ದ.ಕ.ಸಹಕಾರಿ ನೌಕರರ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ಕೆ.ಟಿ.ವಿಶ್ವನಾಥರಿಗೆ ಗೌರವ

ದ.ಕ.ಸಹಕಾರಿ ನೌಕರರ ಸಹಕಾರ ಸಂಘದ ನಿರ್ದೇಶಕರಾಗಿ ಪುನರಾಯ್ಕೆಯಾದ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರವರಿಗೆ ಸೊಸೈಟಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ್, ಉಪಾಧ್ಯಕ್ಷರಾದ ಮೋಹನ ರಾಮ್ ಸುಳ್ಳಿ ಸನ್ಮಾನಿಸಿದರು. ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

Ad Widget

ಜಲದುರ್ಗಾದೇವಿ ಶಯನೋತ್ಸವಕ್ಕೆ ಮಲ್ಲಿಗೆಯ ಘಮ : ಭಕ್ತರಿಂದ ರಾಶಿ ರಾಶಿ ಮಲ್ಲಿಗೆ ಸಮರ್ಪಣೆ

ಪೆರುವಾಜೆ ‌: ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ರವಿವಾರ ರಾತ್ರಿ ಭಕ್ತರು ಶ್ರೀದೇವಿಯ ಶಯನೋತ್ಸವಕ್ಕೆ ಸಮರ್ಪಿಸಿದ ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಮಹಾಮಾತೆ ಜಲದುರ್ಗಾದೇವಿ ಪವಡಿಸಿದಳು.‌! ಇಂತಹ ಅಪೂರ್ವ ಕ್ಷಣ ಶ್ರೀ ಕ್ಷೇತ್ರ ಸಾಕ್ಷಿಯಾಯಿತು. ಬ್ರಹ್ಮರಥೋತ್ಸವದ ಬಳಿಕ ಜಲದುರ್ಗಾದೇವಿ ಶಯನೋತ್ಸವ ನಡೆಯಲಿದ್ದ ಕಾರಣ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆಗೆ...

ಮುಂಡುಗಾರು ಚಿನ್ನಪ್ಪ ಗೌಡ ನಿಧನ

ಕಳಂಜ ಗ್ರಾಮದ ಮುಂಡುಗಾರು ಚಿನ್ನಪ್ಪ ಗೌಡರು ಇಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ನಾಗಪ್ಪ ಗೌಡ ಮುಂಡುಗಾರು, ತಿರುಮಲೇಶ್ವರ ಮುಂಡುಗಾರು ಹಾಗೂ ಪುತ್ರಿ ಶ್ರೀಮತಿ ಲಲಿತಾ ಜನಾರ್ದನ ಗೌಡ ಬಾಳಾಜೆ ಮತ್ತು ಸೊಸೆಯಂದಿರು, ಮೊಮಕ್ಕಳು, ಕುಟುಂಬಸ್ಥರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಪೆರುವಾಜೆ : ಜಲದುರ್ಗಾದೇವಿಗೆ ವೈಭವದ ಬ್ರಹ್ಮರಥೋತ್ಸವ – ಆಕರ್ಷಕ ಕುಣಿತ ಭಜನೆ – ದೇವಿಯ ದರ್ಶನ ಪಡೆದ 10 ಸಾವಿರಕ್ಕೂ ಮಿಕ್ಕಿ ಭಕ್ತರು

ಆಕರ್ಷಕ ಬೆಡಿ : ಸಾಂಪ್ರದಾಯಿಕ ಉಡುಗೆಯೊಂದಿಗೆ ರಥ ಎಳೆದ ಭಕ್ತರು 10 ಸಾವಿರಕ್ಕೂ ಅಧಿಕ ಭಕ್ತರಿಂದ ಅನ್ನಪ್ರಸಾದ ಸ್ವೀಕಾರ : ದಶ ದಿಕ್ಕಿನಿಂದ ಹರಿದು ಬಂದ ಭಕ್ತ ಸಾಗರ ರಥ ಬೀದಿಯಲ್ಲಿ 650 ಕ್ಕೂ ಅಧಿಕ ಭಜಕರಿಂದ ಏಕಕಾಲದಲ್ಲಿ ಕುಣಿತ ಭಜನೆ ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ...

ಮಣಿಯಾನ ಶಂಖಚೂಡ ಕ್ಷೇತ್ರದಲ್ಲಿ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯ ಪುನರ್ ಪ್ರತಿಷ್ಠೆ – ವಿಜ್ರಂಭಣೆಯಿಂದ ನಡೆದ ಕಾರ್ಯಕ್ರಮ

ಗುತ್ತಿಗಾರು ಗ್ರಾಮದ ಪೈಕ ಶ್ರೀ ಶಂಖಚೂಡ ಕ್ಷೇತ್ರ ಪುರಾಳಬದಿ ಮಣಿಯಾನ ದಲ್ಲಿ (ಕಂಚು ಕಲ್ಲಿಗೆ ತೆಂಗಿನಕಾಯಿ ಒಡೆಯುವ ಸ್ಥಳ) ಜ. 19ರಂದು ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಶಂಖಚೂಡ ದೇವರು ಮತ್ತು ಪರಿವಾರ ಸಾನಿಧ್ಯಗಳಿಗೆ ನೂತನವಾಗಿ ನಿರ್ಮಿಸಿರುವ ಕಟ್ಟೆಗಳಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಕಲಶೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳು ಆಶ್ವತ್ ಇವರ...

ಚಿನ್ನದ ಚೈನು ಕಳೆದುಹೋಗಿದೆ

ಕಂದ್ರಪ್ಪಾಡಿ ಮಾರ್ಗ ಗುತ್ತಿಗಾರು ಬಳ್ಳಕ್ಕ ಪಂಜ ಬೆಳ್ಳಾರೆ ಮಾರ್ಗ ಮಧ್ಯೆ ಅಮೂಲ್ಯವಾದ ಚೈನು ಒಂದು ಕಳೆದು ಹೋಗಿದೆ . ಸಿಕ್ಕಿದವರು ಹಿಂತಿರುಗಿಸಬೇಕಾಗಿ ಕೇಳಿಕೊಳ್ಳುತ್ತೇವೆ..8618217219

ಹರಿಹರ ಪಳ್ಳತ್ತಡ್ಕ : ಸಹಕಾರಿ ಸಂಘದ ಚುನಾವಣೆ – ಅಧಿಕಾರಕ್ಕೇರಿದ ಬಿಜೆಪಿ – ಎಲ್ಲಾ 12 ಸ್ಥಾನ ಗೆದ್ದು ಬೀಗಿದ ಬಿಜೆಪಿ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಜ.19 ರಂದು ನಡೆದಿದ್ದು ಬಿಜೆಪಿ ಭರ್ಜರಿ ಜಯಬೇರಿ ಬಾರಿಸಿದೆ. ಕಳೆದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹಿನಾಯು ಸೋಲು ಅನುಭವಿಸಿದೆ. 38 ವರ್ಷಗಳ ನಂತರ ಕಾಂಗ್ರೆಸ್ ಭದ್ರ ಕೋಟೆಯನ್ನು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಛಿದ್ರಗೊಳಿಸಿದೆ. ಈ ಭಾರಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ಬಳಗ,...

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ನಿರಂತರ ಸಮಾಜ ಸೇವಾ ಚಟುವಟಿಕೆಗಳು

ಸುಬ್ರಹ್ಮಣ್ಯ ಜ.18: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಪ್ರಸಕ್ತ ಸಾಲಿನಲ್ಲಿ ಸುಬ್ರಹ್ಮಣ್ಯದ ಆಸು-ಪಾಸುಗಳಾದ ಹರಿಹರ ಕೊಲ್ಲಮೊಗ್ರು, ಮರ್ದಾಳ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿರುತ್ತದೆ ಎಂದು ಕ್ಲಬ್ ಅಧ್ಯಕ್ಷ ರಾಜೇಶ್ ಎನ್.ಎಸ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.ಮರ್ಧಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ...

ಬಸ್ಸು ನಿಲ್ದಾಣದ ಬಳಿಯಲ್ಲಿ ಅನ್ಯ ಕೋಮಿನ ಯುವಕನಿಗೆ ಹಲ್ಲೆ ಪ್ರಕರಣ ತನಿಖೆಗೆ ಹೈ ಕೋರ್ಟ್ ತಡೆ !

ಸುಳ್ಯ: ಗುಂಡ್ಯ ಮಾರ್ಗವಾಗಿ ಸಂಚರಿಸುತ್ತಿದ್ದ ಬಸ್ಸಿನಲ್ಲಿ ಅನ್ಯ ಕೋಮಿನ ಯುವತಿಗೆ ಕಿರುಕುಳ ನೀಡಿದಲಾಗಿದೆ ಎಂದು ಆರೋಪಿಸಿ ಸುಳ್ಯದ ಯವಕರ ತಂಡವು ಅನ್ಯ ಕೋಮಿನ ಯುವಕನಿಗೆ ಗುಂಪು ಕಟ್ಟಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಸುಳ್ಯ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕ ವರ್ಷಿತ್ ಚೊಕ್ಕಾಡಿ ,ಮಿಥುನ್ ಪಿ ಎನ್ , ಸುಶ್ಮಿತ್ , ವಿಜೇತ್ , ಹರ್ಷಿತ್ ಇವರ...
Loading posts...

All posts loaded

No more posts

error: Content is protected !!