ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನಾ ಸ್ಥಳಕ್ಕೆ ಲೋಕಾಯುಕ್ತ ಎಸ್ ಪಿ ಭೇಟಿ , ವಿಎ ಗಳ ಅಹವಾಲು ಸ್ವೀಕಾರ

ಸುಳ್ಯ: ಗ್ರಾಮ ಆಡಳಿತಾಧಿಕಾರಿಗಳ ರಾಜ್ಯಾದ್ಯಂತ ಅನಿರ್ದಿಷ್ಟವಾದಿ ಪ್ರತಿಭಟನೆ ನಡೆಸುತ್ತಿದ್ದು ಮೂರನೇ ದಿನವಾದ ಇಂದು ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಗ್ರಾಮ ಆಢಳಿತಾಧಿಕಾರಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಲೋಕಾಯುಕ್ತ ಎಸ್ ಪಿ ನಟರಾಜ್ ಎಂ ಎ ಅಹವಾಲು ಸ್ವೀಕರಿಸಿ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಿದ್ದು ನಿಮ್ಮ ಅಹವಾಲುಗಳು...

ಬಾಳುಗೋಡು : ಶಿವಾಲ ಕಲ್ಲಡ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ

ಬಾಳುಗೋಡು ಗ್ರಾಮದ ಶಿವಾಲ-ಕಲ್ಲಡ್ಕ ರಸ್ತೆ 30ಲಕ್ಷದ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ನೆರವೇರಿಸಿದರು.ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷರಾದ ವೆಂಕಟ್ ವಳಲಂಬೆ, ಜಿ.ಪಂ. ಮಾಜಿ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗ್ರಾ.ಪಂ. ಅಧ್ಯಕ್ಷ ವಿಜಯ ಕುಮಾರ್ ಅಂಙಣ, ಪಕ್ಷದ ಪ್ರಮುಖರಾದ ಚಂದ್ರಹಾಸ ಶಿವಾಲ, ಸೋಮಶೇಖರ್ ಕಟ್ಟೆಮನೆ, ಮಾಧವ ಚಾಂತಾಳ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Ad Widget

ಮಾ.1 : ಸುಳ್ಯ ಕಸಬಾಮೂಲೆ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವ, ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ – ಸಂಕ್ರಮಣ ಪೂಜೆ

ಸುಳ್ಯ ಕಸಬಾಮೂಲೆ ಜೂನಿಯರ್ ಕಾಲೇಜು ಬಳಿ ಸುಳ್ಯ ಶ್ರೀ ಸಂಚಾರಿ ಗುಳಿಗ ಸಾನ್ನಿಧ್ಯದಲ್ಲಿ ಶ್ರೀ ಸಂಚಾರಿ ಗುಳಿಗ ದೈವದ ನೇಮೋತ್ಸವವು ಮಾ.01 ರಂದು ನಡೆಯಲಿದ್ದು ಫೆ.12 ರಂದು ಸಂಕ್ರಮಣ ಪೂಜೆ ಮತ್ತು ಆಮಂತ್ರಣ ಪತ್ರ ಬಿಡುಗಡೆ ನಡೆಯಿತು.ಸಾರ್ವಜನಿಕ ಶ್ರೀ ಸಂಚಾರಿ ಗುಳಿಗ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷ ಸಂಕಪ್ಪ ಗೌಡ ನೀರ್ಪಾಡಿ ಆಮಂತ್ರಣ ಪತ್ರಿಕೆ ಬಿಡುಗಡೆ...

ಕುಕ್ಕೆ ಕ್ಷೇತ್ರಕ್ಕೆ ಉಜ್ಜಯಿನಿ ನಾಥ ಸಂಪ್ರದಾಯದ ಸ್ವಾಮೀಜಿ ಭೇಟಿ.

ಸುಬ್ರಹ್ಮಣ್ಯ ಫೆ.11: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಖಿಲ ಭಾರತೀಯ ನಾಥ ಸಂಪ್ರದಾಯದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಶ್ರೀ ಶ್ರೀ 1008 ಮಹಾಂತ ಯೋಗಿ ಪೀರ್ ರಮನಾಥ್ ಜಿ ಮಹಾರಾಜ್ ಸ್ವಾಮೀಜಿಯವರು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ ಇಂದು ಮಂಗಳವಾರ ಕುಕ್ಕೆ ಕ್ಷೇತ್ರಕ್ಕೆ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಶ್ರೀ ದೇವಳದ...

ಮುಂದುವರಿದ ಗ್ರಾಮ ಆಡಳಿತಾಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರ

ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಬೇಟಿ, ಸರಕಾರದ ಗಮನ ಸೆಳೆಯುವ ಭರವಸೆ. ಸುಳ್ಯ: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು‌ ಗ್ರಾಮ ಆಡಳಿತಾಧಿಕಾರಿಗಳು ಕೈಗೊಂಡಿರುವ ಎರಡನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದ್ದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ವತಿಯಿಂದ ಗ್ರಾಮ ಆಡಳಿತಾಧಿಕಾರಿಗಳು ಸುಳ್ಯ ತಾಲೂಕು ಕಚೇರಿ ಎದುರು...

ಗ್ರಾಮ ಆಡಳಿತಾಧಿಕಾರಿಗಳ ಎರಡನೇ ಹಂತದ ಪ್ರತಿಭಟನೆ , ಮಿನಿ ವಿಧಾನಸೌದ ಖಾಲಿ ಖಾಲಿ !

ಸುಳ್ಯ: ಸುಳ್ಯ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳ ಪ್ರತಿಭಟನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ವ್ಯತ್ಯಯವಾಗುತ್ತಿದ್ದು ಮಿನಿ ವಿಧಾನಸೌದ ಖಾಲಿಖಾಲಿ ಹೊಡೆಯಲಾರಂಭಿಸಿದ್ದು ಜನರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿದೆ. ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ವತಿಯಿಂದ ದಿನಾಂಕ:22-09-2024 ರಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾ ಭವನ,...

ಕವನ : ಕಾರ್ಗತ್ತಲ ರಾತ್ರಿಯಲ್ಲೊಂದು ಶಾಂತತೆಯ ವಾತಾವರಣ

ಕಾರ್ಗತ್ತಲ ನಿಶ್ಶಬ್ಧದ ರಾತ್ರಿಯಲ್ಲೂ ಅದೆಷ್ಟೋ ಶಬ್ಧಗಳಿರುತ್ತವೆ, ಕಿವಿಗೊಟ್ಟು ಆಲಿಸಿದರೆ ಮಾತ್ರ ಅವು ನಮ್ಮ ಗಮನಕ್ಕೆ ಬರುತ್ತವೆ…ಒಬ್ಬಂಟಿಯಾಗಿ ನಾವು ಆ ಶಬ್ಧಗಳನ್ನು ಆಲಿಸಿದಾಗ ನಮ್ಮ ಒಳಮನಸೇಕೋ ಅಂಜುತ್ತದೆ, ಅಳುಕುತ್ತದೆ, ಭಯದಿಂದ ಬೆವರುತ್ತದೆ, ಮನದೊಳಗೆ ಭಯಪೂರಿತ ವಾತಾವರಣ ಸೃಷ್ಟಿಯಾಗುತ್ತದೆ…ಆದರೆ ಭಯವನ್ನು ಹುಟ್ಟಿಸುವಂತಹ ಭಯಾನಕ ಶಬ್ದಗಳೇನೂ ಅಲ್ಲವದು, ಪ್ರತಿದಿನವೂ ಪ್ರಕೃತಿಯಲ್ಲಿ ಕೇಳಿಸುವ ಮಾಮೂಲಿ ಶಬ್ದಗಳೇ ರಾತ್ರಿಯ ನಿಶ್ಶಬ್ಧದಲ್ಲಿ ಕೊಂಚ ಜೋರಾಗಿ...

“ಹೆಲಿಕಾಪ್ಟರ್ ಪೋಷಕತ್ವ” ಎಂಬ ಪೆಡಂಬೂತ

ಮಕ್ಕಳನ್ನು ಬೆಳೆಸುವುದು ಅತಿ ಸುಲಭದ ಕೆಲಸವಲ್ಲ ಎಂಬ ಕಟು ಸತ್ಯ ಎಲ್ಲ ಹೆತ್ತವರಿಗೂ ಗೊತ್ತಿದೆ. ಹಾಗೆಂದ ಮಾತ್ರಕ್ಕೆ ಮಕ್ಕಳನ್ನು ಸಾಕಿ ಸಲಹಿ ಸಂಸ್ಕಾರವಂತರನ್ನಾಗಿ, ವಿದ್ಯಾವಂತರನ್ನಾಗಿ ಮಾಡುವುದು ಕಬ್ಬಿಣದ ಕಡಲೆಯೂ ಅಲ್ಲ ಎಂಬುದನ್ನೂ ಹೆತ್ತವರು ಅರಿಯಬೇಕು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಪ್ರತಿಯೊಬ್ಬ ಹೆತ್ತವರು ತನ್ನ ಮಕ್ಕಳು ಎಲ್ಲರಿಗಿಂತ ಮುಂದೆ ಇರಬೇಕು ಎಂದು ಬಯಸುವುದು ಸಹಜವೇ....

ಕಡಬ : ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ  ಪ್ರದೀಪ್ ಕಳಿಗೆ  ನೇಮಕ

ಕಡಬ  ಬ್ಲಾಕ್ ಯೂತ್ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಯುವ ಮುಖಂಡ ಪ್ರದೀಪ್ ಕಳಿಗೆ ಅವರು ನೇಮಕಗೊಂಡಿದ್ದಾರೆ. ಇವರು ಬಿಳಿನೆಲೆ ವಲಯ ಕಾಂಗ್ರೆಸ್ ಕಾರ್ಯದರ್ಶಿ ಆಗಿದ್ದರು, ಕಡಬ ಬ್ಲಾಕ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ದುಡಿದಿದ್ದಾರೆ. ಹಲವು ಸಂಘ ಸಂಸ್ಥೆಗಳಲ್ಲಿ ಸಹ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. ಇವರು ಹಿರಿಯ ಕಾಂಗ್ರೆಸಿಗ ಜನಾರ್ಧನ ಗೌಡ ಕಳಿಗೆ ಇವರ ಪುತ್ರ.

ಪೆರುವಾಜೆಯಲ್ಲಿ ನಡೆದ ಮ್ಯಾರಥಾನ್  – 163 ಕ್ರೀಡಾಪಟುಗಳು ಭಾಗಿ

ರಾಜ್ಯ ಪ್ರಶಸ್ತಿ ಪುರಸ್ಕೃತ ಭಾವೈಕ್ಯ ಯುವಕ ಮಂಡಲ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲ ಹಾಗೂ ಭಾವೈಕ್ಯ ಚಿಗುರು ವೇದಿಕೆ ಪೆರುವಾಜೆ ಇದರ ಸಹಯೋಗದೊಂದಿಗೆ ಪೆರುವಾಜೆ ಮ್ಯಾರಥಾನ್ 2025 ಫೆ.09 ರಂದುಯುವಕ ಮಂಡಲದ ಆವರಣದಲ್ಲಿ ನಡೆಯಿತು.. ರಾಷ್ಟ್ರೀಯ ಕ್ರೀಡಾಪಟು ಸುಬ್ರಹ್ಮಣ್ಯ ಕೆ ಎಮ್ ಮ್ಯಾರಥಾನ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಲ.ಉಷಾದೇವಿ ರಾವ್ ಪೆರುವಾಜೆ, ಭಾವೈಕ್ಯ...
Loading posts...

All posts loaded

No more posts

error: Content is protected !!