- Monday
- June 8th, 2026
ಬೆಳ್ಳಾರೆ ಗ್ರಾಮದ ಉಮಿಕ್ಕಳ ವಾರ್ಡ್ ಸಂಖ್ಯೆ 143ರ ಬೂಡು-ಉಪ್ಪಂಗಳ-ಪಾಠಾಜೆ ರಸ್ತೆಯು ಮರು ಡಾಮರೀಕರಣಗೊಳ್ಳದೆ ಸುಮಾರು 14 ವರುಷಗಳೇ ಕಳೆದು ಹೋಗಿದ್ದವು.ಈ ರಸ್ತೆಯಲ್ಲಿ ಕಳೆದ ಹಲವಾರು ವರುಷಗಳಿಂದ ಪಾದಾಚಾರಿಗಳು ಮತ್ತು ವಾಹನ ಸವಾರರು ಹೇಳ ತೀರದ ಬವಣೆ ಅನುಭವಿಸಿ ಸಾಗುತ್ತಿದ್ದರು ಮತ್ತು ಮೂರು ತಿಂಗಳ ಹಿಂದೆ ಈ ರಸ್ತೆಯ ಎದ್ದು ಹೋಗಿರುವ ರೀತಿಗಳಿಗೆ ಒಂದು ನೂರು ಮೀಟರು...
ಮಾರಾಟಿ ಗೆಳೆಯರ ಬಳಗ ಮರ್ಕಂಜ ಇದರ ಆಶ್ರಯದಲ್ಲಿ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಮಾರಾಟಿ ಟ್ರೋಫಿ -2026 ಇಂದು ಸರಕಾರಿ ಪ್ರೌಢ ಶಾಲೆ ಎಲಿಮಲೆಯಲ್ಲಿ ನಡೆಯಿತು.ಪಂದ್ಯಾಟದಲ್ಲಿ ಪ್ರಥಮ ಬಹುಮಾನ ಹತ್ತು ಸಾವಿರ ನಗದು ಮತ್ತು ಮರಾಟಿ ಟ್ರೋಫಿಯನ್ನು ಕಿಂಗ್ಸ್ ಕಕ್ಕೆಬೆಟ್ಟು ಮತ್ತು ದ್ವಿತೀಯ ಬಹುಮಾನ ಆರು ಸಾವಿರ ರೂಪಾಯಿ ನಗದು ಮತ್ತು ಮರಾಟಿ...
ಅಮರ ಸುಳ್ಯ ಸುದ್ದಿ E ಪತ್ರಿಕೆ ಓದಲು ಈ ಲಿಂಕ್ ಬಳಸಿ https://epaper.amarasuddi.com/ಕ್ಷಣ ಕ್ಷಣದ ಸುದ್ದಿಗಳಿಗಾಗಿ www.amarasuddi.com ವೀಕ್ಷಿಸಿ ಅರಂತೋಡು ಗ್ರಾಮದ ಅಡ್ತಲೆ ಬೆದ್ರುಪಣೆ ಸಮೀಪ ಮರಿ ಆನೆಯೊಂದು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇತರ ಆನೆಗಳ ದಾಳಿಯಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆಂದು ತಿಳಿದುಬಂದಿದೆ. ಆನೆ ಸಾವಿಗೆ ನಿಖರ...
ಸುಬ್ರಹ್ಮಣ್ಯ ಮೇ 24 : ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದಲ್ಲಿ ಇಂದು ರವಿವಾರ ಸಾವಿರಾರು ಭಕ್ತರು ಸೇರಿದ್ದರು ತೀರ್ಥ ಸ್ನಾನಕೆಂದು ಬಂದ ಭಕ್ತರು ಅಡ್ಡಾದಿಡ್ಡಿಯಾಗಿ ಎಲ್ಲೆಂದರಲ್ಲಿ ವಾಹನಗಳನ್ನ ನಿಲ್ಲಿಸಿ, ಪದಚಾರಿಗಳಿಗೆ ಹಾಗೂ ರಸ್ತೆ ದಾಟುವವರಿಗೆ ತೊಂದರೆಯನ್ನು ಉಂಟು ಮಾಡಿದ್ದಾರೆ. ಇದಲ್ಲದೆ ಅಡ್ಡಾದಿಡ್ಡಿ ಎಲ್ಲೆಂದರಲ್ಲಿ ಕಸ ಕಡ್ಡಿ ಪ್ಲಾಸ್ಟಿಕ್ ಬಾಟಲ್, ತ್ಯಾಜ್ಯಗಳನ್ನು ಎಸೆದಿದ್ದರು. ಅದರಲ್ಲೂ ಕುಲ್ಕುಂದದಿಂದ ಕುಮಾರಧಾರ...
ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೇ.24 ಭಾನುವಾರದಂದು ಭಕ್ತರ ಮಹಾಪೂರವೇ ಹರಿದು ಬಂದಿದ್ದು ಸುಮಾರು 40,000ಕ್ಕೂ ಅಧಿಕ ಭಕ್ತರ ಆಗಮನವಾಗಿದೆ ಎಂದು ತಿಳಿದುಬಂದಿದೆ. ದೇವಸ್ಥಾನದ ಒಳಾಂಗಣ, ಹೊರಾಂಗಣ, ರಥಬೀದಿ ಸೇರಿದಂತೆ ಎಲ್ಲೆಡೆ ಭಕ್ತರಿಂದ ತುಂಬಿ ತುಳುಕಿದ ದೃಶ್ಯಗಳು ಕಂಡುಬಂದವು. ದೇವರ ದರ್ಶನಕ್ಕಾಗಿ ಗೋಪುರದವರೆಗೂ ಉದ್ದ...
ಹರಿಹರ ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ದೈವಗಳ ಚಾವಡಿಯಲ್ಲಿ ನಾಳೆ(ಮೇ.25) “ಪತ್ತನಾಜೆ ತಂಬಿಲ” ನಡೆಯಲಿದ್ದು, ಕೂಡುಗಟ್ಟಿನ ಹಾಗೂ ಊರ-ಪರವೂರ ಭಕ್ತಾದಿಗಳು ಆಗಮಿಸಿ ಉಪಸ್ಥಿತರಿದ್ದು ಶ್ರೀ ದೈವದ ಗಂಧ-ಪ್ರಸಾದವನ್ನು ಸ್ವೀಕರಿಸುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು ತಿಳಿಸಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)
ಪೆರಾಜೆ ಸಮೀಪ ಬೈಕ್ ಮುಖಾಮುಖಿ ಢಿಕ್ಕಿಯಾಗಿ ಒರ್ವ ಸವಾರ ಮೃತಪಟ್ಟಿದ್ದಾರೆಂದು ವರದಿಯಾಗಿದೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಅಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯನ್ನು ಕೇರಳ ಪಯ್ಯನ್ನೂರಿನ ಪ್ರದೀಪನ್ ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕ್ ನಲ್ಲಿದ್ದ ಸಂಪಾಜೆ ರವಿಕುಮಾರ್ ಚಡಾವು ಮತ್ತುಸುಮನ್ ಆಲಡ್ಕ ಗಂಭೀರವಾಗಿ ಗಾಯಗೊಂಡಿದ್ದಾರೆ,
ಸವಣೂರು ಶಿಲ್ಪಿ ಸಹಕಾರಿ ರತ್ನ ಕೆ. ಸೀತಾರಾಮ ರೈ ಮತ್ತು ಶ್ರೀಮತಿ ಕಸ್ತೂರಿಕಲಾ ಎಸ್. ರೈ ಯವರ ಮದುವೆಯ 50 ನೇ ವಾರ್ಷಿಕೋತ್ಸವದ ಪ್ರಯುಕ್ತ ಅವರ ರಶ್ಮಿ ನಿವಾಸದಲ್ಲಿ ಅದ್ದೂರಿಯಾಗಿ ಸೀತಾ ಕಸ್ತೂರಿ ಕಲ್ಯಾಣ 50ರ ಸಂಭ್ರಮ ಮೇ.22 ಮತ್ತು 23ರಂದು ನಡೆಯಿತು. ಮೇ. 23 ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ...
ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಕುಡುಕರು, ಬಿಕ್ಷುಕರ ಹಾವಳಿ ಹೆಚ್ಚಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಪ್ರಯಾಣಿಕರಿಗೆ ನಿರ್ಮಿಸಿದ ಸೀಟ್ ಗಳಲ್ಲಿ ಕುಡುಕರು ಮಲಗಿ ನಿದ್ರಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಈ ಬಗ್ಗೆ ಕೂಡಲೇ ಇಲಾಖೆ ಗಮನ ಹರಿಸಬೇಕಿದೆ.
ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ ಮೊ: 9591969197ದಿನಾಂಕ:24-05-2026 ಭಾನುವಾರ*01,🐏ಮೇಷ ರಾಶಿ🐏*📃,ಕೈಗೊಂಡ ಕೆಲಸಗಳಲ್ಲಿ ಸಮಸ್ಯೆಗಳು, ಎದುರಾಗುತ್ತವೆ, ವ್ಯರ್ಥ ಖರ್ಚುಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಕುಟುಂಬ ಸದಸ್ಯರೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ, ದೂರದ ಪ್ರಯಾಣವನ್ನು ಮುಂದೂಡುವುದು ಉತ್ತಮ,ಗಮನಿಸಿ:- ಇಂದು ನಿರುದ್ಯೋಗಿಗಳ ಪ್ರಯತ್ನಗಳು ನಿಧಾನವಾಗುತ್ತವೆ,ಪರಿಹಾರ:- ನಿಮ್ಮ ತಂದೆಯ ಆಶೀರ್ವಾದ ಪಡೆಯಿರಿ,*02,🐂ವೃಷಭ ರಾಶಿ🐂*📃,ಕುಟುಂಬ ಸದಸ್ಯರಿಂದ ಆರ್ಥಿಕ ನೆರವು ದೊರೆಯುತ್ತದೆ,...
Loading posts...
All posts loaded
No more posts
