ ಅಪಘಾತಕ್ಕೊಳಗಾಗಿದ್ದು ಗಂಭೀರ ಗಾಯಗೊಂಡ ನಿಕೇಶ್ ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಮುಂಜಾನೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿಕೇಶ್ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು ಮನೆಗೆ ಬರುತ್ತಿರುವ ವೇಳೆ ಈ ಘಟನೆ ನಡೆದಿದೆ. ಮೃತರು ತಂದೆ ಜಗದೀಶ್,...
Ad Widget

ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ; ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕ್ಯಾಮೆರಾ ಕಣ್ಗಾವಲು – ನೋಟೀಸ್ ಜಾರಿ…!!

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳ ಉಲ್ಲಂಘನೆಗಳಿಂದಾಗಿ ನಡೆಯುತ್ತಿರುವ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲು ಪ್ರಾರಂಭಿಸಲಾಗಿದ್ದು, ಮೊದಲ ಹಂತವಾಗಿ ವಿಟ್ಲ ಪೊಲೀಸ್ ಠಾಣೆ, ಉಪ್ಪಿನಂಗಡಿ ಪೊಲೀಸ್ ಠಾಣೆ, ಸುಳ್ಯ ಪೊಲೀಸ್ ಠಾಣೆ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ...

ಅಡ್ಕಾರು : ನಡುವಡ್ಕ ಸಮೀಪ ರಿಕ್ಷಾ – ಕಾರು ಡಿಕ್ಕಿ

ಅಡ್ಕಾರಿನ ನಡುವಡ್ಕ ಎಂಬಲ್ಲಿ ಕಾರು ಮತ್ತು ರಿಕ್ಷಾ ಡಿಕ್ಕಿಯಾದ ಘಟನೆ ಜು.17ರಂದು ಸಂಭವಿಸಿದೆ. ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ಅಮರ ಸುದ್ದಿ ವಿಶೇಷ ವರದಿ ; ಹರಿಹರ ಪಳ್ಳತ್ತಡ್ಕ – ನಡುಗಲ್ಲು ಮುಖ್ಯ ರಸ್ತೆಯ ಬಾರಡ್ಕ ಸಮೀಪ ನಿರಂತರವಾಗಿ ಸಂಭವಿಸುತ್ತಿವೆ ವಾಹನ ಅಪಘಾತಗಳು ; ಎಚ್ಚರಿಕೆ ವಹಿಸಬೇಕಿದೆ ವಾಹನ ಸವಾರರು – ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಸ್ಥಳೀಯಾಡಳಿತ

(ವರದಿ : ಉಲ್ಲಾಸ್ ಕಜ್ಜೋಡಿ)ಹರಿಹರ ಪಳ್ಳತ್ತಡ್ಕ - ನಡುಗಲ್ಲು ಮುಖ್ಯ ರಸ್ತೆಯ ಮಲ್ಲಾರ - ಬಾರಡ್ಕ ರಸ್ತೆಯಲ್ಲಿ ನಿರಂತರವಾಗಿ ವಾಹನ ಅಪಘಾತಗಳು ಸಂಭವಿಸುತ್ತಿದ್ದು, ಹರಿಹರ ಪಲ್ಲತ್ತಡ್ಕದಿಂದ ನಡುಗಲ್ಲು ಮಾರ್ಗವಾಗಿ ಗುತ್ತಿಗಾರು, ಸುಳ್ಯ ಸೇರಿದಂತೆ ಎಲ್ಲಾ ಕಡೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಾಗಿರುವ ಇಲ್ಲಿ ಇದೀಗ ಹಲವಾರು ಸಮಯಗಳಿಂದ ಸಂಭವಿಸುತ್ತಿರುವ ಈ ನಿರಂತರ ಅಪಘಾತಗಳಿಂದಾಗಿ ವಾಹನ ಸವಾರರು ಸಂಚರಿಸಲು...

ಕೊಲ್ಲಮೊಗ್ರು : ಮಾವಿನ ಮರಕ್ಕೆ ಗುದ್ದಿ ಜಖಂಗೊಂಡ ಕಾರು – ಕೂದಲೆಳೆ ಅಂತರದಲ್ಲಿ ಪಾರಾದ ಪಾದಾಚಾರಿ

ಕೊಲ್ಲಮೊಗ್ರದಲ್ಲಿ ಕಾರೊಂದು ಮಾವಿನ ಮರಕ್ಕೆ ಗುದ್ದಿದ ಘಟನೆ ಜು.09ರಂದು ನಡೆದಿದೆ ಎಂದು ತಿಳಿದುಬಂದಿದೆ. ನಿನ್ನೆ ಸಂಜೆ 7:30ರ ಸುಮಾರಿಗೆ ಹರಿಹರ ಪಳ್ಳತ್ತಡ್ಕ ಕಡೆಯಿಂದ ಬಂದ ಡಸ್ಟರ್ ಕಾರೊಂದು ಕೊಲ್ಲಮೊಗ್ರು ಪೇಟೆಯ ತಂಬಿನಡ್ಕ ಸಮೀಪ ಹಾಲಿನ ಡೈರಿ ಪಕ್ಕದಲ್ಲಿ ಇದ್ದ ಪಂಚಾಯತ್ ಪಂಪ್‌ಸೆಟ್ ಗೆ ಗುದ್ದಿ ಸುಮಾರು 50 ಮೀಟರ್ ಮುಂದಕ್ಕೆ ಹೋಗಿ ಮಾವಿನ ಮರಕ್ಕೆ ಗುದ್ದಿ...

ದೇವರಕೊಲ್ಲಿ : ಲಾರಿ ಮತ್ತು ಬೈಕ್ ನಡುವೆ ಅಪಘಾತ – ಗಂಭೀರ ಗಾಯಗೊಂಡ ಬೈಕ್ ಸವಾರರು

ಸುಳ್ಯ : ದೇವರಕೊಲ್ಲಿ ಸಮೀಪ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಹಾಗೂ ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಜೂ.24ರಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಬಿಜಾಪುರ ಮೂಲದ ಮಹಾಂತೇಶ್ ಎಂದು ತಿಳಿದುಬಂದಿದ್ದು, ಅವರು ಪುತ್ತೂರಿನಲ್ಲಿ ಹಿಟಾಚಿ ಆಪರೇಟಾಗಿ ಕೆಲಸ ನಿರ್ವಹಿಸುತ್ತಿದ್ದು ಅವರು ಪುತ್ತೂರಿನಿಂದ ಸುಳ್ಯ ಮಾರ್ಗವಾಗಿ ಕುಶಾಲನಗರಕ್ಕೆ ಹೋಗುತ್ತಿದ್ದಾಗ ದೇವರಕೊಲ್ಲಿ...
error: Content is protected !!