ಭಯೋತ್ಪಾದಕ ದಾಳಿಯನ್ನು ಖಂಡಿಸಿ ಹರಿಹರ ಪಳ್ಳತ್ತಡ್ಕದಲ್ಲಿ ಆಟೋರಿಕ್ಷಾ ಸಂಚಾರ ಬಂದ್

ಜಮ್ಮು-ಕಾಶ್ಮೀರದ ಪಹಲ್ ಗಾಂವ್ ಎಂಬಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಇಂದು(ಏ.23) ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮದ್ಯಾಹ್ನ 12:00 ಗಂಟೆಯವರೆಗೆ ಒಂದು ಗಂಟೆಯ ಕಾಲ ಆಟೋರಿಕ್ಷಾ ಚಾಲಕರು ಸಂಚಾರ ಬಂದ್ ನಡೆಸಿದರು.

ಗುತ್ತಿಗಾರು : ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿ ಖಂಡಿಸಿ ಪ್ರತಿಭಟನೆ

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ಹತ್ಯೆಯನ್ನು ಖಂಡಿಸಿ ಗುತ್ತಿಗಾರಿನಲ್ಲಿ ಸ್ವಯಂ ಪ್ರೇರಿತ ಬಂದ್ ಯಶಸ್ವಿಯಾಗಿ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಗುತ್ತಿಗಾರಿನ ವರ್ತಕರ ಸಂಘ, ಜೀಪು ಚಾಲಕ ಮಾಲಕರ ಸಂಘೆ, ಆಟೋ ಚಾಲಕ ಮತ್ತು ಮಾಲಕರ ಸಂಘ, ಹಾಗೂ ಸರ್ವಧರ್ಮದ ನಾಗರಿಕ ಬಂಧುಗಳು ಭಾಗವಹಿಸಿದ್ದರು. ವೆಂಕಟ್ ದಂಬೆಕೋಡಿ ಮಾತನಾಡಿ ಧರ್ಮ...
Ad Widget

62 ದಿನ ಪೂರೈಸಿದ ಭಾವ ತೀರ ಯಾನಕ್ಕೆ ನಿರೀಕ್ಷೆಗೂ ಮೀರಿ ಬೆಂಬಲಿಸಿದ ಸಿನಿಪ್ರಿಯರು – ಎ.24 ರಂದು ಸಂಜೆ 4.45 ಕ್ಕೆ ಕೊನೆಯ ಪ್ರದರ್ಶನ

ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ  ಮಯೂರ ಅಂಬೆಕಲ್ಲು ನಿರ್ಮಾಣದ "ಭಾವ ತೀರ ಯಾನ" ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ ಹಿನ್ನೆಲೆಯಲ್ಲಿ 62ನೇ ದಿನ ಯಶಸ್ವಿಯಾಗಿ ಪೂರೈಸಿದೆ. ಪುತ್ತೂರಿನ ಭಾರತ್ ಸಿನೇಮಾಸ್ ನಲ್ಲಿ ಎ.24 ಗುರುವಾರ ಸಂಜೆ 4.45 ಕ್ಕೆ  ಚಿತ್ರದ ಕೊನೆಯ ಪ್ರದರ್ಶನ ಕಾಣಲಿದೆ. ಈ ಸಿನೇಮಾ ವಿಕ್ಷೀಣೆ...

ಗುತ್ತಿಗಾರು : ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ“ಇಂದಿನ ಮಕ್ಕಳ ಭವಿಷ್ಯದ ನಿರ್ಮಾಣ ಯೋಗ್ಯ ಸಂಸ್ಕಾರದಿಂದಲೇ ಆಗಲಿ” : ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ

ಮಕ್ಕಳಿಗೆ ಮನೆಯ ವಾತಾವರಣದಲ್ಲಿ ಸಂಸ್ಕಾರದ ಅಭ್ಯಾಸಗಳೊಂದಿಗೆ ಪೂರಕ ವಿಚಾರಧಾರೆಗಳನ್ನು ಕಲಿಸುವ ನಿಟ್ಟಿನಲ್ಲಿ ಮಯೂರ ಬಾಲಾಲಯ ಇದರ ಆಶ್ರಯದಲ್ಲಿ ಶ್ರೀಮತಿ ದಿವ್ಯ ಸುಜನ್ ಗುಡ್ಡೆಮನೆ ರವರ ನೇತೃತ್ವದಲ್ಲಿ ಏ.12 ರಿಂದ ಏ.20 ರವರೆಗೆ 09 ದಿವಸಗಳ ಕಾಲ ನಡೆದ “ಮಕ್ಕಳ ಬೇಸಿಗೆ ಶಿಬಿರ” ಕಾರ್ಯಕ್ರಮದ ಸಮಾರೋಪ ಸಮಾರಂಭವು ಏ.20 ರಂದು ನಡೆಯಿತು.ಸಮಾರೋಪ ಸಮಾರಂಭದಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ...

ಕುಲ್ಕುಂದ : ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ ಸಂಪನ್ನ

ಕಡಬ ತಾಲೂಕಿನ ಕುಲ್ಕುಂದ ಬಸವನಮೂಲ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಏ.19 ರಿಂದ ಏ.20 ರವರೆಗೆ ವಾರ್ಷಿಕ ಜಾತ್ರೋತ್ಸವವು ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಿತು.ಏ.19 ಶನಿವಾರದಂದು ಬೆಳಿಗ್ಗೆ ಭಕ್ತಾದಿಗಳಿಂದ ಹಸಿರು ಕಾಣಿಕೆ ಸಮರ್ಪಣೆ, ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ಪ್ರಾಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹ ವಾಚನ, ರಾತ್ರಿ ಸ್ಥಳೀಯರಿಂದ ಸಾಂಸ್ಕೃತಿಕ...

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಡಾ| ಸೋಮಶೇಖರ ಕಟ್ಟೆಮನೆ, ಉಪಾಧ್ಯಕ್ಷರಾಗಿ ಗಣೇಶ್ ಭಟ್ ಅವಿರೋಧ ಆಯ್ಕೆ

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಡಾ.ಸೋಮಶೇಖರ್ ಕಟ್ಟೆಮನೆ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಭಟ್ ಇಡ್ಯಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.‌ ಸಂಘದ ಆಡಳಿತ ಮಂಡಳಿಗೆ ಜ.19 ರಂದು ಚುನಾವಣೆ ನಡೆದಿದ್ದು, ಆ ಬಳಿಕ ಎರಡು ತಂಡಗಳು ನ್ಯಾಯಾಲಯದ ಕದ ತಟ್ಟಿದ್ದರಿಂದ ಫಲಿತಾಂತ ಘೋಷಣೆ ವಿಮಬವಾಗಿತ್ರು.‌ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಚುನಾವಣಾ ಫಲಿತಾಂಶ...

ಏನೇಕಲ್ಲು : ಜೇಸಿಐ ಪಂಜ ಪಂಚಶ್ರೀ, ಭಾರತ್ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವತಿಯಿಂದ ಈಜು ತರಬೇತಿ ಶಿಬಿರ ಉದ್ಘಾಟನೆ – ಮಾಜಿ ಸಚಿವ ಪಿ ಜಿ ಆರ್ ಸಿಂಧ್ಯಾ ಏನೇಕಲ್ಲು ಹೊಳೆಯಲ್ಲಿ ಈಜಾಟ

ಜೇಸಿಐ ಪಂಜ ಪಂಚಶ್ರೀ, ಭಾರತ್ ಸ್ಕೌಟ್ & ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ವತಿಯಿಂದ ಈಜು ತರಬೇತಿ ಶಿಬಿರ ಮರಕತ ರಸ್ತೆ ಬಳಿ ಇರುವ ಏನೇಕಲ್ಲು ಹೊಳೆಯಲ್ಲಿ ಎ. 20ರಂದು ಉದ್ಘಾಟನೆ ಗೊಂಡಿತು. ಭಾರತ್ ಸ್ಕೌಟ್ & ಗೈಡ್ಸ್ ಕರ್ನಾಟಕ ಇದರ ರಾಜ್ಯ ಮುಖ್ಯ ಆಯುಕ್ತರಾದ ಮಾಜಿ ಸಚಿವ, ಪಿ ಜಿ ಆರ್ ಸಿಂಧ್ಯಾರವರು ತರಬೇತಿ...

ಕಲ್ಮಕಾರು : ಬಾಳೆಬೈಲು ರಸ್ತೆ ದುರವಸ್ಥೆಯನ್ನು ಖಂಡಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ ನಾಗರಿಕರು

ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮಕಾರಿನ ಬಾಳೆಬೈಲು ಎಂಬಲ್ಲಿನ ನಾಗರಿಕರು ರಸ್ತೆ ದುರವಸ್ಥೆಯ ಹಿನ್ನೆಲೆಯಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕಾರ ಮಾಡುವುದಾಗಿ ನಿರ್ಧರಿಸಿ ಏ.20 ರಂದು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ ಮಾಡಿರುವುದಾಗಿ ತಿಳಿದುಬಂದಿದೆ.ಕಲ್ಮಕಾರು ಶಕ್ತಿನಗರದಿಂದ ಬಾಳೆಬೈಲು ಭಾಗಕ್ಕೆ ತೆರಳುವ ರಸ್ತೆಯು ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಕಷ್ಟಕರವಾಗಿದ್ದು, ಈ ಭಾಗದ ಸಾರ್ವಜನಿಕರು...

ಲೇಖನ : “ಸಿಟ್ಟು” ಮೀರದಿರಲಿ ಅದರ ಚೌಕಟ್ಟು…

“ಸಿಟ್ಟು” ಅಥವಾ “ಕೋಪ” ಎನ್ನುವುದು ಮನುಷ್ಯರಾದ ನಮ್ಮಲ್ಲಿರುವ ಸಹಜವಾದ ಗುಣ. ನಾವು ಅಂದುಕೊಂಡ ಕೆಲಸ ಕೈಗೂಡದಿದ್ದರೆ, ನಮ್ಮ ಬದುಕು ನಾವಂದುಕೊಂಡಂತೆ ನಡೆಯದಿದ್ದರೆ ಅಥವಾ ನಮ್ಮವರು ಯಾರಾದರೂ ನಮ್ಮ ಮನಸ್ಸಿಗೆ ನೋವುಂಟುಮಾಡಿದರೆ.. ಹೀಗೆ ಜೀವನದಲ್ಲಿ ನಮಗೆ ಹಲವಾರು ಕಾರಣಗಳಿಂದ ಹಲವಾರು ಸಂದರ್ಭಗಳಲ್ಲಿ ಈ “ಸಿಟ್ಟು” ಅಥವಾ “ಕೋಪ” ಬಂದೇ ಬರುತ್ತದೆ, ಅದು ಸ್ವಾಭಾವಿಕ.ಆದರೆ “ನಮ್ಮ ಜೀವನದಲ್ಲಿ ಬರುವಂತಹ...

ಪ್ರೇಕ್ಷಕರ ಬೆಂಬಲದಿಂದ ಭಾವ ತೀರ ಯಾನ ಮತ್ತೆ ಮುಂದುವರಿಕೆ – ಎ.23 ರಂದು ಸಂಜೆ 4.45 ಕ್ಕೆ ಪ್ರದರ್ಶನ

61 ದಿನ ಪೂರೈಸಿದ "ಭಾವ ತೀರ ಯಾನ" ಸಿನಿಮಾ ಎ.22 ರಂದು ಕೊನೆಯ ಪ್ರದರ್ಶನ ನೀಡುವುದೆಂದು ಚಿತ್ರದ ನಿರ್ದೇಶಕರು ತೀರ್ಮಾನಿಸಿದ್ದರು. ಆದರೇ ಎ.22 ರಂದು ಪ್ರೇಕ್ಷಕರ ಭಾರಿ ಬೆಂಬಲದ ಹಿನ್ನೆಲೆಯಲ್ಲಿ ಪುತ್ತೂರಿನ ಭಾರತ್ ಸಿನೇಮಾಸ್ ನವರು ಚಿತ್ರಪ್ರದರ್ಶನ ನಿಲ್ಲಿಸುವುದು ಬೇಡ ಮುಂದುವರೆಸೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದುದರಿಂದ ಎ.23 ಬುಧವಾರ ಸಂಜೆ 4.45ಕ್ಕೆ ಚಿತ್ರದ ಪ್ರದರ್ಶನಗೊಳ್ಳಲಿದೆ. ಈ ಚಿತ್ರಕ್ಕೆ...
Loading posts...

All posts loaded

No more posts

error: Content is protected !!